ಮದುವೆಗಿನ್ನು ಸಮಯವಿದೆಯೆಂದು ಅಪ್ಪ-ಅಮ್ಮನೂ ರೇಗಿಸುವರು ವಸಂತ
ಗಂಧ ಸುಗಂಧರಾಜ ವಸಂತ
ಕುಶಲವೆ?
ಕಾಗದ ಮುಗಿಯದೋ ಅನ್ನಿಸುವಂತಿದೆ. ಓದಿ, ಓದುತ್ತಲೇ ಇದ್ದೇನೆ. ಇನ್ನೆಷ್ಟು ದಿನ ಮಗಳು ಈ ಮನೆಯಲ್ಲಿ ಎಂದು ಅಮ್ಮ ಒಂದೂ ಕೆಲಸ ಹೇಳುತ್ತಿಲ್ಲ: ಮಾಡಲಂತೂ ಬಿಡುತ್ತಿಲ್ಲ. ಅಪ್ಪನದಂತೂ ಬರೀ ಉಪಚಾರವೇ. ನಡುನಡುವೆ ನಿನ್ನ ಮಾತೇ. ನಮ್ಮ ಅಳಿಯನಂತೂ ಚೊಕ್ಕಟ ಬಂಗಾರ ಅನ್ನುತ್ತಲೇ ಇರುವ. ನನಗಾಗ ಕೋಪ. ನಾನೇನು ಹಿತ್ತಾಳೆಯೆ ಅನ್ನುವೆ.
ಆಗ ಬಳಿ ಬಂದು ಮುಡಿ ಮೂಸಿ, ತಲೆ ನೇವರಿಸಿ, ನೀನು ಆ ಬಂಗಾರಕ್ಕೆ ಮೆರುಗು ಮಗಳೇ ಎಂದು ಕಣ್ಣು ತುಂಬಿಕೊಳ್ಳುವ. ನಿನ್ನ ಬಿಟ್ಟಿರಲಾರೆ, ಇವರ ಅಗಲಲಾರೆ ಅನ್ನಿಸುವುದು. ಎಂಥ ಸಂದಿಗ್ಧತೆ ಹೆಣ್ಣ ಬಾಳಿನಲ್ಲಿ? ಆದರೂ ಆಯ್ಕೆ ನಿನ್ನತ್ತಲೇ. ತವರಿನವರ ಪ್ರೀತಿ ಸದಾ ಹಸುರೇ ಎಂಬ ಸಮಾಧಾನದಲ್ಲಿ ಎಷ್ಟು ಸುಖ!
ಪ್ರೀತಿ, ತುಂಟತನ ತುಂಬಿದ ನಿನ್ನ ನುಡಿಗಳು ನನ್ನ ಮನಸಿನಲ್ಲಿ ಉಕ್ಕಿಸಿದ ಭಾವನೆಗಳನ್ನು ಮಾತುಗಳಲ್ಲಿ ಹೇಳಲಾಗದೆ ಸೋಲುತ್ತಿರುವೆ. ನೀನಿದ್ದಿದ್ದರೆ ಎದುರಲ್ಲಿ ಅಪ್ಪಿ ಮುದ್ದಿಸಿ, ನನ್ನ ಭಾವನೆಗಳಿಗೆ ಅರ್ಥ ತುಂಬುತ್ತಿದ್ದೆ. ಎಲ್ಲಿ ಹೋದಾವು ಎದೆಯಿಂದ ದೂರ? ನಿನ್ನ ಕೂಡುವ ಸಮಯಕ್ಕೆ ಕಾಯ್ದಿಟ್ಟ ಭಾವಗಳು ಹರಿಯುವುವು ಮಳೆಗಾಲದ ಹೊಳೆಯಾಗಿ. ಎದೆಯಲ್ಲಿ ಸದಾ ವಸಂತಗಾನ.

ದಿನವೊಂದಕ್ಕೆ ನಲವತ್ತೆಂಟು ಗಂಟೆ ಅನಿಸಿದ್ದು ಮುಹೂರ್ತ ನಿಶ್ಚಯವಾಗಿದೆಯೆಂದು ಅಪ್ಪ ತಿಳಿಸಿ, ನಿನ್ನ ಕಾಗದವೂ ಬಂದ ಮೇಲೆ. ಗೋಡೆಯಲಿ ದೊಡ್ಡ ಗಡಿಯಾರವಿದ್ದರೂ ಅಮ್ಮನನ್ನು ಕೇಳುವೆ 'ಟೈಂ ಎಷ್ಟಾಯಿತು?' ಎಂದು. ಅವಳದೂ ತುಂಟತನವೇ. ಗಡಿಯಾರ ನಿಂತಿದೆ. ಅದು ಚಲಿಸುವುದಿನ್ನು ನೀನು ಹಸೆಯೇರಿ ವಸಂತನ ಪಕ್ಕ ಕುಳಿತಾಗಲೇ.
ಅಪ್ಪನೇನು ಕಡಿಮೆಯಂತೀ. ಮದುವೆ ದಿನಕ್ಕಿನ್ನು ಆರು ತಿಂಗಳಿದೆ ಮಗಳೆ. ನೀನು ಹೂಂ ಅನ್ನು ಈಗಲೇ ಬಿಟ್ಟುಬರುವೆ ನಿನ್ನ ಅತ್ತೆ ಮನೆಗೆ. ವಾರವನ್ನು ತಿಂಗಳುಗಳಾಗಿಸುತ್ತಾನೆ ಅಪ್ಪ. ಅವರ ಮಾತು ನನ್ನ ಪಾಲಿಗಂತೂ ನಿಜವೇ ವಸಂತ. ಸಮಯ, ದಿನಗಳು ಅತಿ ಅತೀ ನಿಧಾನ ಚಲಿಸುತ್ತಿವೆ, ಚಲನೆ ಗೋಚರವಾಗದ ಭೂಮಿಯಂತೆ. ಹೀಗನಿಸುವಂತೆ ಮಾಡಿರುವವನು ನೀನೇ.
ಹಗಲು ಓದುವ ನಿನ್ನೋಲೆಗಳು ಇರುಳಲ್ಲಿ ಹಾಡುಗಳಾಗಿ ಕೇಳಿಸುವುವುವೆಂದರೆ ನಂಬು. ಸುಡು ಬಿಸಿಲಿನಂತೆ ಬೆಳದಿಂಗಳನ್ನು ಹರಡುವ ಚಂದ್ರನನ್ನು ಕಠಿಣಾತ್ಮನೆಂದು ನಿಂದಿಸಿದ್ದು ಅದೆಷ್ಟೋ ದಿನಗಳು. ಬೇಗ ಬೇಗ ಹೋಗಿ ಸೂರ್ಯನನ್ನು ಕಳಿಸು ಎಂದು ಬೇಡಿದ್ದೇನೆ. ಅಷ್ಟು ನಿಧಾನ ನಡೆಯುತ್ತೀಯಲ್ಲ, ನೀನೇನು ಕುಂಟನೇ? ಬಿರಬಿರ ಹೆಜ್ಜೆ ಹಾಕಿ ಚಂದ್ರನನ್ನು ಕಳಿಸಬಾರದೆ ಎಂದು ನಾನು ಸೂರ್ಯನ ನಿಂದಿಸದ ಹಗಲು ಇಲ್ಲವೆನ್ನು. ಅದರೆ ಅವರಿಬ್ಬರೂ ಕಿವುಡರೇ ನನ್ನ ಪಾಲಿಗೆ. ಹೀಗೆ ಕಳೆಯುತ್ತಿದೆ ಪ್ರಿಯ ವಸಂತ ಈಗ ನನ್ನ ದಿನಗಳು. ನಿನಗೆ ಈ ಸಂಕಟವಿಲ್ಲದಿದೆಯೆ?
ಬೆನ್ನ ಮೇಲೆ ದಿನಗಳ ಹೊತ್ತು
ಗಾಳಿ ವೇಗದಲ್ಲಿ ಓಡುವಂಥ
ಕುದುರೆಯ ಕಳಿಸೊ ಅರಸ ಬೇಗ
ತಾಳೆಲಾರೆನೊ ವಿರಹದ ನೋವ
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications