ರಾಜ್ಯೋತ್ಸವ ಪ್ರಶಸ್ತಿ ಎರಡನೇ ಪಟ್ಟಿ ಬಿಡುಗಡೆ

ಇದ್ದಿದ್ದರಲ್ಲಿ ತೃಪ್ತಿಪಡುತ್ತಲೇ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಆಸೆ, ಶ್ರಮ, ಪ್ರೀತಿ ಇಟ್ಟುಕೊಂಡಿರುವ ಲಕ್ಷಲಕ್ಷ ಕನ್ನಡಿಗರಲ್ಲಿ ನೀವೂ ಒಬ್ಬರೆಂಬುದು ನಮಗೆ ಗೊತ್ತು. ಹಾಗಾಗಿ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ 56ನೇ ಕನ್ನಡ ರಾಜ್ಯೋತ್ಸವ ಶುಭಾಶಯಗಳನ್ನು ಹೇಳುವ ಧೈರ್ಯ ನಮಗೆ ಬಂದಿದೆ.
ವಿಶೇಷವಾಗಿ, ನಿತ್ಯ ಬದುಕಿಗೆ ಅಂತರ್ಜಾಲವನ್ನೇ ಆತುಕೊಂಡ ಪಡುವಲ ಸೀಮೆಯ ಕನ್ನಡಿಗರನ್ನೇ ನಂಬಿಕೊಂಡಿದ್ದ ಕನ್ನಡ ಅಂತರ್ಜಾಲವನ್ನು ಕರ್ನಾಟಕದ ಗಲ್ಲಿಗಲ್ಲಿಗೆ, ಭಾರತದ ಹಾದಿಬೀದಿಗೆ, ಕಚೇರಿ, ಅಂಗಡಿ ಮುಂಗಟ್ಟುಗಳಿಗೆ, ಉದ್ಯಾನವನಕ್ಕೆ, ಅಡುಗೆ ಮನೆಗೆ ಆಹ್ವಾನಿಸಿ ನಮ್ಮನ್ನು ಹುರಿದುಂಬಿಸಿದ ಒನ್ ಇಂಡಿಯ ಕನ್ನಡ ಓದುಗ ನೆಂಟರಿಷ್ಟರಿಗೆ ಕೃತಜ್ಞತೆಗಳು.
ಕನ್ನಡವನ್ನು ದಿನಕ್ಕೆ 8640 ಕ್ಷಣ ಹೊಟ್ಟೆಯಲ್ಲಿಟ್ಟುಕೊಂಡು ಸಲಹುವ ಸರ್ವರ್ ಗಳಿಗೆ, ಕನ್ನಡದ ಸುದ್ದಿ ಸರಕುಗಳನ್ನು ಬಿಂಬಿಸುವ ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಪಾಮ್ ಟಾಪ್, ಐಫೋನ್, ಐಪ್ಯಾಡ್ ಮತ್ತಿತರ ಗ್ಯಾಡ್ಜೆಟ್ಟುಗಳನ್ನು ರೂಪಿಸಲು ಪ್ರೊಗ್ರಾಂ ಬರೆದವರಿಗೆ ಸಹಸ್ರ ಸಹಸ್ರ ಧನ್ಯವಾದಗಳು.
ಕನ್ನಡ ತಂತ್ರಾಂಶಗಳನ್ನು ಕಂಡುಹಿಡಿದು ಉಚಿತವಾಗಿ ಹಂಚಿದವರಿಗೆ, ಯುನಿಕೋಡ್ ಅನ್ನು ರೂಪಿಸಲು ದುಡಿದ ಕಾಣದ ಕೈಗಳಿಗೆ, ಅದನ್ನು ಡೌನ್ ಲೋಡ್ ಮಾಡಿಕೊಂಡು ಕನ್ನಡ ಓದು ಬರವಣಿಗೆಯನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿರುವ ನಿಮ್ಮ ಹೆಸರು ಸೋಮವಾರ ಸಂಜೆ ಬಿಡುಗಡೆಯಾದ ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಪಟ್ಟಿಯಲ್ಲಿದೆ. ಖುಷಿಪಡಿ. ಅಭಿನಂದನೆಗಳು.
ನಿಮ್ಮ ಮಕ್ಕಳು ಮರಿಗಳಿಗೆ ನಿಮ್ಮ ಮನೆಯಲ್ಲಿ ನೀವೇ ಕನ್ನಡ ಪಾಠ ಹೇಳಿಕೊಡಲು ಇವತ್ತಿನಿಂದಲೇ ಆರಂಭಿಸಿದರೆ ಮುಂದಿನ ವರ್ಷದ ಪ್ರಶಸ್ತಿ ನಿಮಗೇ ಮುಡಿಪಾಗಿಡಲಾಗುತ್ತದೆ. ನಮಸ್ಕಾರ. ಹಾಗೆಯೆ, ನೀವು ಕನ್ನಡ ಪ್ರೀತಿಸುವಿರಾದರೆ ಈ ಕೊಂಡಿ ಕ್ಲಿಕ್ಕಿಸಿ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications