ಕಾಪಿ ರೈಟ್ - ಸಮಿತಿ ಮಾತ್ರ ರಾಂಗ್!

ಏನಿದು ಕಾಪಿ ರೈಟ್ ಕಾಯ್ದೆ?
ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ, ವಾಸ್ತು ಶಿಲ್ಪ, ಕಂಪ್ಯೂಟರ್ ಪ್ರೋಗ್ರಾಮ್ ಸೇರಿದಂತೆ ಕ್ರಿಯಾಶೀಲತೆಯ ಎಲ್ಲ ಪ್ರಕಾರದ ಆಲೋಚನೆ, ಉತ್ಪನ್ನಗಳ ವಿಷಯಕ್ಕೂ ಈ ಕಾನೂನು ಅನ್ವಯಿಸುತ್ತೆ. ಸೃಜನಶೀಲತೆಯ ಎಲ್ಲ ಪ್ರಕಾರಗಳಲ್ಲೂ ಮೂಲ ಸೃಷ್ಟಿಕರ್ತನ ಹಕ್ಕನ್ನು ಕಾಪಾಡುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕಾಯ್ದೆಯೇ ಈ ಕಾಪಿ ರೈಟ್ ಕಾಯಿದೆ.
ಬಾಲಿವುಡ್ ಸಮಿತಿ ಎಷ್ಟು ಸರಿ?
ಈ ಕಾಯ್ದೆ ಅಸ್ತಿತ್ವಕ್ಕೆ ಬಂದು ಸುಮಾರು 53 ವರ್ಷಗಳಾಗಿರೋದ್ರಿಂದ, ಹಾಗೇ ಕಳೆದ 50 ವರ್ಷಗಳಲ್ಲಿ ಎಷ್ಟೋ ಹೊಸ ಬಗೆಯ ವಿಷಯಗಳು ಕಾಪಿ ರೈಟ್ ನ ಪಟ್ಟಿಗೆ ಸೇರುವುದರ ಬಗ್ಗೆ ಸ್ಪಷ್ಟತೆ ಬೇಕಿರೋದ್ರಿಂದ ಈ ಪರಿಶೀಲನೆ ಸಮಿತಿ ರಚಿಸಿರೋದು. ಸಮಿತಿ ರಚಿಸೋ ಉದ್ದೇಶಾ ಏನೋ ಒಳ್ಳೇದೆ, ಆದ್ರೆ ಇಷ್ಟು ವೈವಿಧ್ಯತೆ ಇರೋ ಭಾರತದ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ ಮುಂತಾದ ವಿಷ್ಯಗಳ ಕಾಪಿ ರೈಟ್ ಬಗ್ಗೆ, ಇಡೀ ದೇಶಕ್ಕೆ ಅನ್ವಯಿಸುವಂತೆ ಕಾನೂನು ಬದಲಾಯಿಸಲು ಹೊರಟಾಗ ಅಲ್ಲಿ ದೇಶದ ಎಲ್ಲ ಭಾಗದ ಜನರಿಗೂ ಪ್ರಾತಿನಿಧ್ಯ ಸಿಗಬೇಕು ಅನ್ಸಲ್ವಾ ಗುರು? ಸ್ಥಳೀಯವಾದ ಸಮಸ್ಯೆಯೊಂದಕ್ಕೆ ಪರಿಹಾರ ಸೂಚಿಸಲು, ಆ ಸಮಸ್ಯೆಯನ್ನಿರಿತ ಸ್ಥಳೀಯರಿಗಲ್ಲದೇ ಇನ್ನಾರಿಗಾದರೂ ಸಾಧ್ಯವಾದೀತಾ? ಹಾಗಿದ್ದಾಗ, ಕರ್ನಾಟಕದಲ್ಲಿನ ಯಾವುದೋ ಒಬ್ಬ ಲೇಖಕ, ಇಲ್ಲವೇ ಚಿತ್ರ ನಿರ್ದೇಶಕ, ಇಲ್ಲವೇ ಸಂಗೀತ ನಿರ್ದೇಶಕ ಎದುರಿಸುವ ಕಾಪಿ ರೈಟ್ ಸಂಬಂಧಿತ ಸಮಸ್ಯೆ ಬಾಲಿವುಡ್ ನ ಪಂಡಿತರಿಗೆ ಎಂದಿಗಾದರೂ ಅರ್ಥವಾದೀತಾ?
ಕೊನೆಹನಿ
ಕಾಪಿ ರೈಟ್ ಕಾಯಿದೆಗೆ ಇರೋ ವ್ಯಾಪ್ತಿ ನಿಜಕ್ಕೂ ದೊಡ್ಡದು. ಅದು ಬರೀ ಸಿನೆಮಾ, ಸಿನೆಮಾ ಸಾಹಿತ್ಯ ಅನ್ನೋದಕ್ಕೆ ಸೀಮಿತವಾಗಿಲ್ಲ. ಜಾನಪದ, ಸುಗಮ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಹೀಗೆ ಸೃಜನಶೀಲತೆಯ ಹತ್ತು ಹಲವು ಪ್ರಕಾರಗಳಿಗೆ ಈ ಕಾಯ್ದೆ ಅನ್ವಯಿಸುತ್ತೆ. ಹಾಗೆಯೇ, ಈ ಎಲ್ಲ ಕ್ಷೇತ್ರಗಳ ಕಾಪಿ ರೈಟ್ ಸಮಸ್ಯೆಗಳು ಅಷ್ಟೇ ಬೇರೆಯಾದದ್ದು. ಆಯಾ ಭಾಗದಲ್ಲಿನ ಕಾಪಿ ರೈಟ್ ಸಮಸ್ಯೆಗಳ ಅರಿವೇ ಇಲ್ಲದೇ ಈ ಬಾಲಿವುಡ್ ಪಂಡಿತರು, ಸ್ಥಳೀಯರಿಗೆ ಬೇಡದ ಪರಿಹಾರ ಕೊಡಲು ಹೊರಟ್ರೆ ಅದು ಇನ್ನೊಂದು ರೀತಿಯ ಹೇರಿಕೆ ಅನ್ನಿಸಿಕೊಳ್ಳಲ್ವಾ ಗುರು?
(ಸ್ನೇಹಸೇತು : ಏನ್ ಗುರು?)
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications