ಸ ರಘುನಾಥ ಅಂಕಣ; ಸುನಂದಾಪಹರಣ...
ನಾಟಕಕ್ಕೆ ಮುಂಚೆ ನಡೆದುಕೊಂಡು ಬಂದ ಸಂಪ್ರಾಯದಂತೆ ಗೆಜ್ಜೆಪೂಜೆ. ಅದು ರಂಗಪ್ರವೇಶಕ್ಕೆ ಪೂರ್ವ ಸಿದ್ಧತೆ. ಎಲ್ಲ ನಟರ ಹಾಜರಿ ಕಡ್ಡಾಯ. ವಾದ್ಯಗಳ ಸಹಿತ ಓರೆಕೋರೆಗಳನ್ನು ತಿದ್ದಿಕೊಳ್ಳುವ ಪೂರ್ಣಪ್ರಮಾಣದ ಅಂತಿಮ ತಾಲೀಮು. ಅರೆಬರೆ ಮೇಕಪ್ಪು ಇರುವುದೂ ಉಂಟು. 'ಇಟ್ನೊತ್ತು' (ರಾತ್ರಿಯೂಟದ ಸಮಯ) ಮುಗಿದಾಗ ಶುರುವಾಗುವುದು. ಹಾಗೆಯೇ ಆಯಿತು.
ಗಣಪತಿ ಪೂಜೆ ಮುಗಿದು, ಸೂತ್ರದಾರ, ಸಖಿ ಪ್ರವೇಶವಾಯಿತು. ಕಥಾ ಸಂದರ್ಭದೊಂದಿಗೆ ಪಾತ್ರಗಳ ಪರಿಚಯ ಮುಗಿದು ಸರಿಯುತ್ತಿದ್ದಂತೆ ಶಕುಂತಲೆ ತನ್ನ ಸಖಿಯೊರಡನೆ ಪ್ರವೇಶಿಸುವಳು.

ಶಕುಂತಲೆ: ಪ್ರಿಯವ ನುಡಿವ ಪ್ರಿಯಂವದೆ
ಅನುಪಮ ಗುಣವತಿ ಅನಸೂಯೆ
ಕೊಳದ ಅಲೆಯ ಶ್ರುತಿಯ ಹಿಡಿದು
ಬನದ ಸುಮಕೆ ಭ್ರಮರ ಬರುವ ಗೀತೆ ಹಾಡಿರೆ
ಪ್ರಿಯಂವದೆ: ನೈದಿಲೆಯ ದಳದ ಮೇಲೆ
ಮಾಂದಳಿರ ಲೇಖನಿಯಲಿ
ಬೆಳದಿಂಗಳ ಶಾಹಿ ಮಾಡಿ
ಪ್ರಣಯ ಗೀತೆ ರಚಿಸುತಿರಲು ಚಂದಿರ
ಅನಸೂಯೆ: ಮೂರು ಗಿಳಿಯ ಬಂಡಿಯೇರಿ
ಜಲ್ಲೆಕಬ್ಬು ಬಿಲ್ಲು ಹಿಡಿದು
ಬಾಣವೆಸೆಯೆ ಪ್ರಣಯಗೀತೆ
ಆದುದಲ್ಲೆ ವಿರಹಗೀತೆ.
ಶಕುಂತಲೆ: ಭ್ರಮರ ಭ್ರಮಣ ನಾದ
ಯಾವ ಸುಮವು ಕರೆದುದೊ?
ಅನಸೂಯೆ: ಇರುಳು ಕಣೆ ಮರುಳು ಗೆಳತಿ
ಜೊನ್ನವೇನು ಜೇನೆ?
ಪ್ರಿಯಂವದೆ: ವಿಕಸಿತ ನಿನ್ನ ಎದೆಯ ಸುಮಗಂಧಕೆ
ಬಾನ ಕರಿಮುಗಿಲು ದುಂಬಿಯಾದುದೊ
ಅನಸೂಯೆ: ಇರುಳು ಕೂಡ ಹಗಲು ಎನಿಸಿತೊ
ಯಾರ ಎದೆಗೆ ನಿನ್ನ ಸುಳಿವು ಕೊಡುವುದೊ?
ಸಖಿ ಸೂತ್ರಧಾರರ ಕಥನ ರೀತಿ, ಇವರ ಗಾನಭಾವ ಲಾಸ್ಯ ನರಸಿಂಗರಾಯನಿಗೆ ತೃಪ್ತಿ ತಂದಿತು. ರಾತ್ರಿ ಎರಡು ಗಂಟೆಯವರೆಗೆ ನಡೆದ ತಾಲೀಮಿನಿಂದ ನಾಟಕ ನಾಲ್ಕೂರಿನ ಮಾತಾಗುವುದು ನಿಜ ಎಂದು ನರಸಿಂಗರಾಯ ಮತ್ತು ಹಿರಿಯರಲ್ಲಿ ವಿಶ್ವಾಸ ಹುಟ್ಟಿಸಿತು. ಸುನಂದ ಮುನೆಕ್ಕನೊಡನೆ ಮನೆಯತ್ತ ಹೊರಟಳು.
ಅರ್ಧ ದಾರಿಯಲ್ಲಿರುವಾಗ ಕಾರೊಂದು ಬರ್ರನೆ ಬಂದು ಅವರ ಪಕ್ಕ ನಿಂತಿತು. ದಡಕ್ಕನೆ ಹೊರಬಂದ ಇಬ್ಬರು ಮುನೆಕ್ಕನನ್ನು ಜೋರಾಗಿ ದೂಡಿ, ಸುನಂದಳನ್ನು ಎಳೆದು ಕಾರಿಗೆ ತುಂಬಿಕೊಂಡ ಕೂಡಲೆ ಕಾರು ವೇಗವಾಗಿ ಹಿಂದಕ್ಕೆ ಹೋಗಿ ಉತ್ತರದ ದಾರಿಯಲ್ಲಿ ಹೊರಟಿತು. ಮುನೆಕ್ಕನ ಕೂಗಾಟ, ಕಾರಿನ ಸದ್ದು ಕೇಳಿ ಮನೆಗಳತ್ತ ಹೊರಟಿದ್ದವರು ಓಡಿ ಬಂದರು. ಮುನೆಕ್ಕ ಒಂದೇ ಉಸಿರಿನಲ್ಲಿ ನಡೆದುದನ್ನು ಹೇಳಿ ಬಿಕ್ಕತೊಡಗಿದಳು.
ಆ ದಾರಿಯಲ್ಲಿ ಕಾರು ಊರಿನಂಚಿನವರೆಗೆ ಹೋಗಬಹುದಿತ್ತು. ಅಲ್ಲಿಂದ ಪೂರ್ವಕ್ಕೆ ತಿರುವು ಪಡೆದು ಊರಿನ ಒಳಗಿನಿಂದಲೆ ರಸ್ತೆಗೆ ಹೋಗಬೇಕಿತ್ತು. ದಾರಿ ತಪ್ಪಿದರು ಹಲಾಲಕೋರರು. ಬೇಗ ಓಡಿ ಅಡ್ಡಗಟ್ಟಿ ಎಂದ ಬೀರಣ್ಣ. ಕೆಲವರು ಅತ್ತ ಓಡಿದರು. ಅಷ್ಟರಲ್ಲಿ ಉಳಿದವರು ದೊಣ್ಣೆಗಳನ್ನು ತರಲು ಓಡಿದರು. ಈ ಗದ್ದಲಕ್ಕೆ ಮನೆಗಳಲ್ಲಿದ್ದವರು ಹೊರಬಂದರು.
ಕಾರು ಜನರ ಮೇಲೆಯೇ ನುಗ್ಗುವಂತೆ ಬರುತ್ತಿತ್ತು. ಜನರ ದೊಡ್ಡ ಗುಂಪಾದನ್ನು ಕಂಡ ಡ್ರೈವರನ ತೊಡೆಯಲ್ಲಿ ನಡುಕ ಹುಟ್ಟಿ, ನಿಯಂತ್ರಣ ತಪ್ಪಿ, ಕಾರು ಮಲ್ಲಪ್ಪನ ಅಂಗಳದಲ್ಲಿದ್ದ ಗಾಣದ ಕಲ್ಲಿಗೆ ಡಿಕ್ಕಿ ಹೊಡೆದು ನಿಂತಿತು. ಜನರ ಗುಂಪಿನಿಂದ ತಪ್ಪಿಸಿಕೊಳ್ಳುವುದು ಕಾರಿನಲ್ಲಿದ್ದವರಿಗೆ ಸಾಧ್ಯವಾಗಲಿಲ್ಲ. ಸುನಂದಳನ್ನು ಮೋಟಪ್ಪ ಕಾರಿನಿಂದ ಇಳಿಸಿದ ಕೂಡಲೆ ಪಿಲ್ಲಣ್ಣ, ಬೋಡೆಪ್ಪ, ರಂಗ ಕೈಲಿದ್ದ ದೊಣ್ಣೆಗಳಿಂದ ಕಾರಿನ ಗಾಜುಗಳನ್ನು ಒಡೆಯಲು ಮುಂದಾದರು. ಅಪ್ಪಯ್ಯ ಅವರನ್ನು ತಡೆದ.
ಡ್ರೈವರು ಕುಕ್ಕರಗಾಲಿನಲ್ಲಿ ಕುಳಿತು, ಕೈ ಮುಗಿದು, ನನಗೆ ಇಂಥ ಕೆಲಸಕ್ಕೆಂದು ತಿಳಿಯದು. ಹುಡುಗಿಯೊಬ್ಬಳ ತಾಯಿ ಆಸ್ಪತ್ರೆಯಲ್ಲಿ ಸೀರಿಯಸ್ಸು. ಕರೆತರಬೇಕೆಂದು ಹೇಳಿದ್ದರಿಂದ ಬಂದೆ. ನನ್ನನ್ನು ಬಿಟ್ಟುಬಿಡಿ. ಕಾರಿಗಾಗಿರುವ ಡ್ಯಾಮೇಜಿನಿಂದ ನನ್ನ ಎರಡು ತಿಂಗಳ ಸಂಬಳ ಹೋಗುತ್ತೆ. ಹೆಂಡತಿ ಮಕ್ಕಳಿರುವ ಬಡವ ಎಂದು ತೆಲುಗಿನಲ್ಲಿ ಅಂಗಲಾಚಿದ. ಅದು ನಿಜ ಅನ್ನಿಸಿ ಹೋಗೆಂದು ಹೇಳಿದರು. ಪ್ರಯಾಸದಿಂದ ಕಾರನ್ನು ಚಾಲನೆಗೆ ತಂದು ಹೊರಟು ಹೋದ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications