ಬಿಜೆಪಿಗೆ ರಂಗಿತರಂಗ, ಕಾಂಗ್ರೆಸ್ ಗೃಹಭಂಗ, ಜೆಡಿಎಸ್ ರಸಭಂಗ...!
ಚುನಾವಣಾ ಫಲಿತಾಂಶಕ್ಕೆ ಹಾಡಿನ ಟಚ್ ಕೊಟ್ಟರೆ ಹೇಗಿರುತ್ತದೆ? ಅಂತದ್ದೇ ಕೆಲಸವನ್ನು ನಮ್ಮ ನಾಗರಾಜ ಮಾಡಿದ್ದಾನೆ. ಇವನ ಸಾಹಿತ್ಯ ಭಂಡಾರವನ್ನು ಎಷ್ಟು ಹೊಗಳಿದರೂ ಕಡಿಮೆಯೇ.. ನಿಮಗೆ ಹೀಗೆ ಹೇಳಿದರೆ ಮಜಾ ಬರುವುದಿಲ್ಲ.. ರಾಜಕಾರಣಿಗಳ ಪಾಡನ್ನು ಹಾಡಲ್ಲೇ ಕೇಳಿ ಎಂಜಾಯ್ ಮಾಡಿ...
ಥತ್ತೇರಿಕೆ...ಈ ಉಪಚುನಾವಣೆ ಅಂತೂ ಮುಗಿತಪ್ಪಾ. ಅವರಿವರ ಕೈ ಗಡಿಯಾರದ ಗಲಾಟೆ ಮುಗೀತು ಅಂದ್ರೆ ಇದೀಗ ಕಾಲ್ಗುಣದ ಮಾತುಕತೆ ಆರಂಭವಾಗಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಇನ್ನೊಬ್ಬರ ಎರಡು ಕಣ್ಣು ಹೋಗಲಿ ಎಂದು ಬಯಸಿದ್ದವರ ಬಾಯಿಗೆ ಲಡ್ಡು ಬಿದ್ದಿದೆ.[ಉಪಚುನಾವಣೆ: ಹೆಬ್ಬಾಳದಲ್ಲಿ ನಿಜವಾಗಿ ಗೆದ್ದಿದ್ದು ಯಾರು?]
ಇವೆಲ್ಲಾ ಒತ್ತಟ್ಟಿಗೆ ಇರಲಿ, ಚುನಾವಣೆ ಮುಗಿದ್ ಮ್ಯಾಲೇ ನಮ್ಮ ನಾಗರಾಜ ಹೀಗೊಂದು ಹಾಡು ಹೇಳಿಕೊಂಡು ತಿರುಗಾಡ್ತಾ ಇದ್ದಾ. ನಾನು ಗಮನವಿಟ್ಟು ಕೇಳಿದೆ.. ಭಾಳ ಛಲೋ ಐತ್ರಪ್ಪಾ.. ನೀವು ಒಂದ್ ಸಾರಿ ಕೇಳ್ಕಂಡ್ ಬರ್ರಲಾ...

ಬಿಜೆಪಿಗೆ....ರಂಗಿ ತರಂಗ
ಕಾಂಗ್ರೆಸ್ಗೆ....ಗೃಹ ಭಂಗ
ಜೆಡಿಎಸ್ಗೆ....ರಸ ಭಂಗ..!
ಬಿಜೆಪಿಗೆ ಜನರಿಂದ ....ಮುದ್ದು
ಕಾಂಗ್ರೆಸ್ ಗೆ ಜನರಿಂದ..ಗುದ್ದು
ಜೆ.ಡಿ.ಎಸ್. ಗೆ ಜನ ಕಳಿಸಿದ್ದಾರೆ..ಒದ್ದು..!
ಬಿಜೆಪಿ..ವಿನ್ನರ್
ಕಾಂಗ್ರೆಸ್ ..ರನ್ನರ್
ಜೆಡಿಎಸ್..ಢಮಾರ್..!
ಬಿಜೆಪಿಗೆ........ಶಂಖ
ಕಾಂಗ್ರೆಸ್ ಗೆ...ಜಾಗಟೆ
ಜೆಡಿಎಸ್ ಗೆ..ಮಂಗಳಾರತಿ..!
ಬಿಜೆಪಿಗೆ... ನನಸಾಯ್ತು..ಎರಡು ಕನಸು
ಕಾಂಗ್ರೆಸ್ ....ನಾನು ನನ್ನ ಕನಸು
ಜೆಡಿಎಸ್ ಗೆ..ತಿರುಕನ ಕನಸು..![ಉಪ ಚುನಾವಣೆಯಲ್ಲಿ ಜೆಡಿಎಸ್ ಹೆ ಹೀನಾಯ ಸೋಲೆಕೆ?]
ಬಿಜೆಪಿಗೆ...ಶಿಕಾರಿ
ಕಾಂಗ್ರೆಸ್ ಗೆ ಸವಾರಿ
ಜೆಡಿಎಸ್...ಪರಾರಿ...!
ಬಿಜೆಪಿಗೆ....ಅದೃಷ್ಟ ಸರಿಯಿಲ್ಲ..
ಕಾಂಗ್ರೆಸ್ ಗೆ..ವಾಚ್..ಸರಿಯಿಲ್ಲ..
ಜೆಡಿಎಸ್ಗೆ...ಟೈಮೇ..ಸರಿಯಿಲ್ಲ...!
ಬಿಜೆಪಿಗೆ..ಪನ್ನೀರು
ಕಾಂಗ್ರೆಸ್ ಗೆ..ಕಣ್ಣೀರು
ಜೆಡಿಎಸ್ಗೆ..ಎಳ್ಳು ನೀರು...!(ವಾಟ್ಸಪ್ ಕೃಪೆ)[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]
ಅಬ್ಬಾ ನಾಗರಾಜ ಯಾವ ಕವಿ ಪುಂಗವರಿಗೂ ಕಡಿಮೆ ಇಲ್ಲ ಬಿಡಿ. ಇಡೀ ಫಲಿತಾಂಶವನ್ನು ಅದು ಹೇಗೆ ಹೇಳಿದ್ದಾನೆ. ರಾಜಕಾರಣವನ್ನು ನಿವಾಳಿಸಿ ಒಗೆದಿದ್ದಾನೆ ನೋಡಿ....! ಇಂಗ್ಲಿಷ್, ಕನ್ನಡ ಭಾಷೆಯನ್ನು ಮಿಕ್ಸ್ ಮಾಡ್ಯಾನ ಅದರ ಜತಿಗೆ ಸಿನಿಮಾ ಹೆಸ್ರುಗಳನ್ನು ಸಖತ್ತಾಗೆ ಬಳಸಿಕಂಡ್ಯಾನ ಬಿಡ್ರಪ್ಪಾ...! ಬರೆದವರಿಗೊಂದು ಸಲಾಂ ಹೇಳುತ್ತ ನಿಮ್ಮ ಮನಸ್ಸಿನಲ್ಲೇ ಹಾಡನ್ನು ರಾಗವಾಗಿ ಗುನುಗಿರಿ..
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್












Click it and Unblock the Notifications