ಎಲ್ಲಿಂದ ಬಂದವು ಕುರಿ, ಗೂಳಿ, ಸಿಂಹ, ಮೀನ?

ಇಂಗ್ಲಿಷ್ ಭಾಷೆಯ 'ಸ್ಟಾರ್" ಪದ ಯಾವ ಅರ್ಥದಲ್ಲಿ ಬಳಕೆ ಆಗುತ್ತಿದೆಯೋ ಆ ಅರ್ಥದಲ್ಲಿ ಭಾರತೀಯ ಪುರಾತನರು 'ನಕ್ಷತ್ರ" ಪದದ ಬಳಕೆ ಮಾಡುತ್ತಿರಲಿಲ್ಲ. ಭಾರತೀಯರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ನಕ್ಷತ್ರದ ಪರಿಕಲ್ಪನೆಯೇ ಇರುವಂತೆ ತೋರುತ್ತಿಲ್ಲ. ಸ್ವಗುರುತ್ವದಿಂದ ಗೋಲರೂಪ ತಳೆದಿರುವ ಸ್ವಪ್ರಕಾಶಕ ಬೃಹತ್ ಆಕಾಶಕಾಯಗಳನ್ನು ಉಲ್ಲೇಖಿಸಲು ಬಳಕೆ ಆಗುತ್ತಿರುವ ಆಂಗ್ಲ ಪದ 'ಸ್ಟಾರ್". ಇವು ತಮ್ಮ ಗರ್ಭದಲ್ಲಿ ಜರಗುವ ಬೈಜಿಕ ಸಮ್ಮಿಲನ ಕ್ರಿಯೆಗಳ ಪರಿಣಾಮವಾಗಿ ವಿದ್ಯುತ್ಕಾಂತೀಯ ವಿಕಿರಣಗಳನ್ನು (ದೃಗ್ಗೋಚರ ಬೆಳಕು ವಿದ್ಯುತ್ಕಾಂತೀಯ ರೋಹಿತದ ಒಂದು ಘಟಕ) ಹೊರಸೂಸುತ್ತವೆ. ಅನೂಹ್ಯ ದೂರದಲ್ಲಿ ಇರುವುದರಿಂದ ಬೆಳಕು ಬೀರುವ ಚುಕ್ಕಿಗಳಂತೆ ಇವು ರಾತ್ರಿಯ ವೇಳೆ ಗೋಚರಿಸುತ್ತವೆ. ಇವನ್ನು ನಕ್ಷತ್ರಗಳು ಅನ್ನುವುದಕ್ಕಿಂತ ತಾರೆಗಳು ಅನ್ನುವುದು ಸೂಕ್ತ.
ಸೌರಕಕ್ಷೆ ಆಧಾರಿತ ರಾಶಿಚಕ್ರದ ಪರಿಕಲ್ಪನೆಯನ್ನು ಗ್ರೀಕರಿಂದ ಎರವಲು ಪಡೆಯುವ ಮುನ್ನ ನಮ್ಮ ಪುರಾತನರು ಬಳಸುತ್ತಿದ್ದದ್ದು ಚಾಂದ್ರಕಕ್ಷೆ ಆಧಾರಿತ ನಕ್ಷತ್ರ ಚಕ್ರದ ಪರಿಕಲ್ಪನೆಯನ್ನು. ಇವರು ಚಾಂದ್ರಕಕ್ಷೆಯನ್ನು 27 ಸಮಖಂಡಗಳಾಗಿ ವಿಭಾಗಿಸಿ ಅವನ್ನು 'ನಕ್ಷತ್ರ"ಗಳು ಎಂದು ಕರೆದರು. ಪ್ರತೀ ನಕ್ಷತ್ರದ ವಿಸ್ತಾರ 13020". ಅಶ್ವಿನಿಯಿಂದ ಮೊದಲ್ಗೊಂಡು ರೇವತಿಯೊಂದಿಗೆ ಅಂತ್ಯವಾಗುವ 27 ನಕ್ಷತ್ರಗಳೇ ಈ ಖಂಡನಾಮಗಳು. ಪ್ರತೀ ಖಂಡದಲ್ಲಿ ಇದ್ದ ನಕ್ಷತ್ರಗಳ ಪೈಕಿ ಅಂದು ಸುಲಭವಾಗಿ ಗುರುತಿಸಬಹುದಾಗಿದ್ದ ತಾರೆಯೊಂದನ್ನು ಖಂಡಸೂಚಕವಾಗಿ ಆಯ್ದು ಅದಕ್ಕೆ ಆ ಖಂಡನಾಮವನ್ನೇ ಇಟ್ಟರು. ಅಶ್ವಿನಿ ಎಂದು ಗುರುತಿಸಲಾಗುತ್ತಿದ್ದ ತಾರೆಯು ಅಶ್ವಿನಿ ಎಂಬ ನಕ್ಷತ್ರವನ್ನು, ಅರ್ಥಾತ್ ಖಂಡವನ್ನು ಗುರುತಿಸಲು ಇದ್ದ ಸೂಚಕವೇ ವಿನಾ ಸ್ವತಂತ್ರ ತಾರೆಯಲ್ಲ ಎಂಬುದು ಗಮನಿಸಬೇಕಾದ ಅಂಶ. ಈ ತಾರೆಗಳ ಪೈಕಿ ಅನೇಕವನ್ನು 'ಬೆಳಕಿನ ಮಾಲಿನ್ಯ"ದಿಂದಾಗಿ ಇಂದು ಗುರುತಿಸುವುದು ಅತೀ ಕಷ್ಟ. ಅಂದ ಹಾಗೆ ಭಾರತೀಯ ಪೌರಾಣಿಕರ ಕಲ್ಪನೆಯಲ್ಲಿ ತಾರಾಪತಿ ಚಂದ್ರನಿಗೆ 27 ಜನ ಪತ್ನಿಯರು. ಚಂದ್ರನ ಅರಮನೆಯಲ್ಲಿ ಇವರಿಗೆ ತಲಾ ಒಂದರಂತೆ 27 ಕೊಠಡಿಗಳಿವೆ. ಚಂದ್ರ ಅನುಕ್ರಮವಾಗಿ ಈ ಕೊಠಡಿಗಳಿಗೆ ಭೇಟಿ ನೀಡುತ್ತಾನೆ!
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ












Click it and Unblock the Notifications