ಮಿಲನದ ನಿರೀಕ್ಷೆಯಲ್ಲಿ ಕಾಡುಹಕ್ಕಿ

ಗಿಡಗೆಟಿಗಳ ಮೇಲೆಲ್ಲ ಇಬ್ಬನಿ ಚಿಮುಕಿಸಿದಂತೆ. ಈ ಚಳಿಗಾಲದ ಸೊಬಗೇ ವಿಭಿನ್ನ. ನೀನು ಜೊತೆಯಲ್ಲಿರಬೇಕು ಅನ್ನಿಸುತ್ತದೆ. ಹಾಗೆ ತುಂಬ ಹೊತ್ತು ನಡೆದಾಡಿ ಹಿಂತಿರುಗಿದ ಮೇಲೆ ಒಂದು ನಿರ್ವಿಘ್ನ ಸ್ನಾನ. ಎದೆ, ಬೆನ್ನು, ತೋಳು, ತೊಡೆ ಹಿತವಾದ ಬಿಸಿ ನೀರಿನಲ್ಲಿ ತೋಯುತ್ತಿದ್ದರೆ ಮತ್ತೆ ನಿನ್ನದೇ ನೆನಪು. ಕಳೆದ ಬೇಸಗೆಯಲ್ಲಿ ನಾವು ಸಮುದ್ರ ಸ್ನಾನ ಮಾಡಿದುದೇ ಕೊನೆ. ಅವತ್ತು ನೀನು ಕೆರಳಿ ನಿಂತ ಮೊಸಳೆಯಂತಾಗಿದ್ದೆ. ನೀರಿಗಿಳಿದರೆ ನಾನು ಶುದ್ಧ ರಾಕ್ಷಸ. ನಮ್ಮ ಕಾಳಗದಂಥ ಮಿಲನಕ್ಕೆ ಸಮುದ್ರದಂಚಿನ ಸಕ್ಕರೆ ಮರಳು ನಲುಗಿ, ಕೆದರಿ ಹೋಗಿತ್ತು. ಎಲ್ಲ ಮುಗಿದ ಆಯಾಸದ ಅಂತ್ಯದಲ್ಲಿ ಯಾಕೋ ನಿನ್ನ ಕಣ್ಣ ತುಂಬ ನೀರು.
ಆಗ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸುವುದಿಲ್ಲ. ಸುಮ್ಮನೆ ನನ್ನನ್ನೇ ನೋಡುತ್ತ ಉಳಿಯುತ್ತೀಯ. ನಿನ್ನ ಕಣ್ಣುಗಳಲ್ಲಿ ಹೊರಳುವುದು ಪ್ರಶ್ನೆಗಳಾ? ಉತ್ತರಗಳಾ? ಅರ್ಥವಾಗುವುದಿಲ್ಲ. ನನ್ನ-ನಿನ್ನ ನಡುವೆ ಪ್ರೇಮ ಪ್ರಜ್ವಲಿಸತೊಡಗಿದ ದಿನದಿಂದಲೇ ನನಗೆ ಹಾಗೆ ಭಾಸವಾಗತೊಡಗಿತ್ತು. ನಿನು ಸರಳವಾಗಿ ಅರ್ಥವಾಗುವ ಹುಡುಗಿಯಲ್ಲ. ನಿನ್ನ ಮನಸ್ಸಿನಲ್ಲಿ ಸಾವಿರ ಮಾತುಗಳಿವೆ. ಆದರೆ ನೀನು ದನಿಯಾಗುವುದಿಲ್ಲ. ನಿನ್ನ ಮೌನದಲ್ಲೂ ಒಂದು ಹಾಡಿದೆ. ಅದರ ರಾಗ ಯಾವುದೆಂದು ನೀನು ಬಿಟ್ಟುಕೊಡುವುದಿಲ್ಲ. ಪೂರ್ತಿ ನನ್ನವಳಾಗಿ ನನ್ನ ತೆಕ್ಕೆಗೆ ಸಿಕ್ಕ ನಂತರವೂ ನೀನು ನನ್ನಿಂದ ದೂರ. ತನು ಕರಗಿದ ನಂತರವೂ ಒಲಿಯಲೊಲ್ಲದ ಪುಟ್ಟದೇವತೆ ನೀನು.
ಆದರೆ ಒಮ್ಮೆ ನೀನು ಈ ಕಾಡಮಧ್ಯದ ಬಂಗಲೆಗೆ ಬರಬೇಕು. ದಿನದಲ್ಲಿ ಬಂದು ಹೋಗುವುದು ಒಂದೇ ರೈಲು. ಸುಮ್ಮನೆ ಬಂದು ಒಮ್ಮೆ ರೇಲಿಳಿದು ನೋಡು. ಅದೆಷ್ಟು ಪ್ರೀತಿಯಿಂದ ನಿನ್ನನ್ನು ಕಾಡಮಧ್ಯದ ಈ ಮನೆಗೆ ಕರೆತರುತ್ತೇನೋ? ಪ್ರತಿ ಹೂವೂ ನಿನ್ನ ಆಗಮನದಿಂದ ಸಂಭ್ರಮಿಸಿ ನಗುತ್ತದೆ. ಬಂಗಲೆಯೆದುರಿನ ಹೆಮ್ಮರದ ಕೊಂಬೆಗಳಿಗೆ ಚಿಕ್ಕಚಿಕ್ಕ ಗೆಜ್ಜೆ ಕಟ್ಟಿದ್ದೇನೆ. ವಿಶಾಲವಾದ ಬಂಗಲೆಯ ಪ್ರತಿ ಕೋಣೆಯೂ ತಂಪು. ಸಾಯಂಕಾಲವಾಯಿತೆಂದರೆ ಸಾಕು, ದೇವತೆಗಳು ಕುಳಿತು ಸಂಗೀತ ಸಭೆ ನಡೆಸುತ್ತಿದ್ದಾರೇನೋ ಎಂಬಂತೆ ಹಕ್ಕಿಗಳ ಚಿಲಿಪಿಲಿ. ಚಳಿಗಾಲವಾದ್ದರಿಂದ ಬೇಗ ಕತ್ತಲು ಬೀಳುತ್ತದೆ. ಹಿಮ ಕುಡಿದ ಕೋಗಿಲೆ ಅವತ್ತಿನ ಮಟ್ಟಿಗೆ ಮೂಕ. ಒಳಗಿನ ಸಣ್ಣದೀಪಗಳ ಅಡಿಯಲ್ಲಿ, ಬಂಗಲೆಯ ಕಾರಿಡಾರುಗಳಲ್ಲಿ, ವಿಶಾಲವಾದ ಕೋಣೆಗಳಲ್ಲಿ ಸುಮ್ಮನೆ ಓಡಾಡೋಣ.
ಬಂಗಲೆ ಬೇಸರವಾಯಿತಾ, ಹೇಳು. ಕಾಡಿನಲ್ಲಿರುವ ಮರಮರಕ್ಕೂ ಉಯ್ಯಾಲೆ ಕಟ್ಟಿಬಿಡ್ತೀನಿ. ಜೀಕಿ ಜೀಕಿ ದಣಿಯುವುದರಲ್ಲಿ ದಿವ್ಯ ಸಂತೋಷವಿದೆ. ಬರ್ತೀಯಲ್ಲ? ರೇಲಿಗಾಗಿ ಕಾಯುತ್ತೇನೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications