153672suvarna tvಕಿರುತೆರೆಯಲ್ಲಿ ಹಿಟ್ ಚಿತ್ರಗಳ ಸುಗ್ಗಿ/movies/tv/2009/01/12-hit-movies-screening-on-tv-channels-sankranthi.htmlಈ ಬಾರಿಯ ಮಕರಸಂಕ್ರಾಂತಿಯಂದು ( ಜನವರಿ 14, ಬುಧವಾರ) ಕನ್ನಡ ಸಿನಿರಸಿಕರಿಗೆ ಕಿರುತೆರೆಯಲ್ಲಿ ಸುಗ್ಗಿಯೋ ಸುಗ್ಗಿ. ಕನ್ನಡ ಟಿವಿ ಚಾನಲುಗಳು ಪೈಪೋಟಿಯಂತೆ ಹಿಟ್ ಚಿತ್ರಗಳನ್ನು ಅಂದು ಪ್ರಸಾರಮಾಡುತ್ತಿವೆ. ರಿಮೋಟ್ ಕೈಯಲ್ಲಿಟ್ಟುಕೊಳ್ಳಿರಿ, ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂಡು ಕ್ಲಿಕ್ ಮಾಡಿ.1. ಸುವರ್ಣ ವಾಹಿನಿಚಿತ್ರ : ಮುಂಗಾರು ಮಳೆ ಸಮಯ: ಸಂಜೆ 4.00ಕ್ಕೆ2007 ರಲ್ಲಿ ಬಿಡುಗಡೆಯಾಗಿ, ಕನ್ನಡ ಚಿತ್ರರಂಗಲ್ಲಿ 34015http://kannada.oneindia.com/img/2009/01/12-ganesh2.jpg153672suvarna tvದುನಿಯಾ ವಿಜಿಗೆ ಪಿತ್ತ ನೆತ್ತಿಗೇರಿದೆಯೇ ?/movies/controversy/2009/06/14-duniya-vijays-defiant-behavior-continues.htmlಯಾವುದೇ ಗಾಡ್ ಫಾದರ್ ಗಳಿಲ್ಲದೆ ನಿರ್ದೇಶಕ ಸೂರಿ ಗರಡಿಯಿಂದ ಬೆಳಕಿಗೆ ಬಂದ ದುನಿಯಾ ವಿಜಿ ಅಲಿಯಾಸ್ ವಿಜಯ್ ಎಂಬ ನಟನ ಪಿತ್ತ ನೆತ್ತಿಗೇರಿದೆಯಾ ? ಪಾಪ ಅಬ್ಬೇಪಾರಿಯಂತಹ ಹುಡುಗ ತುಂಬ ಕಷ್ಟಪಟ್ಟು ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ಆತನನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿದ ಪತ್ರಕರ್ತರದು ತಪ್ಪಾ ? ಹೊಳೆ ದಾಟಿದ ಮೇಲೆ ಅಂಬಿಗನ ನಂಟೇಕೆ ಎನ್ನುವ ಮನಸ್ಥಿತಿಯಾ ? ಏರಿದ 37332http://kannada.oneindia.com/img/2009/06/14-vijay-taakat1.jpg153672suvarna tvಕನ್ನಡಪ್ರಭದಿಂದ ಪ್ರತಿಭಾ ಪಲಾಯನ/column/sham/2009/0820-kannada-prabha-exodus-to-suvarna-tv-channel.htmlಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ 38751http://kannada.oneindia.com/img/2009/08/20-ranganath1.jpg153672suvarna tvಶೋಭಾಗೆ ಫೋನ್ ಮಾಡಿ ಮಾತಾಡಿ/news/2009/11/10/shobha-phone-in-live-today-on-suvarna-tv.htmlಬೆಂಗಳೂರು, ನ. 10: ಇಂದು ಮಂಗಳವಾರ. ಮಂತ್ರಿ ಸ್ಥಾನ ತ್ಯಾಗಮಾಡಿದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಇವತ್ತು ಸಂಜೆ 4 ಗಂಟೆಗೆ ಸುವರ್ಣ ಟಿವಿ ನಡೆಸಿಕೊಡುವ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಶೀರ್ಷಿಕೆ" ಶೋಭಾ ಏನಂತಾರೆ?".ಯಡಿಯೂರಪ್ಪ ಅವರ ಸರಕಾರದಲ್ಲಿ 17 ತಿಂಗಳ ಸಮಯ ಸಚಿವೆಯಾಗಿ ದುಡಿದ ಶೋಭಾ, ಇವತ್ತು 40148http://kannada.oneindia.com/img/2009/11/10-shobha-karandlaje1e.jpg153672suvarna tvನೇರ ದಿಟ್ಟ ನಿರಂತರ ಶೋಭಾ ಕರಂದ್ಲಾಜೆ/news/2009/11/10/shobha-karandlaje-suvarna-channel-live-telecast.htmlನಿಗದಿಯ ಸಮಯ ನಾಲ್ಕು ಗಂಟೆಗೆ ಸರಿಯಾಗಿ ಶೋಭಾ ಸ್ಟೂಡಿಯೋಗೆ ಆಗಮನ. ಉಭಯಕುಶಲೋಪರಿ. ಚಹಾ ಸೇವನೆ. ರಂಗನಾಥ್ ಭಾರದ್ವಾಜ್ ನಡೆಸಿಕೊಟ್ಟ 'ಮನದಾಳದ ಮಾತು' ಕಾರ್ಯಕ್ರಮದ ನೇರಪ್ರಸಾರ ಆರಂಭ. ರಂಗನಾಥ್ ಜತೆಜತೆಗೆ ಶೋಭಾ ಅವರಿಗೆ ರಾಜ್ಯದ ಮೂಲೆಮೂಲೆಗಳಿಂದ ರಾಜಕೀಯ ಉತ್ಸಾಹಿಗಳು ದೂರವಾಣಿ ಮೂಲಕ ಬಿಟ್ಟ ಪ್ರಶ್ನೆಗಳ ಬಾಣ ಬಿರುಸು. ಒಟ್ಟು 90 ನಿಮಿಷಗಳ ರಾಜಕೀಯ ರಸಗವಳ. ಮಂಗಳೂರು ಬೆಂಗಳೂರು ಶೈಲಿ 40155http://kannada.oneindia.com/img/2009/11/10-shobha-karandlaje5.jpg110021tv9ಟಿವಿ 9 ಸುದ್ದಿ ವಾಹಿನಿ ಜೊತೆ ಜಂಗ್ಲಿ ಸಣ್ಣ ಮೈತ್ರಿ /movies/headlines/2009/02/09-junglee-movie-ties-up-with-tv9.htmlಜಂಗ್ಲಿ ಚಿತ್ರತಂಡ ಪ್ರಚಾರದ ವೈಖರಿಯನ್ನೇ ಬದಲಿಸಿದೆ. ಅದು ಟಿವಿ-9 ವಾಹಿನಿ ಜೊತೆ ಸಣ್ಣ ಮೈತ್ರಿ ಮಾಡಿಕೊಂಡಿದೆ. ಹಾಡುಗಳು ಅದಾಗಲೇ ಹಿಟ್ ಆದದ್ದೇ ಸಾಕು ಎಂಬುದು ತಂಡದ ಭಾವನೆ. ಅದಕ್ಕೇ ಚಿತ್ರದ ಒಂದೇಒಂದು ಸುದ್ದಿಗೋಷ್ಠಿಯನ್ನೂ ರಾಕ್‌ಲೈನ್ ನಡೆಸಲಿಲ್ಲ. ಮುಹೂರ್ತ ಆದದ್ದು, ಕುಂಬಳಕಾಯಿ ಒಡೆದದ್ದು, ಕ್ಯಾಸೆಟ್ ಬಿಡುಗಡೆ ಕಂಡಿದ್ದು ಎಲ್ಲವೂ ಸುದ್ದಿಮಿತ್ರರ ಅನುಪಸ್ಥಿತಿಯಲ್ಲೇ. ಕೊನೆಗೆ ಸಿನಿಮಾ ನೋಡಿ ಬನ್ನಿ ಅಂತ 34548http://kannada.oneindia.com/img/2009/02/09-vijay-junglee1e.jpg110021tv9ಜಲಿಯನ್ ವಾಲಾ ಬಾಗ್ ಕೃತಿ ಲೋಕಾರ್ಪಣೆ/literature/book/2009/0414-jallianwala-bagh-chandrayan-tv9-shivaprasad.htmlಬೆಂಗಳೂರು, ಏ. 14: ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ಸಂಜೆ ಟಿವಿ 9 ನ ಪತ್ರಕರ್ತ, ಲೇಖಕ ಶಿವಪ್ರಸಾದ್ ಟಿಆರ್ ಅವರು ಬರೆದ 'ಜಲಿಯನ್ ವಾಲಾ ಬಾಗ್' ಹಾಗೂ 'ಚಂದ್ರಯಾನ' ಪುಸ್ತಕದ ಬಿಡುಗಡೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ವೇದಪಾರಂಗತ, ಸ್ವಾತಂತ್ರ್ಯ ಹೋರಾಟಗಾರ ಸುಧಾಕರ್ ಚತುರ್ವೇದಿ ಅವರು ಜಲಿಯನ್ ವಾಲಾ ಬಾಗ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. 35951http://kannada.oneindia.com/img/2009/04/15-jallianwala-bagh1.jpg110021tv9ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ/movies/tv/2009/04/16-cable-varthe-tv-awards-2009.htmlಕಿರುತೆರೆಯ ಕಲಾವಿದರು, ತಂತ್ರಜ್ಞರನ್ನು ಗುರುತಿಸಲು ಇದೇ ಮೊದಲ ಬಾರಿಗೆ ಆಕ್ಟ್ ಕೇಬಲ್ ಟಿವಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಿರುತೆರೆ ಧಾರವಾಹಿಗಳ ಅನಭಿಷಿಕ್ತ ನಿರ್ದೇಶಕ ಟಿ ಎನ್ ಸೀತಾರಾಮ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿದರೆ, ಕಿರುತೆರೆ ನಟ ರವಿಕಿರಣ್ ಗೆ 'ಎವರ್ ಗ್ರೀನ್ ಅವಾರ್ಡ್' ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಟ್ಟಿಯಲ್ಲಿ ಟಿವಿ 9ನ 'ಹೀಗೂ ಉಂಟೆ?' ಕಾರ್ಯಕ್ರಮ, 36000http://kannada.oneindia.com/img/2009/04/16-cable-tv-awards1.gif110021tv9ವಾಕ್ ಸ್ವಾತಂತ್ರ್ಯ ಮತ್ತು ಮಾಧ್ಯಮಗಳ ಜವಾಬ್ದಾರಿ/cj/prakash-upadhyaya/2009/0723-freedom-of-expression-media-responsibility.htmlಭಾರತ ಸಂವಿಧಾನದಲ್ಲಿ ಪತ್ರಿಕೋದ್ಯಮವನ್ನು ಸಂವಿಧಾನದ ನಾಲ್ಕನೇ ಸ್ತಂಭ ಎಂದು ಕರೆಯುತ್ತಾರೆ . ಪತ್ರಿಕೆ ಈ ಸಮಾಜದ ಕೈಗನ್ನಡಿ. ಮಾಧ್ಯಮಕ್ಕೆ ಸ್ವತಂತ್ರವಿಲ್ಲವಾದರೆ ಹಲ್ಲು ಕಿತ್ತ ಹಾವಿನ ಹಾಗೆ ಇರುತ್ತಿತ್ತು. ಸರ್ಕಾರದ ಆಡಳಿತ, ಯೋಜನೆಗಳು ಎಲ್ಲ ಲೋಪದೋಷಗಳನು ಎತ್ತಿಹಿಡಿಯಬೇಕೆಂದು ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ರಾಜಕಾರಣಿಗಳು, ಪ್ರಭಾವಶಾಲಿ ವ್ಯಕ್ತಿಗಳು ಅನ್ಯಾಯ, ಅಕ್ರಮಗಳನ್ನು ಭಯವಿಲ್ಲದೆ 38164http://kannada.oneindia.com/img/2009/07/23-media-photo-com-4032544.jpg110021tv9ಎಲ್ಲ ಠೇವಣಿದಾರರಿಗೆ ಹಣ ವಾಪಸ್-ವಿನಿವಿಂಕ್/news/2009/07/29/money-back-assurance-from-vinivinc-shastry.htmlಕೊನೆಗೂ ಬಹುಕೋಟಿ ಹಗರಣದ ರೂವಾರಿ ವಿನಿವಿಂಕ್ ಶಾಸ್ತ್ರಿ ಅಲಿಯಾಸ್ ಶ್ರೀನಿವಾಸ ಶಾಸ್ತ್ರಿ ಸುಪ್ರಿಂಕೋರ್ಟ್ ನಿಂದ ಎರಡು ತಿಂಗಳ ಮಟ್ಟಿಗೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಹಣ ಹೂಡಿರುವ ಠೇವಣಿದಾರರಿಗೆ ಹಣ ಹಿಂದಿರುಗಿಸುವುದಾಗಿ ನ್ಯಾಯಾಲಯದ ಮುಂದೆ ಪ್ರಮಾಣಪತ್ರ ಸಲ್ಲಿಸಿ ಶಾಸ್ತ್ರಿ ಬಿಡುಗಡೆಯಾಗಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ನನ್ನ ಸಂಸ್ಥೆಗೆ ಹಣ ಹೂಡಿದ್ದ ಎಲ್ಲ ಠೇವಣಿದಾರರಿಗೆ 38290http://kannada.oneindia.com/img/2009/07/29-vinivinc-shastri1e.jpg153391jogiಶಿವರಾಜ್ ಕುಮಾರ್ ನೂರನೇ ಚಿತ್ರ ಜೋಗಯ್ಯ/movies/hero/2009/02/19-shivrajkumars-100th-film-jogayya.htmlಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ನೂರನೆ ಚಿತ್ರಕ್ಕೆ 'ಜೋಗಯ್ಯ' ಎಂದು ನಾಮಕರಣ ಮಾಡಲಾಗಿದೆ. ಪ್ರೇಮ್ ನಿರ್ದೇಶನ, ನಿರ್ಮಾಣದಲ್ಲಿ ಜೋಗಯ್ಯ ಸೆಟ್ಟೇರಲಿದೆ. ಈಚಿತ್ರದ ಮೂಲಕ ಪ್ರೇಮ್ ನಿರ್ಮಾಪಕರಾಗಿ ಹೊಸ ಜವಾಬ್ದಾರಿ ಹೊತ್ತಿದ್ದಾರೆ. ಪ್ರೇಮ್ ತಮ್ಮ ಪತ್ನಿ ರಕ್ಷಿತಾರೊಂದಿಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಜೋಗಯ್ಯನನ್ನು ನೋಡಬೇಕಾದರೆ ಶಿವಣ್ಣನ ಅಭಿಮಾನಿಗಳು ಸ್ವಲ್ಪ ದಿನ ಕಾಯಬೇಕಾಗುತ್ತದೆ. ಕಾರಣ ಶಿವಣ್ಣನ 34754http://kannada.oneindia.com/img/2009/02/19-shivaraj8.jpg153391jogiಆಷಾಢದ ಗಾಳಿಗೆ ಮೈಯೊಡ್ಡಿದ ಕವಿತೆ/literature/poem/2009/0730-ashada-masa-wind-by-jogi.htmlಹೊರಗೆ ಬೀಸುತ್ತಿರುವುದುಆಷಾಢದ ಗಾಳಿಯೇ?ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ.ಸಿಂಹಾಸನ ಉರುಳಿದಾಗಶ್ರಾವಣ ಎಂದೂದೇವಾಲಯ ನಡುಗಿದಾಗಮಾರ್ಗಶಿರ ಎಂದೂಕವಿತೆಯನ್ನೂ ಎಂದೂ ಓದದಶ್ರೀಮಂತನಿಗೆ ಹೊಟ್ಟೆನೋವು ಬಂದಾಗಸುಗ್ಗಿಯೆಂದೂ ಸಂಭ್ರಮಿಸಿದವರು ನಾವು.ಮೊನ್ನೆ ಮಳೆಗಾಲದಲ್ಲಿನಮ್ಮೂರ ಗುಡಿಯಗರುಡಗಂಭಕ್ಕೆ ಸಿಡಿಲು ಬಡಿಯಿತು.ಒಣ ಮರದ ಕಂಬ ಅಲ್ಲಾಡಲಿಲ್ಲ.ದೇವರುಗಳ ರಾಜ್ಯದಲ್ಲಿತಿರುಕರೇ ಎಲ್ಲಾ.ಇದ್ದವರೂ ಬೇಡುವರು, ಇಲ್ಲದವರೂ.ಇದ್ದವರಿಗೆ ದೇವರು ನೀಡುವರು.ಇಲ್ಲದವರು ನಾಳೆಗಾಗಿ ಕಾಯುವರು.ಭತ್ತವೊಂದು ಬಿತ್ತವಾಗಿಬಿತ್ತಿದ್ದು ತೆನೆಯಾಗಿ ಮತ್ತೆ ಭತ್ತವಾಗಿಹೊಟ್ಟು ಕಳಚಿಕೊಂಡು ಹೊಟ್ಟೆಗೆ ಹಿಟ್ಟಾಗುವಪವಾಡಕ್ಕೆ ನಾವು ಕಾಯುತ್ತಾ ಕೂತೆವು.ದೇವರ 38312http://kannada.oneindia.com/img/2009/07/30-winter-wind1.jpg153391jogiಸುಚಿತ್ರದಲ್ಲಿ ಶ್ರೀನಿಧಿ, ಸುಶ್ರುತ ಜುಗಲ್ ಬಂದಿ/literature/book/2009/0804-shreenidhi-sushrutha-book-release-at-suchitra.htmlಬೆಂಗಳೂರು, ಆ. 4 : ಪತ್ರಕರ್ತ ಡಿ ಎಸ್ ಶ್ರೀನಿಧಿ ಅವರ 'ಹೂವು ಹೆಕ್ಕುವ ಮುನ್ನ' ಕವನ ಸಂಕಲನ ಹಾಗೂ ಸುಶ್ರುತ ದೊಡ್ಡೇರಿ ಅವರ 'ಹೊಳೆಬಾಗಿಲು' ಲಲಿತ ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 9 ರಂದು ನಗರದ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ, ಸಾಹಿತಿ ಹಾಗೂ 38410http://kannada.oneindia.com/img/2009/08/04-sushruta-dodderi1.jpg153391jogiಸುಚಿತ್ರಾದಲ್ಲಿ ಪ್ರಣತಿಯ ಐದನೇ ಕನಸು ನನಸು/literature/book/2009/0811-shreenidhi-sushrutha-book-release-pranati.htmlಪ್ರಣತಿ ಆಯೋಜಿಸಿದ್ದ ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಲಲಿತ ಪ್ರಬಂಧಗಳು ಮತ್ತು ಶ್ರೀನಿಧಿ ಡಿ ಎಸ್ ರ ಹೂವು ಹೆಕ್ಕುವ ಸಮಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಆಗಸ್ಟ್ 9 ರಂದು ನಡೆಯಿತು. ನಗರದ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗತಿಹಳ್ಳಿ ಚಂದ್ರಶೇಖರ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಜೋಗಿ ಭಾಗವಹಿಸಿದ್ದರು.ಸುಶ್ರುತ ದೊಡ್ಡೇರಿಯ ಹೊಳೆಬಾಗಿಲು ಬಿಡುಗಡೆ ಮಾಡಿ ಮಾತನಾಡಿದ 38548http://kannada.oneindia.com/img/2009/08/11-pranati-book-release1.jpg153391jogiಕನ್ನಡಪ್ರಭದಿಂದ ಪ್ರತಿಭಾ ಪಲಾಯನ/column/sham/2009/0820-kannada-prabha-exodus-to-suvarna-tv-channel.htmlಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ 38751http://kannada.oneindia.com/img/2009/08/20-ranganath1.jpgnews"> ಕನ್ನಡಪ್ರಭದಿಂದ ಪ್ರತಿಭಾ ಪಲಾಯನ | HR Ranganath | Suvarna channel | Kannada tv | Kannada Prabha | Journalists - ಸುವರ್ಣಟಿವಿಗೆ ರಂಗಾ, ಜೋಗಿ, ಉಮ ಮತ್ತು ರವಿ ಹೆಗಡೆ - Kannada Oneindia

ಕನ್ನಡಪ್ರಭದಿಂದ ಪ್ರತಿಭಾ ಪಲಾಯನ

HR Ranganath
ಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.

ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ ಶಶಿಧರ ಭಟ್ ಅವರನ್ನು ಸೈಡ್ ವಿಂಗಿಗೆ ತಳ್ಳಲಾಗುತ್ತಿದ್ದು, ಅವರ ಜಾಗಕ್ಕೆ ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ಎಚ್.ಆರ್. ರಂಗನಾಥ್ ನೇಮಕ ಮಾಡಲಾಗಿದೆ. ಸೈಡ್ ವಿಂಗ್ ಎಂದರೆ, ಏಷಿಯಾ ನೆಟ್ ಸಂಸ್ಥೆಯ ಪರಿಧಿಯಲ್ಲಿ ಬೇಕಾದಷ್ಟು ಇತರೆ ಅಂಗಸಂಸ್ಥೆಗಳಿವೆ. ಜ್ಯುಪಿಟರ್ ಎಂಬ ಸಂಸ್ಥೆಗೋ ಅಥವಾ ರಾಜ್ಯಸಭಾ ಸದಸ್ಯ, ಸುವರ್ಣ ಚೇರ್ಮನ್ ರಾಜೀವ್ ಚಂದ್ರಶೇಖರ್ ಅವರ ರಾಜಕೀಯ ಕಾರ್ಯದರ್ಶಿಯನ್ನಾಗಿಯೋ ಶಶಿಧರ ಭಟ್ ಅವರನ್ನು ಅಟ್ಟಲಾಗುವುದೆಂಬ ಸುದ್ದಿ ದಟ್ಟವಾಗಿದೆ.

ಕನ್ನಡಪ್ರಭದ ಸಂಪಾದಕ ಹುದ್ದೆಗೆ ರಂಗನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಅವರು ಸುವರ್ಣ ಚಾನಲ್ಲಿನ ಮುಖ್ಯಸ್ಥರಾಗಿ ಸೆಪ್ಟೆಂಬರ್ 1ರಂದು ಅಧಿಕಾರ ಗ್ರಹಣ ಮಾಡಲಿದ್ದಾರೆ. ರಂಗನಾಥ್ ಅವರ ಜತೆಗೆ ಕನ್ನಡಪ್ರಭದಲ್ಲಿರುವ ಕೆಲವು ಹಿರಿಯ, ಅನುಭವಿ ಪತ್ರಕರ್ತರೂ ಪತ್ರಿಕೆಯ ಉದ್ಯೋಗ ತೊರೆದು ಟಿವಿ ಪತ್ರಿಕೋದ್ಯಮಕ್ಕೆ ದಾಂಗುಡಿಯಿಡುವ ಸನ್ನಾಹದಲ್ಲಿದ್ದಾರೆಂದೂ ಊರೆಲ್ಲ ಗುಲ್ಲಾಗಿದೆ. ಗುಲ್ಲನ್ನು ಅಲ್ಲಗೆಳೆಯುವ ಮಂದಿಯೂ ಇದ್ದು, ಜೋಗಿಮನೆ ಬ್ಲಾಗಿನ ಜೋಗಿ ಉರುಫ್ ಗಿರೀಶ್ ರಾವ್, ಉದಯ ಮರಕಿಣಿ ಮತ್ತು ರಂಗಾ ಅವರ ಬಲಗೈ ಬಂಟ ರವಿ ಹೆಗಡೆ ಅವರೂ ಸಹ ಕನ್ನಡಪ್ರಭಕ್ಕೆ ರಾಜಿನಾಮೆ ಕೊಟ್ಟು ಸುವರ್ಣಾಗೆ ಹೋಗಲು ಕಿಟ್ ಬ್ಯಾಗ್ ರೆಡಿ ಮಾಡಿಕೊಂಡಿದ್ದಾರೆ.

ಆದರೆ, ರಂಗನಾಥ್ ಅವರಿಗೆ ತಮ್ಮ ತಂಡವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸುವರ್ಣ ಆಡಳಿತ ವರ್ಗ ನೀಡಿರುವುದರಿಂದ ಅವರು ಅಧಿಕಾರ ಸ್ವೀಕರಿಸುವವರೆಗೂ ಕನ್ನಡಪ್ರಭದಿಂದ ಸುವರ್ಣಕ್ಕೆ ಗುಳೆ ಹೋಗುವವರ ಸುದ್ದಿಯನ್ನು ಮುಗುಂ ಆಗಿ ಇಡಲಾಗಿದೆಯಷ್ಟೆ. ಇದೇ ವೇಳೆ, ರಂಗನಾಥ್ ಅವರ ನಿರ್ಗಮನದಿಂದ ಹಠಾತ್ತನೆ ಸೃಷ್ಟಿಯಾಗುತ್ತಿರುವ ಖಾಲಿಕುರ್ಚಿಯನ್ನು ತುಂಬುವ ಕನ್ನಡಪ್ರಭ ಸಂಪಾದಕರಾರೆಂಬುದು ಇನ್ನೂ ಇತ್ಯರ್ಥವಾಗಿಲ್ಲ. ಅದೇನಿದ್ದರೂ ಚೆನ್ನೈನಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಆಡಳಿತವರ್ಗವೇ ನಿರ್ಧರಿಸಬೇಕಾಗಿದ್ದು, ಸಮರ್ಥ ಸಂಪಾದಕ ಅಥವಾ ಸಂಪಾದಕಿಗಾಗಿ ಹುಡುಕಾಟ ನಡೆದಿದೆ.

ವೆಂಕಟನಾರಾಯಣ್ ಎಂಬ ಪತ್ರಕರ್ತರು ಕನ್ನಡಪ್ರಭದ ಸಂಪಾದಕರಾಗಿದ್ದರು. ಅವರ ಗುತ್ತಿಗೆ ಅವಧಿ ಎಕ್ಸ್ ಪೈರ್ ಆದನಂತರ ಸಂಪಾದಕರಾಗಿ ಬಂದ ತಮ್ಮ ಗೆಳೆಯರ ಪ್ರೀತಿಯ ರಂಗಾ, ಕನ್ನಡಪ್ರಭಕ್ಕೆ ಹೊಸ ಆಯಾಮ, ಹೊಸ ಚೌಕಟ್ಟನ್ನು ಕಟ್ಟಿಕೊಟ್ಟಿದ್ದರು. ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಅನುಭವಿ ಪತ್ರಕರ್ತರೂ ಸುವರ್ಣ ಟಿವಿಗೆ ಗುಳೆ ಹೋಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಪತ್ರಿಕೆಗೆ ಸಂಪಾದಕರನ್ನು ಔಟ್ ಸೋರ್ಸ್ ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಇಂಡಿಯನ್ ಎಕ್ಸ್ ಪ್ರೆಸ್ ಮಧುರೈ ಪ್ರೈವೇಟ್ ಲಿಮಿಟೆಡ್ ಆಡಳಿತ ವರ್ಗಕ್ಕೆ ಎದುರಾಗಿದೆ.

ಇತ್ತ ಸುವರ್ಣ ಚಾನಲ್ಲಿನಲ್ಲಿ ಎಲ್ಲವೂ ಸರಿಯಿಲ್ಲ, ಮಾರುಕಟ್ಟೆ ಮತ್ತು ವೀಕ್ಷಕರ ಬೇಡಿಕೆಗೆ ಅನುಗುಣವಾಗಿ ಸುದ್ದಿ ಉತ್ಪನ್ನ ಮತ್ತು ಸುದ್ದಿ ಸಂಸ್ಕಾರಗಳು ಆಗುತ್ತಿಲ್ಲ ಎಂಬ ಅಪಸ್ವರಗಳು ಕೆಲವು ದಿನಗಳಿಂದ ಕೇಳಿಬರುತ್ತಿದ್ದವು. ಈ ಅಸಮಾಧಾನದ ಹಿನ್ನೆಲೆಯಲ್ಲಿ ಹೊಸಬರ ಆಯ್ಕೆಯ ಸುದ್ದಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಮೇಲಾಗಿ ಕನ್ನಡ ವಾಹಿನಿಗಳ ಪ್ರಬಲ ಪೈಪೋಟಿ ಇರುವುದರಿಂದ ತಮ್ಮ ಚಾನಲ್ಲನ್ನು ತಮ್ಮ ಸಮೀಪ ಪ್ರತಿಸ್ಪರ್ಧಿಗಳಿಗಿಂತ ಮೇಲೆಕ್ಕೆತ್ತಲು ಸುವರ್ಣ ಮ್ಯಾನೇಜ್ ಮೆಂಟ್ ಕೆಲವು ಕ್ರಮಗಳನ್ನು ಕೈಗೆತ್ತಿಕೊಂಡಿವೆ.

ನಿಮಗೆ ಆಶ್ಚರ್ಯವಾಗಬಹುದು. ಸುವರ್ಣ ಚಾನಲ್ಲಿನಲ್ಲಿ ಪ್ರಸಾರವಾಗುವ ಒಂದು ಧಾರಾವಾಹಿಯ ಬಗ್ಗೆ ಚಿತ್ರಮಂದಿರಗಳಲ್ಲಿ ಜಾಹಿರಾತು ಪ್ರಸಾರವಾಗುತ್ತದೆ. ಬೆಂಗಳೂರಿನ ಕಾಂಪೌಂಡುಗಳ ಮೇಲೆ ಚಾನಲ್ ಕಾರ್ಯಕ್ರಮಗಳ ಬಗೆಗಿನ ಭಿತ್ತಿ ಚಿತ್ರಗಳು ಕಣ್ಣು ಮಿಟುಕಿಸುತ್ತವೆ. ಸುವರ್ಣ ಟಿವಿಯ ಮನೋರಂಜನೆ ವಿಭಾಗ ಉದಯ ಟಿವಿ ನಂತರದ ಎರಡನೆಯ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಅಲುಗಾಡುತ್ತಿರುವ ಜೀಕನ್ನಡ ಟಿವಿ ನಂತರದಲ್ಲಿ ನಾಲಕ್ಕನೇ ಸ್ಥಾನದಲ್ಲಿ ಕುಕ್ಕರಿಸಿರುವ ಈಟಿವಿ ಕನ್ನಡ ಚಾನಲ್ ರಾಮೋಜಿರಾವ್ ಅವರಿಗೆ ಚೂರು ತಲೆನೋವು ತಂದಿದೆ.

ಟಿವಿ9 ಚಾನಲ್ಲಿನಿಂದಲೂ ಪತ್ರಕರ್ತರು ಸುವರ್ಣ ಚಾನಲ್ಲಿಗೆ ಜಂಪ್ ಆಗುತ್ತಾರೆಂಬ ಸುದ್ದಿ ಇದೆ. ಆದರೆ, ನಮ್ಮ ಟಿವಿ ರೌಂಡ್ ಅಪ್ ಬಾತ್ಮೀದಾರರ ಪ್ರಕಾರ, ನಾವು ಟಿವಿ9 ರ ಪರದೆಯ ಮೇಲೆ ನಿತ್ಯ ನೋಡುವ ಪರ್ತಕರ್ತರು ಮತ್ತು ಸುವರ್ಣ ಅಧಿಕಾರಿಗಳ ನಡುವೆ ನಡೆದ ಡೀಲುಗಳು ಕುದುರದೆ ಮಾತುಕತೆಗಳು ನಿಂತಲ್ಲೆ ನಿಂತುಬಿಟ್ಟಿವೆಯಂತೆ. ಈ ಮಧ್ಯೆ, ಪತ್ರಕರ್ತರು ಬೇಕಾಗಿದ್ದಾರೆ ಎಂಬ ಸುವರ್ಣ ಜಾಹಿರಾತಿಗೆ ಓಗೊಟ್ಟು ಸಂದರ್ಶನ, ಲಿಖಿತ ಪರೀಕ್ಷೆ ಬರೆದವರ ಪಟ್ಟಿ ದೊಡ್ಡದಿದೆ. ಆದರೆ, ಅವರಲ್ಲಿ ಯಾರನ್ನೂ ಕೆಲಸಕ್ಕೆ ಇದುವರೆವಿಗೂ ನೇಮಿಸಿಕೊಂಡಿಲ್ಲ.

ಇನ್ ಕಂಬಂಟ್ ಸಂಪಾದಕ ರಂಗನಾಥ್ ಅವರೇ ಆ ಫೈಲನ್ನು ಕೇಳಿ ತರಿಸಿ ನೋಡುವವರೆಗೂ ಸಂದರ್ಶನಕ್ಕೆ ಹಾಜರಾದವರು ಕಾಯಬೇಕಾಗಿದೆ. ಅಷ್ಟೇ ಅಲ್ಲದೆ, ಸದ್ಯ ಸುವರ್ಣದಲ್ಲಿ ಕೆಲಸ ಮಾಡುತ್ತಿರುವ ಮಂದಿ ಹೊಸ ಸಂಪಾದಕರ ಮನೋಧರ್ಮಕ್ಕೆ, ವೃತ್ತಿ ಧೋರಣೆಗೆ ಹೊಂದಿಕೊಳ್ಳುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಶಾಬಾದಿಮಠದ ಗೈಡ್ ಗಳನ್ನು ತಿರುವಿ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+