ಕೆಂಡಸಂಪಿಗೆ ಬ್ಲಾಗ್ ಪುನರಾರಂಭ

ವ್ಯಾಪಾರಿ ಉದ್ದೇಶವಿಲ್ಲದೆ ಕೇವಲ ಕನ್ನಡ ಬರಹಗಳ ಮಮತೆಯಿಂದ ಆರಂಭವಾದ ಪತ್ರಿಕೆ ಕೆಂಡಸಂಪಿಗೆ. ಅದೇ ಮಮತೆಯಿಂದಾಗಿಯೇ ಪ್ರಕಟಣೆಯನ್ನು ನಿಲ್ಲಿಸಬೇಕಾಗಿ ಬಂದ ಪತ್ರಿಕೆಯೂ ಹೌದು. ಈ ಆನ್ ಲೈನ್ ಪತ್ರಿಕೆಯನ್ನು ಹತ್ತಿರ ಹತ್ತಿರ ಎರಡುವರ್ಷ ನಡೆಸಿದ ಕನ್ನಡಧೀರ, ಉದ್ಯಮಿ ಶಶಿಕಿರಣ್ ಮುಳ್ಳೂರ್. ಅವರಿಗೆ ಮತ್ತು ಲೆಮನ್ ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ತಂಡಕ್ಕೆ ಹೊಸ ವರ್ಷ 2010ರ ಹಾರ್ದಿಕ ಶುಭಾಶಯಗಳು.
ಮೂರು ಕಾಸು ಉತ್ಪತ್ತಿ ಇಲ್ಲದೆ ಕನ್ನಡ ಅಕ್ಷರ ಸೇವೆ ಮಾಡುವ ಶಶಿಕಿರಣ್ ಅವರ ಸಾಹಸ ಮೆಚ್ಚಬೇಕಾ ಬೇಡವಾ ನನಗಂತೂ ತಿಳಿಯದು. ಆದರೆ, ಕೆಂಡಸಂಪಿಗೆ ನಿಂತು ಹೋದದ್ದರಿಂದ ಅನೇಕ ಬರಹಗಾರರಿಗೆ, ಚಾರಣಿಗರಿಗೆ ನಿರಾಶೆ ಆಗಿದ್ದು ಅವರೆಲ್ಲರ ಒತ್ತಾಯದ ಮೇರೆಗೆ ಮತ್ತೆ ಪತ್ರಿಕೆ ಆರಂಭವಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಆನ್ ಲೈನ್ ಪತ್ರಿಕೆಯ ಸಂಪಾದಕ ರಶೀದ್ ಅವರು ಭಾವಜೀವಿ ಮತ್ತು ಅಕ್ಷರ ಜೀವಿ. ಕಥೆ ಕವಿತೆ ಬರೆಯುವುದರಲ್ಲಿ ಪಳಗಿದ ಲೇಖನಿ. ಕೇಂದ್ರ ಸರಕಾರದ ಒಡೆತನದ ಆಕಾಶವಾಣಿ ಮಡಿಕೇರಿ ಕೇಂದ್ರದಲ್ಲಿ ಉದ್ಯೋಗ. ಸೇವಾ ನಿಯಮಗಳ ಪ್ರಕಾರ ಅವರು ಇನ್ನೊಂದು ಲಾಭದಾಯಕ ವೃತ್ತಿಯನ್ನು ಕೈಗೊಳ್ಳುವಂತಿಲ್ಲ. ಸರಕಾರಿ ನೌಕರಿಯ ಸಂಬಳ ಹೊರತುಪಡಿಸಿದರೆ ಕನ್ನಡ ಪತ್ರಿಕೋದ್ಯಮವನ್ನು ವಾಣಿಜ್ಯ ಉದ್ದೇಶಗಳೊಂದಿಗೆ ಸರಿದೂಗಿಸಿ ಪತ್ರಿಕೆ ಸ್ವಾವಲಂಬಿಯನ್ನಾಗಿಸುವ ಕೌಶಲ್ಯವನ್ನು ಅವರು ಪ್ರದರ್ಶಿಸುವಂತಿಲ್ಲ. ಅವರೇ ಒಪ್ಪಿಕೊಳ್ಳುವ ಪ್ರಕಾರ ಆ ವಿದ್ಯೆ ಅವರ ಜಾಯಮಾನಕ್ಕೆ ಒಗ್ಗಿಬರುವುದಿಲ್ಲ.
ಅಂತೂ ಕೆಂಡಸಂಪಿಗೆಯ ಸೆಕೆಂಡ್ ಇನಿಂಗ್ಸ್ ಆರಂಭವಾಗುತ್ತಿದೆ. ಅಕ್ಷರ ಸಮಾರಾಧನೆ ಆಗಲಿ. ಸೋಲು ಗೆಲುವಿನ ಪ್ರಶ್ನೆ ಬೇಕಿಲ್ಲ. ಪಂದ್ಯ ಡ್ರಾ ಆಗುತ್ತದೆಂಬ ಎಣಿಕೆಯಲ್ಲಿ ನಿಮ್ಮ ಇಂಟರ್ನೆಟ್ ವಿಶ್ವಾಸಿ, ಶಾಮ್. [ರಶೀದ್ ಅವರ ಭಾವಚಿತ್ರ ಕೃಪೆ sotosay.wordpress.com/]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications