ನನಗೂ ತಾಯಿಯಾಗುವ ಆಸೆ ಇದೆ..ಆದ್ರೆ: ನಟಿ ರಾಗಿಣಿ ಪ್ರಜ್ವಲ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ್ದು, ಇದೀಗ ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ಶಾನಭೋಗರ ಮಗಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಫಿಟ್ನೆಸ್ ಟ್ರೈನರ್, ಡಾನ್ಸರ್ ಆಗಿರುವ ರಾಗಿಣಿ ನಟಿಯಾಗಿ ಕೂಡ ಮಿಂಚುತ್ತಿದ್ದಾರೆ.
ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಮಗು ಯಾವಾಗ ಎನ್ನುವ ಪ್ರಶ್ನೆಗೆ ಇದೀಗ ರಾಗಿಣಿ ಉತ್ತರ ಕೊಟ್ಟಿದ್ದಾರೆ. 'ನಾನು ಡಾನ್ಸ್ ಕ್ಲಾಸ್ ನಡೆಸೋದು ಅದರಲ್ಲಿ ಇನ್ನೂರು ಮಕ್ಕಳಿದ್ದಾರೆ. ಈಗಾಗಲೇ ಅಮ್ಮ ಆಗಲು ನೂರಕ್ಕೆ ನೂರು ಟ್ರೈನಿಂಗ್ ಆಗಿದೆ ನನಗೆ. ನಾನು ನೂರಕ್ಕೆ ನೂರು ಅಮ್ಮ ಆಗುತ್ತೇನೆ ಕೂಡ. ಈ ಆಸೆ ನಮ್ಮಿಬ್ಬರಿಗೂ ಇದೆ. ಆದರೆ ಅದಕ್ಕೊಂದು ಸಮಯ ಬರಬೇಕು. ನಮ್ಮಿಬ್ಬರಿಗೆ ಇಷ್ಟವಾಗುವ ಸಮಯ ಬಂದರೆ ಆಗೇ ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ' ಎಂದರು.

'ನಮಗೆ ಮಗು ಆಗಲ್ಲ. ನಮಗೆ ಮಗು ಬೇಡ ಎನ್ನುವ ಆಲೋಚನೆಯಲ್ಲಾ ನೂರಕ್ಕೆ ನೂರು ಇಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಜೀವನ ಇರುತ್ತದೆ. ಅವರೇ ಆದ ಪ್ರಾಮುಖ್ಯತೆ ಇರುತ್ತದೆ. ನಾನು ಪ್ರಜ್ವಲ್ ಹೇಗೆ ಇದ್ದೇವೇ ಅಂದರೆ, ನಮ್ಮ ಸ್ನೇಹಿತರ ಗ್ರೂಪ್ ಅಲ್ಲಿರುವವರ ಮಕ್ಕಳು ಮೊದಲು ಬರುವುದು ನಮ್ಮ ಹತ್ತಿರವೇ'.
'ಆ ಮಕ್ಕಳನ್ನು ಮಲಗಿಸಬೇಕು ಅಂದರೆ, ಊಟ ಮಾಡಿಸಬೇಕು ಅಂದರೆ ಏನೇ ಇರಲಿ ರಾಯನ್, ವೇದ ಎಲ್ಲರೂ ಮೊದಲು ಬರುವುದು ನಮ್ಮ ಹತ್ತಿರನೇ. ನಮಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ನೂರಕ್ಕೆ ನೂರು ತಂದೆ -ತಾಯಿ ಆಗುತ್ತೇವೆ. ಸ್ವಲ್ಪ ನಮಗೆ ನಮ್ಮದೇ ಆದ ಸಮಯ ಬೇಕಿತ್ತು. ಆದರೆ ಖಂಡಿತಾ ತಂದೆ -ತಾಯಿ ಆಗುತ್ತೇವೆ' ಎಂದಿದ್ದಾರೆ.

ಇನ್ನು ಪ್ರಜ್ವಲ್ ಅವರ ತಂದೆ ತಾಯಿ ಅಂದರೆ ಹಿರಿಯ ನಟ ದೇವರಾಜ್ ಹಾಗೂ ಅವರ ಪತ್ನಿ ಮಗು ವಿಚಾರದ ಬಗ್ಗೆ ಏನು ಹೇಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ಪ್ರಜ್ವಲ್, 'ನಾನು ಮೊದಲ ಸಿನಿಮಾ ಮಾಡಿದ್ದು ಮದುವೆಯಾದ ಮೇಲೆ. ಲಾ ಮಾಡಿರುವುದು ಮದುವೆಯಾದ ಮೇಲೆ. ನನಗೆ ಅತ್ತೆ ಮಾವನ ಸಪೋರ್ಟ್ ಹೇಗಿದೆ ಎನ್ನುವುದರ ಬಗ್ಗೆ ಅಲ್ಲಿಯೇ ಗೊತ್ತಾಗುತ್ತದೆ. ಇಲ್ಲ ಅಂದರೆ ಅಲ್ಲೇ ಹೇಳುತ್ತಿದ್ದರಲ್ಲಾ ಇದೆಲ್ಲಾ ಯಾಕೆ ಬೇಕು ಜೀವನದಲ್ಲಿ ಸೆಟೆಲ್ ಆಗು ಅಂತಾ.
ನಮ್ಮ ಅತ್ತೆ-ಮಾವ ಹಾಗೂ ಅಪ್ಪ-ಅಮ್ಮ ಯಾವುದನ್ನೂ ಮಾಡಬೇಡ ಅಂತಾ ಹೇಳಿಲ್ಲ. ನನ್ನ ಕಲೆಗೆ ಅವರು ಬೆಲೆ ಕೊಟ್ಟಿದ್ದಾರೆ. ಶಾನಬೋಗರ ಮಗಳು ಸಿನಿಮಾದಲ್ಲಿ ಗರ್ಭಿಣಿ ಪಾತ್ರ ಮಾಡಿದ್ದೇನೆ. ಆ ಪಾತ್ರಕ್ಕೆ ಫೀಲ್ ಮನಸ್ಸಿಂದನೇ ಬಂದಿದೆ. ಏನೋ ಮಾಡಬೇಕು ಅಂತಾ ಮಾಡಿಲ್ಲ. ನಮ್ಮ ಅತ್ತೆ ಮಾವ ನನಗೆ ಬೆಂಬಲವಾಗಿದ್ದಾರೆ. ಯಾವಾಗ ಏನೋ ಆಗಬೇಕೋ ಅದು ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ' ಎಂದು ವಿಜಯವಾಣಿ ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ರಾಗಿಣಿ ಮಾತನಾಡಿದ್ದಾರೆ.
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications