ವೃಶ್ಚಿಕ ಮತ್ತಿತರ ನಾಲ್ಕು ರಾಶಿಗಳ 2016ರ ವರ್ಷಭವಿಷ್ಯ
ಸಾಡೇಸಾತಿಯ ಎರಡನೇ ಹಂತದಲ್ಲಿ ಕಾಲಿಟ್ಟಿರುವ ವೃಶ್ಚಿಕ ರಾಶಿಯವರು ಈ ವರ್ಷ ಅಂದರೆ ಆಗಸ್ಟ್ ವರೆಗೆ ಸಂತಸದಿಂದಿರಬಹುದು. ಆಗಸ್ಟ್ ತಿಂಗಳಿನ ನಂತರ ಗುರುಬಲ ಕೈಕೊಡುವುದರಿಂದ ಸ್ವಲ್ಪ ಜೀವನದಲ್ಲಿ ಏರುಪೇರಾಗುವುದು. ಇನ್ನು ರಾಹು-ಕೇತು ಸಹ ಸ್ವಲ್ಪ ಕಿರಿಕ್ ನೀಡುವುದರಿಂದ ಜಾಗೃತೆಯಿಂದಿರುವುದು ಒಳಿತು ಈ ರಾಶಿಯವರು. ಸಾಡೇಸಾತಿಗೆ ಸಂಬಂಧಪಟ್ಟ ಪರಿಹಾರಗಳನ್ನು ಮಾಡಿಕೊಂಡು ಆಗಷ್ಟ್ ನಲ್ಲಿ ಗುರುಶಾಂತಿ ಕೂಡ ಮಾಡಿಸಿಟ್ಟುಕೊಳ್ಳುವುದು ಮುಖ್ಯ.
ದೇಹಾರೋಗ್ಯದಲ್ಲಿ ತೊಂದರೆಗಳು ಸಣ್ಣದಾಗಿ ಪ್ರಾರಂಭವಾಗಿ ಮುಂದೆ ಉಗ್ರರೂಪ ಪಡೆದುಕೊಳ್ಳಬಹುದು. ಆದ್ದರಿಂದ ಎಚ್ಚರಿಕೆಯಿಂದಿರಲು ಕಲಿಯಬೇಕು. ಈ ರಾಶಿಯವರು ಗಣಪ ಮತ್ತು ಹನುಮನ ಆರಾಧನೆಯೊಂದಿಗೆ ಶಂಭೋಲಿಂಗನ ಆರಾಧನೆ ಕೂಡ ಮಾಡುತ್ತಿದ್ದರೆ ಎಲ್ಲದಕ್ಕೂ ಪರಿಹಾರ ಸಿಗಬಹುದು.
ಧನುಸ್ಸು ರಾಶಿ : ಸಾಡೇಸಾತಿಯ ಮೊದಲನೇ ಹಂತದಲ್ಲಿ ಕಾಲಿಟ್ಟಿರುವ ಧನುಸ್ಸು ರಾಶಿಯವರು ಈಗಾಗಲೇ ಶನಿಕಾಟದನುಭವ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಗಣನೀಯ ಪ್ರಮಾಣದಲ್ಲಿ ಕಾಡಾಟ ಏರಿಕೆಯಾಗಲಿದೆ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ವರ್ಷವಿದು. ರಾಹು-ಕೇತುಗಳು ಒಳಿತನ್ನು ಬಯಸುವುದಿಲ್ಲವಾದ್ದರಿಂದ. ಮೊದಲು ರಾಹು-ಕೇತು ಶಾಂತಿ ಹಾಗೂ ಶನಿಶಾಂತಿ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. [ಇಷ್ಟದಂತೆ ಇದ್ರೆ ಶಾಂತಸಾಗರ, ಇಲ್ಲ ಕುರುಕ್ಷೇತ್ರ]

ಮಕರ ರಾಶಿ : ಲಾಭ ಸ್ಥಾನದಲ್ಲಿ ಶನಿಯು ಇರುವುದರಿಂದ, ಮುಂದಿನ ವರ್ಷ ಮುಗಿಯುವವರೆಗೂ ಶನಿದೇವನ ಕೃಪಾಕಟಾಕ್ಷವಿರುವುದರಿಂದ, ಮುಖ್ಯವಾದ ಕೆಲಸಗಳನ್ನು ಈ ಕೂಡಲೇ ಆರಂಭಿಸಿಕೊಳ್ಳಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಶನಿಕಾಟ ಶುರುವಾಗುವುದರಿಂದ ಸ್ವಲ್ಪ ಪ್ಲ್ಯಾನ್ ಮಾಡಿಕೊಂಡು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕಿಳಿಸಬೇಕು.
ರಾಹು-ಕೇತುಗಳು ಮತ್ತು ಗುರು ಅಷ್ಟಕ್ಕಷ್ಟೇ ಆಗಿರುವುದರಿಂದ ಶನಿದೇವನ ಕೃಪಾಕಟಾಕ್ಷವನ್ನು ನಂಬಿಕೊಂಡರೆ ಸಾಕು. ಉಳಿದಿದ್ದೆಲ್ಲವೂ ತಾನಾಗಿಯೇ ಕೂಡಿಕೊಂಡು ಬರುವ ವರ್ಷವಿದು. [ಐ ಲವ್ ಯೂ ಹೇಳೋಕೆ ಬಿಂಕವೇಕೆ?]
ಕುಂಭ ರಾಶಿ : ಗುರುವಿನ ಕೃಪೆಯಿರುವುದರಿಂದ ಈ ವರ್ಷ ಈ ರಾಶಿಯವರಿಗೆ ನಷ್ಟವೇನೂ ಆಗೋದಿಲ್ಲ. ಲಾಭವೇ ಹೆಚ್ಚೆನ್ನಬಹುದು. ಆದರೆ, ದೇಹಾರೋಗ್ಯದಲ್ಲಿ ಸ್ವಲ್ಪಹೆಚ್ಚಿನ ತೊಂದರೆ ಬರುವುದರಿಂದ ಜಾಗೃತೆ ವಹಿಸಿಕೊಂಡರೆ ಸಾಕು. ಶನಿ, ರಾಹು ಮತ್ತು ಕೇತುಗಳು ಏನೂ ತೊಂದರೆ ಮಾಡುವುದಿಲ್ಲವಾದರೂ ದೈವಾರಾಧನೆ ತಪ್ಪಿಸದೇ ಮಾಡಿಕೊಳ್ಳುತ್ತಿದ್ದರೆ ಶುಭಫಲ ಶತಸಿದ್ಧ.
ಮೀನ ರಾಶಿ : ಅಷ್ಟಮ ಶನಿಕಾಟದಿಂದ ಪಾರಾಗಿ ಬಂದಿರುವ ಮೀನ ರಾಶಿಯವರು ಈಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಏಕೆಂದರೆ ಈ ವರ್ಷ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಬಹುದು. ಜೊತೆಗೆ ರಾಹು ಮತ್ತು ಕೇತು ಹಾಗೂ ಗುರು ಅಲ್ಪಕಾಣಿಕೆ ಜೀವನಕ್ಕೆ ನೀಡುವುದರಿಂದ ಸಂತಸವಿರುತ್ತದೆ. ಒಟ್ಟಿನಲ್ಲಿ ಹೊಸ ವರ್ಷ ಹೊಸತನವನ್ನು ಜೀವನದಲ್ಲಿ ಮೂಡಿಸಿ ಮೀನ ರಾಶಿಯವರಿಗೆ ಸಂತಸವಿರುವಂತಾಗುತ್ತದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications