ಓ ಮಂಚವೇ ಮೊದಲ ರಾತ್ರಿ ಕಳೆದವರ ಅದೆಷ್ಟು ಮಂದಿಯ ಕಂಡಿರುವೆ, ಹೇಳು
ಮಕರಂದವ ಜೇನು ಮಾಡಿದವನೇ,
ಒಲುಮೆಯ ವಸಂತನೇ
ಕುಶಲವೆ?
ನಿನ್ನ ಹೃದಯವ ಪರಿಮಳಿಸುವಂತೆ ಮಾಡಿದ ದವನ ಮರುಗಕ್ಕೆ ನನ್ನ ಕೃಜ್ಞತೆ. ನಿನ್ನೋಲೆಯಲ್ಲಿ ನೀನೇ ಪರಿಮಳವಾದಂತೆ ಅನ್ನಿಸಿದ್ದು ನಿಜ. ಪ್ರೀತಿಯೇ ಇಲ್ಲಿ ಪರಿಮಳದ ರಾಗದಲಿ ಹಾಡಿದೆ. ಇದು ಹೊಸ ರಾಗನುಭವದಿ ಅನುರಾಗದ ಸುಖೋಷ್ಣತೆ.
ನೀ ಬರೆದೋಲೆ ಓದುವಾಗ ಸಂಜೆ. ಆಕಾಶ ನೋಡಿದೆ. 'ಮುಗಿಲ ಮಾರಿಗೆ ರಾಗರತಿಯ ನಂಜು ಏರಿತ್ತ' ಎಂಬ ಬೇಂದ್ರೆಯವರ ಕವಿತೆ ನೆನಪಿಸಿತು ಬಾನು ಮತ್ತು ಆ ಸಂಜೆ.

ಮನೆಯ ಕೈತೋಟದ ಮಲ್ಲಿಗೆ ಗಿಡ ಹೂತುಂಬಿ, ಏನೇ ಶಕೂ, ನಿನ್ನ ವಸಂತನ ನೆನಪಿನಲ್ಲಿ ನನ್ನೊಡನೆ ಠೂ ಬಿಟ್ಟಂತಿದೆ. ಬೆಳಗಾಗುತ್ತಲೇ ಬಂದು ನೀರೆರೆಯುತ್ತಿದ್ದೆ. ಹೊತ್ತು ಇಳಿಯುವಾಗ ಮೊಗ್ಗು ಬಿಡಿಸಿ ಜಗುಲಿಯಲಿ ಕುಳಿತು ನನ್ನೆದುರೇ ದಂಡೆ ಕಟ್ಟಿ ಮುಡಿದು ನನ್ನತ್ತ ಮುಗುಳು ನಗೆ ಬೀರುತ್ತಿದ್ದೆ. ಈಗ ನಿನ್ನ ವಸಂತನೇ ನನ್ನ ಜಾಗವನ್ನು ಆಕ್ರಮಿಸಿಬಿಟ್ಟಿರುವ. ಇದಕ್ಕಾಗಿ ಇದೋ ನನ್ನ ಶಾಪ ನಿನಗೆ, ಆ ನಿನ್ನ ವಸಂತನು ನಿಮ್ಮ ಮೊದಲ ರಾತ್ರಿಯಲ್ಲಿ ನನ್ನನ್ನು ಬೊಗಸೆಯಲಿ ತುಂಬಿ ನಿನ್ನ ಮೇಲೆರಚಲಿ. ಅವನಿಗೆ ನನ್ನ ಕಂಪಿನ ಅಮಲೇರಿ ಇಡೀ ರಾತ್ರಿ ನಿನ್ನ ನಿದ್ದೆ ಕೆಡಿಸಲಿ ಎಂದು ಶಪಿಸಿ, ಅರಿಯದ ಆ ರಾತ್ರಿಯ ಕುರಿತು ಕುತೂಹಲ ಕೆರಳಿಸಿತು.
ಇನಿದನಿಯ ಇನಿಯ ಸುಂದರ ವಸಂತಾ, ರಾತ್ರಿ ಮಂಚದ ಮೇಲೆ ಕುಳಿತು 'ಓ ಮಂಚವೇ, ಮೊದಲ ರಾತ್ರಿ ಕಳೆದವರ ನೀನು ಕಂಡಿರುವೆ. ಅದನ್ನು ವಿವರಿಸುವೆಯ' ಎಂದು ಕೇಳಿದೆ. ಅದು ಹೇಗೆ ಹೇಳುವುದೆಂದು ಯೋಚಿಸುತ್ತಿತ್ತೇನೊ? ಆಗ ಕೋಣೆ ತುಂಬ ಸುಗಂಧ ತುಂಬಿತು. ನೋಡಿದೆ. ಸುಗಂಧಗಳ ಕುದುರೆ!
ಬೆನ್ನನೇರು ಎಂಬಂತೆ ಕೆನೆಯಿತು. ಏರಿ ಕುಳಿತೆ. ಕ್ಷಣದಲ್ಲೇ ಅದು ನೀನು ಹೇಳಿದ ದವನದ ತೋಟದ ಮಧ್ಯೆ ಇಳಿಸಿತು. ಓಹೋ, ನೀನೆಯೋ ಶಕುಂತಲೆ ಎಂದು, ನೀನು ಓದಿದ್ದ ನನ್ನ ಪತ್ರದ ಪದಗಳನ್ನು ಪಟಪಟ ನುಡಿದು ನಾಚುವಂತೆ ಮಾಡಿತು. ನಾವು ನಿನ್ನ ಮದುವೆ ಮಂಟಪದ ಬಾಗಿಲಲ್ಲಿದ್ದು ನಿಮ್ಮವರ ಸ್ವಾಗತಿಸುವೆವೆಂದು ಹೇಳಿ ಬೀಳ್ಕೊಟ್ಟವು. ಅಲ್ಲಿಂದ ಆ ಕುದುರೆ ನಿನ್ನ ಮನೆಯಂಗಳಕೇ ಕರೆತಂದು ಇಳಿಸಿತು. ಮರುಗ ನಕ್ಕು ನಿನ್ನ ಕೋಣೆಯ ತೆರೆದ ಕಿಟಕಿಯತ್ತ ತನ್ನ ಸುಗಂಧದ ತೋರುಬೆರಳು ತೋರಿತು.
ವಸಂತಾ, ಏನೆಂದು ವರ್ಣಿಸಲಿ ಆ ದೃಶ್ಯ? ನಿನ್ನ ಕೋಣೆಯ ಕಿಟಕಿಗೆ ಸರಿಯಾಗಿ ಚಂದ್ರ ನಿಂತುಬಿಟ್ಟಿದ್ದ. ಬೆಳದಿಂಗಳ ಬೆಳಕು ನೀನಾಗಿ ಮಲಗಿದ್ದೆ. ನನಗೆ ಮದನಮೋಹನರಾಜನಾಗಿ ಕಂಡೆ. ಈ ದೂರ ಸಹಿಸಲಾಗದಾದೆ. ಬಳಿಗೋಡಿ ಬಂದೆ. ನಿನ್ನ ಅಪ್ಪಿ .......
ಏನು ಕಂಡಿತೋ ನಮ್ಮ ಸಾಕುನಾಯಿ? ಬೊಗಳುತ್ತಿತ್ತು. ಜೇನಿನಂಥ ಕನಸನ್ನು ಅದರ ಬೊಗಳು ನೆಕ್ಕಿಬಿಟ್ಟಿತ್ತು. ನಿದ್ದೆ ಹತ್ತದೆ ಎದ್ದು ಕುಳಿತೆ. ಆಗ ಮನಸು ನುಡಿದ ಪದ್ಯ-
'ಕಾಮನಬಿಲ್ಲಿನೇಳು ಬಣ್ಣಗಳಲ್ಲಿ
ಎದೆಯ ಕನಸುಗಳನು ತುಂಬಿ
ಚೆಲ್ಲಿಬಿಟ್ಟೆ ಗಾಳಿಗೆ
ಬರಲು ನಿನ್ನ ಮನದ ಸೀಮೆಗೆ.'
-
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು -
ಶಿಕ್ಷಕಿಯರು ಹೆರಿಗೆ ರಜೆಗಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಮಂಜೂರು; 5 ವರ್ಷ ಇಚ್ಛಿಸಿದ ಶಾಲೆಯಲ್ಲೇ ಕೆಲಸಕ್ಕೆ ಅವಕಾಶ -
SSLC Exam 2026 : ಮಾರ್ಚ್ 18ರಿಂದ ಪರೀಕ್ಷೆ; ವಿದ್ಯಾರ್ಥಿಗಳೇ, ನಿಮ್ಮ ಕೊನೆ ಕ್ಷಣದ ಸಿದ್ಧತೆಗೆ ಹೀಗಿರಲಿ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
Shame on You: ಸೆರಗ ಸರ್ಸೆ ಡಬಲ್ ಮೀನಿಂಗ್ ಹಾಡಿಗೆ ಕನ್ನಡಿಗರ ಆಕ್ರೋಶ-ಶೋಭಾ ಮಳವಳ್ಳಿ ಬರಹ -
ನಾಳೆಯಿಂದ ರಾಜ್ಯಾದ್ಯಂತ SSLC ಪರೀಕ್ಷೆ: ಟೆನ್ಷನ್ ಬಿಡಿ, ರಿಲಾಕ್ಸ್ ಆಗಿರಿ; ಕೊನೆಯ ಕ್ಷಣದ ಸಿದ್ಧತೆಗೆ ಇಲ್ಲಿವೆ ಟಿಪ್ಸ್ -
Bengaluru Rain: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ: ಯುಗಾದಿಗೆ ಮೊದಲ ಮಳೆ; ರಾಜ್ಯಕ್ಕೆ ಶುಭಸೂಚಕ












Click it and Unblock the Notifications