ಶ್ವೇತಭವನದಲ್ಲಿ ಆ male ಏನಾಯ್ತೆಂದರೆ...
ಮೊನ್ನೆ ಮುಂಗಾರುಮಳೆ ಚಿತ್ರವನ್ನು ನೋಡುವ ವಿಷಯದಲ್ಲಿ ನಡೆದ ಬುಷ್-ಬುಷಿಣಿಯರ 'ಸರಸ ಸಲ್ಲಾಪ’ವನ್ನು ವಿಚಿತ್ರಾನ್ನದಲ್ಲಿ ನೀವೆಲ್ಲ ಓದಿರಬೇಕು. ಅದರ ನಂತರ, ಅದಕ್ಕೆ ಸಂಬಂಧಿಸಿದಂತೆ ನಡೆದ 2 ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ.
ಬುಷ್ ನೋಡಿದ ಇನ್ನೊಂದು ಸಿನಿಮಾ!
- ವಿಕ್ರಮ ಕವಲಿ, ಮೈಸೂರು
ತನ್ನ ಬಗ್ಗೆ ಬರೆದ ಈ ವಿಚಿತ್ರಾನ್ನಭಟ್ಟನನ್ನು ವ್ಹೈಟ್ಹೌಸ್ಗೆ summonಸಿದರು ಬುಷ್! ಬಯ್ಯಲಿಕ್ಕಲ್ಲ, ಸಮ್ಮನಿಸಿದ್ದು ಹೀಗೇ ಸುಮ್ಮನೆ... ಭೇಷ್ ಹೇಳಲಿಕ್ಕೆ!
ಈ ವಿಚಿಭಟ್ಟನಾದರೋ, ಅಲ್ಲಿಗೆ ಹೋಗುವಾಗ ಇನ್ನೊಂದು ಹಳೆಯ ಕನ್ನಡ ಚಲನಚಿತ್ರದ (ಸಾಕಷ್ಟು ಹೆಸರು ಮಾಡಿರುವ) ಸಿ.ಡಿ ಯನ್ನು ಹಿಡಿದುಕೊಂಡು ಹೋಗಿದ್ದರು. ಬುಷ್ ದಂಪತಿಗಳು ಆರಾಮವಾಗಿ ಕುಳಿತಿದ್ದರು. ಸಿಡಿ ಯನ್ನು ಕಂಡ ಕೂಡಲೆ ಎಂದಿನಂತೆ ಬುಷ್ ಮಹಾಶಯರು ಕನ್ನಡಚಿತ್ರದ ಇಂಗ್ಲಿಷ್ ಶೀರ್ಷಿಕೆಯನ್ನು ಓದುವ ಪ್ರಯತ್ನ ಮಾಡಿದರು. ಅಲ್ಲಿದ್ದ ಎಲ್ಲರ ಕೆಂಪು ಮುಖಗಳು ನಾಚಿ, ಇನ್ನಷ್ಟು ಕೆಂಪಾದುವು!
ಬುಷ್ ಮಹಾಶಯರು “ಅವೇಲ್ ನನ್ನ ಹೆಂಡತಿ” ಎಂದು ಉದ್ಗರಿಸಿದ್ದರು! (ಆ ಚಿತ್ರದ ಹೆಸರು “ಅವಳೇ ನನ್ನ ಹೆಂಡತಿ”)
ಅಷ್ಟಕ್ಕೆ ಮುಗಿಯಲಿಲ್ಲ. ಕನ್ನಡದಲ್ಲಿ ಇಷ್ಟು ಒಳ್ಳೊಳ್ಳೆ ಚಿತ್ರಗಳು ಬರುತ್ತಿರುವುದನ್ನು ನೋಡಿ, ಹೊಸತಾಗಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರಂತೆ ಬುಷ್ ಅವರು. ಒತ್ತಕ್ಷರ ಇನ್ನೂ ಸರಿಯಾಗಿ ಬರುತ್ತಿಲ್ಲ. ಹೊರಡುವ ಮುನ್ನ ವಿಚಿಭಟ್ಟರು ಆಟೋಗ್ರಾಫ್ ಪುಸ್ತಕದಲ್ಲಿ ಸಹಿ ಮಾಡುವಂತೆ ಕೇಳಿದಾಗ ಬುಷ್ ಮಹೋದಯ ತನ್ನ ಹೆಸರನ್ನು ಕನ್ನಡ ಅಕ್ಷರಗಳಲ್ಲಿ ಬರೆದುಬಿಟ್ಟರಂತೆ, "ಜಾರಜ ಬುಷ್" ಎಂದು.
“ಇರಾಕ್ನ ಜನ ಬರೀ ಬಾಯಿಂದ ಹೇಳುತ್ತಿರುವದನ್ನು ಇವರು ಲಿಖಿತದಲ್ಲಿ ಕೊಟ್ಟರೇ!” ಎಂದುಕೊಳ್ಳುತ್ತ ಅಲ್ಲಿಂದ ಹೊರಬಿದ್ದರು ವಿಚಿಭಟ್ಟರು.
* * *
ಬುಷ್ಷನ ಖುಷಿಗೆ ಮಿತಿಯೇ ಇಲ್ಲ
"ಬಾರೋ ಬಾರೋ ಕನ್ನಡ ಚಿತ್ರಕೆ"
ಎನ್ನುತ ಕರೆದಳು ಲಾರೆ.
"ಸಿನಿಮಾ ನೋಡಲು ಎಲ್ಲಿದೆ ಹೊತ್ತು?"
ಎಲ್ಲಿಗು ನಾ ಬರಲಾರೆ
ಕಾಂಡಿಯು ಕರೆವಳು
ನಿದ್ರೆಯ ಕೆಡಿಪಳು
ಸುಮ್ಮನೆ ಮಲಗಲು ಬಾರೆ
ಎನ್ನುತ ಎದ್ದನು
ಮಂಚಕೆ ಬಿದ್ದನು
ರಿಮೋಟನು ಒತ್ತುತ ಉರುಳಿದನು
ಬುಷ್ಷನ ಖುಷಿಗೆ ಮಿತಿಯೇ ಇಲ್ಲ
ಉದಯ ಠೀವಿಯೆ ಕಾಣಿಸಿತಲ್ಲ
ಬುಷ್ಷನು ಲಾರೆಯ ತಬ್ಬಿದನು
ಮುಂಗಾರುಮಳೆಯಲಿ ನೆನೆಸಿದನು!
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications