ಎಲುಬಿಲ್ಲದ ನಾಲಿಗೆ, ಕಾರಣ ಆಗಬೇಡ ನಿನ್ನ ಸೋಲಿಗೆ!
ಆಫೀಸ್ ನಿಂದ ಬಂದು ನ್ಯೂಸ್ ನೋಡೋಣಾ ಅಂತ ಟಿವಿ ಆನ್ ಮಾಡ್ಲಿಕ್ಕೆ ರಿಮೋಟ್ ಕೈಗೆ ತಗೋವಾಗ ಅಲ್ಲೇ ಕುಳಿತು ಓದುತಿದ್ದ ಮಗನ್ನ ಕಂಡು... ಓಹ್ ನಾಳೆ ಎಕ್ಸಾಮ್ಸ್ ಇವನಿಗೆ... ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂದು ಟಿವಿ ಆನ್ ಮಾಡಿದ್ರೂ ಸೌಂಡ್ ಇಡದೆ... ಕೇಳ್ದೆ "ಏನು ಓದ್ತಾ ಇದಿಯೋ? ನಾಳೆ ಯಾವ ಸಬ್ಜೆಕ್ಟ್?"
"ಸೈನ್ಸ್... ಸಬ್ಜೆಕ್ಟ್" ಶಾರ್ಟ್ ಆಗಿ ಹೇಳಿ... "ಮಾನವ ದೇಹದಲ್ಲಿ ಎಷ್ಟು ಎಲುಬುಗಳಿವೆ... ಪಕ್ಕೆಲುಬು, ಬೆನ್ನೆಲುಬು" ಅಂತ ತನ್ನ ಪಾಡಿಗೆ ಗೊಣಗಿಕೊಂಡು ಓದ್ತಾ, ಉರು ಹೊಡೀತಿದ್ದ ಮಗನನ್ನು ಕಂಡು...
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ಲೇ... ಉರು ಹೊಡಿಬೇಡ... ಸರಿಯಾಗಿ ಅರ್ಥ ಮಾಡಿಕೊಂಡು ನೆನಪಿಟ್ಟುಕೋ. ಬರಿ ಎಕ್ಸಾಮ್ಸ್ ದೃಷ್ಟಿಯಿಂದ ಅಷ್ಟೇ ಓದೋದಲ್ಲ... ಜೀವನ ಪೂರ್ತಿ ನೆನಪಿಟ್ಟುಕೋ ಬೇಕು. ನಮ್ಮ ದೇಹದ ಬಗ್ಗೆ ನಮಗೆ ಚೆನ್ನಾಗಿ ಅರಿವಿರಬೇಕು... ಸರಿನಾ?" ಅಂತ ಅವನಿಗೆ ಹೇಳಿ... ಕನ್ನಡ ನ್ಯೂಸ್ ಚಾನೆಲ್ಸ್ ನೋಡ್ತಾ ಇದ್ದೆ "ಲೇಟೆಸ್ಟ್ ಟ್ರೆಂಡ್ ಹೇಗಿದೆ ನಮ್ಮ 2019 ಲೋಕಸಭಾ ಎಲೆಕ್ಷನ್ದು" ಇಂಟರೆಸ್ಟ್ ನಿಂದ.

"ಅಪ್ಪಾ... ಅಪ್ಪಾ.." ಎರಡು ಸಲ ಕರೆದ ಮಗನ್ನ ಕಂಡು, ಏನು ಅಂತ ಕೇಳಿದ್ದಕ್ಕೆ... ಪ್ರಶ್ನೆ ಕೇಳಿದ್ದ... "ಮಾನವ ದೇಹದಲ್ಲಿ ಎಲುಬಿಲ್ಲದ ಒಂದು ಯಾವ್ದು?"
ಯಾರೋ ರಾಜಕಾರಣಿ ಮನಸ್ಸಿಗೆ ಬಂದಂಗೆ ಮಾತಾಡುತಿದ್ದನ್ನು ಸೀರಿಯಸ್ ಆಗಿ ಕೇಳುತ್ತಿದ್ದ ನಾನು.. ಟಿವಿ ಕಡೆ ಕೈ ತೋರಿದ್ದೆ! ಅವನಿಗೆ ಅರ್ಥವಾಗದೆ ಕಣ್ಣು ಪಿಳಿ ಪಿಳಿ ಬಿಟ್ಟಿದ್ದ ನೋಡಿ... ಹೇಳಿದ್ದೆ "ಎಲುಬಿಲ್ಲದ ನಾಲಿಗೆ!"
ನೋಡು ಟಿವಿನಲ್ಲಿ ಅವನು ಮಾತಾಡ್ತಾ ಇದನಲ್ವಾ... ನಿನ್ನೆ ಒಂದು ರೀತಿ ಹೇಳಿಕೆ ಕೊಟ್ಟಿದ್ದ... ಇವತ್ತು ಉಲ್ಟಾ ಹೊಡೆದು ಮಾತಾಡ್ತಾ ಇದಾನೆ... ಎಲುಬು ಇಲ್ಲದ ನಾಲಿಗೆನಾ ಹೆಂಗೆ ಟ್ವಿಸ್ಟ್ ಮಾಡಿ ಮಾತಾಡ್ತಾ ಇದಾನೆ. ಅದಕ್ಕೆ ಹೇಳಿದ್ದು... ಈ ನಾಲಿಗೆ ಎಲುಬಿಲ್ಲದ್ದು"... ಓಹ್ ಹೌದಾ? ಸರಿ ಅಂತ ಅವ ತನ್ನ ಪಾಡಿಗೆ ಓದ್ತಾ ಕುಳಿತ.
ಅಂದುಕೊಂಡೆ... ಬೈಕೊಂಡೆ.. ಛೆ, ಎಷ್ಟು ದೊಡ್ಡ ಜವಾಬ್ದಾರಿಯಲ್ಲಿ ಇರೋ ಜನನಾಯಕರು ಅಂತ ಅನ್ನಿಸಿಕೊಂಡೋರು (ತಮ್ಮ ಪಾಡಿಗೆ ತಾವೇ ಅಂದುಕೊಂಡೋರು) ಎಲೆಕ್ಷನ್ ಟೈಂನಲ್ಲಿ ಎದುರಾಳಿ ಅಭ್ಯರ್ಥಿ ಮೇಲೆ ವೈಯಕ್ತಿಕವಾಗಿ ನಿಂದನೆ ಮಾಡ್ತಾ, ಅವರು ಮನಸ್ಸನ್ನು ಕೆಡಿಸುವಂತೆ ಮಾತಾಡೋ ಬದ್ಲು... ತಾವು ತಮ್ಮ ಕ್ಷೇತ್ರಕ್ಕೆ ಏನು ಮಾಡ್ಬೇಕು ಅಂತ ಪ್ಲಾನ್, ಯೋಜನೆ ಮಾಡಿದೀವಿ... ಮುಂದೆ ಏನು ಅಭಿವೃದ್ಧಿ ಮಾಡ್ತೀವಿ ಅಂತ ಹೇಳಿ ಜನ ಮನ ಗೆದ್ದರೆ... ಅವರಿಗೇ ಜನ ವೋಟ್ ಹಾಕೋಲ್ವಾ?
ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?
ಅಧಿಕಾರ ಇದೆ ಅಂತ, ಎದುರಾಳಿ ಅಭ್ಯರ್ಥಿ ಮಾತಾಡೋದನ್ನು ಪ್ರಸಾರ ಮಾಡದಂತೆ ಕೇಬಲ್ ಕಟ್ /ಪವರ್ ಕಟ್ ಮಾಡ್ಸೋದು, ಅವರ ಪರವಾಗಿ ಪ್ರಚಾರಕ್ಕೆ ಬರೋ ಜನರಿಗೆ ಡೈರೆಕ್ಟ್ ಆಗಿ ಬೆದರಿಕೆ ಹಾಕೋದು, ತಮ್ಮ ಪರವಾಗಿ ಪ್ರಚಾರಕ್ಕೆ ಬಂದ್ರೆ ಮಾತ್ರ ಸಿನಿಮಾ ಮಂದಿ ಹೀರೋಗಳು... ಇಲ್ಲಾಂದ್ರೆ ಅವ್ರು ಜೀರೋಗಳು ಅಂತ ಜರಿಯೋದು... ಅವರಿಗಿಂತ ನಾವು ಹೆಚ್ಚು ಭಾವನಾತ್ಮಕವಾಗಿ ಮಾತಾಡ್ತೀವಿ/ಅಳ್ತೀವಿ ಅಂತ ಕಣ್ಣೀರು ಹಾಕೋದು... ದೇಶದ ಪ್ರಧಾನ ಮಂತ್ರಿ ಹೆಸರಿಗೆ ಜೈಕಾರ ಹಾಕೋರಿಗೆ ಹಿಡಿದು ದವಡೆಗೆ ಹೊಡೀರಿ.. ಅಂತ ಹೇಳೋದು... ಬೇಕಾ ಇವೆಲ್ಲ?
ಸ್ವಾಭಿಮಾನಿ ಜನತೆ ನೋಡ್ತಾ ಇದಾರೆ... ಇದು ಡಿಜಿಟಲ್ ಯುಗ, ಅದರಲ್ಲೂ ಯುವ ಜನತೆಯ ಯುಗ... 20-30 ವರ್ಷದ ಹಿಂದಿನ ಹಾಗಲ್ಲ. ತಕ್ಕ ಪಾಠ ಕಲಿಸೇ ಕಲಿಸ್ತಾರೆ... ಜೋಪಾನ!
ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ
ಮಾತಾಡ್ಬೇಡ ಹೆಂಗೆಂಗೋ
ಇದೆ ಅಂತ ಎಲುಬಿಲ್ಲದ ನಾಲಿಗೆ...
ಇಲ್ಲ ಅಂದ್ರೆ, ನೀನೇ ಆಗ್ತೀಯಾ
ಕಾರಣ ನಿನ್ನ ಸೋಲಿಗೆ...!
ಸ್ವಾಭಿಮಾನಿ ದೇಶದ ಜನರೇ... ಮತದಾನ ನಿಮ್ಮ ಹಕ್ಕು, ದೇಶದ ಹಿತದೃಷ್ಟಿಯಿಂದ ಮರೆಯದೆ ಅದನ್ನು ಚಲಾಯಿಸಿ... ಒಳ್ಳೆ ಅಭ್ಯರ್ಥಿಯನ್ನು ಗೆಲ್ಲಿಸಿ, ದೇಶವ ಅಭಿವೃದ್ಧಿ ಕಡೆ ನಡೆಸಿ!
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications