10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE
Elections
oi-Prasad P Naik
By Prasad
ನವದೆಹಲಿ, ಮೇ 31 : ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆ ಮತ್ತು ದೇಶದ ಇತರ ರಾಜ್ಯಗಳಲ್ಲಿ 4 ಲೋಕಸಭೆ ಮತ್ತು 9 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
ರಾಜರಾಜೇಶ್ವರಿ ನಗರದಲ್ಲಿ ಮೈತ್ರಿಕೂಟದ ಅಂಗಪಕ್ಷಗಳಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟುಕೊಂಡು ಜಿದ್ದಾಜಿದ್ದಿ ಕಣಕ್ಕಿಳಿದಿದ್ದರು. ಕರ್ನಾಟಕದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಇಬ್ಬರಲ್ಲೊಬ್ಬರು ಗೆದ್ದರೂ ಅಷ್ಟೇ ಸೋತರೂ ಅಷ್ಟೆ, ಗೆಲುವು-ಸೋಲು ಮೈತ್ರಿಕೂಟಕ್ಕೇ.
ಈ ಎಲ್ಲ ಕ್ಷೇತ್ರಗಳಿಗೆ ಮೇ 28ರಂದು ಸೋಮವಾರ ಮತದಾನ ನಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಮತ್ತು ಇತ್ತೀಚೆಗೆ ಹಲವಾರು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ್ದ ಭಾರತೀಯ ಜನತಾ ಪಕ್ಷ ಉಪಚುನಾವಣೆಗಳಲ್ಲಿ ಮುಗ್ಗರಿಸಿ ಬಿದ್ದಿದೆ.
ನಡೆದ 4 ಲೋಕಸಭೆ, 9 ವಿಧಾನಸಭೆ ಉಪಚುನಾವಣೆ ಮತ್ತು ಕರ್ನಾಟಕದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಗಳಲ್ಲಿ, ಕೇವಲ 1 ಲೋಕಸಭೆ ಮತ್ತು 1 ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಭಾರತೀಯ ಜನತಾ ಪಕ್ಷ ಗೆದ್ದಿದ್ದು, ಉಳಿದರಲ್ಲಿ ಸೋತು ಸುಣ್ಣವಾಗಿದೆ. ಮೈತ್ರಿಕೂಟಗಳು ಬಿಜೆಪಿಯನ್ನು ಸದೆಬಡಿದಿವೆ.
May 31, 2018, 5:36 pm IST
ಇವಿಎಂ ಮತಎಣಿಕೆಯ ಬಗ್ಗೆ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ತಕರಾರು ತೆಗೆದಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೆ ಫಲಿತಾಂಶ ಪ್ರಕಟಿಸಬಾರದು. ಅವಶ್ಯಕತೆ ಬಿದ್ದರೆ ಕೋರ್ಟಿಗೂ ಹೋಗಲು ರೆಡಿ ಅಂದಿದ್ದಾರೆ.
May 31, 2018, 2:17 pm IST
ಉತ್ತರ ಪ್ರದೇಶದ ಕೈರಾನಾ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಆರ್ಎಲ್ಡಿ-ಎಸ್ಪಿ ಅಭ್ಯರ್ಥಿ ತಬಸುಮ್ ಹಸನ್ ಸೋಲಿಸಿದ್ದಾರೆ.
May 31, 2018, 2:13 pm IST
ಪಾಲಘರ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗಾವಿತ್ ಅವರು ಶಿವಸೇನಾದ ಶ್ರೀನಿವಾಸ್ ವಾನಗಾ ಅವರನ್ನು ಸೋಲಿಸಿದ್ದಾರೆ.
May 31, 2018, 1:52 pm IST
ಪಂಜಾಬ್ನ ಶಹಕೋಟ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರದೇವ್ ಸಿಂಗ್ ಲಾದಿ ಅವರು 38,802 ಮತಗಳಿಂದ ಗೆಲುವು ಸಾಧಿಸಿದ್ದಾರೆ.
May 31, 2018, 1:51 pm IST
ಪಶ್ಚಿಮ ಬಂಗಾಳದ ಮಹೇಶ್ತಲ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಸುಜಿತ್ ಘೋಶ್ ಅವರನ್ನು ತೃಣಮೂಲ ಕಾಂಗ್ರೆಸ್ನ ದುಲಾಲ್ ಚಂದ್ರ ದಾಸ್ ಮಣಿಸಿದ್ದಾರೆ.
May 31, 2018, 1:48 pm IST
ಉತ್ತರಾಖಂಡದ ಥರಾಲಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಥರಾಲಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಮಗನ್ ಲಾಲ್ ಶಾ ಅವರು ಫೆಬ್ರುವರಿಯಲ್ಲಿ ನಿಧನರಾಗಿದ್ದರು.
May 31, 2018, 1:43 pm IST
ಆರ್ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ 1,08,064 ಮತ, ಬಿಜೆಪಿಯ ತುಳಸಿ ಮುನಿರಾಜು 85,572 ಮತ್ತು ಜೆಡಿಎಸ್ನ ರಾಮಚಂದ್ರ 60,360 ಮತ ಪಡೆದುಕೊಂಡಿದ್ದಾರೆ.
May 31, 2018, 1:43 pm IST
ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್ನ ಮುನಿರತ್ನ 25,492 ಮತಗಳಿಂದ ಗೆಲುವು ಸಾಧಿಸಿದ್ದಾರೆ.
May 31, 2018, 1:31 pm IST
ಆರ್ ಜೆಡಿಯ ಗೆಲುವಿನ ಅಂತರಕ್ಕಿಂತ (ಆಡಳಿತಾರೂಢ) ಜೆಡಿಯು ಕಡಿಮೆ ಮತ ಪಡೆದಿದೆ. ನಿತಿಶ್ ಕುಮಾರ್ ಯುಟರ್ನ್ ತೆಗೆದುಕೊಂಡಿದ್ದಕ್ಕೆ ಬಿಹಾರದ ಜನತೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ - ಜೋಕಿಹಾಟ್ ಗೆಲುವಿನ ನಂತರ ತೇಜಸ್ವಿ ಯಾದವ್ ಪ್ರತಿಕ್ರಿಯೆ.
May 31, 2018, 12:53 pm IST
ರಾಜರಾಜೇಶ್ವರಿ ನಗರದಲ್ಲಿ 16ನೇ ಸುತ್ತಿನ ನಂತರ ಮುನಿರತ್ನ 1,03,195, ಮುನಿರಾಜು ಗೌಡ 69,769, ಜಿಎಚ್ ರಾಮಚಂದ್ರ 54,289 ಮತ ಗಳಿಸಿದ್ದಾರೆ. ಇನ್ನೇನು ಮುನಿರತ್ನ ಜಯ ಘೋಷಣೆ ಮಾಡುವುದು ಬಾಕಿಯಿದೆ.
May 31, 2018, 12:49 pm IST
ಉತ್ತರ ಪ್ರದೇಶದ ನೂಪುರ ವಿಧಾನಸಭೆ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ನಯೀಮ್ ಉಲ್ ಹಸನ್ ಅವರು ಬಿಜೆಪಿಯ ಪ್ರತಿಸ್ಪರ್ಧಿ ಅವಿನಾಶ್ ಸಿಂಗ್ ಅವರನ್ನು 6,211 ಮತಗಳಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.
May 31, 2018, 12:36 pm IST
ಕೇರಳದ ಚೆಂಗನ್ನೂರು ವಿಧಾನಸಭೆ ಚುನಾವಣೆಯನ್ನು ಸಿಪಿಐ(ಎಂ)ನ ಸಜಿ ಚೆರಿಯನ್ ಅವರು ಗೆದ್ದುಕೊಂಡಿದ್ದಾರೆ. ಸಿಪಿಐ(ಎಂ)ನ ಶಾಸಕ ಕೆಕೆ ರಾಮಚಂದ್ರನ್ ನಾಯರ್ ಅವರು ಅಸುನೀಗಿದ್ದರಿಂದ ಉಪಚುನಾವಣೆ ನಡೆಸಲಾಗಿತ್ತು.
May 31, 2018, 12:13 pm IST
ರಾಜರಾಜೇಶ್ವರಿ ನಗರದಲ್ಲಿ 14ನೇ ಸುತ್ತಿನ ಮತಎಣಿಕೆಯ ನಂತರ ಬಂದಿರುವ ಮತಗಳು ಹೀಗಿವೆ : ಮುನಿರತ್ನ 97,440, ಮುನಿರಾಜು ಗೌಡ 56,278, ಜಿಎಚ್ ರಾಮಚಂದ್ರ 45,345
May 31, 2018, 11:56 am IST
ಉತ್ತರ ಪ್ರದೇಶದ ಕೈರಾನಾ ಲೋಕಸಭೆ ಕ್ಷೇತ್ರದಲ್ಲಿ 13ನೇ ಸುತ್ತಿನ ಮತಎಣಿಕೆಯ ನಂತರ ಕಾಂಗ್ರೆಸ್ ನ ತಬಸ್ಸುಮ್ ಅವರು ಬಿಜೆಪಿಯ ಮೃಗಾಂಕಾ ಅವರಿಂತ 41,391 ಮತಗಳಿಂದ ಮುಂದಿದ್ದಾರೆ.
May 31, 2018, 11:46 am IST
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಮ್ಮಟೆಯ ಸದ್ದು, ಶಿಳ್ಳೆಗಳು, ಆಬುಲಿ ಮುಡಿದು ಬಂದಿರುವ ಕಾರ್ಯಕರ್ತೆಯರ ನರ್ತನ, ಗುಲಾಲ್ ಎರಚಾಟ, ಅಭಿಮಾನಿಗಳ ಕಿರುಚಾಟ ನಿಲ್ಲುತ್ತಲೇ ಇಲ್ಲ.
ರಾಜರಾಜೇಶ್ವರಿ ನಗರದಲ್ಲಿ 13ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 92,625, ಮುನಿರಾಜು ಗೌಡ 49,216, ಜಿಎಚ್ ರಾಮಚಂದ್ರ 40,469 ಮತ ಪಡೆದಿದ್ದಾರೆ. ಈಗಾಗಲೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸಾಹದಲ್ಲಿದ್ದಾರೆ.
May 31, 2018, 11:27 am IST
ನಾಗಾಲ್ಯಾಂಡ್ ಲೋಕಸಭೆ ಕ್ಷೇತ್ರದಲ್ಲಿ ನಾಗಾ ಪೀಪಲ್ಸ್ ಫ್ರಂಟ್ ನ ಅಭ್ಯರ್ಥಿ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಅಭ್ಯರ್ಥಿಗಿಂತ 11 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
May 31, 2018, 11:19 am IST
ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಕ್ಷೇತ್ರದ ಮತಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗವಿತ್ ರಾಜೇಂದ್ರ ಧೇಡ್ಯಾ ಅವರು 17,417 ಮತಗಳಿಂದ ಮುಂದಿದ್ದಾರೆ.
May 31, 2018, 11:18 am IST
ಜಾರ್ಖಂಡ್ ನ ಸಿಲ್ಲಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಫಲಿತಾಂಶ : ಜೆಎಂಎಂನ ಸೀಮಾ ದೇವಿ ಅವರು 6ನೇ ಸುತ್ತಿನ ಮತಎಣಿಕೆಯ ನಂತರ 296 ಮತಗಳ ಮುನ್ನಡೆ ಸಾಧಿಸಿದ್ದಾರೆ.
May 31, 2018, 11:04 am IST
ರಾಜರಾಜೇಶ್ವರಿ ನಗರದಲ್ಲಿ 10ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 80,282 ಮುನಿರಾಜು ಗೌಡ 34,064 ಜಿಎಚ್ ರಾಮಚಂದ್ರ 23,526 ಮತಗಳನ್ನು ಪಡೆದಿದ್ದಾರೆ.
May 31, 2018, 11:02 am IST
ಭಂಡಾರ-ಗೋಂಡಿಯಾ ಲೋಕಸಭೆ ಕ್ಷೇತ್ರದಲ್ಲಿ ಎನ್ಸಿಪಿ, ಪಶ್ಚಿಮ ಬಂಗಾಳದ ಮಹೇಶ್ತಲದಲ್ಲಿ ಟಿಎಂಸಿ, ಮೇಘಾಲಯದ ಅಂಪಾಟಿಯಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದ ನೂರಪುರದಲ್ಲಿ ಸಮಾಜವಾದಿ ಪಕ್ಷ, ಕೇರಳದ ಚೆಂಗನ್ನೂರುನಲ್ಲಿ ಸಿಪಿಐ(ಎಂ) ಮುನ್ನಡೆ ಸಾಧಿಸಿವೆ.
May 31, 2018, 10:45 am IST
ಜಾರ್ಖಂಡ್ ನ ಗೋಮಿಯಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಮಾಧವ ಲಾಲ್ ಸಿಂಗ್ 7,174 ಮತಗಳ ಅಂತರದಿಂದ ಮುಂದಿದ್ದಾರೆ.
May 31, 2018, 10:41 am IST
ರಾಜರಾಜೇಶ್ವರಿ ನಗರದಲ್ಲಿ 8ನೇ ಸುತ್ತಿನ ಮತಎಣಿಕೆಯ ನಂತರ - ಮುನಿರತ್ನ 70,224 (ಕಾಂಗ್ರೆಸ್), ಮುನಿರಾಜು ಗೌಡ 27,946 (ಬಿಜೆಪಿ), ಜಿಎಚ್ ರಾಮಚಂದ್ರ 15,450 (ಜೆಡಿಎಸ್)
May 31, 2018, 10:28 am IST
ಪಂಜಾಬ್ ನ ಶಾಹ್ ಕೋಟ್ ನಲ್ಲಿ 6ನೇ ಸುತ್ತಿ ಮತಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಲಡ್ಡಿ ಶೇರೋವಾಲಿಯಾ ಅವರು 12 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
May 31, 2018, 10:19 am IST
ರಾಜರಾಜೇಶ್ವರಿ ನಗರದಲ್ಲಿ 6ನೇ ಸುತ್ತಿನ ನಂತರ - ಮುನಿರತ್ನ 52,285 (ಕಾಂಗ್ರೆಸ್), ಮುನಿರಾಜು ಗೌಡ 20,858 (ಬಿಜೆಪಿ), ಜಿಎಚ್ ರಾಮಚಂದ್ರ 10,123 (ಜೆಡಿಎಸ್)
May 31, 2018, 10:18 am IST
ಕೈರಾನಾ ಉಪಚುನಾವಣೆ :
ಬಿಜೆಪಿಯ ಮೃಗಾಂಕಾ ಸಿಂಗ್ - 45,368 ಮತಗಳು;
ಆರ್ ಎಲ್ ಡಿ - ತಬಸ್ಸುಮ್ ಹಸನ್ - 55,082 ಮತಗಳು
May 31, 2018, 10:07 am IST
ಮಹಾರಾಷ್ಟ್ರದ ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಎನ್ಸಿಪಿಯ ಅಭ್ಯರ್ಥಿ 3,100 ಮತಗಳಿಂದ ಮುಂದಿದ್ದು, ಬಿಜೆಪಿ ಅಭ್ಯರ್ಥಿ ಹಿಂದಿದ್ದಾರೆ.
May 31, 2018, 9:56 am IST
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ನ ಮುನಿರತ್ನ 41,625, ಬಿಜೆಪಿಯ ಮುನಿರಾಜು ಗೌಡ 17,948, ಜೆಡಿಎಸ್ ನ ಜಿಎಚ್ ರಾಮಚಂದ್ರ 8,470 ಮತ ಗಳಿಸಿದ್ದು, ಕಾಂಗ್ರೆಸ್ ಗೆಲುವು ಖಚಿತವಾಗಿದೆ.
May 31, 2018, 9:53 am IST
ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಗವಿತ್ ರಾಜೇಂದ್ರ ಘೇಡ್ಯಾ ಅವರು 6 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
May 31, 2018, 9:29 am IST
ಉತ್ತರ ಪ್ರದೇಶದ ಕೈರಾನಾದಲ್ಲಿ ಮೊದಲ ಸುತ್ತಿನ ನಂತರ ಆರ್ಎಲ್ಡಿ ಅಭ್ಯರ್ಥಿ ತಬಸ್ಸುಮ್ ಹಸನ್ 3,700 ಮತಗಳು ಮತ್ತು ಬಿಜೆಪಿಯ ಮೃಗಾಂಕಾ ಸಿಂಗ್ 3,746 ಮತ ಗಳಿಸಿದ್ದಾರೆ. ಬಿಜೆಪಿ ಸೋತರೆ ಮತ್ತು ಮುಖಭಂಗ ಅನುಭವಿಸಿದಂತಾಗುತ್ತದೆ.
First round of counting is completed, tabulation is underway, RLD candidate Tabassum Hasan has received 3700 votes and BJP's Mriganka Singh has received 3746 votes: Indra Vijay Singh, Collector, Shamli on #KairanaByPollspic.twitter.com/c4yoDcCQKU
ಭಾರತೀಯ ಜನತಾ ಪಕ್ಷಕ್ಕೆ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರ ಭಾರೀ ಪ್ರತಿಷ್ಠೆಯ ಕಣವಾಗಿದೆ. ಏಕೆಂದರೆ, ಗೋರಖಪುರ ಮತ್ತು ಫುಲಪುರ ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಅಧಿಕಾರರೂಢವಾಗಿರುವ ಬಿಜೆಪಿ ಅವಮಾನಕರ ಸೋಲು ಕಂಡಿತ್ತು ಮತ್ತು ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಜಯಭೇರಿ ಬಾರಿಸಿತ್ತು. ಹೀಗಾಗಿ ಕೈರಾನಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲೇಬೇಕಾಗಿದೆ.
7:04 AM, 31 May
ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯಿಂದ ಮುನಿರಾಜು ಗೌಡ, ಕಾಂಗ್ರೆಸ್ಸಿನಿಂದ ಮುನಿರತ್ನ ನಾಯ್ಡು, ಜೆಡಿಎಸ್ ನಿಂದ ರಾಮಚಂದ್ರ, ಪಕ್ಷೇತರನಾಗಿ ಹುಚ್ಚ ವೆಂಕಟ್ ಮತ್ತಿತರ 10 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
8:14 AM, 31 May
ರಾಜರಾಜೇಶ್ವರಿ ನಗರದ ಜ್ಞಾನಾಕ್ಷಿ ನಿಕೇತನ ಶಾಲೆಯಲ್ಲಿ ಮತಎಣಿಕೆಯ ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ 550 ಅಂಚೆ ಮತ ಎಣಿಕೆ ಮುಗಿದ ನಂತರ 18 ಸುತ್ತುಗಳ ಮತಯಂತ್ರಗಳ ಮತಎಣಿಕೆ ನಡೆಯಲಿದೆ. ಮಧ್ಯಾಹ್ನದ ಹೊತ್ತಿದೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.
8:18 AM, 31 May
ನೂರಪುರ (ಉತ್ತರ ಪ್ರದೇಶ), ಶಾಹ್ ಕೋಟ್ (ಪಂಜಾಬ್), ಜೋಕಿಹಾಟ್ (ಬಿಹಾರ), ಗೋಮಿಯಾ ಮತ್ತು ಸಿಲ್ಲಿ (ಜಾರ್ಖಂಡ್), ಚೆಂಗನ್ನೂರ (ಕೇರಳ), ಅಂಪಾಟಿ (ಮೇಘಾಲಯ), ಥರಾಲಿ (ಉತ್ತರಾಖಂಡ್) ಮತ್ತು ಮಹೇಶ್ತಲ (ಪಶ್ಚಿಮ ಬಂಗಾಳ) ವಿಧಾನಸಭಾ ಕ್ಷೇತ್ರಗಳಲ್ಲಿನ ಉಪಚುನಾವಣೆಯ ಫಲಿತಾಂಶ ಇಂದು ಹೊರಬರಲಿದೆ.
8:20 AM, 31 May
ಜೊತೆಗೆ ಉತ್ತರ ಪ್ರದೇಶದ ಕೈರಾನಾ, ಮಹಾರಾಷ್ಟ್ರದ ಪಾಲ್ಘರ್ ಮತ್ತು ಭಂಡಾರ-ಗೋಂಡಿಯಾ, ನಾಗಾಲ್ಯಾಂಡ್ ಲೋಕಸಭಾ ಉಪಚುನಾವಣೆಯ ಫಲಿತಾಂಶ ಕೂಡ ಹೊರಬರಲಿದೆ.
8:33 AM, 31 May
ಮಹಾರಾಷ್ಟ್ರದಲ್ಲಿ ಪಾಲ್ಘರ್ ನಲ್ಲಿ ಬಿಜೆಪಿ ಮತ್ತು ಶಿವಸೇನೆ ಒಂದಕ್ಕೊಂದು ವಿರುದ್ಧವಾಗಿ ಸ್ಪರ್ಧಿಸುತ್ತಿದ್ದು, ಎರಡೂ ಪಕ್ಷಗಳು ಪಣಕ್ಕೆ ಇಟ್ಟಿವೆ. ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಅದೃಷ್ಟ ಪರೀಕ್ಷೆಗಿಳಿದಿದೆ. ಏಕೆಂದರೆ, ಇಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಜಂಟಿಯಾಗಿ ಸ್ಪರ್ಧಿಸಿವೆ.
8:37 AM, 31 May
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಪ್ರಚಾರದ ಉಸ್ತುವಾರಿ ವಹಿಸಿದ್ದ ಸಂಸದ ಡಿಕೆ ಸುರೇಶ್ ಮತ್ತು ಶಾಸಕ ಡಿಕೆ ಶಿವಕುಮಾರ್ ಅವರಿಂದ, ಮತಎಣಿಕೆಗೂ ಮುನ್ನ ಪತ್ರಿಕಾಗೋಷ್ಠಿ. ಸಿಬಿಐ 11 ಕಡೆಗಳಲ್ಲಿ ಸರ್ಚ್ ವಾರಂಟ್ ಹೊರಡಿಸಿದ್ದು, ಇವರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಡಿಕೆ ಸಹೋದರರು ಆರೋಪಿಸಿದ್ದಾರೆ.
8:39 AM, 31 May
ಮಹಾರಾಷ್ಟ್ರದ ಪಲಸ್ ಕಡೆಗಾಂವ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಶ್ವಜಿತ್ ಪತಂಗರಾವ್ ಅವರನ್ನು ವಿಜಯಿ ಎಂದು ಘೋಷಿಸಲಾಗಿದೆ. ಇಲ್ಲಿ ಶಿವಸೇನೆ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದು, ಕಡೆಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
8:55 AM, 31 May
ಪಂಜಾಬ್ ನ ಶಾಹ್ ಕೋಟ್ ನಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದ ನೂರಪುರದಲ್ಲಿ ಎಸ್ಪಿ, ಜಾರ್ಖಂಡ್ ನ ಸಿಲ್ಲಿಯಲ್ಲಿ ಬಿಜೆಪಿ, ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೊದಲ ಸುತ್ತಿನ ಮತಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
8:57 AM, 31 May
ಪಂಜಾಬ್ ನ ಶಾಹಕೋಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಡ್ಡಿ ಶೇರೋವಾಲಿಯಾ ಅವರು 2,000 ಮತಗಳ ಅಂತರದಿಂದ ಮುಂದಿದ್ದಾರೆ.
9:01 AM, 31 May
ರಾಜರಾಜೇಶ್ವರಿ ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಹುಚ್ಚ ವೆಂಕಟ್ ಅವರು ಮೊದಲ ಸುತ್ತಿನಲ್ಲಿ 76 ಮತಗಳನ್ನು ಗಳಿಸಿದ್ದಾರೆ. ಮುನಿರತ್ನಗೆ 9,342 ಮತಗಳು ಲಭಿಸಿವೆ. ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರಿಗೆ 5,220 ಮತಗಳು ದಕ್ಕಿವೆ. ಹಾಲಿ ಶಾಸಕ ಮುನಿರತ್ನ ಅವರು ಗೆಲುವಿನ ಓಟ ಮುಂದುವರಿಸುತ್ತಾರಾ?
9:12 AM, 31 May
ಪಶ್ಚಿಮ ಬಂಗಾಳದಲ್ಲಿ ಮಹೇಶ್ತಲ ವಿಧಾನಸಭೆ ಕ್ಷೇತ್ರದಲ್ಲಿ ಟಿಎಂಸಿಯ ದುಲಾಲ್ ಚಂದ್ರ ದಾಸ್ ಅವರು ಎರಡನೇ ಸುತ್ತಿನ ನಂತರ 10 ಸಾವಿರ ಮತಗಳಿಂದ ಮುಂದಿದ್ದಾರೆ. ಟಿಎಂಸಿ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.
9:15 AM, 31 May
ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮುನಿರತ್ನ (ಕಾಂಗ್ರೆಸ್) 16,581, ಮುನಿರಾಜು ಗೌಡ (ಬಿಜೆಪಿ) 7,901, ಜಿಎಚ್ ರಾಮಚಂದ್ರ (ಜೆಡಿಎಸ್) 3,606 ಮತಗಳು ಎರಡನೇ ಸುತ್ತಿನ ನಂತರ.
9:23 AM, 31 May
ರಾಜರಾಜೇಶ್ವರಿ ನಗರದಲ್ಲಿ ಮೂರನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 25,219, ಮುನಿರಾಜು ಗೌಡ 11,868, ಜಿಎಚ್ ರಾಮಚಂದ್ರ 4,822 ಮತ ಗಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ ಸಾಧಿಸಿದ್ದಾರೆ. ಮೈತ್ರಿಕೂಟದ ಜೆಡಿಎಸ್ಸಿಗೆ ಭಾರೀ ಮುಖಭಂಗವಾಗುವುದು ಖಚಿತ.
9:29 AM, 31 May
ಉತ್ತರ ಪ್ರದೇಶದ ಕೈರಾನಾದಲ್ಲಿ ಮೊದಲ ಸುತ್ತಿನ ನಂತರ ಆರ್ಎಲ್ಡಿ ಅಭ್ಯರ್ಥಿ ತಬಸ್ಸುಮ್ ಹಸನ್ 3,700 ಮತಗಳು ಮತ್ತು ಬಿಜೆಪಿಯ ಮೃಗಾಂಕಾ ಸಿಂಗ್ 3,746 ಮತ ಗಳಿಸಿದ್ದಾರೆ. ಬಿಜೆಪಿ ಸೋತರೆ ಮತ್ತು ಮುಖಭಂಗ ಅನುಭವಿಸಿದಂತಾಗುತ್ತದೆ.
First round of counting is completed, tabulation is underway, RLD candidate Tabassum Hasan has received 3700 votes and BJP's Mriganka Singh has received 3746 votes: Indra Vijay Singh, Collector, Shamli on #KairanaByPollspic.twitter.com/c4yoDcCQKU
ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಗವಿತ್ ರಾಜೇಂದ್ರ ಘೇಡ್ಯಾ ಅವರು 6 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
9:56 AM, 31 May
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ನ ಮುನಿರತ್ನ 41,625, ಬಿಜೆಪಿಯ ಮುನಿರಾಜು ಗೌಡ 17,948, ಜೆಡಿಎಸ್ ನ ಜಿಎಚ್ ರಾಮಚಂದ್ರ 8,470 ಮತ ಗಳಿಸಿದ್ದು, ಕಾಂಗ್ರೆಸ್ ಗೆಲುವು ಖಚಿತವಾಗಿದೆ.
10:07 AM, 31 May
ಮಹಾರಾಷ್ಟ್ರದ ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಎನ್ಸಿಪಿಯ ಅಭ್ಯರ್ಥಿ 3,100 ಮತಗಳಿಂದ ಮುಂದಿದ್ದು, ಬಿಜೆಪಿ ಅಭ್ಯರ್ಥಿ ಹಿಂದಿದ್ದಾರೆ.
10:18 AM, 31 May
ಕೈರಾನಾ ಉಪಚುನಾವಣೆ :
ಬಿಜೆಪಿಯ ಮೃಗಾಂಕಾ ಸಿಂಗ್ - 45,368 ಮತಗಳು;
ಆರ್ ಎಲ್ ಡಿ - ತಬಸ್ಸುಮ್ ಹಸನ್ - 55,082 ಮತಗಳು
10:19 AM, 31 May
ರಾಜರಾಜೇಶ್ವರಿ ನಗರದಲ್ಲಿ 6ನೇ ಸುತ್ತಿನ ನಂತರ - ಮುನಿರತ್ನ 52,285 (ಕಾಂಗ್ರೆಸ್), ಮುನಿರಾಜು ಗೌಡ 20,858 (ಬಿಜೆಪಿ), ಜಿಎಚ್ ರಾಮಚಂದ್ರ 10,123 (ಜೆಡಿಎಸ್)
10:28 AM, 31 May
ಪಂಜಾಬ್ ನ ಶಾಹ್ ಕೋಟ್ ನಲ್ಲಿ 6ನೇ ಸುತ್ತಿ ಮತಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಲಡ್ಡಿ ಶೇರೋವಾಲಿಯಾ ಅವರು 12 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
10:41 AM, 31 May
ರಾಜರಾಜೇಶ್ವರಿ ನಗರದಲ್ಲಿ 8ನೇ ಸುತ್ತಿನ ಮತಎಣಿಕೆಯ ನಂತರ - ಮುನಿರತ್ನ 70,224 (ಕಾಂಗ್ರೆಸ್), ಮುನಿರಾಜು ಗೌಡ 27,946 (ಬಿಜೆಪಿ), ಜಿಎಚ್ ರಾಮಚಂದ್ರ 15,450 (ಜೆಡಿಎಸ್)
10:45 AM, 31 May
ಜಾರ್ಖಂಡ್ ನ ಗೋಮಿಯಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಮಾಧವ ಲಾಲ್ ಸಿಂಗ್ 7,174 ಮತಗಳ ಅಂತರದಿಂದ ಮುಂದಿದ್ದಾರೆ.
11:02 AM, 31 May
ಭಂಡಾರ-ಗೋಂಡಿಯಾ ಲೋಕಸಭೆ ಕ್ಷೇತ್ರದಲ್ಲಿ ಎನ್ಸಿಪಿ, ಪಶ್ಚಿಮ ಬಂಗಾಳದ ಮಹೇಶ್ತಲದಲ್ಲಿ ಟಿಎಂಸಿ, ಮೇಘಾಲಯದ ಅಂಪಾಟಿಯಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದ ನೂರಪುರದಲ್ಲಿ ಸಮಾಜವಾದಿ ಪಕ್ಷ, ಕೇರಳದ ಚೆಂಗನ್ನೂರುನಲ್ಲಿ ಸಿಪಿಐ(ಎಂ) ಮುನ್ನಡೆ ಸಾಧಿಸಿವೆ.
11:04 AM, 31 May
ರಾಜರಾಜೇಶ್ವರಿ ನಗರದಲ್ಲಿ 10ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 80,282 ಮುನಿರಾಜು ಗೌಡ 34,064 ಜಿಎಚ್ ರಾಮಚಂದ್ರ 23,526 ಮತಗಳನ್ನು ಪಡೆದಿದ್ದಾರೆ.
11:18 AM, 31 May
ಜಾರ್ಖಂಡ್ ನ ಸಿಲ್ಲಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಫಲಿತಾಂಶ : ಜೆಎಂಎಂನ ಸೀಮಾ ದೇವಿ ಅವರು 6ನೇ ಸುತ್ತಿನ ಮತಎಣಿಕೆಯ ನಂತರ 296 ಮತಗಳ ಮುನ್ನಡೆ ಸಾಧಿಸಿದ್ದಾರೆ.
11:19 AM, 31 May
ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಕ್ಷೇತ್ರದ ಮತಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗವಿತ್ ರಾಜೇಂದ್ರ ಧೇಡ್ಯಾ ಅವರು 17,417 ಮತಗಳಿಂದ ಮುಂದಿದ್ದಾರೆ.
11:27 AM, 31 May
ನಾಗಾಲ್ಯಾಂಡ್ ಲೋಕಸಭೆ ಕ್ಷೇತ್ರದಲ್ಲಿ ನಾಗಾ ಪೀಪಲ್ಸ್ ಫ್ರಂಟ್ ನ ಅಭ್ಯರ್ಥಿ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಅಭ್ಯರ್ಥಿಗಿಂತ 11 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
11:42 AM, 31 May
ರಾಜರಾಜೇಶ್ವರಿ ನಗರದಲ್ಲಿ 13ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 92,625, ಮುನಿರಾಜು ಗೌಡ 49,216, ಜಿಎಚ್ ರಾಮಚಂದ್ರ 40,469 ಮತ ಪಡೆದಿದ್ದಾರೆ. ಈಗಾಗಲೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸಾಹದಲ್ಲಿದ್ದಾರೆ.
11:46 AM, 31 May
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಮ್ಮಟೆಯ ಸದ್ದು, ಶಿಳ್ಳೆಗಳು, ಆಬುಲಿ ಮುಡಿದು ಬಂದಿರುವ ಕಾರ್ಯಕರ್ತೆಯರ ನರ್ತನ, ಗುಲಾಲ್ ಎರಚಾಟ, ಅಭಿಮಾನಿಗಳ ಕಿರುಚಾಟ ನಿಲ್ಲುತ್ತಲೇ ಇಲ್ಲ.