ಇವತ್ತು ವೈದ್ಯ ನಾರಾಯಣ ಧನ್ವಂತರಿ ಜಯಂತಿ
ವಿಷ್ಣು ಧನ್ವಂತರಿ ಅವತಾರ ತಾಳಿ ಎಷ್ಟು ಯುಗಗಳು ಉರುಳಿದವೋ ನನಗೆ ಗೊತ್ತಿಲ್ಲ. ಆದರೆ, ಪುರಾಣ ಮತ್ತು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ತಿಳಿಸುವ ಪ್ರಕಾರ ಇಂದು ಮಂಗಳವಾರ ಧನ್ವಂತರಿ ಜಯಂತಿ. ಧನ್ವಂತರಿಯು ದೇವಾನುದೇವತೆಗಳಿಗೆ ಡಾಕ್ಟರ್ ಆಗಿದ್ದನು ಎಂದು ವಿಕಿಪೀಡಿಯದಲ್ಲಿ ಬಣ್ಣಿಸಲಾಗಿದೆ.
ಇಡೀ ವಿಶ್ವಕ್ಕೇ ವೈದ್ಯಕೀಯ ವಿದ್ಯೆಯನ್ನು ಮೊದಲು ತಿಳಿಸಿದ್ದು ಧನ್ವಂತರಿ. ಅಷ್ಟೇ ಅಲ್ಲ, ಇಂದಿನ ಪ್ಲಾಸ್ಟಿಕ್ ಸರ್ಜರಿಯನ್ನು ಆ ಕಾಲದಲ್ಲಿಯೇ ಪರಿಚಯಿಸಿದ್ದ ವಿಶ್ವದ ಮೊದಲ ವೈದ್ಯ ಎಂದೇ ಪ್ರಸಿದ್ಧನಾದ ಆತ ಆಯುರ್ವೇದದ ಪಿತಾಮಹ ಕೂಡ ಹೌದು.
ಅನೇಕ ಗಿಡ ಮೂಲಿಕೆಗಳನ್ನು ಪತ್ತೆ ಹಚ್ಚಿ, ಹಲವು ಕಾಯಿಲೆಗಳಿಗೆ ನೈಸರ್ಗಿಕ ಕಷಾಯ, ಗುಳಿಗೆ, ಲೇಹ, ಮುಲಾಮುಗಳನ್ನು ಕೊಟ್ಟ ಖ್ಯಾತಿ ಧನ್ವಂತರಿಗೆ ಅರ್ಪಣೆಯಾಗುತ್ತದೆ. ಅರಿಶಿಣ ಮತ್ತು ಉಪ್ಪಿನಲ್ಲಿರುವ ಗುಣಾತ್ಮಕ ಆಯುರ್ವೇದದ ಅಂಶಗಳನ್ನು ಮೊದಲು ಕಂಡುಹಿಡಿದದ್ದೂ ಧನ್ವಂತರಿಯೇ.
ಅಂದಿನ ಕಾಲಕ್ಕೆ ಅತಿ ನುರಿತ ವೈದ್ಯನಾಗಿದ್ದ ಧನ್ವಂತರಿ, ತುರ್ತು ಸಂದರ್ಭಗಳಲ್ಲಿ, ಯುದ್ಧದ ಸಮಯದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡುತ್ತಿದ್ದ ಎಂದು ಹೇಳಲಾಗುತ್ತದೆ. ಈತ ಅನುಸರಿಸುತ್ತಿದ್ದ ಮಾರ್ಗಗಳು ಅತಿ ಕಠಿಣ ಮತ್ತು ಕಷ್ಟಕರವಾಗಿದ್ದರೂ ರಿಸಲ್ಟ್ ಫಸ್ಟ್ ಕ್ಲಾಸ್.
ವೈದ್ಯಕೀಯ ಕ್ಷೇತ್ರದಲ್ಲಿನ ಈತನ ಬುದ್ಧಿವಂತಿಕೆ ಮತ್ತು ಸಾಧನೆಗಳ ಮೆಚ್ಚುಗೆಯ ಫಲವಾಗಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಈತನನ್ನು ನವರತ್ನಗಳಲ್ಲಿ ಒಬ್ಬ ಎಂದು ಬಣ್ಣಿಸಲಾಗಿತ್ತು.
ಆಯುರ್ವೇದ ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತನಿಗೆ ಧನ್ವಂತರಿ ಹಲವು ವೈದ್ಯಕೀಯ ವಿಚಾರಧಾರೆಗಳನ್ನು, ವಿಧಿವಿಧಾನಗಳನ್ನು ಮತ್ತು ಗುಟ್ಟುಗಳನ್ನು ತಿಳಿಸಿದ್ದ ಎಂದೂ ಗ್ರಂಥಗಳು ನಮಗೆ ತಿಳಿಸುತ್ತವೆ. ವೈದ್ಯೋ ನಾರಾಯಣೋ ಹರಿಃ (ಆಧಾರ : ವಿಕಿಪೀಡಿಯ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್













Click it and Unblock the Notifications