ಯೋಗ : ಹೋಮಿಯೋಪತಿಕ್ ವೈದ್ಯರ ಅಭಿಪ್ರಾಯ
ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಒಳ್ಳೆಯದೆಂದು ಪುರಾತನ ಕಾಲದಿಂದಲೂ ನಾವು ಭಾರತೀಯರು ಅರಿತಿದ್ದೇವೆ. ಆದರೆ ಅದಕ್ಕೆ ಜೂ.21ರ ವಿಶ್ವ ಯೋಗ ದಿನಾಚರಣೆಯಷ್ಟು ಚಾಲನೆ ಸಿಕ್ಕಿರಲಿಲ್ಲ.
ನಮ್ಮ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಭಾರತೀಯ ವೈದ್ಯ ಪದ್ಧತಿಗಳ ಜೊತೆಗೆ ಯೋಗವನ್ನೂ ಸೇರಿಸಿ ಆಯುಷ್ ಎಂದು ಯಾವಾಗ ಚಾಲನೆ ನೀಡಿದರೋ ಅಂದಿನಿಂದ ಇಂದಿನವರೆಗೆ ಅದಕ್ಕೆ ಹೆಚ್ಚಿನ ಮಹತ್ವ ಪಡೆಯುತ್ತಾ ಬಂದಿದೆ.
ಯೋಗ ಭಾರತೀಯ, ಸಾಂಸ್ಕೃತಿಕ ಹಾಗೂ ವೈದ್ಯಕೀಯದ ಪರಂಪರೆಯ ಭಾಗವಾಗಿದ್ದು, ಜನತೆಗೆ ತೃಪ್ತಿಯ ಭಾವವನ್ನು ಒದಗಿಸಿ ಕೊಡುತ್ತದೆಯೇ ಹೊರತು ಜನರಿಗೆ ಬೇರಾವ ದುಷ್ಪರಿಣಾಮಗಳನ್ನೂ ತೋರುವುದಿಲ್ಲ. [ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ]

ಇತ್ತೀಚಿನ ದಿನಗಳಲ್ಲಿ ಯೋಗ ಬಹಳ ವಿಶಿಷ್ಟ ಸದೃಢ ಹಾಗೂ ಸಮತೋಲನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮನುಕುಲದ ದೇಹ, ಮನಸ್ಸು ಮತ್ತು ಆತ್ಮದ ಸ್ವಾಸ್ಥ್ಯ ಕಾಪಾಡುವ ಈ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಇವೆಲ್ಲವೂ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆಯೇ ಹೊರತು ಬೇರೆ ದೇಶದಿಂದಲ್ಲ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಯೋಗದಿಂದ ದೀರ್ಘಕಾಲೀನ ರೋಗಗಳಿಗೆ ಉತ್ತಮ ಪರಿಣಾಮಗಳಲ್ಲದೇ ಯಾವುದೇ ತೊಂದರೆ ಇಲ್ಲದೇ ಮಕ್ಕಳು, ಅಬಾಲವೃದ್ಧರು ಹಾಗೂ ಗರ್ಭಿಣಿ ಸ್ತ್ರೀಯರೂ ಸಹ ಯೋಗ ಗುರುಗಳ ಮಾರ್ಗದರ್ಶನದಲ್ಲಿ ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ.
ಇದೊಂದು ಔಷಧಿರಹಿತ ಚಿಕಿತ್ಸೆಯಾಗಿದ್ದು ಇದರ ಸರ್ವತೋಮುಖ ಬೆಳವಣಿಗೆಗೆ ಸರಕಾರ ಹೆಚ್ಚಿನ ಅನುಕೂಲತೆ ಮಾಡಬೇಕು. ಶಾಲಾ, ಕಾಲೇಜುಗಳಲ್ಲಿ, ಪಠ್ಯಪುಸ್ತಕದ ರೂಪದಲ್ಲಿ ಕಲ್ಪಿಸಬೇಕು. ಅಲ್ಲದೇ ಹೆಚ್ಚಿನ ಮಹಾವಿದ್ಯಾಲಯಗಳನ್ನು ಅಧಿಕೃತವಾಗಿ ಸರಕಾರದಿಂದ ಮನ್ನಣೆ ನೀಡಿ ಜನರ ಆರೋಗ್ಯದ ಕಾಳಜಿ ವಹಿಸಬೇಕೆಂದು ನನ್ನ ವಿಜ್ಞಾಪನೆ.
ಲೇಖಕರು:
ಖ್ಯಾತ ಹಿರಿಯ ಹೋಮಿಯೋಪತಿಕ್ ವೈದ್ಯರು,
ಉಪಾಧ್ಯಕ್ಷರು, ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್, ಕರ್ನಾಟಕ.
ಕಾರ್ಯಕಾರಿ ಮಂಡಳಿ ಅಧ್ಯಕ್ಷರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಹುಬ್ಬಳ್ಳಿ.
ಸದಸ್ಯರು, ಕರ್ನಾಟಕ ರಾಜ್ಯ ಹೋಮಿಯೋಪತಿಕ್ ಮಂಡಳಿ, ಹುಬ್ಬಳ್ಳಿ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications