Get Updates
Get notified of breaking news, exclusive insights, and must-see stories!

ಸಮೀಕ್ಷೆ: ಕಾಂಗ್ರೆಸ್ ಗೆ ಪ್ಲಸ್ ಆಗುತ್ತದಂತೆ ರಾಹುಲ್ ಟೆಂಪಲ್ ರನ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿ ದೇಗುಲ, ಮಠ-ಮಾನ್ಯಗಳನ್ನು ಗಿರಗಿರ ಎಂದು ಸುತ್ತಾಡಿದ್ದು ಈ ಸಲ ಕಾಂಗ್ರೆಸ್ ಪಾಲಿಗೆ ಲಾಭದಾಯಕ ಆಗುವ ಸಾಧ್ಯತೆ ಇದೆ. ಇಂಡಿಯಾ ಟುಡೇ- ಕಾರ್ವಿ ಸಂಸ್ಥೆ ಕರ್ನಾಟಕ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗ ಆಗಿದೆ. ರಾಹುಲ್ ಗಾಂಧಿ ಅವರ ದೇಗುಲ ಭೇಟಿಯಿಂದ ಕಾಂಗ್ರೆಸ್ ಗೆ ಪ್ಲಸ್ ಆಗಲಿದೆಯಂತೆ.

ರಾಹುಲ್ ಗಾಂಧಿ ಅವರು ಶೃಂಗೇರಿ, ತುಮಕೂರಿನ ಸಿದ್ದಗಂಗಾ ಮಠ, ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ, ಬಸವ ಕಲ್ಯಾಣ ಹೀಗೆ ಕರ್ನಾಟಕದ ನಾನಾ ಕಡೆ ಮಠ-ಮಾನ್ಯಗಳಿಗೆ ಭೇಟಿ ನೀಡಿದ್ದು ಕಾಂಗ್ರೆಸ್ ಪಾಲಿಗೆ ಈ ಬಾರಿಯ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಬಹುದು ಎಂಬ ಅಭಿಪ್ರಾಯವನ್ನು ಶೇ 42ರಷ್ಟು ಮಂದಿ ಅನುಮೋದಿಸಿದ್ದಾರೆ.

Poll survey: Rahul Gandhi temple visit will help Congress

ಶೇಕಡಾ 35ರಷ್ಟು ಮಂದಿ ಇಲ್ಲ ಎಂಬ ಉತ್ತರ ನೀಡಿದ್ದರೆ, ಶೇ 23ರಷ್ಟು ಮಂದಿ ಹೇಳಲಾಗುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮೇಲ್ನೋಟಕ್ಕೆ ಫಲಿತಾಂಶವನ್ನು ಗಮನಿಸುವುದಾದರೆ ರಾಹುಲ್ ಗಾಂಧಿ ಅವರ ದೇಗುಲ, ಮಠ-ಮಾನ್ಯಗಳ ಭೇಟಿ ಕಾಂಗ್ರೆಸ್ಸಿನ ಪಾಲಿಗೆ ಪ್ಲಸ್ ಆಗುವಂತೆ ಕಾಣುತ್ತಿದೆ. ಆದರೂ ಚುನಾವಣಾ ಫಲಿತಾಂಶ ಬರುವವರೆಗೂ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+