ನನಗೂ ತಾಯಿಯಾಗುವ ಆಸೆ ಇದೆ..ಆದ್ರೆ: ನಟಿ ರಾಗಿಣಿ ಪ್ರಜ್ವಲ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಈಗಾಗಲೇ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಪಾದಾರ್ಪಣೆ ಮಾಡಿದ್ದು, ಇದೀಗ ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ಶಾನಭೋಗರ ಮಗಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಫಿಟ್ನೆಸ್ ಟ್ರೈನರ್, ಡಾನ್ಸರ್ ಆಗಿರುವ ರಾಗಿಣಿ ನಟಿಯಾಗಿ ಕೂಡ ಮಿಂಚುತ್ತಿದ್ದಾರೆ.
ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಯಾಗಿರುವ ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದು, ಮಗು ಯಾವಾಗ ಎನ್ನುವ ಪ್ರಶ್ನೆಗೆ ಇದೀಗ ರಾಗಿಣಿ ಉತ್ತರ ಕೊಟ್ಟಿದ್ದಾರೆ. 'ನಾನು ಡಾನ್ಸ್ ಕ್ಲಾಸ್ ನಡೆಸೋದು ಅದರಲ್ಲಿ ಇನ್ನೂರು ಮಕ್ಕಳಿದ್ದಾರೆ. ಈಗಾಗಲೇ ಅಮ್ಮ ಆಗಲು ನೂರಕ್ಕೆ ನೂರು ಟ್ರೈನಿಂಗ್ ಆಗಿದೆ ನನಗೆ. ನಾನು ನೂರಕ್ಕೆ ನೂರು ಅಮ್ಮ ಆಗುತ್ತೇನೆ ಕೂಡ. ಈ ಆಸೆ ನಮ್ಮಿಬ್ಬರಿಗೂ ಇದೆ. ಆದರೆ ಅದಕ್ಕೊಂದು ಸಮಯ ಬರಬೇಕು. ನಮ್ಮಿಬ್ಬರಿಗೆ ಇಷ್ಟವಾಗುವ ಸಮಯ ಬಂದರೆ ಆಗೇ ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ' ಎಂದರು.

'ನಮಗೆ ಮಗು ಆಗಲ್ಲ. ನಮಗೆ ಮಗು ಬೇಡ ಎನ್ನುವ ಆಲೋಚನೆಯಲ್ಲಾ ನೂರಕ್ಕೆ ನೂರು ಇಲ್ಲ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಜೀವನ ಇರುತ್ತದೆ. ಅವರೇ ಆದ ಪ್ರಾಮುಖ್ಯತೆ ಇರುತ್ತದೆ. ನಾನು ಪ್ರಜ್ವಲ್ ಹೇಗೆ ಇದ್ದೇವೇ ಅಂದರೆ, ನಮ್ಮ ಸ್ನೇಹಿತರ ಗ್ರೂಪ್ ಅಲ್ಲಿರುವವರ ಮಕ್ಕಳು ಮೊದಲು ಬರುವುದು ನಮ್ಮ ಹತ್ತಿರವೇ'.
'ಆ ಮಕ್ಕಳನ್ನು ಮಲಗಿಸಬೇಕು ಅಂದರೆ, ಊಟ ಮಾಡಿಸಬೇಕು ಅಂದರೆ ಏನೇ ಇರಲಿ ರಾಯನ್, ವೇದ ಎಲ್ಲರೂ ಮೊದಲು ಬರುವುದು ನಮ್ಮ ಹತ್ತಿರನೇ. ನಮಗೆ ಮಕ್ಕಳೆಂದರೆ ತುಂಬಾ ಇಷ್ಟ. ನಾನು ನೂರಕ್ಕೆ ನೂರು ತಂದೆ -ತಾಯಿ ಆಗುತ್ತೇವೆ. ಸ್ವಲ್ಪ ನಮಗೆ ನಮ್ಮದೇ ಆದ ಸಮಯ ಬೇಕಿತ್ತು. ಆದರೆ ಖಂಡಿತಾ ತಂದೆ -ತಾಯಿ ಆಗುತ್ತೇವೆ' ಎಂದಿದ್ದಾರೆ.

ಇನ್ನು ಪ್ರಜ್ವಲ್ ಅವರ ತಂದೆ ತಾಯಿ ಅಂದರೆ ಹಿರಿಯ ನಟ ದೇವರಾಜ್ ಹಾಗೂ ಅವರ ಪತ್ನಿ ಮಗು ವಿಚಾರದ ಬಗ್ಗೆ ಏನು ಹೇಳುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಗಿಣಿ ಪ್ರಜ್ವಲ್, 'ನಾನು ಮೊದಲ ಸಿನಿಮಾ ಮಾಡಿದ್ದು ಮದುವೆಯಾದ ಮೇಲೆ. ಲಾ ಮಾಡಿರುವುದು ಮದುವೆಯಾದ ಮೇಲೆ. ನನಗೆ ಅತ್ತೆ ಮಾವನ ಸಪೋರ್ಟ್ ಹೇಗಿದೆ ಎನ್ನುವುದರ ಬಗ್ಗೆ ಅಲ್ಲಿಯೇ ಗೊತ್ತಾಗುತ್ತದೆ. ಇಲ್ಲ ಅಂದರೆ ಅಲ್ಲೇ ಹೇಳುತ್ತಿದ್ದರಲ್ಲಾ ಇದೆಲ್ಲಾ ಯಾಕೆ ಬೇಕು ಜೀವನದಲ್ಲಿ ಸೆಟೆಲ್ ಆಗು ಅಂತಾ.
ನಮ್ಮ ಅತ್ತೆ-ಮಾವ ಹಾಗೂ ಅಪ್ಪ-ಅಮ್ಮ ಯಾವುದನ್ನೂ ಮಾಡಬೇಡ ಅಂತಾ ಹೇಳಿಲ್ಲ. ನನ್ನ ಕಲೆಗೆ ಅವರು ಬೆಲೆ ಕೊಟ್ಟಿದ್ದಾರೆ. ಶಾನಬೋಗರ ಮಗಳು ಸಿನಿಮಾದಲ್ಲಿ ಗರ್ಭಿಣಿ ಪಾತ್ರ ಮಾಡಿದ್ದೇನೆ. ಆ ಪಾತ್ರಕ್ಕೆ ಫೀಲ್ ಮನಸ್ಸಿಂದನೇ ಬಂದಿದೆ. ಏನೋ ಮಾಡಬೇಕು ಅಂತಾ ಮಾಡಿಲ್ಲ. ನಮ್ಮ ಅತ್ತೆ ಮಾವ ನನಗೆ ಬೆಂಬಲವಾಗಿದ್ದಾರೆ. ಯಾವಾಗ ಏನೋ ಆಗಬೇಕೋ ಅದು ಆಗುತ್ತದೆ. ಆಗ ಎಲ್ಲರಿಗೂ ಗೊತ್ತಾಗುತ್ತದೆ' ಎಂದು ವಿಜಯವಾಣಿ ಡಿಜಿಟಲ್ಗೆ ನೀಡಿದ ಸಂದರ್ಶನದಲ್ಲಿ ರಾಗಿಣಿ ಮಾತನಾಡಿದ್ದಾರೆ.
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?












Click it and Unblock the Notifications