ಸ. ರಘುನಾಥ ಅಂಕಣ: ನುಡಿಯಲ್ಲಿ ತೆರೆದಿಟ್ಟ ಹುಸಿ ಮರದ ಚಿತ್ರ
ಹುಸಿಯಂಕುರಿಸಿತ್ತು ಹೊಲೆಯನಲ್ಲಿ,
ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ,
ಹುಸಿ ನಾಲ್ಕೆಲೆಯಾಯಿತ್ತು ಸಮಗಾರನಲ್ಲಿ,
ಹುಸಿ ಆರೆಲೆಯಾಯಿತ್ತು ಅಗಸನಲ್ಲಿ,
ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ,
ಹುಸಿ ಸಸಿಯಾಯಿತ್ತು ಹಾದರಿಗನಲ್ಲಿ,
ಹುಸಿ ಗಿಡವಾಯಿತ್ತು ಮದ್ಯಪಾನಿಯಲ್ಲಿ,
ಹುಸಿ ಮರವಾಯಿತ್ತು ಜೂಜುಗಾನಲ್ಲಿ,
ಹುಸಿ ಹೂವಾಯಿತ್ತು ಡೊಂಬನಲ್ಲಿ,
ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ,
ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ,
ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ,
ಇಂತೀ ಹುಸಿಯ ನುಡಿವವರಿಗೆ
ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,
ಪಾದೋದಕವಿಲ್ಲಾಗಿ ಮೋಕ್ಷವಿಲ್ಲ,
ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನ ಶರಣರು
ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು.
ಸಮಾಜ ಬದುಕಿನ ನೆಲದಲ್ಲಿ ನಿಜದ ಬೀಜದ ಬದಲಿಗೆ ಹುಸಿಯ ಬೀಜ ಬಿದ್ದಿದೆ. ಅದರ ಮೊಳಕೆ ಮತ್ತು ಬೆಳವಣಿಗೆ ಆದ ರೀತಿಯ ಚಿತ್ರ ಬಿಡಿಸಲು ಚೆನ್ನಬಸವಣ್ಣನವರು ತೆಗೆದುಕೊಂಡ ಪಟ(ಕ್ಯಾನ್ವಾಸ್) ಮರ. ಮರ ಅಳಿದರೂ ಮರವೆಂಬ ಭಾವಕ್ಕೆ ಅಳಿವಿರದು. ಹಾಗಾಗಿ ಈ ಆಯ್ಕೆಯೇ ನೈಸರ್ಗಿಕವಾದುದು. ಮರ ಯಾರೂ ನೋಡದ್ದಲ್ಲ. ನೋಡುತ್ತಿರುವ ವಸ್ತುವಿನ ಆಯ್ಕೆಯಲ್ಲಿಯೇ ಈ ವಚನಕಾರನ ಜನರನ್ನು ತಲುಪುವ ನೆಲದ ಪ್ರಜ್ಞೆಯದು. ಹೀಗಾಗಿಯೇ ಚೆನ್ನಬಸವಣ್ಣ ಎಲ್ಲ ಸಾಮಾಜಿಕರ ಹೃದಯಕ್ಕೆ ನೇರ ಪ್ರವೇಶಿಸುವ ದಾರ್ಶನಿಕರಾಗಿ ಕಂಡಿದ್ದು.

ಈ ವಚನದ ಕಟ್ಟುವಿಕೆಯಲ್ಲಿ ಮೊಳಕೆಯಿಂದ ಹಣ್ಣಿನವರೆಗಿನ ಕ್ರಮಾನುಕರಣೆಯಿದೆ. ಯಾವ ಹಂತದಲ್ಲೂ ನೈಸರ್ಗಿಕವಲ್ಲದ ಒಂದಂಶವೂ ಇಲ್ಲ. ಬೀಜ ಮೊಳಕೆಯಿಡುವುದು ಎರಡೆರಡು ಎಲೆಗಳಿಂದಲೇ. 'ಹುಸಿ' ಅಂಕರಿಸುವುದು ಕೆಳಮಟ್ಟದಿಂದ, ಅದು ಬೆಳೆದು ವಿಸ್ತರಿಸುತ್ತ ಕಡೆಗೆ ವ್ಯಾಪಕವಾಗುವುದು ಮೇಲಿನ ಮಟ್ಟದಲ್ಲಿ. ಪರಿಣಾಮದಲ್ಲಿ ಇಡೀ ಸಮಾಜವೇ ಇರುತ್ತದೆ.
ವಚನದ ಸಾಲು ಸಾಲಿನಲ್ಲಿ ಸಮಾಜದ ಒಂದೊಂದು ಘಟಕವನ್ನು ಕಾಣುತ್ತೇವೆ. ಅಲ್ಲಿ ಹುಸಿಯ ಹಂತಗಳು ಯಾವುವೆಂಬ ವಿವರಗಳು ಒಂದೊಂದು ಸಾಲಿನಲ್ಲೂ ದೊರೆಯುತ್ತವೆ. ಇಲ್ಲಿ ಹೇಳಿರುವ ಜಾತಿವಾಚಕಗಳು ಆಯಾ ಜಾತಿಗಳಿಗಷ್ಟೇ ಅನ್ವಯವಲ್ಲ; ಸೀಮಿತವಲ್ಲ. ಅದನ್ನು ಹುಸಿಯ ಘಟಕಗಳು ಇಲ್ಲವೆ ಹಂತಗಳೆಂದು ಭಾವಿಸಬೇಕಿದೆ. ನಿಂದೆ ಯಾವ ಶರಣರ ಗುಣವಲ್ಲ. ಲೋಕರೂಢಿಯನ್ನು ಬಳಸುವುದು ಅಪರೂಪಲ್ಲ. ಚೆನ್ನಬಸವಣ್ಣನವರೂ ಇದನ್ನೇ ಮಾಡಿದ್ದಾರೆ. ಇಲ್ಲಿ 'ಹೊಲಸು ತಿಂಬುವವನೇ ಹೊಲೆಯ ...' ಎಂಬ ವಚನವನ್ನು ಪರಿಭಾವಿಸಬೇಕು.
ಜನ ಆದಂತೆ ಆಡಳಿತವೂ ಇರುತ್ತದೆ ಎಂಬುದಕ್ಕೆ ನಮ್ಮ ವರ್ತಮಾನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಈ ವಚನ ಈ ವರ್ತಮಾನಕ್ಕೆ ಅಂದು ಚೆನ್ನಬಸವಣ್ಣನವರು ತೋರಿದ ಕಾಣ್ಕೆ, ಭವಿಷ್ಯವಾಕ್ಕು, ಕಾಲಜ್ಞಾನವೂ ಆಗಬಹುದಾದುದು. 'ಯಥಾ ರಾಜಾ ತಥಾ ಪ್ರಜಾ' ಎಂಬ ನಾಣ್ಣುಡಿ ಇಲ್ಲಿ ಅವರೋಹಣ ಕ್ರಮದಲ್ಲಿದೆ. ಆನರಲ್ಲಿನ 'ಹುಸಿ'ಯಂತೆ ಅರಸ(ಆಡಳಿತ). ಆ ಎಲ್ಲ ಹುಸಿ 'ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ'. ಇದು ಪ್ರಮುಖವಾದ ಮಾತು. ಆ ತೊಟ್ಟು ಕಳಚಿದ ಹುಸಿಯ ಹಣ್ಣು ಬೀಳುವುದು ಸಮಾಜದ ಮೇಲೆಯೇ. ಅದು ಕೊಳೆತ ಹಣ್ಣೇ ಆಗಿರುತ್ತದೆ. ಹುಸಿಹಣ್ಣಿಗೆ ನಿಜಹಣ್ಣಿನ ಪರಿಮಳ, ಸವಿ ಇರದು. ಸುಳ್ಳು ಪರಿಮಳವೂ ಅಲ್ಲ, ಸವಿಯೂ ಅಲ್ಲ.
ಹುಸಿಯ ಬೀಜ ಎಲೆಗಳಿಡುವವರೆಗಿದು ಒಂದು ಹಂತ. ಇಲ್ಲಿ ಜನ- ಜಾತಿಯಿದೆ. ಸಸಿ, ಗಿಡ, ಮರವಾಗುವುದು ಇನ್ನೊಂದು ಹಂತ. ಇಲ್ಲಿ ಬಂದಿರುವುದು ವಿಷಯ ವ್ಯಸನಿಗಳು. ಹೂ-ಕಾಯಿ ಹಂತದಲ್ಲಿ ವೃತ್ತಿ-ಕಸುಬುದಾದರು ಇದ್ದಾರೆ. ಹಣ್ಣಿನ ಹಂತದಲ್ಲಿ 'ವ್ಯಭಿಚಾರ'. ಆ ಹಣ್ಣು ಮಾಗಿ ಕಳಚು ಕಳಚುವುದು 'ಅರಸ'ನಲ್ಲಿ. ಇಲ್ಲಿಯೇ ಇರುವುದು ಮಾರ್ಮಿಕತೆ. ಎಲ್ಲ ಸುಳ್ಳುಗಳು ಇಲ್ಲಿ ಒಂದಾಗವೆ. ಹೀಗೆ ಒಗ್ಗಟುಗೊಳ್ಳುವ ಸುಳ್ಳು ಎಲ್ಲರಿಗೂ, ಎಲ್ಲದಕ್ಕೂ ಅಹಿತ, ಅಪಾಯ.
ವಚನದ ಕಡೆಯ ಹಂತದಲ್ಲಿ ಚೆನ್ನಬಸವಣ್ಣನವರು ಹುಸಿಯಾಡುವವರು ಯಾವುದಕ್ಕೆ ಎರವಾಗುತ್ತಾರೆ ಎಂದು ತಿಳಿಸು(ಎಚ್ಚರಿ)ವುದು ಹೀಗೆ, 'ಇಂತೀ ಹುಸಿಯ ನುಡಿವವರಿಗೆ/ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ,/ ಪಾದೋದಕವಿಲ್ಲಾಗಿ ಮೋಕ್ಷವಿಲ್ಲ'. ಇಂತಹವರು 'ಹುಸಿ'ಯರು ಎಂದು ತೋರ್ಬೆರಳಿಟ್ಟು ತೋರಿದ ಮೇಲೆ ಹುಸಿಯ ಬಿಟ್ಟವರಾರು, ಅವರು ಏನಾದರೆಂದು ಚೆನ್ನಬಸವಣ್ಣ ಶಂಕಾತೀತವಾಗಿ ಹೇಳುತ್ತಾರೆ. 'ನಮ್ಮ ಕೂಡಲಚೆನ್ನಸಂಗಯ್ಯನ ಶರಣರು / ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು' ಇಲ್ಲಿರುವ 'ಬಿಟ್ಟು, ಕಳೆದು' ಎಂಬೆರಡು ಕ್ರಿಯಾಪದಗಳ ಬಳಕೆ ವಿಶೇಷ ಗಮನಕ್ಕೆ ಅರ್ಹವಾದುದು. ಶರಣರು ಹುಸಿಯನ್ನು ಬಿಟ್ಟವರಷ್ಟೇ ಅಲ್ಲ, ಅದನ್ನು ಕಳೆದರು ಎಂಬುದು ಮುಖ್ಯವಾದುದು.
ಚೆನ್ನಬಸವಣ್ಣನವರ ಕುರಿತು ಬಸವ, ಅಲ್ಲಮ, ಅಕ್ಕರಾದಿಯಾಗಿ ಈಗಿನವರು ಏನೇನೆಲ್ಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವರೋ ಅವುಗಳೊಂದಿಗೆ ಆತ ಶರಣರು, ಆಧಿಕ್ಯರಿಂದ ಮೊದಲುಗೊಂಡು ಜನಸಾಮಾನ್ಯರ ಜೀವನ 'ಶೀಲ'ದ ನಿತ್ಯದನುಸಂಧಾನಿಯೂ ಹೌದು.
Recommended Video
ಚೆನ್ನಬಸವಣ್ಣನವರ ವಚನಗಳಲ್ಲಿ ಗಮನಕ್ಕೆ ಬರುವ ಇನ್ನೊಂದು ಅಂಶವನ್ನು ಕಡೆಯ ಮಾತಾಗಿ ಹೇಳಬೇಕು. ಇತರೆ ವಚನಕಾರರಂತೆ ಅವರೂ ಕಿರಿರೂಪದ ವಚನಗಳನ್ನು ಬರೆದವರೇ. ಆದರೆ ಅವರ ದೀರ್ಘವಚನಗಳೂ ಸಾಕಷ್ಟಿವೆ. 'ಭವಿಷ್ಯಕ್ಕೆ ಹೇಸಿ ಭಕ್ತನಾಗಬೇಕೆಂಬಾತನು' ಎಂಬ ವಚನೆ ಬಹುದೀರ್ಘವಾದುದು. 'ತಾರಕಾಕೃತಿ, ದಂಡಾಕೃತಿ, ಕುಂಡಲಾಕೃತಿ, ... 'ಇದೂ ದೀರ್ಘವೇ. ಇವುಗೊಳಿಟ್ಟಗೆ ಮತ್ತೂ ಹಲವು ದೀರ್ಘ ವಚನಗಳಿವೆ. ಲಯ, ಗತಿ ಶೈಲಿಯಲ್ಲಿ ಕಥನಕವಿತಾ ಛಾಯೆ ಕಂಡುಬರುತ್ತದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications