ವ್ಯಂಗ್ಯಚಿತ್ರ : ರಾಜಕಾರಣಿಗಳ ಆಸ್ತಿ ಜೊತೆ ಜನರ ಸಮಸ್ಯೆಗಳು ಹೆಚ್ಚಳ
ಬೆಂಗಳೂರು, ಏಪ್ರಿಲ್ 22 : ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳು ಕೋಟಿಗಟ್ಟಲೇ ಆಸ್ತಿಯನ್ನು ಘೋಷಣೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭ್ಯರ್ಥಿಗಳ ಆಸ್ತಿ ಮೌಲ್ಯ ಹೆಚ್ಚಾಗುತ್ತಲೇ ಇದೆ.
ವ್ಯಂಗ್ಯಚಿತ್ರಗಳು ನಗುವನ್ನು ಉಕ್ಕಿಸಿದರೆ ಮಾತ್ರ ಸಾಲದು, ಅವು ಚಿಂತನೆಗೆ ಹಚ್ಚಬೇಕು. ಓದುಗನಿಗೆ ಸಂದೇಶವೊಂದನ್ನು ತಲುಪಿಸಬೇಕು. ಈ ಎರಡೂ ಕಾರ್ಯವನ್ನು ಈ ಕಾರ್ಟೂನು ಮಾಡುತ್ತಿದೆ.
ದತ್ತಾತ್ರಿ ಎಂ.ಎನ್. ಅವರು ಬಿಡಿಸಿರುವ ವ್ಯಂಗ್ಯಚಿತ್ರ ಪ್ರಸ್ತುತ ರಾಜಕಾರಣಕ್ಕೆ ಕೈಗನ್ನಡಿ ಹಿಡಿದಂತಿದೆ. ರಾಜಕಾರಣಿಗಳ ಮತ್ತು ಮತದಾರರ ಪರಿಸ್ಥಿತಿ ಕುರಿತು ಚಿತ್ರ ವಿವರಣೆ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜಕಾರಣಿಗಳ ಆಸ್ತಿ ಹೆಚ್ಚಾದರೆ, ಜನರ ಸಮಸ್ಯೆಗಳು ಹೆಚ್ಚುತ್ತಿವೆ.

ಕಳೆದ ಮೂರು ಚುನಾವಣೆಯಲ್ಲಿ ಅಭ್ಯರ್ಥಿಗಳು ಘೋಷಣೆ ಮಾಡಿದ್ದಕ್ಕಿಂತ ಈ ಬಾರಿ ಅವರ ಆಸ್ತಿ ಹೆಚ್ಚಾಗಿದೆ. ಅದರಂತೆ ಜನರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ರಾಜಕಾರಣಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ.
ದತ್ತಾತ್ರಿ.ಎಂ.ಎನ್. ಅವರ ಪ್ರಜಾಪ್ರಭುತ್ವ ಮತ್ತು ಸಮಾನತೆ! ವ್ಯಂಗ್ಯಚಿತ್ರ ಇಲ್ಲಿದೆ ನೋಡಿ. ನಕ್ಕು ಹಗುರಾಗಿ.












Click it and Unblock the Notifications