ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿ

ಯಾವುದೇ ರಾಶಿಯಲ್ಲಿ ಅದರ ಪ್ರಧಾನ ತಾರಾಪುಂಜದ ತಾರೆಗಳಲ್ಲದೆ ಇನ್ನೂ ಅನೇಕ ತಾರೆಗಳು ಇರುತ್ತವೆ. ಇವು ಪ್ರಧಾನ ತಾರಾಪುಂಜದ ಆಕೃತಿಯ ಒಳಗೂ ಇರಬಹುದು ಹೊರಗೂ ಇರಬಹುದು. ಒಂದು ರಾಶಿಯ ತಾರೆಗಳೇ ಆಗಲಿ ರಾಶಿಯ ಪ್ರಧಾನ ತಾರಾಪುಂಜದ ತಾರೆಗಳೇ ಆಗಲಿ ಭೂಮಿಯಿಂದ ಸಮ ದೂರಗಳಲ್ಲಿ ಇಲ್ಲ, ಎಂದೇ, ಈ ತಾರೆಗಳಿಂದ ಏಕಕಾಲದಲ್ಲಿ ಹೊಮ್ಮುವ ಯಾವ ಕಿರಣಗಳೂ ಏಕಕಾಲದಲ್ಲಿ ನಮ್ಮನ್ನು ತಲಪುವುದಿಲ್ಲ. ಇಂದು ನಾವು ನೋಡುತ್ತಿರುವ ತಾರೆಗಳು ವಾಸ್ತವವಾಗಿ ಇಂದಿನವು ಅಲ್ಲ! ಇಂದು ನಾವು ನೋಡುತ್ತಿರುವ ಎಲ್ಲ ತಾರೆಗಳು ವಿಶ್ವದ ಇತಿಹಾಸದ ಒಂದು ಕಾಲಘಟ್ಟದವೂ ಅಲ್ಲ!
ಜ್ಯೋತಿಷಿಗಳಿಗೆ ಪ್ರಿಯವಾದ ದ್ವಾದಶ ರಾಶಿಗಳ ಹೆಸರುಗಳು ಮಾತ್ರ ಹೆಚ್ಚುಕಮ್ಮಿ ಎಲ್ಲ ದೇಶಗಳಲ್ಲಿ ಒಂದೇ ಆಗಿರುವುದು ಏಕೆ? ಈ ಕುರಿತು ಸಂಶೋಧಕರ ಅಂಬೋಣ ಇಂತಿದೆ: ಈ ದ್ವಾದಶ ರಾಶಿಗಳನ್ನು ಮೊದಲು ಗುರುತಿಸಿ ನಾಮಕರಣ ಮಾಡಿದವರು ಈಜಿಪ್ಟಿನವರು. ಅದನ್ನು ಗ್ರೀಕರು ಎರವಲು ಪಡೆದು ತಮ್ಮ ಭಾಷೆಗೆ ಹೆಸರುಗಳನ್ನು ಭಾಷಾಂತರ ಮಾಡಿಕೊಂಡರು. ಅಷ್ಟೇ ಅಲ್ಲದೆ ತಮ್ಮ ಸಂಸ್ಕೃತಿಯ ಪುರಾಣದ ಕಥೆಗಳನ್ನು ಜೋಡಿಸಿದರು.
ಗ್ರೀಕರಿಂದ ಭಾರತೀಯರು ಇದನ್ನು ಎರವಲು ಪಡೆದು ಗ್ರೀಕರು ಬಳಸುತ್ತಿದ್ದ ಹೆಸರುಗಳ ಪೈಕಿ ಒಂಭತ್ತನ್ನು ಯಥಾವತ್ತಾಗಿ ಸಂಸ್ಕೃತಕ್ಕೆ ಭಾಷಾಂತರಿಸಿಕೊಂಡರು(ಏರೀಸ್-ಮೇಷ, ಟಾರಸ್-ವೃಷಭ, ಜೆಮಿನಿ-ಮಿಥುನ, ಕ್ಯಾನ್ಸರ್-ಕರ್ಕಾಟಕ, ಲಿಯೋ-ಸಿಂಹ, ವರ್ಗೋ-ಕನ್ಯಾ, ಲೀಬ್ರಾ-ತುಲಾ, ಸ್ಕಾರ್ಪಿಯನ್-ವೃಶ್ಚಿಕ, ಪೀಸಸ್-ಮೀನ). ಮೂರರ ಹೆಸರುಗಳನ್ನು ಮೂಲ ಹೆಸರುಗಳ ಧ್ವನಿತಾರ್ಥ ಕೊಡುವ ಹಾಗೂ ತಮ್ಮ ಸಂಸ್ಕೃತಿಗೆ ವಿಹಿತವಾದ ಸಂಸ್ಕೃತ ಹೆಸರುಗಳಾಗಿ ಬದಲಿಸಿಕೊಂಡರು (ಸಜಿಟೆರಿಅಸ್ -ಧನು – ಗ್ರೀಕರ ಪ್ರಕಾರ: ಅರ್ಧಮನುಷ್ಯ ಅರ್ಧ ಕುದುರೆ ಆಕೃತಿ. ಕ್ಯಾಪ್ರಿಕಾರ್ನ್ – ಮಕರ, ಗ್ರೀಕರ ಪ್ರಕಾರ: ಮೀನಿನಂಥ ಬಾಲ ಇರುವ ಆಡಿನ ಆಕೃತಿ. ಅಕ್ವೇರಿಅಸ್-ಕುಂಭ, ಗ್ರೀಕರ ಪ್ರಕಾರ: ಬಿಂದಿಗೆಧಾರಿ ವ್ಯಕ್ತಿಯ ಆಕೃತಿ).
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications