ವೃಶ್ಚಿಕ ಮತ್ತಿತರ ನಾಲ್ಕು ರಾಶಿಗಳ 2016ರ ವರ್ಷಭವಿಷ್ಯ
ಸಾಡೇಸಾತಿಯ ಎರಡನೇ ಹಂತದಲ್ಲಿ ಕಾಲಿಟ್ಟಿರುವ ವೃಶ್ಚಿಕ ರಾಶಿಯವರು ಈ ವರ್ಷ ಅಂದರೆ ಆಗಸ್ಟ್ ವರೆಗೆ ಸಂತಸದಿಂದಿರಬಹುದು. ಆಗಸ್ಟ್ ತಿಂಗಳಿನ ನಂತರ ಗುರುಬಲ ಕೈಕೊಡುವುದರಿಂದ ಸ್ವಲ್ಪ ಜೀವನದಲ್ಲಿ ಏರುಪೇರಾಗುವುದು. ಇನ್ನು ರಾಹು-ಕೇತು ಸಹ ಸ್ವಲ್ಪ ಕಿರಿಕ್ ನೀಡುವುದರಿಂದ ಜಾಗೃತೆಯಿಂದಿರುವುದು ಒಳಿತು ಈ ರಾಶಿಯವರು. ಸಾಡೇಸಾತಿಗೆ ಸಂಬಂಧಪಟ್ಟ ಪರಿಹಾರಗಳನ್ನು ಮಾಡಿಕೊಂಡು ಆಗಷ್ಟ್ ನಲ್ಲಿ ಗುರುಶಾಂತಿ ಕೂಡ ಮಾಡಿಸಿಟ್ಟುಕೊಳ್ಳುವುದು ಮುಖ್ಯ.
ದೇಹಾರೋಗ್ಯದಲ್ಲಿ ತೊಂದರೆಗಳು ಸಣ್ಣದಾಗಿ ಪ್ರಾರಂಭವಾಗಿ ಮುಂದೆ ಉಗ್ರರೂಪ ಪಡೆದುಕೊಳ್ಳಬಹುದು. ಆದ್ದರಿಂದ ಎಚ್ಚರಿಕೆಯಿಂದಿರಲು ಕಲಿಯಬೇಕು. ಈ ರಾಶಿಯವರು ಗಣಪ ಮತ್ತು ಹನುಮನ ಆರಾಧನೆಯೊಂದಿಗೆ ಶಂಭೋಲಿಂಗನ ಆರಾಧನೆ ಕೂಡ ಮಾಡುತ್ತಿದ್ದರೆ ಎಲ್ಲದಕ್ಕೂ ಪರಿಹಾರ ಸಿಗಬಹುದು.
ಧನುಸ್ಸು ರಾಶಿ : ಸಾಡೇಸಾತಿಯ ಮೊದಲನೇ ಹಂತದಲ್ಲಿ ಕಾಲಿಟ್ಟಿರುವ ಧನುಸ್ಸು ರಾಶಿಯವರು ಈಗಾಗಲೇ ಶನಿಕಾಟದನುಭವ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಗಣನೀಯ ಪ್ರಮಾಣದಲ್ಲಿ ಕಾಡಾಟ ಏರಿಕೆಯಾಗಲಿದೆ. ಆದ್ದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ವರ್ಷವಿದು. ರಾಹು-ಕೇತುಗಳು ಒಳಿತನ್ನು ಬಯಸುವುದಿಲ್ಲವಾದ್ದರಿಂದ. ಮೊದಲು ರಾಹು-ಕೇತು ಶಾಂತಿ ಹಾಗೂ ಶನಿಶಾಂತಿ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. [ಇಷ್ಟದಂತೆ ಇದ್ರೆ ಶಾಂತಸಾಗರ, ಇಲ್ಲ ಕುರುಕ್ಷೇತ್ರ]

ಮಕರ ರಾಶಿ : ಲಾಭ ಸ್ಥಾನದಲ್ಲಿ ಶನಿಯು ಇರುವುದರಿಂದ, ಮುಂದಿನ ವರ್ಷ ಮುಗಿಯುವವರೆಗೂ ಶನಿದೇವನ ಕೃಪಾಕಟಾಕ್ಷವಿರುವುದರಿಂದ, ಮುಖ್ಯವಾದ ಕೆಲಸಗಳನ್ನು ಈ ಕೂಡಲೇ ಆರಂಭಿಸಿಕೊಳ್ಳಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಶನಿಕಾಟ ಶುರುವಾಗುವುದರಿಂದ ಸ್ವಲ್ಪ ಪ್ಲ್ಯಾನ್ ಮಾಡಿಕೊಂಡು ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡು ಕಾರ್ಯರೂಪಕ್ಕಿಳಿಸಬೇಕು.
ರಾಹು-ಕೇತುಗಳು ಮತ್ತು ಗುರು ಅಷ್ಟಕ್ಕಷ್ಟೇ ಆಗಿರುವುದರಿಂದ ಶನಿದೇವನ ಕೃಪಾಕಟಾಕ್ಷವನ್ನು ನಂಬಿಕೊಂಡರೆ ಸಾಕು. ಉಳಿದಿದ್ದೆಲ್ಲವೂ ತಾನಾಗಿಯೇ ಕೂಡಿಕೊಂಡು ಬರುವ ವರ್ಷವಿದು. [ಐ ಲವ್ ಯೂ ಹೇಳೋಕೆ ಬಿಂಕವೇಕೆ?]
ಕುಂಭ ರಾಶಿ : ಗುರುವಿನ ಕೃಪೆಯಿರುವುದರಿಂದ ಈ ವರ್ಷ ಈ ರಾಶಿಯವರಿಗೆ ನಷ್ಟವೇನೂ ಆಗೋದಿಲ್ಲ. ಲಾಭವೇ ಹೆಚ್ಚೆನ್ನಬಹುದು. ಆದರೆ, ದೇಹಾರೋಗ್ಯದಲ್ಲಿ ಸ್ವಲ್ಪಹೆಚ್ಚಿನ ತೊಂದರೆ ಬರುವುದರಿಂದ ಜಾಗೃತೆ ವಹಿಸಿಕೊಂಡರೆ ಸಾಕು. ಶನಿ, ರಾಹು ಮತ್ತು ಕೇತುಗಳು ಏನೂ ತೊಂದರೆ ಮಾಡುವುದಿಲ್ಲವಾದರೂ ದೈವಾರಾಧನೆ ತಪ್ಪಿಸದೇ ಮಾಡಿಕೊಳ್ಳುತ್ತಿದ್ದರೆ ಶುಭಫಲ ಶತಸಿದ್ಧ.
ಮೀನ ರಾಶಿ : ಅಷ್ಟಮ ಶನಿಕಾಟದಿಂದ ಪಾರಾಗಿ ಬಂದಿರುವ ಮೀನ ರಾಶಿಯವರು ಈಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಏಕೆಂದರೆ ಈ ವರ್ಷ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಬಹುದು. ಜೊತೆಗೆ ರಾಹು ಮತ್ತು ಕೇತು ಹಾಗೂ ಗುರು ಅಲ್ಪಕಾಣಿಕೆ ಜೀವನಕ್ಕೆ ನೀಡುವುದರಿಂದ ಸಂತಸವಿರುತ್ತದೆ. ಒಟ್ಟಿನಲ್ಲಿ ಹೊಸ ವರ್ಷ ಹೊಸತನವನ್ನು ಜೀವನದಲ್ಲಿ ಮೂಡಿಸಿ ಮೀನ ರಾಶಿಯವರಿಗೆ ಸಂತಸವಿರುವಂತಾಗುತ್ತದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications