ಕನ್ನಡ ಬೇಡ! ಕನ್ನಡದೋರ ಬೆಂಬಲ ಬೇಕನ್ನೋ ಮಲ್ಯ!

ಅಭಿಮಾನಿಗಳ ಕನ್ನಡ ಹಾಡು!
ನಮ್ಮ ತಂಡಾನ ಹುರಿದುಂಬಿಸೋಕೆ ತಂಡದ ಅಭಿಮಾನಿಗಳೇ ಸೇರಿ ಮಾಡಿರೋ ತಾಕತ್ತು ಅನ್ನೋ ಕನ್ನಡದ ಹಾಡು ಇವತ್ತು ಕರ್ನಾಟಕದ ಜನರ ನಾಲಿಗೆ ಮೇಲೆ ನಲೀತಿದೆ. ತಾಕತ್ತು ಅನ್ನೋ ಸಕ್ಕತ್ತು ಹಾಡು ರೇಡಿಯೊದಲ್ಲಿ, ಟಿವಿಯಲ್ಲಿ, ಇಂಟರ್ನೆಟ್ಟಲ್ಲಿ... ಹೀಗೆ ಎಲ್ಲ ಕಡೆ ಕೇಳ್ತಾ ಇದೀವಿ. ಅಷ್ಟೆ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೀತಾ ಇರೋ ನಮ್ಮ ಪಂದ್ಯಗಳಲ್ಲಿ ತಾಕತ್ತು ಹಾಡು ಜೋರಾಗಿ ಕೇಳಿ ಬರ್ತಿದೆ!
ಅಭಿಮಾನಿಗಳನ್ನು ನೋಡಾದ್ರೂ ಕಲೀಬಾರ್ದಾ?
ಅಭಿಮಾನಿಗಳಿಗೆ ಇರೋ ಬುದ್ಧಿ ನಮ್ಮ ತಂಡದ ಮಾಲೀಕರಿಗೆ ಇಲ್ವಲ್ಲ ಗುರು! ಯಾರನ್ನ ಮೆಚ್ಚಸೋಕೆ ಹಿಂದೀಲಿ ಆ ಹಾಡು ಮಾಡಿದಾರೆ? ನಮ್ಮ ಜನರನ್ನ ಮೆಚ್ಚಿಸೋಕಾ? ಅದೇ ಉದ್ದೇಶ ಆಗಿದ್ದಿದ್ರೆ ಕನ್ನಡದಲ್ಲಿ ಮಾಡಿರೋರು. ಇಷ್ಟಕ್ಕೂ ಇವತ್ತು ಬೆಂಗಳೂರು ತಂಡಾನ ಹುರಿದುಂಬಿಸುತ್ತಿರೋರು ಯಾರು ಗುರು? ಕರ್ನಾಟಕದಲ್ಲಿರುವ ನಾವುಗಳು ತಾನೆ? ನಮ್ಮೂರ ತಂಡ ಅಂದ್ರೆ ನಮ್ಮ ತಂಡ ಅನ್ಕೊಂಡಿರೋ ನಮ್ಮ ಭಾಷೇಲಿ ಹಾಡು ಮಾಡೋದು ಬಿಟ್ಟು, ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಮಾಡೋ ಹುಂಬತನ ಯಾಕ್ ಗುರು?
ಹಿಂದಿ ಹಾಡು ಅಖಿಲ ಭಾರತದೋರ ಬೆಂಬಲ ಗಳ್ಸಕ್ಕಾ?
ಈ ಹಾಡು ಹಿಂದೀಲಿರೋದು ಬೇರೆಯವರ ಬೆಂಬಲ ಗೆಲ್ಲೋಕಾ? ಬೆಂಗಳೂರು ದಿಲ್ಲಿ ಮಧ್ಯೆ ಒಂದು ಪಂದ್ಯ ಆದ್ರೆ, ದಿಲ್ಲಿ ಜನತೆ ಯಾರನ್ನ ಬೆಂಬಲಿಸ್ತಾರೆ? ದಿಲ್ಲೀನ ತಾನೆ? ಬೆಂಗಳೂರೋರು ನಮ್ ಭಾಷೇಲಿ ಹಾಡು ಮಾಡಿದಾರೆ, ಅವ್ರು ಗೆಲ್ಲಲಿ ಅಂತಾರಾ? ಕೊನೆಗೆ ಬೆಂಗಳೂರು ತಂಡ ಗೆಲ್ಲಲಿ ಅಂತ ಚಪ್ಪಾಳೆ ತಟ್ಟೋರು ನಮ್ಮ ಜನಾ ತಾನೆ? ಹಾಗಿದ್ದಲ್ಲಿ ಇಲ್ಲಿನ ತಂಡಕ್ಕೆ ಒಳ್ಳೆದಾಗಲಿ ಅಂತ ಹಾರೈಸಿ ಮಾಡೋ ಹಾಡು ಕನ್ನಡದಲ್ಲಿ ತಾನೆ ಇರಬೇಕು? ಇನ್ನೂ ಅವ್ರುಗಳು "ಕನ್ನಡದವ್ರು ದಿಕ್ಕೆಟ್ಟ ಮುಂಡೇವು, ಅವರ ಭಾಷೇಲಿ ಒಂದು ಹಾಡು ಮಾಡಕ್ಕೂ ಆಗದೋರು" ಅಂತಾ ಆಡ್ಕೊಂಡು ನಗ್ತಾರೆ ಅಷ್ಟೆ!
ಅಂತಾಷ್ಟ್ರೀಯ ಆಟಗಾರರನ್ನು ಮೆಚ್ಚಿಸೋಕಾ?
ಹೋಗಲಿ, ಈ ಹಾಡು ಹಿಂದೀಲಿರೋದು ನಮ್ಮ ತಂಡದಲ್ಲಿರೋ ವಿದೇಶಿ ಆಟಗಾರರನ್ನು ಮೆಚ್ಚಿಸೋಕಾ? ಅಲ್ಲಾ ಜಾಕ್ ಕಾಲಿಸ್ ಆಗಲೀ, ಮಾರ್ಕ್ ಬೌಚರ್ ಆಗಲೀ ಅಥ್ವಾ ಟೇಲರ್ ಆಗಲಿ, ಅವರಿಗೆ ಹಿಂದೀನೂ ಒಂದೇ ಕನ್ನಡಾನೂ ಒಂದೇ ಅಲ್ವೇನ್ರಿ? ಅಷ್ಟ್ರ ಮೇಲೆ ಅವ್ರಿಗೆ ಇದೇನಾದ್ರೂ ಅರ್ಥ ಆದ್ರೂ, ಇಡೀ ಭಾರತಕ್ಕೆಲ್ಲಾ ಒಂದೇ ಭಾಷೆ ಅಂತ ತಪ್ಪು ತಿಳ್ಕಳಲ್ವಾ ಗುರು? ಹಾಗಿದ್ದಲ್ಲಿ ಯಾರನ್ನ ಮೆಚ್ಚಿಸೋಕೆ ಈ ಹಿಂದಿ ಹಾಡು?
ಮೊದ್ಲು ಮನೆ ಗೆದ್ದು ಆಮೇಲೆ ಊರು ಗೆಲ್ಲಬೇಕು!
ಮೊಹಾಲಿಯಂತ ತಂಡಗಳು ತಮ್ಮೋರನ್ನ ಪ್ರೋತ್ಸಾಹಿಸಲು ತಮ್ಮ ಮಣ್ಣಿನ ಸೋಗಡಿರೋ ಪಂಜಾಬಿ ಭಾಂಗ್ಡಾ ಶೈಲಿ ಹಾಡು ಮಾಡಿ ತಮ್ಮ ಭಾಷೆನ ಬಳುಸ್ತಿಲ್ವಾ? ಅಲ್ಲಿ ಹಂಗಿದ್ರೆ ಇಲ್ಲಿ ನಮ್ಮ ಮಲ್ಯ ಸಾಹೇಬರ ರಾಯಲ್ ಛಾಲೆಂಜರ್ಸ್ ತಂಡದೋರು ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಹಾಡು ಮಾಡಿ ನಮ್ಮ ತಲೆ ಮೇಲೆ ಹಾಕ್ತಾ ಇದಾರಲ್ಲ ಗುರು!
ಇವ್ರು ಏನೇ ತಿಪ್ಪರಲಾಗ ಹಾಕುದ್ರೂ ತಾಕತ್ತು ಹಾಡಿಗಿರೋ ಜನಪ್ರಿಯತೆ ಇವ್ರ ಹಿಂದಿ ಹಾಡಿಗೆ ಸಿಗಲ್ಲ. ಈ ತಾಕತ್ತಿನ ಹಾಡು ಬೆಂಗಳೂರಿನ ತಂಡಕ್ಕೆ ಬೆಂಬಲ ಹುಟ್ಸಕ್ಕೆ ಕನ್ನಡವೇ ಸಾಧನ ಅಂತ ಸಾರ್ತಿದೆಯಲ್ಲಾ ಗುರು! ತಾಕತ್ತು ಹಾಡಿಗೆ ಸಿಕ್ಕಿರೋ ಜನಪ್ರಿಯತೆ ನೋಡಾದ್ರು ರಾಯಲ್ ಛಾಲೆಂಜರ್ಸ್ ತಂಡದ ಎಲ್ಲ ಪ್ರಚಾರದ ವ್ಯವಸ್ಥೇಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಇದ್ರಿಂದ ಅವ್ರಿಗೇ ಲಾಭ. ಇಷ್ಟಕ್ಕೂ ಕನ್ನಡ ಹಾಡು ಇರಬೇಕು ಅಂತಿರೋದು ನಮ್ಮ ಬೆಂಗಳೂರಿನ ತಂಡಕ್ಕೆ ತಾನೆ? ನಮ್ಮೂರಿನ ತಂಡದ ಹಾಡಲ್ಲದೆ ಇನ್ಯಾವ ತಂಡದ ಹಾಡು ಕನ್ನಡದಲ್ಲಿ ಇರಕ್ಕೆ ಸಾಧ್ಯಾ ಗುರು?
)
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications