ದಟ್ಸ್ ಕನ್ನಡಕ್ಕೆ ಪತ್ರಕರ್ತರು ಬೇಕಾಗಿದ್ದಾರೆ

ಅತಿವೇಗದಲ್ಲಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯ ಮೇಲೆ ಅವ್ಯಾಹತ ನಿಗಾ ಇಡಬಲ್ಲ ಆಸಕ್ತಿ ಇರತಕ್ಕದ್ದು. ಮನೆಮಂದಿಯ ಉಪಯೋಗಕ್ಕಾಗಿ ಒಂದು ಕಾರು ಕೊಳ್ಳಬೇಕು ಎಂದು ಯೋಚಿಸುತ್ತಿರುವವರಿಗೆ, ಕಾಲೇಜಿಗೆ ಬೈಕಿನಲ್ಲೇ ಹೋಗಲು ಆಸೆಪಡುವ ಹುಡುಗ ಹುಡುಗಿಯರಿಗೆ ನಿಮ್ಮ ಕರಾರುವಾಕ್ಕು ಮಾಹಿತಿ ಭರಿತ ಬರವಣಿಗೆ ಮಾರ್ಗದರ್ಶಿಯಾಗಬೇಕು. ಸಾಲು ಸಾಲಾಗಿ ಮಾರುಕಟ್ಟೆಗೆ ಬರಲಿರುವ ಹೊಸ ವಾಹನಗಳ ವೈಶಿಷ್ಟ್ಯಗಳೇನು? ಶೋ ರೂಂಗಳ ವಿಳಾಸ, ಒಟ್ಟಾರೆ ವಾಹನ ಪ್ರಪಂಚದ ಆಗುಹೋಗುಗಳಿಗೆ ನಿಮ್ಮ ಬರವಣಿಗೆ ಕನ್ನಡ ಕನ್ನಡಿಯಾಗಬೇಕು. ಮುಖ್ಯವಾಗಿ : ನೇರವಾಗಿ, ಸ್ಫುಟವಾಗಿ, ಸರಳ ಕನ್ನಡದಲ್ಲಿ ಬರೆಯುವ ಕೌಶಲ್ಯ ಅತ್ಯಗತ್ಯ.
ಅರ್ಹತೆ : ಸುಮಾರು 22ರಿಂದ 27 ವಯೋಮಾನದ ಆಕಾಂಕ್ಷಿ ಪತ್ರಕರ್ತರಿಗೆ ಅರ್ಜಿಹಾಕಿಕೊಳ್ಳಲು ಸ್ವಾಗತ. ದಿನಕ್ಕೆ 8 ಗಂಟೆ ಕಾಲ ಕಂಪ್ಯೂಟರ್ ಮುಂದೆ ಕುಳಿತು ವಾಹನ ಮಾರುಕಟ್ಟೆಯ ಧ್ಯಾನ ಮತ್ತು ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಿ, ಲಗುಬಗೆಯಿಂದ ಸುದ್ದಿ ತಯಾರಿಸುವ ವೇಗಿಗಳಿಗೆ ಆದ್ಯತೆ ಕೊಡಲಾಗುವುದು. ಅಂತರ್ಜಾಲದ ಪರಿಚಯ ಸಾಕಷ್ಟು ಚೆನ್ನಾಗಿಯೇ ಇರಬೇಕು. ಯೂನಿಕೋಡ್ ಬಳಸಿಕೊಂಡು ನೋಟ್ ಪ್ಯಾಡಿನಲ್ಲಿ ಸರಸರ ಸುದ್ದಿ ಬರೆಯುವುದಕ್ಕೆ ಕೀಲಿ ಮಣೆ ಬಳಸುವ ಜ್ಞಾನ ಗೊತ್ತಿರಬೇಕು. ಅಭ್ಯರ್ಥಿಗಳು ಈಗಾಗಲೇ ಕಂಪ್ಯೂಟರ್ ಬಳಸಿಕೊಂಡೇ ಕನ್ನಡದಲ್ಲಿ ಬರೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರೆ ಅವರು ನಮಗೆ ಬೇಕು. ನಾವು ನಡೆಸುವ ಲಿಖಿತ ಮತ್ತು ಮೌಖಿಕ ಪರೀಕ್ಷೆಗೆ ಒಟ್ಟು ಹತ್ತು ಅಂಕಗಳಿರುತ್ತವೆ. ಅಂಕಗಳ ವಿಭಜನೆ ಇಂತಿದೆ :
ಕನ್ನಡ ಅಂತರ್ಜಾಲ ತಾಣದಲ್ಲಿ ವೆಬ್ ರೈಟರ್ ಆಗಬೇಕೆಂಬ ಆಸಕ್ತಿಗೆ 4. ಆಟೋ ಸುದ್ದಿ ಸಂಗ್ರಹಣೆ, ಸುದ್ದಿ ಸಂಸ್ಕಾರ ಮಾಡುವ ಕಲೆಗೆ 3. ಅಂತರ್ಜಾಲದ ಪರಿಚಯ, ಇಂಗ್ಲಿಷ್ ಭಾಷಾ ಜ್ಞಾನದ ಜತೆಗೆ ಕಂಪ್ಯೂಟರ್ ನಲ್ಲಿ ಕನ್ನಡ ಬರೆಯುವ ಅನುಭವಕ್ಕೆ 2. ನಿತ್ಯ ಕಲಿಯುವ ಆಸಕ್ತಿ ಇದ್ದರೆ ಅದಕ್ಕೆ 1 ಅಂಕ. ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣ, ಪದವಿ ಪಡೆದಿದ್ದರೆ ಸ್ವಾಗತವೇ. ಇಂಟರ್ನೆಟ್ ಪತ್ರಿಕೋದ್ಯಮದಲ್ಲಿ ಆಸಕ್ತಿ ಹಾಗೂ ಸುಲಲಿತ ಓದಿಗಾಗಿ ಸುದ್ದಿಗಳನ್ನು ಸಿದ್ಧಪಡಿಸುವ ಕಲೆ ಮತ್ತು ಶ್ರದ್ಧೆಯೇ ನಿರ್ಣಾಯಕ. ಕೆಲಸ ಮಾಡುವ ಸ್ಥಳ, ಜಯನಗರ, ಬೆಂಗಳೂರು.
ಸಂಬಳ ಮತ್ತು ನೇಮಕಾತಿ ನಿಯಮಗಳು ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಮತ್ತು ಆಸಕ್ತಿಯ ತೀರ್ವತೆಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಅರ್ಜಿಗಳನ್ನು ರವಾನಿಸುವ ವಿಳಾಸ [email protected]. ಈ ಸಂಬಂಧ ದೂರವಾಣಿ, ಎಸ್ ಎಂಎಸ್ ಮೂಲಕ ವಿವರಗಳನ್ನು ನಾವು ನೀಡಲಾರೆವು. ಅರ್ಜಿ ಹಾಕಲು ಕಡೆ ದಿನಾಂಕ 1 ಡಿಸೆಂಬರ್ 2010. ನಿಮ್ಮ ಅರ್ಜಿಗಳನ್ನು ಈ ಮೇಲ್ ಮುಖಾಂತರವೇ ಕಳಿಸಬೇಕು. ಸಬ್ಜೆಕ್ಟ್ ಲೈನಿನಲ್ಲಿ Auto News/Copy Writer ಎಂದು ನಮೂದಿಸಬೇಕು.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications