ಎಂಥ ರೋಗವನ್ನೂ ಗುಣಪಡಿಸುವ ಶಕ್ತಿ ಯೋಗದಲ್ಲಿದೆ
(ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಸಾಮಾನ್ಯ ತೊಂದರೆಗಳಾದ ಸೈನಸ್, ತಲೆನೋವುಗಳನ್ನು ಮತ್ತು ಹೃದ್ರೋಗ, ಕ್ಯಾನ್ಸರ್ ನಂಥ ಗಂಭೀರ ರೋಗಗಳನ್ನು ಯೋಗದಿಂದ ಗುಣಪಡಿಸಲು ಸಾಧ್ಯವೆ?
ಕಮಲೇಶ್ ಬರ್ವಾಲ್ : ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಹಾರ್ಮೋನು ಸ್ರವಿಸುವಿಕೆ, ಜೀರ್ಣಕ್ರಿಯೆ ಮತ್ತು ರಕ್ತ ಸಂಚಲ ಮುಂತಾದ ಆಂತರಿಕ ಕ್ರಿಯೆಗಳು ಸರಾಗವಾಗಿ ಸಾಗುತ್ತಿರುತ್ತವೆ. ದೇಹದಲ್ಲಿನ ವಿಷಕಾರಕ ಹೊರಹಾಕಿ ಸೈನಸ್ ಗಳಲ್ಲಿ ರಕ್ತ ಸಂಚಲನ ಹೆಚ್ಚಾಗುವಂತೆ ಮಾಡಲು ಮುಂಬದಿ ಮತ್ತು ಹಿಂಬದಿ ಬಾಗಿ ಮಾಡುವ ಯೋಗಾಸನಗಳು ತುಂಬಾ ಸಹಕಾರಿ. ಜಲನೇತಿಯಂಥ ಅಭ್ಯಾಸ ಸೈನಸ್ ಗಳನ್ನು ಶುದ್ಧವಾಗಿಸುತ್ತದೆ ಮತ್ತು ಸೋಂಕಿನಿಂದ ದೂರವಿರಿಸುತ್ತದೆ.
ಯೋಗ ದೈಹಿಕ ಕಾರ್ಯಕ್ಷಮತೆಯನ್ನು ಬಲಪಡಿಸುತ್ತದೆ ಮತ್ತು ಮನಸ್ಸನ್ನು ಉಲ್ಲಾಸದಾಯಕವಾಗಿಸುತ್ತದೆ. ಮಾನಸಿಕ ಸ್ಥಿತಿಗೂ ರೋಗ ನಿರೋಧಕ ಶಕ್ತಿಗೂ ನೇರ ಸಂಬಂಧವಿದೆ. ಯಕೃತ್ತು, ಜೀರ್ಣಾಂಗ ಸುಸ್ಥಿತಿಯಲ್ಲಿಲ್ಲದಿದ್ದರೆ ಮತ್ತು ಮಾನಸಿಕವಾಗಿ ಹಾಗು ದೈಹಿಕವಾಗಿ ತೀವ್ರ ಒತ್ತಡವಿರುತ್ತಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಜೀರ್ಣಶಕ್ತಿ ವೃದ್ಧಿಗಾಗಿ ಬದ್ಧಕೋನಾಸನ, ನಟರಾಜಾಸನ, ಶಿಶುವಾಸನ ಮತ್ತು ಪವನಮುಕ್ತಾಸನಗಳನ್ನು ನಾವು ಕಡ್ಡಾಯವಾಗಿ ಅಭ್ಯಾಸ ಮಾಡುತ್ತಿರಬೇಕು.

ಪ್ರತಿದಿನ ಕೇವಲ 20 ನಿಮಿಷಗಳ ಧ್ಯಾನ ಮಾಡುವುದರಿಂದ ಕೇಂದ್ರ ನರವ್ಯೂಹ ಮತ್ತು ಪಿಟ್ಯೂಟರಿ ಗ್ರಂಥ ಸ್ರವಿಸುವ ಎಂಡಾರ್ಫಿನ್ಸ್ ಉತ್ಪತ್ತಿ ಹೆಚ್ಚುತ್ತದೆ ಮತ್ತು ರಕ್ತದಲ್ಲಿನ ಕಾರ್ಟಿಸಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿಯಾಗುತ್ತದೆ. ಉತ್ತಮ ನಿದ್ರೆಯಿಂದ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ದೇಹದ ಮೇಲೆ ದಾಳಿ ಮಾಡುವ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು, ಉಸಿರಾಟದ ಪ್ರಕ್ರಿಯೆ ಹೆಚ್ಚಿಸುವ ಪ್ರಾಣಾಯಾಮ ಬಲು ಸಹಕಾರಿ. ಕಪಾಲಭಾತಿಯಿಂದ ಉಚ್ಛ್ವಾಸ ಮತ್ತು ನಿಶ್ವಾಸ ಸರಾಗವಾಗುತ್ತದೆ, ಭಸ್ತ್ರಿಕಾಸನ ಪುಪ್ಪುಸವನ್ನು ಶುದ್ಧವಾಗಿಸುತ್ತದೆ ಮತ್ತು ನಾಡಿಶೋಧನ ಪ್ರಾಣಾಯಾಮದಿಂದ ಸೈನಸ್ ಗಳಲ್ಲಿನ ನಿರೋಧಕ ಶಕ್ತಿ ಹೆಚ್ಚುತ್ತದೆ.
ಸುದರ್ಶನ ಕ್ರಿಯಾ ಯೋಗ ಅಭ್ಯಾಸ ಮಾಡುತ್ತಿರುವವರು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಥೈರಾಯಿಡ್ ನಂಥ ಮಾರಕ ರೋಗಗಳಿಂದ ಗುಣಮುಖರಾಗಿರುವುದಾಗಿ ಹೇಳಿದ್ದಾರೆ. ಉಸಿರಾಟದ ಯೋಗ ಮತ್ತು ಆರೋಗ್ಯದ ಮೇಲಾಗುವ ಲಾಭವನ್ನು ತಿಳಿಯಲು ಈ ಕೊಂಡಿ ನೋಡಿರಿ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications