ಕಾಮಸೂತ್ರ ಆಡಿಯೋದಲ್ಲಿ ತಲ್ಲೀನತೆ
ಶಾಲಾ ಮಕ್ಕಳಿಗೆ ಲೈಂಗಿಕ ತಿಳಿವಳಿಕೆಗಳನ್ನು ಪಠ್ಯ ಮತ್ತು ಪಾಠಗಳ ಮೂಲಕ ನೀಡಬೇಕೇ ಅಥವಾ ಬಿಟ್ಹಾಕಬೇಕೆ ಎಂಬುದು ಭಾರತೀಯ ಸಮಾಜದಲ್ಲಿ ಒಂದು ತಿಕ್ಕಾಟದ ವಿಷಯ. ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ಸಹ ಇಂಥ ಬೇಕು ಬೇಡಗಳ ಚರ್ಚೆಗಳಲ್ಲಿ ಭಾಗವಹಿಸುವುದಕ್ಕೂ ಹಿಂಜರಿಯುವ ಜನ ಇರುವುದರಿಂದ .
ಆದರೆ ಶತಶತಮಾನಗಳ ಹಿಂದೆಯೇ ಲೈಂಗಿಕ ವಿಜ್ಞಾನ ಕುರಿತು ಅಧಿಕಾರಯುತ ಕೃತಿ 'ಕಾಮಸೂತ್ರ' ರಚಿಸಿದವನು ಮಲ್ಲನಾಗ ವಾತ್ಸ್ಯಾಯನ. ಭಾರತಕ್ಕೆ ಸ್ವಾತಂತ್ತ್ಯ ಬಂದನಂತರದ ವರ್ಷಗಳಲ್ಲಿ ಈ ಕೃತಿ ಪ್ರಕಟಗೊಂಡಿದ್ದಿದ್ದರೆ ಜ್ಞಾನಪೀಠಕ್ಕೆ ರೆಕಮೆಂಡ್ ಮಾಡಬಹುದಾಗಿತ್ತು. ರಸಋಷಿಗೆ ನಮಸ್ಕಾರಗಳು.
36 ಅಧ್ಯಾಯಗಳಲ್ಲಿ ಹರಡಿಕೊಂಡಿರುವ 1250 ಶ್ಲೋಕಗಳು ಕಾಮಸೂತ್ರದಲ್ಲಿ ಅಡಕಗೊಂಡಿವೆ. ದೇಹೋಲ್ಲಾಸ, ಮನೋಲ್ಲಾಸದ ಮೂಲಕ ಮನುಷ್ಯನನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಕಾಮಕ್ಕೆ ಅಂದರೆ ಕಾಮಶಾಸ್ತ್ರಕ್ಕಿದೆ ಎನ್ನುವುದು ವಾತ್ಸ್ಯಾಯನ ನಂಬಿಕೆ. ಆತ ರಚಿಸಿದ ಕಾಮಸೂತ್ರ ಸಂಸ್ಕೃತ ಗ್ರಂಥ ಜಗತ್ತಿನ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ.

ಕನ್ನಡದಲ್ಲೂ ಒಂದು ಅನುವಾದ ಬಂದಿದೆ. ಪತ್ರಕರ್ತ ಮತ್ತು ಪಂಡಿತ ಮ. ಶ್ರೀಧರಮೂರ್ತಿಗಳು ಕಾಮಸೂತ್ರವನ್ನು 1978ರಲ್ಲಿ ಕನ್ನಡಕ್ಕೆ ತಂದಿದ್ದಾರೆ. ಪ್ರತಿಗಳು ಈಗ ಲಭ್ಯವಿವೆಯೋ ಇಲ್ಲವೋ ಗೊತ್ತಿಲ್ಲ. ವಾತ್ಸ್ಯಾಯನ ಕನ್ನಡಕ್ಕೂ ಬಂದಿದ್ದ ಎಂಬ ಸುದ್ದಿ ಸಮಾಧಾನ ನಿಮಗೆ ಸಾಕು.
"ಒಮ್ಮೆ ರತಿಚಕ್ರ ತಿರುಗಲಾರಂಭಿಸಿದರೆ ಶಾಸ್ತ್ರವೂ ಇಲ್ಲ ಕ್ರಮವೂ ಇಲ್ಲ" ಎಂಬ ಮಾತನ್ನು ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಲೇ ಲೈಂಗಿಕ ವಿಜ್ಞಾನದ ಗುಟ್ಟು ಮಟ್ಟುಗಳನ್ನು ರಟ್ಟುಮಾಡಿದ ವಿದ್ವಾಂಸ ವಾತ್ಸ್ಯಾಯನ. ಇವತ್ತು ಆತನ ಮೇರು ಕೃತಿಗೆ ಜಾಗತಿಕ ಮಟ್ಟದಲ್ಲಿ ಎಲ್ಲಿಲ್ಲದ ಮನ್ನಣೆ. ಇಂದಿನ ಯುಗಕ್ಕೆ ಆತನ ಕೃತಿಯನ್ನು ಪರಿಚಯಿಸುವ ಮತ್ತು ದೇಶ ಕಾಲದ ಅಗತ್ಯಗಳಿಗೆ ಸರಿದೂಗಿಸಿ ಕಾಮಶಾಸ್ತ್ರವನ್ನು ದಾಟಿಸುವ ಹಲವಾರು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯೋಗ 'ಕಾಮಸೂತ್ರ ಆಡಿಯೋ'.
![]() | |
| ಒಮ್ಮೆ ರತಿಚಕ್ರ ತಿರುಗಲಾರಂಭಿಸಿದರೆ ಶಾಸ್ತ್ರವೂ ಇಲ್ಲ ಕ್ರಮವೂ ಇಲ್ಲ. | |
![]() | |
ಅವರಿವರು ಎದುರುಗಡೆ ಇರುವಾಗ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓದುವುದಕ್ಕೆ ಅನೇಕರಿಗೆ ಮುಜಗರ ಆಗಬಹುದು. ಆ ಮುಜಗರ ಅಥವಾ ಸಂಕೋಚಗಳನ್ನು ಈ ಆಡಿಯೋ ನಿವಾರಿಸುತ್ತದೆ. ಆಡಿಯೋ ಆಲಿಸುತ್ತಾ ಆಲಿಸುತ್ತಾ ನೀವು ತಲ್ಲೀನರಾಗಬಹುದು ಎಂದು ಬ್ಯೂಟಿಫುಲ್ ಬುಕ್ಸ್ ಅಂಗಡಿಯ ಆಡಳಿತ ನಿರ್ದೇಶಕ ಸೈಮನ್ ಪೆಥರಿಕ್ ಹೇಳುತ್ತಾರೆ ಎಂದು ದಿ ಗಾರ್ಡಿಯನ್ ಪತ್ರಿಕೆಯ ಒಂದು ವರದಿ ಹೇಳುತ್ತದೆ.
"ಕಾಮಸೂತ್ರದ ಶ್ಲೋಕಗಳನ್ನು ಆಡಿಯೋ ಮುದ್ರಿಕೆಗೆ ಹೇಳುತ್ತೀಯಾ ಎಂದು ನನ್ನನ್ನು ಕೇಳಿಕೊಂಡಾಗ ನನಗೆ ಪುಳಕ ಮತ್ತು ಅಳುಕು ಏಕಕಾಲಕ್ಕೆ ಉಂಟಾಯಿತು" ಎಂದು ತಾನ್ಯ ಫ್ರಾಂಕ್ಸ್ ಹೇಳಿದರಂತೆ. ಆದರೆ, ಕಂಠದಾನ ಮಾಡಿ ಮುಗಿಸಿದಾಗ ಮನಸ್ಸು ನಿರುಮ್ಮಳವಾಯಿತು ಎಂದು ತನ್ಯ ಧನ್ಯಳಾದವಳಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ














Click it and Unblock the Notifications