ಕಾರ್ಟೂನ್: ರೆಸಾರ್ಟ್ ಕತೆ ಹಾಗಿರಲಿ, ಪ್ರಜೆಗಳೇ ಪ್ರಭುಗಳು ನೆನಪಿರಲಿ
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇಲೆ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ತಲ್ಲಣಗಳು ಆರಂಭವಾಗಿವೆ. ಅತಂತ್ರ ವಿಧಾನಸಭೆ, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕಾರಣ ಎಲ್ಲವುಗಳ ಕತೆ ಹಾಗಿರಲಿ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ಮರೆಯದಿರಿ ಎಂಬುದನ್ನು ನೆನಪಿಸಿದ್ದಾರೆ ಕಾರ್ಟೂನಿಸ್ಟ್ ಶಂಕರ್.
ರಾಜ್ಯದಲ್ಲಿ ಬಹುಮತ ಯಾವ ಪಕ್ಷಕ್ಕೂ ಬಾರದಿದ್ದರೂ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿದ್ದ ಬಿಜೆಪಿ ಸರ್ಕಾರ ರಚಿಸಿದೆ. ನೀವು ಏನೇ ಮಾಡಿಕೊಳ್ಳಿ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡಿ ಎಂದು ಕಾರ್ಟೂನ್ ನಲ್ಲಿ ಹೇಳಿದ್ದಾರೆ ಶಂಕರ್.
ಕಾಫಿ ಮಾರಿ ದುಡಿಮೆ ಮಾಡುತ್ತಿರುವ ಶಂಕರ್ ಕಾರ್ಟೂನಿಸ್ಟ್ ಅವರಿಗೆ ವ್ಯಂಗ್ಯಚಿತ್ರ ಬರೆಯುವುದು ಪ್ರವೃತ್ತಿ. ವಕ್ರ ರೇಖೆಗಳ ಮೂಲಕವೇ ಸಮಾಜದ ಡೊಂಕನ್ನು, ರಾಜಕಾರಣಿಗಳ ಕೊಂಕನ್ನು ತೋರಿಸುವ ಈ ಅರ್ಥಗರ್ಭಿತ ವ್ಯಂಗ್ಯಚಿತ್ರ ನಿಮಗಾಗಿ ಇಲ್ಲಿದೆ.












Click it and Unblock the Notifications