ಯೋಗವೆಂದರೆ ಉಲ್ಲಾಸ, ಸಂತೋಷ, ವಿನೋದ
(ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಯೋಗದಿಂದ ಮಾನವನ ಜೀವನಶೈಲಿಯನ್ನೇ ಬದಲಾಯಿಸಲು ಸಾಧ್ಯವೆ?
ಕಮಲೇಶ್ ಬರ್ವಾಲ್ : ಖಂಡಿತ. ಯೋಗವೇ ಜೀವನಶೈಲಿ. ಯೋಗದಿಂದ ನೈಸರ್ಗಿಕವಾಗಿ ಜೀವನವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯ.
ಪ್ರಶ್ನೆ : ಭಾರತದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ನೀವು ಪ್ರಚಾರ ಮಾಡುತ್ತಿದ್ದೀರಿ. ಇದನ್ನು ಕೈಗೆತ್ತಿಕೊಳ್ಳಲು ಯಾರಿಂದಲಾದರೂ ಪ್ರೇರೇಪಣೆ ಸಿಕ್ಕಿತೆ?
ಕಮಲೇಶ್ ಬರ್ವಾಲ್ : ಹೌದು. ಭಾರತದಲ್ಲಿ ಮನೆಯ ಎಲ್ಲ ಚಟುವಟಿಕೆಗಳು ಮಹಿಳೆಯ ಸುತ್ತ ಸುತ್ತುತ್ತಿರುತ್ತವೆ. ನಮ್ಮ ದೇಶದಲ್ಲಿ ಮಹಿಳೆ ಕುಟುಂಬ, ಸಮಾಜವನ್ನು ಸಂಭಾಳಿಸುವುದರ ಜೊತೆಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾಳೆ. ಒಬ್ಬ ವಿದ್ಯಾವಂತ ಸಶಕ್ತ ಮಹಿಳೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಲ್ಲಳು. ಹೆಣ್ಣುಮಗಳು ಶಾಲೆಗೆ ಹೋಗದೆ ಭಾರತ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿಲ್ಲ.
ನಾನು ಬೆಂಗಳೂರಿನಲ್ಲಿ ಭಾನುಮತಿ ನರಸಿಂಹನ್ ಅವರನ್ನು ಭೇಟಿ ಮಾಡಿದಾಗ ನನ್ನ ಯೋಚನಾ ಲಹರಿಯೇ ಬದಲಾಯಿತು. ಇಡೀ ಭಾರತದಾದ್ಯಂತ ಅವರು ಮುನ್ನಡೆಸುತ್ತಿರುವ 400 ಶಾಲೆಗಳಲ್ಲಿ ಉಚಿತ ಪಾಠ ಪಡೆಯುತ್ತಿರುವ 40 ಸಾವಿರ ವಿದ್ಯಾರ್ಥಿಗಳಲ್ಲಿ ಶೇ.50ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈ ಉದಾತ್ತ ಕೆಲಸದಿಂದ ಪ್ರೇರೇಪಣೆ ಪಡೆದು ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಅಭಿಯಾನ ಆರಂಭಿಸಿದೆ. [ಯೋಗ ಕುರಿತು ಸರಣಿ ಲೇಖನ ಆರಂಭ]

ಪ್ರಶ್ನೆ : ಜನರಿಗೆ ಸಂತೋಷ ನೀಡುವಂತೆ ವಿಭಿನ್ನ ರೀತಿಯಲ್ಲಿ ನೀವು ಯೋಗ ಕಲಿಸುತ್ತೀರಿ. ಆದರೆ, ನಿಮ್ಮ ಜೀವನದಲ್ಲಿ ಯೋಗ ಕಲಿಸುವಾಗ ತಮಾಷೆಯ ಸಂಗತಿಗಳು ಜರುಗಿವೆಯಾ?
ಕಮಲೇಶ್ ಬರ್ವಾಲ್ : ತಮಾಷೆ ಅಲ್ಲದಿದ್ದರೂ ಎಲ್ಲೆಲ್ಲೂ ಸಂತೋಷದ ಮತ್ತು ವಿನೋದಮಯ ವಾತಾವರಣವಿರುತ್ತದೆ. ಹಲವು ಬಾರಿ ಯೋಗಾಸವನ್ನು ನಾವು ಗಂಭೀರವಾಗಿಸಿ ಅನಾಕರ್ಷಣೀಯವಾಗಿಸುತ್ತೇವೆ. ಈಗಾಗಲೆ ವಿಶ್ವದಲ್ಲಿ ಚಿಂತೆಗೀಡು ಮಾಡುವಂಥ ಹಲವು ಸಂಗತಿಗಳಿವೆ. ಆದರೆ ಅವರು ನನ್ನ ತರಗತಿಗೆ ಬಂದಾಗ ಅವರು ಉಲ್ಲಸಿತರಾಗಿರಬೇಕು, ಮನಸ್ಸಿನ ಸಂತೋಷದ ಲಾಭ ಪಡೆಯಬೇಕು, ಪ್ರತಿಕ್ಷಣವನ್ನೂ ಆನಂದಿಸಬೇಕು. ಅವರು ತಿರುಗಿ ಹೋಗುವಾಗ ಹೊಸ ಹುರುಪಿನಿಂದ, ಚಿಂತೆಯ ಭಾರ ಹೊತ್ತುಕೊಳ್ಳದೆ ಹೋಗುತ್ತಾರೆ. ಗಂಬೀರ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಸಿಗುತ್ತಾರೆಯೋ ಹೊರತು ಯೋಗ ತರಗತಿಗಳಲ್ಲಲ್ಲ.
ನಾನು ಜಗತ್ತಿನಾದ್ಯಂತ ಸಂಚರಿಸುತ್ತೇನೆ, ಅಲ್ಲೆಲ್ಲ ಕೆಲ ಭಾಷೆ ತರ್ಜುಮೆ ಮಾಡುವಾಗ ತಮಾಷೆಯ ಸಂಗತಿಗಳು ಕೂಡ ಜರುಗುತ್ತವೆ. ಕೈಗಳಿಂದ ನೆಲವನ್ನು ಮುಟ್ಟಿ ಎಂದು ನಾನು ಹೇಳಿದಾಗ ಭಾಷಾಂತರಕಾರ ತುಟಿಯನ್ನು ಮುಟ್ಟು ಎಂದು ಹೇಳಿದರೆ ಹೇಗಾಗಿರಬೇಡ? ಜರ್ಮನಿಯ ಟಿವಿ ಸಂದರ್ಶನವೊಂದರಲ್ಲಿ, ಭಾರತದಲ್ಲಿ ತಾಯಿಯ ಗರ್ಭದಿಂದ ಬರುವ ಪ್ರತಿಯೊಂದು ಮಗುವೂ ಯೋಗಾಸನ ಭಂಗಿಯಲ್ಲಿಯೇ ಜನಿಸುತ್ತದೆ ಎಂದು ನಂಬಿದ್ದ. ಅದು ಸರಿಯಲ್ಲ ಎಂದು ಆತನಿಗೆ ಮನವರಿಕೆ ಮಾಡಲು ನನಗೆ ತುಸು ಸಮಯವೇ ಬೇಕಾಯಿತು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications