ಕಾಪಿ ರೈಟ್ - ಸಮಿತಿ ಮಾತ್ರ ರಾಂಗ್!

ಏನಿದು ಕಾಪಿ ರೈಟ್ ಕಾಯ್ದೆ?
ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ, ವಾಸ್ತು ಶಿಲ್ಪ, ಕಂಪ್ಯೂಟರ್ ಪ್ರೋಗ್ರಾಮ್ ಸೇರಿದಂತೆ ಕ್ರಿಯಾಶೀಲತೆಯ ಎಲ್ಲ ಪ್ರಕಾರದ ಆಲೋಚನೆ, ಉತ್ಪನ್ನಗಳ ವಿಷಯಕ್ಕೂ ಈ ಕಾನೂನು ಅನ್ವಯಿಸುತ್ತೆ. ಸೃಜನಶೀಲತೆಯ ಎಲ್ಲ ಪ್ರಕಾರಗಳಲ್ಲೂ ಮೂಲ ಸೃಷ್ಟಿಕರ್ತನ ಹಕ್ಕನ್ನು ಕಾಪಾಡುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕಾಯ್ದೆಯೇ ಈ ಕಾಪಿ ರೈಟ್ ಕಾಯಿದೆ.
ಬಾಲಿವುಡ್ ಸಮಿತಿ ಎಷ್ಟು ಸರಿ?
ಈ ಕಾಯ್ದೆ ಅಸ್ತಿತ್ವಕ್ಕೆ ಬಂದು ಸುಮಾರು 53 ವರ್ಷಗಳಾಗಿರೋದ್ರಿಂದ, ಹಾಗೇ ಕಳೆದ 50 ವರ್ಷಗಳಲ್ಲಿ ಎಷ್ಟೋ ಹೊಸ ಬಗೆಯ ವಿಷಯಗಳು ಕಾಪಿ ರೈಟ್ ನ ಪಟ್ಟಿಗೆ ಸೇರುವುದರ ಬಗ್ಗೆ ಸ್ಪಷ್ಟತೆ ಬೇಕಿರೋದ್ರಿಂದ ಈ ಪರಿಶೀಲನೆ ಸಮಿತಿ ರಚಿಸಿರೋದು. ಸಮಿತಿ ರಚಿಸೋ ಉದ್ದೇಶಾ ಏನೋ ಒಳ್ಳೇದೆ, ಆದ್ರೆ ಇಷ್ಟು ವೈವಿಧ್ಯತೆ ಇರೋ ಭಾರತದ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ ಮುಂತಾದ ವಿಷ್ಯಗಳ ಕಾಪಿ ರೈಟ್ ಬಗ್ಗೆ, ಇಡೀ ದೇಶಕ್ಕೆ ಅನ್ವಯಿಸುವಂತೆ ಕಾನೂನು ಬದಲಾಯಿಸಲು ಹೊರಟಾಗ ಅಲ್ಲಿ ದೇಶದ ಎಲ್ಲ ಭಾಗದ ಜನರಿಗೂ ಪ್ರಾತಿನಿಧ್ಯ ಸಿಗಬೇಕು ಅನ್ಸಲ್ವಾ ಗುರು? ಸ್ಥಳೀಯವಾದ ಸಮಸ್ಯೆಯೊಂದಕ್ಕೆ ಪರಿಹಾರ ಸೂಚಿಸಲು, ಆ ಸಮಸ್ಯೆಯನ್ನಿರಿತ ಸ್ಥಳೀಯರಿಗಲ್ಲದೇ ಇನ್ನಾರಿಗಾದರೂ ಸಾಧ್ಯವಾದೀತಾ? ಹಾಗಿದ್ದಾಗ, ಕರ್ನಾಟಕದಲ್ಲಿನ ಯಾವುದೋ ಒಬ್ಬ ಲೇಖಕ, ಇಲ್ಲವೇ ಚಿತ್ರ ನಿರ್ದೇಶಕ, ಇಲ್ಲವೇ ಸಂಗೀತ ನಿರ್ದೇಶಕ ಎದುರಿಸುವ ಕಾಪಿ ರೈಟ್ ಸಂಬಂಧಿತ ಸಮಸ್ಯೆ ಬಾಲಿವುಡ್ ನ ಪಂಡಿತರಿಗೆ ಎಂದಿಗಾದರೂ ಅರ್ಥವಾದೀತಾ?
ಕೊನೆಹನಿ
ಕಾಪಿ ರೈಟ್ ಕಾಯಿದೆಗೆ ಇರೋ ವ್ಯಾಪ್ತಿ ನಿಜಕ್ಕೂ ದೊಡ್ಡದು. ಅದು ಬರೀ ಸಿನೆಮಾ, ಸಿನೆಮಾ ಸಾಹಿತ್ಯ ಅನ್ನೋದಕ್ಕೆ ಸೀಮಿತವಾಗಿಲ್ಲ. ಜಾನಪದ, ಸುಗಮ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಹೀಗೆ ಸೃಜನಶೀಲತೆಯ ಹತ್ತು ಹಲವು ಪ್ರಕಾರಗಳಿಗೆ ಈ ಕಾಯ್ದೆ ಅನ್ವಯಿಸುತ್ತೆ. ಹಾಗೆಯೇ, ಈ ಎಲ್ಲ ಕ್ಷೇತ್ರಗಳ ಕಾಪಿ ರೈಟ್ ಸಮಸ್ಯೆಗಳು ಅಷ್ಟೇ ಬೇರೆಯಾದದ್ದು. ಆಯಾ ಭಾಗದಲ್ಲಿನ ಕಾಪಿ ರೈಟ್ ಸಮಸ್ಯೆಗಳ ಅರಿವೇ ಇಲ್ಲದೇ ಈ ಬಾಲಿವುಡ್ ಪಂಡಿತರು, ಸ್ಥಳೀಯರಿಗೆ ಬೇಡದ ಪರಿಹಾರ ಕೊಡಲು ಹೊರಟ್ರೆ ಅದು ಇನ್ನೊಂದು ರೀತಿಯ ಹೇರಿಕೆ ಅನ್ನಿಸಿಕೊಳ್ಳಲ್ವಾ ಗುರು?
(ಸ್ನೇಹಸೇತು : ಏನ್ ಗುರು?)
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications