ಅವನ ದೃಷ್ಟಿಯಲ್ಲಿ ಯಾರೂ ಸರಿಯಿಲ್ಲ :ಏನೂ ಸರಿಯಿಲ್ಲ!
ಜಗತ್ತಿನ ಪ್ರತಿಯೊಬ್ಬರನ್ನೂ ದೂಷಿಸುತ್ತಾನೆ. ತಪ್ಪು ಹುಡುಕುತ್ತಾನೆ. ಇದೆಲ್ಲದರಿಂದ ತನಗೇ ರೋಸಿಗೆಯಾಗಿ, ತಾನು ಮಾಡಬಲ್ಲ, ಪರ್ಫೆಕ್ಟ್ ಆಗಿ ಮಾಡಬಲ್ಲ ಇಸ್ತ್ರಿ, ಬುಕ್ ಬೈಂಡಿಂಗ್, ನೆಲ ಒರೆಸುವುದು ಮುಂತಾದ ಸೀಮಿತ ವಲಯದ ಚಿಕ್ಕ ಕೆಲಸಗಳಿಗೆ ಗಂಟುಬೀಳುತ್ತಾನೆ!
ಆತ ತುಂಬ ಮಧುರವಾಗಿ ಹಾಡುತ್ತಿದ್ದ. ತನ್ಮಯನಾಗಿ ಕೇಳುತ್ತಿದ್ದೆ. ಪಕ್ಕದಲ್ಲಿ ನನ್ನ ಗೆಳೆಯ ಬಂದು ನಿಂತ. ಗಾಯನ ಮುಗಿದ ಮೇಲೆ, ಎಂಥ ಚೆಂದ ಹಾಡ್ತಾನೆ ಮಾರಾಯ! ಎಂದು ತೃಪ್ತನಾಗಿ ಉದ್ಗರಿಸಿದೆ.
ಆದ್ರೆ ಎಂಥ ಕುಡುಕ ಗೊತ್ತಾ? ಅಂದು ಬಿಟ್ಟ ಗೆಳೆಯ. ನಾನು ತಬ್ಬಿಬ್ಬಾದವನಂತೆ ಅವನನ್ನೇ ನೋಡಿದೆ. ಕೆಲವೇ ದಿನಗಳ ಕೆಳಗೆ ನನ್ನ ಗೆಳೆಯನ ಬಗ್ಗೆ ಅವನ ತಮ್ಮ ಹೇಳಿದ್ದು ನೆನಪಾಗಿ ಸಾವರಿಸಿಕೊಂಡೆ.
ನನ್ನ ಗೆಳೆಯನಿಗೆ ಅದೊಂದು ರೋಗ!
ನೀವು ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದೊಂದನ್ನು ತೋರಿಸಿ. ಇವನು ಅದಕ್ಕೊಂದು ಹೆಸರಿಡುತ್ತಾನೆ. ಹಾಗಂತ ಆ ವಿಷಯ ತುಂಬ ದೊಡ್ಡದಿರಬೇಕು ಅಂತಿಲ್ಲ. ತನಗೆ ಸಂಬಂಧಪಟ್ಟಿರಬೇಕು ಅಂತಲೂ ಇಲ್ಲ.
ಮಕ್ಕಳ ಡಾಕ್ಟರುಗಳ ಪೈಕಿ ಆತನೇ ಬೆಸ್ಟ್ ನೋಡು ಅಂತ ಹೇಳಿದರೆ, ಈಗಿನ ಕಾಲದ ಡಾಕ್ಟ್ರುಗಳು ಇಲ್ಲದ ರೋಗ ಹೇಳಿ ಹೆದರಿಸಿ ಮೋಸಮಾಡ್ತಾರೆ ಅಂತಾನೆ. ಆಚಾರ್ಯ ರಜನೀಶ್ ನಿಜವಾದ ದಾರ್ಶನಿಕ ಅಂತ ಹೇಳಿದರೆ, ಅವನಿಗೆ ಸಾಯೋವಾಗ ಏಡ್ಸ್ ಆಗಿತ್ತಂತೆ ಅನ್ನುತ್ತಾನೆ. ಇದು ಭಾರತದ ನಂಬರ್ ಒನ್ ದಿನಪತ್ರಿಕೆ ಕಣಯ್ಯ ಅಂತ ಹೇಳಿದರೆ, ಅಮೆರಿಕದಲ್ಲಿ ಇನ್ನೂರು ಪೇಜು ಕೊಡೋ ಪತ್ರಿಕೆಗಳಿವೆ ಅಂತಾನೆ.
ಆತನ ಸಮಸ್ಯೆಯೇ ಅದು : ಯಾರನ್ನೂ ಒಪ್ಪುವುದಿಲ್ಲ. ಹೋಗಲಿ ಆತ ಜೀವನದಲ್ಲಿ ಅಪರೂಪದ್ದೇನಾದರೂ ಮಾಡಿದ್ದಾನಾ? ಸಾಧಿಸಿದ್ದಾನಾ? ಕೇಳಬೇಡಿ. ಯಾವತ್ತೋ ಏನನ್ನೋ ಸಾಧಿಸುತ್ತೇನೆ , ನೋಡ್ತಿರಿ ಅಂತಾನೆ. ಯಾವುದರ ಸಿದ್ಧತೆಯೂ ಕಾಣುವುದಿಲ್ಲ. ಹಾಗಂತ ಕೆಟ್ಟವನೇನಲ್ಲ ನನ್ನ ಗೆಳೆಯ. ಆಕ್ಷೇಪಿಸಬಹುದಾದಂಥ ದುರಭ್ಯಾಸಗಳಿಲ್ಲ. ಅವನ ಒಂದೇ ಸಮಸ್ಯೆಯೆಂದರೆ, ಅವನ ದೃಷ್ಟಿಯಲ್ಲಿ ಯಾರೂ ಮತ್ತು ಏನೂ ಸರಿಯಿಲ್ಲ.
ಒಂದು ಸಲ ಅವನ ಮನೆಗೆ ಹೋದೆ. ಬುಕ್ ಬೈಂಡ್ ಮಾಡುತ್ತ ಕುಳಿತಿದ್ದ. ಮಾಡುವ ರೀತಿಯನ್ನೇ ಗಮನಿಸುತ್ತ ಕುಳಿತೆ. ಅವನ ಕೆಲಸದಲ್ಲಿ ಎಂಥ ತಲ್ಲೀನತೆ, ಏಕಾಗ್ರತೆ ಇದ್ದವೆಂದರೆ, ಹೆಂಡತಿ ತಂದಿಟ್ಟ ಕಾಫಿಯತ್ತ ತಿರುಗಿಯೂ ನೋಡದೆ ಬೈಂಡಿಂಗ್ ಮುಂದುವರೆಸಿದೆ. ಎದ್ದು ಹೋಗಿ ಅವನ ಕೋಣೆ ನೋಡಿದೆ. ಅಲ್ಲಿದ್ದ ಪ್ರತಿ ಪುಸ್ತಕವೂ ಹಾಗೇ ನೀಟಾಗಿ ಬೈಂಡ್ ಆಗಿತ್ತು. ಫ್ಯಾನಿನ ಮೇಲೆ ಧೂಳಿರಲಿಲ್ಲ. ಹಾಸಿಗೆಯ ಮೇಲಿನ ಚಾದರದಲ್ಲಿ ಸುಕ್ಕಿರಲಿಲ್ಲ. ಅಕ್ವೇರಿಯಂ ತುಂಬ ಸ್ವಚ್ಛವಾಗಿತ್ತು. ಅವನ ಹೆಂಡತಿ ಬಂದು ಹೇಳಿದಳು : ಇದನ್ನೆಲ್ಲ ಮನೇಲಿ ಅವರೇ ಕ್ಲೀನ್ ಮಾಡೋದು!
ಗ್ರೇಟ್ ಅಂದೆ. ಅವನು ಪರ್ಫೆಕ್ಟಾಗಿ ಮಾಡುತ್ತಾನೆ. ಅವನ ಮಕ್ಕಳ ರೂಮು ನೋಡಿದೆ, ಕೈತೋಟ ನೋಡಿದೆ, ಮನೆಯ ವಾರ್ಡ್ರೋಬುಗಳನ್ನು ನೋಡಿದೆ. ಎಲ್ಲಿ ಹುಡುಕಿದರೂ ಒಂದು ತಪ್ಪಿಲ್ಲ, ಕೊಳೆಯಿಲ್ಲ. ಆದರೆ ಅವನ ಸೋಲು ಎಲ್ಲಿದೆಯೆಂಬುದು ತುಂಬ ಚೆನ್ನಾಗಿ ನನಗೆ ಗೊತ್ತು.
ಒಂದಿಡೀ ವರ್ಷ ಒಂದು ಕಂಪನಿಯಲ್ಲಿ ದುಡಿಯಲಾರ. ಯಾವ ವೃತ್ತಿಗೂ ಕಚ್ಚಿಕೊಂಡು ನಿಲ್ಲಲಾರ. ದುಡ್ಡಿನ ವಿಷಯದಲ್ಲಿ ಸೋತು ಸುಣ್ಣವಾಗಿದ್ದಾನೆ. ಹೆಂಡತಿಗೆ ಕಾಲೇಜಿನಲ್ಲಿ ನೌಕರಿ ಇದೆಯಾದ್ದರಿಂದ ಮನೆ ನಡೆದುಕೊಂಡು ಹೋಗುತ್ತಿದೆ. ಆದರೆ ನನ್ನ ಗೆಳೆಯ ವರ್ಷಗಟ್ಟಲೆ ಏನೂ ಕೆಲಸ ಮಾಡದೆ ಹೀಗೆ ಬುಕ್ ಬೈಂಡ್ ಮಾಡುತ್ತಾ, ಇಸ್ತ್ರಿ ಮಾಡುತ್ತಾ, ಬಟ್ಟೆ ಮಡಚುತ್ತಾ ಇದ್ದು ಬಿಡುತ್ತಾನೆ.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications