ಇವತ್ತು ವೈದ್ಯ ನಾರಾಯಣ ಧನ್ವಂತರಿ ಜಯಂತಿ
ವಿಷ್ಣು ಧನ್ವಂತರಿ ಅವತಾರ ತಾಳಿ ಎಷ್ಟು ಯುಗಗಳು ಉರುಳಿದವೋ ನನಗೆ ಗೊತ್ತಿಲ್ಲ. ಆದರೆ, ಪುರಾಣ ಮತ್ತು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ತಿಳಿಸುವ ಪ್ರಕಾರ ಇಂದು ಮಂಗಳವಾರ ಧನ್ವಂತರಿ ಜಯಂತಿ. ಧನ್ವಂತರಿಯು ದೇವಾನುದೇವತೆಗಳಿಗೆ ಡಾಕ್ಟರ್ ಆಗಿದ್ದನು ಎಂದು ವಿಕಿಪೀಡಿಯದಲ್ಲಿ ಬಣ್ಣಿಸಲಾಗಿದೆ.
ಇಡೀ ವಿಶ್ವಕ್ಕೇ ವೈದ್ಯಕೀಯ ವಿದ್ಯೆಯನ್ನು ಮೊದಲು ತಿಳಿಸಿದ್ದು ಧನ್ವಂತರಿ. ಅಷ್ಟೇ ಅಲ್ಲ, ಇಂದಿನ ಪ್ಲಾಸ್ಟಿಕ್ ಸರ್ಜರಿಯನ್ನು ಆ ಕಾಲದಲ್ಲಿಯೇ ಪರಿಚಯಿಸಿದ್ದ ವಿಶ್ವದ ಮೊದಲ ವೈದ್ಯ ಎಂದೇ ಪ್ರಸಿದ್ಧನಾದ ಆತ ಆಯುರ್ವೇದದ ಪಿತಾಮಹ ಕೂಡ ಹೌದು.
ಅನೇಕ ಗಿಡ ಮೂಲಿಕೆಗಳನ್ನು ಪತ್ತೆ ಹಚ್ಚಿ, ಹಲವು ಕಾಯಿಲೆಗಳಿಗೆ ನೈಸರ್ಗಿಕ ಕಷಾಯ, ಗುಳಿಗೆ, ಲೇಹ, ಮುಲಾಮುಗಳನ್ನು ಕೊಟ್ಟ ಖ್ಯಾತಿ ಧನ್ವಂತರಿಗೆ ಅರ್ಪಣೆಯಾಗುತ್ತದೆ. ಅರಿಶಿಣ ಮತ್ತು ಉಪ್ಪಿನಲ್ಲಿರುವ ಗುಣಾತ್ಮಕ ಆಯುರ್ವೇದದ ಅಂಶಗಳನ್ನು ಮೊದಲು ಕಂಡುಹಿಡಿದದ್ದೂ ಧನ್ವಂತರಿಯೇ.
ಅಂದಿನ ಕಾಲಕ್ಕೆ ಅತಿ ನುರಿತ ವೈದ್ಯನಾಗಿದ್ದ ಧನ್ವಂತರಿ, ತುರ್ತು ಸಂದರ್ಭಗಳಲ್ಲಿ, ಯುದ್ಧದ ಸಮಯದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡುತ್ತಿದ್ದ ಎಂದು ಹೇಳಲಾಗುತ್ತದೆ. ಈತ ಅನುಸರಿಸುತ್ತಿದ್ದ ಮಾರ್ಗಗಳು ಅತಿ ಕಠಿಣ ಮತ್ತು ಕಷ್ಟಕರವಾಗಿದ್ದರೂ ರಿಸಲ್ಟ್ ಫಸ್ಟ್ ಕ್ಲಾಸ್.
ವೈದ್ಯಕೀಯ ಕ್ಷೇತ್ರದಲ್ಲಿನ ಈತನ ಬುದ್ಧಿವಂತಿಕೆ ಮತ್ತು ಸಾಧನೆಗಳ ಮೆಚ್ಚುಗೆಯ ಫಲವಾಗಿ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಈತನನ್ನು ನವರತ್ನಗಳಲ್ಲಿ ಒಬ್ಬ ಎಂದು ಬಣ್ಣಿಸಲಾಗಿತ್ತು.
ಆಯುರ್ವೇದ ಶಸ್ತ್ರಚಿಕಿತ್ಸೆಯ ಪಿತಾಮಹ ಸುಶ್ರುತನಿಗೆ ಧನ್ವಂತರಿ ಹಲವು ವೈದ್ಯಕೀಯ ವಿಚಾರಧಾರೆಗಳನ್ನು, ವಿಧಿವಿಧಾನಗಳನ್ನು ಮತ್ತು ಗುಟ್ಟುಗಳನ್ನು ತಿಳಿಸಿದ್ದ ಎಂದೂ ಗ್ರಂಥಗಳು ನಮಗೆ ತಿಳಿಸುತ್ತವೆ. ವೈದ್ಯೋ ನಾರಾಯಣೋ ಹರಿಃ (ಆಧಾರ : ವಿಕಿಪೀಡಿಯ)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ













Click it and Unblock the Notifications