ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ!

ಕಾಲು ಚಾಚಿ ಕುಳಿತುಕೊಂಡವನ ಕಿವಿಗೆ ಬಿದ್ದದ್ದು ಭಾವಗೀತೆ. ಉರಿಯುತ್ತಿದ್ದ ಸಿಗರೇಟು ಆರಿಸಿ ಕಿಟಕಿಯಾಚೆಗೆ ನೋಡಿದೆ. 'ಯಾವ ಮೋಹನ ಮುರಳಿ ಕರೆಯಿತು...' ಗೀತೆ ಮೊಳಗುತ್ತಲೇ ಇತ್ತು. ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ. ಇವತ್ತು ಬೆಳಗ್ಗೆ ಏಳೇಳುತ್ತಲೇ ನಿನ್ನ ನೆನಪು. ಜೊತೆಗಿದ್ದಿದ್ದರೆ ಎರಡು ಹುಸಿ ಮುನಿಸು, ಒಂದು ಪುಟ್ಟ ಜಗಳ, ಮೂರು ತಬ್ಬುಗೆ, ಹೊಟ್ಟೆ ಮೇಲಿನ ಹುಟ್ಟು ಮಚ್ಚೆಗೆ ಹತ್ತು ಮುತ್ತು. ಇನ್ನೂ ಏನೇನೆಲ್ಲ ಆಗುತ್ತಿತ್ತೋ? ಹಟಕ್ಕೆ ಬಿದ್ದರೆ ಥೇಟ್ ಪಾಪಚ್ಚಿ ನೀನು. ಪ್ರೀತಿಗೆ ನಿಂತರೆ ಎಷ್ಟೊಂದು ಅಮ್ಮ.
ನಿನ್ನ ಬಗ್ಗೆ ನನ್ನ ಹೊಸ ತಕರಾರುಗಳು ಏನೂ ಇಲ್ಲ. ಒಮ್ಮೆಮ್ಮೆ ದೊಡ್ಡ ಜಂಗುಳಿಯಲ್ಲಿದ್ದಾಗ ಥಟ್ಟನೆ ನೆನಪಾಗಿ ಬಿಡುತ್ತೀಯ, ಉರಿವ ಗಾಯದಂತೆ; ಮನೆಯಲ್ಲೇ ಬಿಟ್ಟು ಬಂದ ಮಗು ತಾಯಿಗೆ ನೆನಪಾಗುವಂತೆ. ಹಾಗಾದಾಗಲೆಲ್ಲ ಮಂಕಾಗುತ್ತೇನೆ. ಗತಿಸಿ ಹೋದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಅಸಲಿಗೆ ನೀನು ಸಿಗದೇನೇ ಹೋಗಿದ್ದಿದ್ದರೆ ಈ ಬದುಕು ಎಷ್ಟೊಂದು ವ್ಯರ್ಥ ಹೋಗುತ್ತಿತ್ತಲ್ಲವಾ : ಸಮುದ್ರದ ಮೇಲೆ ಬಿದ್ದ ಮಳೆಯಂತೆ, ಅಂದುಕೊಳ್ಳುತ್ತಿರುತ್ತೇನೆ. ಪಾಪ ನಾನು!
In fact, ಬದುಕು ನಂಗೆ ಎಲ್ಲವನ್ನೂ ಕೊಟ್ಟಿದೆ. I am a happy person. ಈಗಷ್ಟೇ ಮಿಲಿಟರಿಯಿಂದ ಬಂದಂತೆ ಕಾಣುವ ದೊಡ್ಡ ಮೀಸೆಯ ಅಪ್ಪ ನಿಜಕ್ಕೂ ಹೃದಯವಂತ. ಕೈಗೆ ಮೊಬೈಲ್ ಕೊಟ್ಟರೆ 'ಇದನ್ನು ಆಫ್ ಮಾಡೋು ಹ್ಯಾಗೋ' ಅಂತ ಫಜೀತಿಗೆ ಬಿದ್ದವಳ ಹಾಗೆ ಕೇಳುವ ಅಮಾಯಕ ಅಮ್ಮ, ರುಚಿಯಾದದ್ದು ಚಿಕ್ಕವನಿಗಿರಲಿ ಅನ್ನುತ್ತ ಉಳಿದದ್ದನ್ನಷ್ಟೇ ತಿಂದು ಕೈತೊಳೆಯುವ ಅಣ್ಣ, 'ಅಪ್ಪನನ್ನು ಬಿಟ್ಟರೆ ನಾನು ಪ್ರೀತಿಸಿದ ಎರಡನೇ ಗಂಡಸು ಅಂದರೆ ನೀನು ಕಣೋ' ಅನ್ನುವ ತುಂಟ ತಂಗಿ, ಓಡಾಡಲು ಕೆಂಪಗೆ ಸಾಯಂಕಾಲದ ಸೂರ್ಯನಂತೆ ಹೊಳೆಯುವ ಬೈಕು, ನನಗೆ ಇನ್ನೇನು ಬೇಕಿತ್ತು ಹೇಳು?
ಹಾಗೆ ಸಂತೋಷವಾಗಿದ್ದವನ ಮೊಬೈಲಿಗೆ ಅವತ್ತು ಅನಿರೀಕ್ಷಿತವಾಗಿ ಬಂದದ್ದು ಒಂದು wrong call. 'ಶ್ರೀನಿವಾಸ್ ಇದಾನಾ?' ಅಂತ ಕೇಳಿದ್ದೇ ಕೇಳಿದ್ದು. ಇದು ಶ್ರೀನಿವಾಸ್ ನ ನಂಬರ್ ಅಲ್ಲ ಅಂತ ಹೇಳುವುದರೊಳಗಾಗಿ ನೀನೂ ಬಿಟ್ಟು ಬಿಡದೆ ಮುಕ್ಕಾಲು ಪ್ಯಾರಾ ಬೈದಿದ್ದೆ. ಎಲ್ಲ ಬೈಸಿಕೊಂಡಾದ ಮೇಲೆ 'ನಾನು ಶ್ರೀನಿವಾಸ್ ಅಲ್ಲ' ಅಂತ ಮೆಲುದನಿಯಲ್ಲಿ ಹೇಳಿದೆ. ಹಾಗಾದರೆ ಯಾಕೆ ಬೈಸಿಕೊಂಡಿರಿ? ಫೋನ್ ಯಾಕೆ ತಗೊಂಡಿರಿ? ಅಂತ ಮತ್ತೆ ನೀನು ಬೈದೆ. 'ಫೋನ್ ನಂದು. ಅದು ರಿಂಗ್ ಆದದ್ದರಿಂದ ತಗೊಂಡೆ. ನೀವು ಡಯಲ್ ಮಾಡಿದ್ದು ರಾಂಗ್ ನಂಬರು' ಅಂತ ಹೇಳಿದೆ. Sorry ಹೇಳುವ ಬದಲು ನೀನು ಎಷ್ಟು ಚೆನ್ನಾಗಿ ನಕ್ಕು ಬಿಟ್ಟೆ ನೆನಪಿದೆಯಾ?
ನಮ್ಮ ಗೆಳೆತನ ಹಾಗೆ ಶುರುವಾಯಿತಿ ನೋಡು. ಬಂದದ್ದು wrong call ಆದರೂ ಅದು right person connect ಮಾಡಿತ್ತು. ಮೊದಲ ಬಾರಿ ಭೇಟಿಯಾದಾಗ, ಇಷ್ಟು ಚೆಂದದ ಹುಡುಗಿ ಇರಬಹುದು ಅಂದುಕೊಂಡಿರಲಿಲ್ಲ. ನೋಡಿದ ತಕ್ಷಣ ಫಿದಾ ಆಗಿಬಿಟ್ಟೆ. ಆ ಮೇಲೆ ನಾವು ದಿನಾ ಭೇಟಿಯಾಗತೊಡಗಿದೆವು. ಮೊಬೈಲುಗಳಲ್ಲಿ ನೂರಾರು ಗಂಟೆಯ ಮಾತು ಹರಿದಾಡಿದ ಮೆಸೇಜುಗಳ ಲೆಕ್ಕವಿಟ್ಟವರಾರು? ಎರಡು ಮಳೆಗಾಲ ಕಳೆದು ಚಳಿ ಶುರುವಿಡುವ ಹೊತ್ತಿಗೆ, ಹೂವು ಹಾಸಿಗೆ ಚಂದ್ರ ಚಂದನ : ಹಾಹು ಬಂಧನ ಚುಂಬನ.
ಕೆದಕಿಕೊಂಡಂತೆಲ್ಲ ಆಸೆಗಳು ಅರಳಿ ನಿಲ್ಲುತ್ತವೆ. ನೀವು ಊರಲ್ಲಿಲ್ಲ. ಯಾಕೋ, ನಿನ್ನ ಫೋನೂ ಇಲ್ಲ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೊಬೈಲಿನತ್ತ ನೋಡುತ್ತೇನೆ. ನಿನಗೆ ಅರ್ಥವಾಗದ್ದೇನಿದೆ? ಒಂದು ಫೋನ್ ಮಾಡೇ!
ನಿನ್ನವನು
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications