ನಗೆಗಿಂತ ಮಿಗಿಲಾದ ಧರ್ಮ, ಸಂಭ್ರಮ ಯಾವುದಿದೆ ಹೇಳಿ?
ನಾಲ್ಕು ನಿಮಿಷಗಳ ನಂತರ ಅಣುಬಾಂಬ್ ದಾಳಿಯಾಗುತ್ತದೆ ಅಂದ್ರೆ ಏನು ಮಾಡುತ್ತೀರಿ? -ಹೆಂಡತಿ ಗಂಡನಿಗೆ ಕೇಳಿದಳು.
ನಿನ್ನನ್ನು ಪ್ರೀತಿಸುತ್ತೇನೆ ಎಂದ ಗಂಡ.
ಅದಕ್ಕೆ ಹೆಂಡತಿ ಕೇಳಿದಳು -ಉಳಿದ ಮೂರು ನಿಮಿಷ ಏನು ಮಾಡುತ್ತೀರಿ?
*
ಮುಲ್ಲಾ ನಸ್ರುದ್ದೀನ್ ಮನೆಗೆ ಬಂದ ತಕ್ಷಣ ಆತನ ಹೆಂಡತಿ ಅವನ ಅಂಗಿಯನ್ನೆಲ್ಲ ನೋಡಿ, ಅದರಲ್ಲಿ ಏನಿರಬಹುದೆಂದು ಹುಡುಕುತ್ತಿದ್ದಳು. ಕಾಗದದಲ್ಲಿ ಫೋನ್ ನಂಬರ್ ಕಂಡರೆ 'ಇದ್ಯಾವ ಹೆಂಗಸಿನದು" ಎಂದು ಕೇಳುತ್ತಿದ್ದಳು. ಕೂದಲು ಸಿಕ್ಕರೆ 'ಇಂದು ಯಾವಳ ಜತೆ ಮಲಗಿ ಬಂದೆ ಹೇಳು" ಎಂದು ಕೇಳುತ್ತಿದ್ದಳು. ಮುಲ್ಲಾನ ಮೇಲೆ ಅಂಥ ಸಂದೇಹ.
ಒಂದು ದಿನ ಮುಲ್ಲಾನ ಕಿಸೆಯ್ಲಿ ಏನೂ ಸಿಗಲಿಲ್ಲ. ಹೆಂಡತಿ ಮುಲ್ಲಾನಿಗೆ ಹೊಡೆಯಲಾರಂಭಿಸಿದಳು. ಮುಲ್ಲಾನಿಗೆ ಹೆಂಡತಿ ಯಾಕೆ ಹೊಡೆಯುತ್ತಿದ್ದಾಳೆಂಬುದೇ ಗೊತ್ತಾಗಲಿಲ್ಲ. ಕಾರಣ ಕೇಳಿದ್ದಕ್ಕೆ, ಹೇಳಿದಳು -'ಇಂದು ನೀನು ಬೋಳು ತಲೆ ಹೆಂಗಸಿನ ಜತೆ ಮಲಗಿ ಬಂದೆ ಹೌದಲ್ವಾ?"
*
ಯುವತಿಯಾಬ್ಬಳು ಪೊಲೀಸ್ ಅಧಿಕಾರಿ ಬಳಿ ಹೋಗಿ, 'ಅಲ್ಲಿದ್ದಾನಲ್ಲ, ಅವನು ನನಗೆ ತೀವ್ರ ಅವಮಾನ ಮಾಡುತ್ತಿದ್ದಾನೆ. ದಯವಿಟ್ಟು ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ"ಎಂದಳು. ಅದಕ್ಕೆ ಪೊಲೀಸ್ ಅಧಿಕಾರಿ 'ನಾನೂ ನೋಡ್ತಾ ಇದ್ದೇನೆ. ಅವನು ನಿನ್ನ ಕಡೆ ಒಂದು ಸಲ ಕೂಡ ಕತ್ತೆತ್ತಿ ನೋಡಿಲ್ಲವಲ್ಲ" ಅಂದ. ಅದಕ್ಕೆ ಯುವತಿ ಕೇಳಿದಳು 'ಅದು ಅವಮಾನವಲ್ಲವೇ?"
*
ಮರ್ಫಿಗೆ ತ್ರಿವಳಿಗಳು ಜನಿಸಿದ್ದಕ್ಕೆ, ದೇವಸ್ಥಾನದ ಅರ್ಚಕ ಅಭಿನಂದಿಸುತ್ತಾ, 'ಕೊನೆಗೂ ದೇವರು ನಿಮ್ಮ ಪಾಲಿಗೆ ನಗು ಚೆಲ್ಲಿದನಲ್ಲಾ" ಎಂದರು. ಇದನ್ನು ಕೇಳಿದ ಮರ್ಫಿ ಹೇಳಿದ -'ಅದು ಕೇವಲ ನಗುವಲ್ಲ, ಅಟ್ಟಹಾಸದ ನಗು".
*
ಎಂಟು ಸಲ ವಿವಾಹವಾಗಿದ್ದ ಹಾಲಿವುಡ್ನ ಖ್ಯಾತ ಅಭಿನೇತ್ರಿ ಗ್ಲಾರಿಯಾ ಲವ್ಜಾಯ್ ಮುಪ್ಪಿನಲ್ಲಿ ತೀರಿಕೊಂಡಳು. ಮೊದಲ ಗಂಡ ರೆಜಿನಾಲ್ಡ್ನ ಸಮಾಧಿಯ ಪಕ್ಕದಲ್ಲೇ ಆಕೆಯನ್ನು ಸಮಾಧಿ ಮಾಡಲಾಯಿತು. ಆಕೆಯ ಸಮಾಧಿಗೆ ಪುಷ್ಪಗುಚ್ಚವಿರಿಸುವಾಗ ಗ್ಲಾರಿಯಾ ಲವ್ಜಾಯ್ಯ ಇಬ್ಬರು ಸ್ನೇಹಿತೆಯರಿಗೆ ಆಕೆಯ ಸಮಾಧಿ ಮೇಲೆ ಬರೆದ ವಾಕ್ಯ ಕಣ್ಣಿಗೆ, Together at last ಎಂದು ಬರೆದಿತ್ತು.
ಒಬ್ಬಳು ಕೇಳಿದಳು -'ಗ್ಲಾರಿಯಾ ಮತ್ತು ರೆಜಿನಾಲ್ಡ್ ಅಷ್ಟೊಂದು ಅನ್ಯೋನ್ಯನಾಗದ್ದರಾ? ನನಗೆ ಗೊತ್ತೇ ಇರಲಿಲ್ಲ".
ಈ ಮಾತು ಕೇಳಿದ ಮತ್ತೊಬ್ಬಳು ಹೇಳಿದಳು -'ಡೋಂಟ್ ಬಿ ಸಿಲ್ಲಿ. ಆ ವಾಕ್ಯ ಆಕೆಯ ಕಾಲುಗಳನ್ನು ನೋಡಿ ಬರೆಯಲಾಗಿದೆ."
ನಿಮಗಾಗಿ ಮತ್ತಷ್ಟು ಜೋಕ್ಸ್, ನಿಮಗಾಗಿ ಇಲ್ಲಿ ಇನ್ನಷ್ಟು ಜೋಕ್ಸ್ ಕಾಯುತ್ತಿವೆ!
-
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು












Click it and Unblock the Notifications