ಮಿಲನದ ನಿರೀಕ್ಷೆಯಲ್ಲಿ ಕಾಡುಹಕ್ಕಿ

ಗಿಡಗೆಟಿಗಳ ಮೇಲೆಲ್ಲ ಇಬ್ಬನಿ ಚಿಮುಕಿಸಿದಂತೆ. ಈ ಚಳಿಗಾಲದ ಸೊಬಗೇ ವಿಭಿನ್ನ. ನೀನು ಜೊತೆಯಲ್ಲಿರಬೇಕು ಅನ್ನಿಸುತ್ತದೆ. ಹಾಗೆ ತುಂಬ ಹೊತ್ತು ನಡೆದಾಡಿ ಹಿಂತಿರುಗಿದ ಮೇಲೆ ಒಂದು ನಿರ್ವಿಘ್ನ ಸ್ನಾನ. ಎದೆ, ಬೆನ್ನು, ತೋಳು, ತೊಡೆ ಹಿತವಾದ ಬಿಸಿ ನೀರಿನಲ್ಲಿ ತೋಯುತ್ತಿದ್ದರೆ ಮತ್ತೆ ನಿನ್ನದೇ ನೆನಪು. ಕಳೆದ ಬೇಸಗೆಯಲ್ಲಿ ನಾವು ಸಮುದ್ರ ಸ್ನಾನ ಮಾಡಿದುದೇ ಕೊನೆ. ಅವತ್ತು ನೀನು ಕೆರಳಿ ನಿಂತ ಮೊಸಳೆಯಂತಾಗಿದ್ದೆ. ನೀರಿಗಿಳಿದರೆ ನಾನು ಶುದ್ಧ ರಾಕ್ಷಸ. ನಮ್ಮ ಕಾಳಗದಂಥ ಮಿಲನಕ್ಕೆ ಸಮುದ್ರದಂಚಿನ ಸಕ್ಕರೆ ಮರಳು ನಲುಗಿ, ಕೆದರಿ ಹೋಗಿತ್ತು. ಎಲ್ಲ ಮುಗಿದ ಆಯಾಸದ ಅಂತ್ಯದಲ್ಲಿ ಯಾಕೋ ನಿನ್ನ ಕಣ್ಣ ತುಂಬ ನೀರು.
ಆಗ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸುವುದಿಲ್ಲ. ಸುಮ್ಮನೆ ನನ್ನನ್ನೇ ನೋಡುತ್ತ ಉಳಿಯುತ್ತೀಯ. ನಿನ್ನ ಕಣ್ಣುಗಳಲ್ಲಿ ಹೊರಳುವುದು ಪ್ರಶ್ನೆಗಳಾ? ಉತ್ತರಗಳಾ? ಅರ್ಥವಾಗುವುದಿಲ್ಲ. ನನ್ನ-ನಿನ್ನ ನಡುವೆ ಪ್ರೇಮ ಪ್ರಜ್ವಲಿಸತೊಡಗಿದ ದಿನದಿಂದಲೇ ನನಗೆ ಹಾಗೆ ಭಾಸವಾಗತೊಡಗಿತ್ತು. ನಿನು ಸರಳವಾಗಿ ಅರ್ಥವಾಗುವ ಹುಡುಗಿಯಲ್ಲ. ನಿನ್ನ ಮನಸ್ಸಿನಲ್ಲಿ ಸಾವಿರ ಮಾತುಗಳಿವೆ. ಆದರೆ ನೀನು ದನಿಯಾಗುವುದಿಲ್ಲ. ನಿನ್ನ ಮೌನದಲ್ಲೂ ಒಂದು ಹಾಡಿದೆ. ಅದರ ರಾಗ ಯಾವುದೆಂದು ನೀನು ಬಿಟ್ಟುಕೊಡುವುದಿಲ್ಲ. ಪೂರ್ತಿ ನನ್ನವಳಾಗಿ ನನ್ನ ತೆಕ್ಕೆಗೆ ಸಿಕ್ಕ ನಂತರವೂ ನೀನು ನನ್ನಿಂದ ದೂರ. ತನು ಕರಗಿದ ನಂತರವೂ ಒಲಿಯಲೊಲ್ಲದ ಪುಟ್ಟದೇವತೆ ನೀನು.
ಆದರೆ ಒಮ್ಮೆ ನೀನು ಈ ಕಾಡಮಧ್ಯದ ಬಂಗಲೆಗೆ ಬರಬೇಕು. ದಿನದಲ್ಲಿ ಬಂದು ಹೋಗುವುದು ಒಂದೇ ರೈಲು. ಸುಮ್ಮನೆ ಬಂದು ಒಮ್ಮೆ ರೇಲಿಳಿದು ನೋಡು. ಅದೆಷ್ಟು ಪ್ರೀತಿಯಿಂದ ನಿನ್ನನ್ನು ಕಾಡಮಧ್ಯದ ಈ ಮನೆಗೆ ಕರೆತರುತ್ತೇನೋ? ಪ್ರತಿ ಹೂವೂ ನಿನ್ನ ಆಗಮನದಿಂದ ಸಂಭ್ರಮಿಸಿ ನಗುತ್ತದೆ. ಬಂಗಲೆಯೆದುರಿನ ಹೆಮ್ಮರದ ಕೊಂಬೆಗಳಿಗೆ ಚಿಕ್ಕಚಿಕ್ಕ ಗೆಜ್ಜೆ ಕಟ್ಟಿದ್ದೇನೆ. ವಿಶಾಲವಾದ ಬಂಗಲೆಯ ಪ್ರತಿ ಕೋಣೆಯೂ ತಂಪು. ಸಾಯಂಕಾಲವಾಯಿತೆಂದರೆ ಸಾಕು, ದೇವತೆಗಳು ಕುಳಿತು ಸಂಗೀತ ಸಭೆ ನಡೆಸುತ್ತಿದ್ದಾರೇನೋ ಎಂಬಂತೆ ಹಕ್ಕಿಗಳ ಚಿಲಿಪಿಲಿ. ಚಳಿಗಾಲವಾದ್ದರಿಂದ ಬೇಗ ಕತ್ತಲು ಬೀಳುತ್ತದೆ. ಹಿಮ ಕುಡಿದ ಕೋಗಿಲೆ ಅವತ್ತಿನ ಮಟ್ಟಿಗೆ ಮೂಕ. ಒಳಗಿನ ಸಣ್ಣದೀಪಗಳ ಅಡಿಯಲ್ಲಿ, ಬಂಗಲೆಯ ಕಾರಿಡಾರುಗಳಲ್ಲಿ, ವಿಶಾಲವಾದ ಕೋಣೆಗಳಲ್ಲಿ ಸುಮ್ಮನೆ ಓಡಾಡೋಣ.
ಬಂಗಲೆ ಬೇಸರವಾಯಿತಾ, ಹೇಳು. ಕಾಡಿನಲ್ಲಿರುವ ಮರಮರಕ್ಕೂ ಉಯ್ಯಾಲೆ ಕಟ್ಟಿಬಿಡ್ತೀನಿ. ಜೀಕಿ ಜೀಕಿ ದಣಿಯುವುದರಲ್ಲಿ ದಿವ್ಯ ಸಂತೋಷವಿದೆ. ಬರ್ತೀಯಲ್ಲ? ರೇಲಿಗಾಗಿ ಕಾಯುತ್ತೇನೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications