Get Updates
Get notified of breaking news, exclusive insights, and must-see stories!

ಚಳ್ಳಕೆರೆ: ಪರಿಶಿಷ್ಟ ಪಂಗಡದವರ ಮತಗಳೇ ನಿರ್ಣಾಯಕ!

ಒಂದು ಕಾಲದಲ್ಲಿ ಈ ಕ್ಷೇತದ ಕಾಂಗ್ರೆಸ್ ನ ಜಯಣ್ಣ ಅವರ ಪ್ರಾಬಲ್ಯವಿದ್ದ ಕ್ಷೇತ್ರವಿದು. ರಾಜ್ಯದಲ್ಲಿ ಜನತಾ ಪರಿವಾರದ ಅಲೆ ಇದ್ದಾಗಲೂ ಅಲ್ಲಿ ಜಯಣ್ಣ ಅವರ ವರ್ಚಸ್ಸೇ ಗೆಲ್ಲುತ್ತಿದ್ದ ಕಾಲವದು. ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ.

ಕಾಂಗ್ರೆಸ್ಸಿನ ರಘು ಮೂರ್ತಿ ಅವರು ಇಲ್ಲಿನ ಹಾಲಿ ಶಾಸಕರು. ವಾಲ್ಮೀಕಿ, ಲಿಂಗಾಯತ ಅಲ್ಲದೆ ಎಲ್ಲಾ ಜನಾಂಗಕ್ಕೂ ಬೇಕಾದವರು. ಸಧ್ಯದ ಪರಿಸ್ಥಿತಿಯಲ್ಲಿ ರಘುಮೂರ್ತಿಯವರೇ ಚುನಾವಣೆ ಗೆಲ್ಲುವ ಪ್ರಭಾವಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಜಯಣ್ಣ ಅವರು ಪ್ರಬಲ ಶಾಸಕರಾಗಿ ಮಾತ್ರವಲ್ಲ, ರಾಜ್ಯ ಸರ್ಕಾರದ ಮುಖ್ಯ ಸಚೇತಕರೂ ಆಗಿ ಅಧಿಕಾರದಲ್ಲಿದ್ದರು. ಆಗಿನಿಂದಲೂ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷಕ್ಕೇ ಜನರು ಜೈ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇನ್ನು, ಜಾತಿವಾರು ಲೆಕ್ಕಕ್ಕೆ ಬರುವುದಾದರೆ, ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಅವರ ಪಾತ್ರವೇ ನಿರ್ಣಾಯಕ. ಈಗಲೂ ಅದೇ ಸಮುದಾಯದ ರಘುಮೂರ್ತಿ (ಕಾಂಗ್ರೆಸ್) ಅವರೇ ಶಾಸಕರು. ಭೂಸೇನೆಯಲ್ಲಿ ಇಂಜಿನಿಯರ್ ಆಗಿದ್ದ ಅನುಭವ ಹೊಂದಿರುವ ಅವರಿಂದ ಕ್ಷೇತ್ರದಲ್ಲಿ ಉತ್ತಮ ಕೆಲಸಗಳಿರುವ ಮಾತುಗಳೂ ಕೇಳಿಬರುತ್ತವೆ. ಹಾಗಾಗಿ, ಅವರ ಬಗ್ಗೆ ಇತರ ಕೋಮಿನ ಜನರೂ ಸಹಾನುಭೂತಿ ಹೊಂದಿದ್ದಾರೆ.

ಲಿಂಗಾಯತ ಜಾತಿಯವರು ಎರಡನೇ ಸ್ಥಾನ

ಲಿಂಗಾಯತ ಜಾತಿಯವರು ಎರಡನೇ ಸ್ಥಾನ

ಇನ್ನು, ಜಾತಿವಾರು ಲೆಕ್ಕಕ್ಕೆ ಬರುವುದಾದರೆ, ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಅವರ ಪಾತ್ರವೇ ನಿರ್ಣಾಯಕ. ಪರಿಶಿಷ್ಟ ಪಂಗಡ ಮತಗಳೇ ನಿರ್ಣಾಯಕವಾಗಿರುವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆಯಿದೆ. ಈಗ ಪ್ರತ್ಯೇಕ ಲಿಂಗಯತ ಧರ್ಮ ಸ್ಥಾಪನೆಯ ಬೆನ್ನಲ್ಲಿ ಇಲ್ಲಿನ ಮತ ಬ್ಯಾಂಕ್ ಒಡೆದು ಹಂಚಿ ಹೋಗುವ ಸಾಧ್ಯತೆ ಹೆಚ್ಚಿದೆ.

ಲಿಂಗಾಯತ ಜಾತಿಯವರು ಎರಡನೇ ಸ್ಥಾನ

ಲಿಂಗಾಯತ ಜಾತಿಯವರು ಎರಡನೇ ಸ್ಥಾನ

ಇನ್ನು, ಅಂಕಿ-ಸಂಖ್ಯೆಯಲ್ಲಿ ಲಿಂಗಾಯತ ಜಾತಿಯವರು ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಈ ವರ್ಗದಿಂದ ಯಾವುದೇ ಪ್ರಭಾವಿ ನಾಯಕ ಹೊಮ್ಮಿಲ್ಲ. ಅಷ್ಟೇ ಅಲ್ಲ, ರಘುಮೂರ್ತಿ ಬಗ್ಗೆ ಈ ಸಮುದಾಯಕ್ಕೂ ಉತ್ತಮ ಅಭಿಪ್ರಾಯವಿರುವುದರಿಂದ, ಲಿಂಗಾಯತರ ಬಹುಪಾಲು ಮಂದಿ ರಘುಮೂರ್ತಿ ಅವರ ಕಡೆಗೇ ಒಲವು ಹೊಂದಿದೆ ಎಂದು ಹೇಳಲಾಗುತ್ತದೆ.

ಈಗ ಬಿಜೆಪಿಗೆ ತಲೆನೋವಾಗಿರುವ ವಿಚಾರ

ಈಗ ಬಿಜೆಪಿಗೆ ತಲೆನೋವಾಗಿರುವ ವಿಚಾರ

ಇದೇ ಈಗ ಬಿಜೆಪಿಗೆ ತಲೆನೋವಾಗಿರುವ ವಿಚಾರ. ಹಾಗಾಗಿ, ವಾಲ್ಮೀಕಿ ಜನಾಂಗದಿಂದ ಪ್ರಬಲವಾದ ನಾಯಕರೊಬ್ಬರನ್ನು ಕಣಕ್ಕಿಳಿಸಿದರೆ ಮಾತ್ರ ರಘುಮೂರ್ತಿಗೆ ಸವಾಲೆಸೆಯಬಹುದು. ಜೆಡಿಎಸ್ ಮುಂದಿನ ಸಮಸ್ಯೆಯೂ ಇದೇ ತೆರನಾದದ್ದು.

ಈ ಮೂರು ಪಕ್ಷಗಳನ್ನು ಬಿಟ್ಟರೆ, ರೈತಸಂಘದಿಂದ ಪ್ರಬಲ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಬಹುದು ಎಂಬ ಸುದ್ದಿಯಿದೆ. ಅದು ಯಾರೆಂದು ಈಗಲೇ ಸ್ಪಷ್ಟವಾಗಿಲ್ಲ. ಆದರೆ, ಸಧ್ಯದ ಪರಿಸ್ಥಿತಿಯಲ್ಲಿ ರಘುಮೂರ್ತಿಯವರೇ ಚುನಾವಣೆ ಗೆಲ್ಲುವ ಪ್ರಭಾವಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

2013ರ ಚುನಾವಣೆ ಫಲಿತಾಂಶ

2013ರ ಚುನಾವಣೆ ಫಲಿತಾಂಶ

2013ರ ಚುನಾವಣೆ ಫಲಿತಾಂಶ : 2013ರಲ್ಲಿ ಶೇ 78.39ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಟಿ ರಘುಮೂರ್ತಿ ಅವರು 60, 197 ಮತಗಳನ್ನು ಗಳಿಸಿ ಜಯ ಗಳಿಸಿದ್ದರು. ಕೆಜೆಪಿಯ ಕೆ.ಟಿ ಕುಮಾರಸ್ವಾಮಿ ಅವರು 37,074 ಮತಗಳನ್ನು ಗಳಿಸಿ ಸೋಲು ಕಂಡರು. 23,123ಮತಗಳು (ಶೇ 15.65ರಷ್ಟು) ಮತಗಳ ಅಂತರದಿಂದ ರಘುಮೂರ್ತಿ ಅವರು ವಿಜಯಿಯಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+