ಕನ್ನಡದಲ್ಲಿ ಮಾತಾಡಿದರೆ ವಿಶೇಷ ರಿಯಾಯತಿ
ಕನ್ನಡದಲ್ಲಿ ಮಾತನಾಡಿ ಮತ್ತು ಹಾಗೆ ಮಾಡುವುದರಿಂದ ಅಧಿಕ ಲಾಭ ಪಡೆಯಿರಿ ಎನ್ನುತ್ತದೆ ಬೆಂಗಳೂರಿನಲ್ಲಿರುವ ಒಂದು ಅಂಗಡಿ. ಇದೇನು ತಮಾಷೆಯಲ್ಲ. ರಿಂಗ್ ರಸ್ತೆ ಕೋರಮಂಗಲದಲ್ಲಿರುವ ಡಾ.ಮೆಡಿಕಲ್ಸ್ ಹೆಸರಿನ ಒಂದು ಔಷಧದ ಅಂಗಡಿಯಲ್ಲಿ ಕನ್ನಡ ಮಾತನಾಡಿ ಹೆಚ್ಚುವರಿ ರಿಯಾಯಿತಿ ಪಡೆಯಿರಿ ಎಂದು ಅಂಗಡಿಯ ನಾಮಫಲಕದಲ್ಲೇ ಬರೆಯಲಾಗಿದೆ.
ಅಂಗಡಿಯಾತ ಹೇಳುವ ಪ್ರಕಾರ ಎಲ್ಲಾ ಔಷಧಗಳ ಎಂ ಆರ್ ಪಿ ಬೆಲೆಗಳ ಮೇಲೆ ಶೇ.10 ರಿಯಾಯಿತಿ ಕೊಡಲಾಗುತ್ತದೆ. ಆದರೆ ತಾವು ದೊಡ್ಡ ಮನಸ್ಸು ಮಾಡಿ ಅಥವಾ ರಿಯಾಯಿತಿ ಆಶೆಯಿಂದಲಾದರೂ ಕನ್ನಡದಲ್ಲೇ ಮಾತನಾಡಿದರೆ ಹೆಚ್ಚುವರಿ ಶೇ.1 ರಿಯಾಯಿತಿ ಸಿಗುತ್ತದೆ. ಅಲ್ಲಿಗೆ, ಕನ್ನಡದಲ್ಲಿ ಸೊಲ್ಲೆತ್ತಿದರೆ ಮತ್ತೊಂದಿಷ್ಟು ಲಾಭ ಸಿಕ್ಕತ್ತೆ ಎಂದಾಯಿತು.
ಕನ್ನಡದಲ್ಲಿ ಮಾತನಾಡಿ ಎಂಬ ಫಲಕವನ್ನು speak kannada and get 1% discount ಎಂದು ಇಂಗ್ಲಿಷ್ನಲ್ಲಿ ಯಾಕೆ ಬರೆದಿದ್ದಾರೆ ಎಂದು ಕನ್ನಡ ಹಠವಾದಿಗಳು ಹುಬ್ಬೇರಿಸಬಹುದು. ಮತ್ತು, ಅಂಗಡಿಯಾತನ ಕನ್ನಡ ಪ್ರೇಮವನ್ನು ದಟ್ಸ್ ಕನ್ನಡ ಕಾಮೆಂಟ್ ವಿಭಾಗದಲ್ಲಿ ಹೀಯಾಳಿಸಲೂಬಹುದು. ಆದರೆ, ವಿಷಯ ಏನಪ್ಪಾ ಅಂದ್ರೆ ಕನ್ನಡದಲ್ಲಿ ವ್ಯವಹರಿಸುವವರು ಯಥಾಪ್ರಕಾರ ಕನ್ನಡದಲ್ಲಿ ಮಾತನಾಡಿ ರಿಯಾಯಿತಿ ಪಡೆಯಬಹುದು. ಆದರೆ, ಕನ್ನಡವೇ ಗೊತ್ತಿಲ್ಲದ ಗಿರಾಕಿಗಳಿಗೆ ಕನ್ನಡದಲ್ಲಿ ಮಾತನಾಡುವ ಪ್ರೀತಿ ಉಕ್ಕಿಬರಲಿ ಎಂಬ ಉದ್ದೇಶದಿಂದ ಇಂಗ್ಲಿಷ್ ಬಳಸಲಾಗಿದೆ.
ಕೇವಲ ಇಂಗ್ಲಿಷ್, ಕೇವಲ ತಮಿಳು, ಕೇವಲ ಬಂಗಾಲಿ, ಕೇವಲ ತೆಲುಗು, ಕೇವಲ ಮಲೆಯಾಳಂ ಮಾತನಾಡುವವರು ಬೆಂಗಳೂರಿನಲ್ಲಿ ಹೆಚ್ಚು ಜನ ಇದ್ದಾರೆ. ಕನ್ನಡ ಮಾತನಾಡುವುದಕ್ಕೂ ಬರದ ಈ ಜನಸ್ತೋಮಕ್ಕೆ ಕನ್ನಡದ ಬೆಲೆ ಗೊತ್ತಾಗಲಿ ಎಂಬ ಉದ್ದೇಶದಿಂದ ಔಷಧ ಬೆಲೆಗಳಲ್ಲಿ ರಿಯಾಯತಿಯನ್ನು ಆಂಗ್ಲ ಭಾಷೆಯಲ್ಲಿ ಸಾರಲಾಗಿದೆ. ಇದನ್ನು ಕನ್ನಡ ಕಲಿಯದ ಜನಕ್ಕೆ ಅಂಗಡಿಯಾತ ಕೊಟ್ಟಿರುವ ರಿಯಾಯತಿ ಗುಳಿಗೆ ಎಂದೂ ಕರಿಯಲಿಕ್ಕೆ ಅಡ್ಡಿಯಿಲ್ಲ.
ಅಂದಹಾಗೆ, ರಿಯಾಯಿತಿ ಪಡೆಯುವುದಕ್ಕೋಸ್ಕರವೆ ತಕ್ಷಣ ಕನ್ನಡ ಕಲಿಯುವುದು ಹೇಗೆ? ಸದ್ಯದಲ್ಲೇ ಇಲ್ಲಿ ಯಾರಾದರು ಕನ್ನಡ ಕಲಿ ತರಗತಿಗಳನ್ನು ಆರಂಭಿಸಿದರೆ ಕನ್ನಡ ಹೇಳಿಕೊಡುವವರಿಗೂ ಲಾಭ, ಕಲಿಯುವವರಿಗೂ ಲಾಭ ಮತ್ತು ಔಷಧ ಮಾರುವ ಅಂಗಡಿಗೂ ಲಾಭ. ಶುಭ ಲಾಭ, ಲಾಭವೋ ಲಾಭ.
ತಮಾಷೆಯ ಗೋಡೆ ಬರಹಗಳ ಗ್ಯಾಲರಿ
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications