ಬರಹ ರವಾನಿಸುವ ಅಕ್ಷರ ಸೈನಿಕರಲ್ಲಿ ಸವಿನಯ ವಿನಂತಿ

ಎಸ್ಕೆ. ಶಾಮಸುಂದರ
ಅ) ಲೇಖಕ-ಲೇಖಕಿಯರು ತಮ್ಮ ಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ದಟ್ಸ್ ಕನ್ನಡ ಪ್ರಕಟಣೆಗಾಗಿ ಬರಹ ಕಳಿಸುವಾಗ ಪ್ರತೀಬಾರಿಯೂ, ಇಮೇಲ್ ನಲ್ಲಿ ಈ ವಿವರಗಳನ್ನು ಅಗತ್ಯವಾಗಿ ಬರೆದಿರಬೇಕು. ನಿಮ್ಮ ಸೆಲ್ ಫೋನ್ ನಂಬರು ಕೊಟ್ಟರೆ ಅನುಕೂಲ. ನಿಮ್ಮ ಸಂಕ್ಷಿಪ್ತ ವೃತ್ತಿವಿವರ ನಮೂದಿಸಿದರೆ ಮತ್ತೂ ಒಳ್ಳೆಯದು. ಹೆಚ್ಚಿನ ವಿವರಗಳು ಬೇಕಿದೆ ಎನಿಸಿದಲ್ಲಿ, ಸಮಾಲೋಚನೆ ಅವಶ್ಯವಿದ್ದಲ್ಲಿ ಸಂಪಾದಕರು ನಿಮಗೆ ಕರೆಮಾಡುತ್ತಾರೆ.
ಆ) ಸಂದರ್ಭೋಚಿತವಾಗಿ ಲೇಖಕ-ಲೇಖಕಿಯರ ಭಾವಚಿತ್ರ ಪ್ರಕಟಿಸುವುದಕ್ಕೆ ನಮಗೆ ಸಹಕಾರಿಯಾಗಲು ಬರಹಗಾರರು ತಮ್ಮ ಫೋಟೋ ಲಗತ್ತು ಮಾಡಬೇಕು. ದಟ್ಸ್ ಕನ್ನಡ ಪುಟದಲ್ಲಿ 'ಹೆಸರು ಬೇಡ, ಊರು ಬೇಡ' ಎಂದು ಆಶಿಸುವ ಲೇಖಕರು ತಮ್ಮ ಭಾವಚಿತ್ರವನ್ನು ಕಡ್ಡಾಯವಾಗಿ ಕಳಿಸಬೇಕು.
ಇ) ಬರಹಗಳನ್ನು ಕಳಿಸುವ ಮುಂಚೆ ಮತ್ತೊಮ್ಮೆ ತಾವೇ ಓದಿ, ಪರಿಷ್ಕರಿಸಿ, ಅಗತ್ಯವಿದ್ದರೆ ಮಾರ್ಪಾಡುಗಳನ್ನು ಮಾಡಿದ ನಂತರ ರವಾನಿಸುವುದು ಲೇಸು.
ಈ) ಬರಹ ಎಷ್ಟೇ ಗುಣಮಟ್ಟದ್ದಾಗಿದ್ದರೂ ಕಾಗುಣಿತದ ಬಗ್ಗೆ ತೀರ ತಾತ್ಸಾರವಿರುವ ಬರಹಗಾರರ ನುಡಿ ಕಾಣಿಕೆಗಳನ್ನು ಪ್ರಕಟಣೆಗೆ ಪರಿಶೀಲಿಸಲಾಗುವುದಿಲ್ಲ.
ಉ) ನೀವು ಏನು ಹೇಳಬೇಕೆಂದಿದ್ದೀರೋ ಅದನ್ನು ಆದಷ್ಟೂ ನೇರವಾಗಿ ಬರೆಯಿರಿ. ಅನಗತ್ಯ ಶಬ್ದಾಡಂಬರ, ಪುನರುಕ್ತಿಯನ್ನು ತಪ್ಪಿಸಿ. ಇಂಟರ್ನೆಟ್ ಓದುಗರ ಸೀಮಿತ ಸಮಯದ ಬಗೆಗೆ ಬರಹಗಾರ ಸಮುದಾಯಕ್ಕೆ ಕಾಳಜಿ ಇರಲಿ.
ಊ) ಕನ್ನಡ ನಾಡಿನ ನಾನಾ ಊರು ಕೇರಿಗಳಲ್ಲಿ ಈಗ ಬ್ರಾಡ್ ಬ್ಯಾಂಡ್ ಬಳಕೆ ಹೆಚ್ಚಾಗಿದೆ. ಪರಿಣಾಮವಾಗಿ ಓದುಗರ ಬರಹಗಾರರ ಪ್ರಮಾಣ ದುಪ್ಪಟ್ಟು ಮೂರ್ಪಟ್ಟಾಗಿದೆ. ಗ್ರಾಮಾಂತರ ವರದಿಗಾರರು, ಉತ್ಸಾಹಿಗಳು ನಮ್ಮ ವೆಬ್ ಸೈಟಿಗೆ ಸುದ್ದಿ, ಸುದ್ದಿ ವಿಶ್ಲೇಷಣೆಗಳನ್ನು ಮೇಲಿಂದಮೇಲೆ ರವಾನಿಸುತ್ತಿದ್ದಾರೆ. ಸ್ವಾಗತವೆ. ಅವುಗಳನ್ನು ಯಥೋಚಿತವಾಗಿ ಬಳಸಿಕೊಳ್ಳಲಾಗುವುದು.
-ಗ್ರಾಮೀಣ ಪ್ರದೇಶಗಳ ಸುದ್ದಿ, ಸುದ್ದಿಸಾರ ಕಲೆಹಾಕುವ ವರದಿಗಾರರು ದಯಮಾಡಿ ತಮ್ಮ ತಮ್ಮ ಊರು, ಅಕ್ಕಪಕ್ಕದ ಊರುಗಳ ವಿಷಯ, ವಿಚಾರ, ವಿವಾದಗಳ ಬಗೆಗೆ ಗಮನ ಕೇಂದ್ರೀಕರಿಸಬೇಕಾಗಿ ವಿನಂತಿ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿವಾದಗಳನ್ನು ಕುರಿತಾದ ವಿಶ್ಲೇಷಣೆ ನಮಗೆ ರವಾನಿಸುವುದು ಬೇಡ. ಈ ನಿಯಮಕ್ಕೆ ಕೆಲವು ಅಪವಾದಗಳು ಇವೆ. ಅದು ಸಮಯ, ಸಂದರ್ಭದ ಮೇಲೆ ಅವಲಂಬಿತ.
ಋ) ಒಂದು ವರ್ತಮಾನದ ಬಗೆಗೆ ಅನೇಕರು ಏಕಕಾಲಕ್ಕೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಸಂಪಾದಕೀಯ ಮಂಡಳಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗುತ್ತದೆ. ಉದಾಹರಣೆಗೆ ಪದ್ಮಪ್ರಿಯ ಆತ್ಮಹತ್ಯೆ, ಇಗರ್ಜಿಗಳ ಮೇಲಿನ ದಾಳಿ, ಮತಾಂತರ ಮುಂತಾದ ಖಾರವಾದ ವಿಚಾರಗಳಿಗೆ ಅನೇಕ ಪ್ರತಿಕ್ರಿಯೆಗಳು ಲೇಖನ ರೂಪದಲ್ಲಿ ಹರಿದುಬಂದವು. ಲೇಖಕರ ಅಭಿಪ್ರಾಯಗಳೇನೇ ಇರಲಿ, ಬರಹದ ಗುಣಮಟ್ಟ ಮತ್ತು ತರ್ಕಶುದ್ಧಿಯ ಮಾನದಂಡ ಅನುಸರಿಸಿ ಲೇಖನ ಪ್ರಕಟಗೊಂಡವು. ಹೊಳೆದದ್ದು ತಾರೆ, ಉಳಿದದ್ದು ಆಕಾಶ!
ಎ) ನಮ್ಮ ವೆಬ್ ಸೈಟಿನಲ್ಲಿ ಓದುಗರ ಓಲೆ ಎಂಬ ವಿಭಾಗ ಇದೆ. ಇ-ಮೇಲ್ ಮುಖಾಂತರ ಬರುವ ಪ್ರತಿಕ್ರಿಯೆಗಳನ್ನು ಆರಿಸಿ ಶೋಧಿಸಿ ಆ ವಿಭಾಗದಲ್ಲಿ ಪ್ರಕಟಿಸುವ ಪರಿಪಾಠ ಇಟ್ಟುಕೊಂಡಿದ್ದೆವು. ಬರಬರುತ್ತಾ ಓದುಗರ ಓಲೆಗಳ ಪ್ರಮಾಣ ಅಪಾರವಾಯಿತು. ಅಷ್ಟೊಂದು ಪತ್ರಗಳನ್ನು ಪ್ರಕಟಿಸುವುದಕ್ಕೆ ನಮ್ಮಲ್ಲಿ ಮಾನವ ಸಂಪನ್ಮೂಲದ ಕೊರತೆ ತಲೆದೋರಿತು. ಕ್ರಮೇಣ ಇದಕ್ಕೆ ಪರಿಹಾರ ಹುಡುಕುವ ಯತ್ನದಲ್ಲಿ ತೊಡಗಿದೆವು.
ಏ) ಅಂತಿಮವಾಗಿ ಆಯಾ ಪುಟದಲ್ಲೇ ಓದುಗರು ತಮ್ಮ ಪ್ರತಿಕ್ರಿಯೆಗಳನ್ನು ಇಂಗ್ಲಿಷ್ ಮತ್ತು ಅಥವಾ ಕನ್ನಡದಲ್ಲಿ ದಾಖಲಿಸಲು ನೆರವಾಗುವ ಕಾಮೆಂಟ್ಸ್ ಅಂಕಣ ತೆರೆದೆವು. ಅಂತರ್ಜಾಲ ಕನ್ನಡ ಸಮುದಾಯದಲ್ಲಿ ಎಷ್ಟು ದೃಷ್ಟಿಕೋನಗಳಿವೆಯೋ ಅಷ್ಟೂ ದೃಷ್ಟಿಕೋನಗಳು ಈ ವಿಭಾಗದಲ್ಲಿ ತಮ್ಮತನಗಳನ್ನು ಕಂಡುಕೊಂಡವು, ಕಂಡುಕೊಳ್ಳುತ್ತಿವೆ.
ವಿಸೂ : ದಟ್ಸ್ ಕನ್ನಡ ಹವ್ಯಾಸಿ ಬರಹಗಾರರ ಸಮೂಹ ವಿಶಾಲವಾಗಿದೆ. ಪರಸ್ಪರ ಅನುಕೂಲ, ಅನುಸಂಧಾನಕ್ಕೆ ರೂಪಿತವಾಗಿರುವ ನಿಯಮಗಳನ್ನು ತಪ್ಪದೆ ಪಾಲಿಸುತ್ತಾ ಬಂದಿರುವ ಬರಹಗಾರ ಮಿತ್ರರಿಗೆ ಈ ಮೇಲೆ ತಿಳಿಸಿರುವ ಸೂಚನೆಗಳು ಅನ್ವಯವಾಗುವುದಿಲ್ಲ! ಮುಗಿಸುವ ಮುನ್ನ, ನೀವು ಕಳಿಸುವ ಲೇಖನಗಳನ್ನು ಯುನಿಕೋಡ್, ಬರಹ ಅಥವಾ ನುಡಿ ಬಳಸಿ ಕಳುಹಿಸಬೇಕು.
ಹೆಚ್ಚಿನ ವಿವರಗಳಿಗೆ ಈ ಕೊಂಡಿಯನ್ನು ಕ್ಲಿಕ್ ಮಾಡಿ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications