ಬಿಜೆಪಿಗೆ ರಂಗಿತರಂಗ, ಕಾಂಗ್ರೆಸ್ ಗೃಹಭಂಗ, ಜೆಡಿಎಸ್ ರಸಭಂಗ...!
ಚುನಾವಣಾ ಫಲಿತಾಂಶಕ್ಕೆ ಹಾಡಿನ ಟಚ್ ಕೊಟ್ಟರೆ ಹೇಗಿರುತ್ತದೆ? ಅಂತದ್ದೇ ಕೆಲಸವನ್ನು ನಮ್ಮ ನಾಗರಾಜ ಮಾಡಿದ್ದಾನೆ. ಇವನ ಸಾಹಿತ್ಯ ಭಂಡಾರವನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ನಿಮಗೆ ಹೀಗೆ ಹೇಳಿದರೆ ಮಜಾ ಬರುವುದಿಲ್ಲ.. ರಾಜಕಾರಣಿಗಳ ಪಾಡನ್ನು ಹಾಡಲ್ಲೇ ಕೇಳಿ ಎಂಜಾಯ್ ಮಾಡಿ...
ಥತ್ತೇರಿಕೆ...ಈ ಉಪಚುನಾವಣೆ ಅಂತೂ ಮುಗಿತಪ್ಪಾ. ಅವರಿವರ ಕೈ ಗಡಿಯಾರದ ಗಲಾಟೆ ಮುಗೀತು ಅಂದ್ರೆ ಇದೀಗ ಕಾಲ್ಗುಣದ ಮಾತುಕತೆ ಆರಂಭವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಇನ್ನೊಬ್ಬರ ಎರಡು ಕಣ್ಣು ಹೋಗಲಿ ಎಂದು ಬಯಸಿದ್ದವರ ಬಾಯಿಗೆ ಲಡ್ಡು ಬಿದ್ದಿದೆ.[ಉಪಚುನಾವಣೆ: ಹೆಬ್ಬಾಳದಲ್ಲಿ ನಿಜವಾಗಿ ಗೆದ್ದಿದ್ದು ಯಾರು?]
ಇವೆಲ್ಲಾ ಒತ್ತಟ್ಟಿಗೆ ಇರಲಿ, ಚುನಾವಣೆ ಮುಗಿದ್ ಮ್ಯಾಲೇ ನಮ್ಮ ನಾಗರಾಜ ಹೀಗೊಂದು ಹಾಡು ಹೇಳಿಕೊಂಡು ತಿರುಗಾಡ್ತಾ ಇದ್ದಾ. ನಾನು ಗಮನವಿಟ್ಟು ಕೇಳಿದೆ.. ಭಾಳ ಛಲೋ ಐತ್ರಪ್ಪಾ.. ನೀವು ಒಂದ್ ಸಾರಿ ಕೇಳ್ಕಂಡ್ ಬರ್ರಲಾ...

ಬಿಜೆಪಿಗೆ....ರಂಗಿ ತರಂಗ
ಕಾಂಗ್ರೆಸ್ಗೆ....ಗೃಹ ಭಂಗ
ಜೆಡಿಎಸ್ಗೆ....ರಸ ಭಂಗ..!
ಬಿಜೆಪಿಗೆ ಜನರಿಂದ ....ಮುದ್ದು
ಕಾಂಗ್ರೆಸ್ ಗೆ ಜನರಿಂದ..ಗುದ್ದು
ಜೆ.ಡಿ.ಎಸ್. ಗೆ ಜನ ಕಳಿಸಿದ್ದಾರೆ..ಒದ್ದು..!
ಬಿಜೆಪಿ..ವಿನ್ನರ್
ಕಾಂಗ್ರೆಸ್ ..ರನ್ನರ್
ಜೆಡಿಎಸ್..ಢಮಾರ್..!
ಬಿಜೆಪಿಗೆ........ಶಂಖ
ಕಾಂಗ್ರೆಸ್ ಗೆ...ಜಾಗಟೆ
ಜೆಡಿಎಸ್ ಗೆ..ಮಂಗಳಾರತಿ..!
ಬಿಜೆಪಿಗೆ... ನನಸಾಯ್ತು..ಎರಡು ಕನಸು
ಕಾಂಗ್ರೆಸ್ ....ನಾನು ನನ್ನ ಕನಸು
ಜೆಡಿಎಸ್ ಗೆ..ತಿರುಕನ ಕನಸು..![ಉಪ ಚುನಾವಣೆಯಲ್ಲಿ ಜೆಡಿಎಸ್ ಹೆ ಹೀನಾಯ ಸೋಲೆಕೆ?]
ಬಿಜೆಪಿಗೆ...ಶಿಕಾರಿ
ಕಾಂಗ್ರೆಸ್ ಗೆ ಸವಾರಿ
ಜೆಡಿಎಸ್...ಪರಾರಿ...!
ಬಿಜೆಪಿಗೆ....ಅದೃಷ್ಟ ಸರಿಯಿಲ್ಲ..
ಕಾಂಗ್ರೆಸ್ ಗೆ..ವಾಚ್..ಸರಿಯಿಲ್ಲ..
ಜೆಡಿಎಸ್ಗೆ...ಟೈಮೇ..ಸರಿಯಿಲ್ಲ...!
ಬಿಜೆಪಿಗೆ..ಪನ್ನೀರು
ಕಾಂಗ್ರೆಸ್ ಗೆ..ಕಣ್ಣೀರು
ಜೆಡಿಎಸ್ಗೆ..ಎಳ್ಳು ನೀರು...!(ವಾಟ್ಸಪ್ ಕೃಪೆ)[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]
ಅಬ್ಬಾ ನಾಗರಾಜ ಯಾವ ಕವಿ ಪುಂಗವರಿಗೂ ಕಡಿಮೆ ಇಲ್ಲ ಬಿಡಿ. ಇಡೀ ಫಲಿತಾಂಶವನ್ನು ಅದು ಹೇಗೆ ಹೇಳಿದ್ದಾನೆ. ರಾಜಕಾರಣವನ್ನು ನಿವಾಳಿಸಿ ಒಗೆದಿದ್ದಾನೆ ನೋಡಿ....! ಇಂಗ್ಲಿಷ್, ಕನ್ನಡ ಭಾಷೆಯನ್ನು ಮಿಕ್ಸ್ ಮಾಡ್ಯಾನ ಅದರ ಜತಿಗೆ ಸಿನಿಮಾ ಹೆಸ್ರುಗಳನ್ನು ಸಖತ್ತಾಗೆ ಬಳಸಿಕಂಡ್ಯಾನ ಬಿಡ್ರಪ್ಪಾ...! ಬರೆದವರಿಗೊಂದು ಸಲಾಂ ಹೇಳುತ್ತ ನಿಮ್ಮ ಮನಸ್ಸಿನಲ್ಲೇ ಹಾಡನ್ನು ರಾಗವಾಗಿ ಗುನುಗಿರಿ..
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications