Visha Yoga 2025: ವಿಷ ಯೋಗ- ಈ ರಾಶಿಯವರಿಗೆ ಯುಗಾದಿಗೂ ಮೊದಲೇ ಧನಲಾಭ ಗ್ಯಾರಂಟಿ
ನವಗ್ರಹಗಳಲ್ಲಿ ಶನಿ ದೇವನನ್ನು ಅತ್ಯಂತ ಅಶುಭ ಗ್ರಹವೆಂದು ಕರೆಯಲಾಗುತ್ತದೆ. ಯಾಕೆಂದರೆ ಶನಿಯೂ ಕರ್ಮಗಳಿಗೆ ಅನುಸಾರ ಫಲ ನೀಡುವ ದೇವರು. ಹೀಗಾಗಿ ಈ ಗ್ರಹದ ಸ್ಥಾನಪಲ್ಲಟದ ಬಗ್ಗೆ ಜನರಿಗೆ ಭಯವಿರುತ್ತದೆ. ಅಂದಹಾಗೆ ಇದೇ ಮಾರ್ಚ್ 26 ರಂದು ಕುಂಭ ರಾಶಿಯಲ್ಲಿ ಶನಿ-ಚಂದ್ರನ ಸಂಯೋಗವಾಗಲಿದೆ. ಇದರಿಂದ ಅಶುಭ ಯೋಗ ಸೃಷ್ಟಿಯಾಗಲಿದ್ದು, ಈ ಯೋಗದಿಂದ ಕೆಲ ರಾಶಿಯವರಿಗೆ ಅತ್ಯುತ್ತಮ ಫಲ ಸಿಗಲಿವೆ.
ಹೌದು... ಸುಮಾರು ಎರಡೂವರೆ ವರ್ಷಗಳ ಹಿಂದೆ ಶನಿ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿತು. ಈಗ ಮಾರ್ಚ್ 29 ಚಂದ್ರನು ಮೀನ ರಾಶಿಗೆ ಸಾಗುತ್ತಾನೆ. ಆದರೆ ಅದಕ್ಕೂ ಮೊದಲು ಮಾರ್ಚ್ 26 ರಂದು ಚಂದ್ರನು ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಮಾರ್ಚ್ 26, 2025ರಂದು ಮಧ್ಯಾಹ್ನ 3:14 ಕ್ಕೆ ಚಂದ್ರನು ಕುಂಭ ರಾಶಿಗೆ ಪ್ರವೇಶಿ ಅಲ್ಲಿ ಶನಿ ಹಾಗೂ ಚಂದ್ರನ ಸಂಯೋಗವಾಗಲಿದೆ.
ಮಾರ್ಚ್ 29ರ ನಂತರ ಚಂದ್ರನನ್ನು ಬಿಟ್ಟು ಮೀನ ರಾಶಿಯಲ್ಲಿ ಶನಿ ಸಾಗುತ್ತಾನೆ. ಈ ಕಾರಣಕ್ಕಾಗಿ ಮಾರ್ಚ್ 26ರಂದು ಕುಂಭ ರಾಶಿಯಲ್ಲಿ ಶನಿ ಮತ್ತು ಚಂದ್ರನ ಸಂಯೋಗದಿಂದ ವಿಷ ಯೋಗ ರೂಪಗೊಳ್ಳುವುದು. ಈ ಸಂಯೋಜನೆಯಿಂದಾಗಿ ಕೆಲವು ರಾಶಿಗಳ ಜನರ ಅದೃಷ್ಟ ತೆರೆದುಕೊಳ್ಳುತ್ತದೆ. ಹಾಗಾದರೆ ಈ ವಿಷ ಯೋಗ ಯಾವ ರಾಶಿಗಳಿಗೆ ಶುಭವಾಗಲಿದೆ ಎಂದು ಈಗ ತಿಳಿಸೋಣ.

ಮಿಥುನ ರಾಶಿ
ವಿಷ ಯೋಗದಿಂದ ಮಿಥುನ ರಾಶಿಯವರ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ. ಜಂಟಿಯಾಗಿ ಮಾಡಿದ ಉದ್ಯೋಗ ಕೈ ಹಿಡಿಯಲಿದೆ. ಉದ್ಯಮಿಗಳಿಗೆ ಹೂಡಿಕೆಯಿಂದ ಲಾಭವಿದೆ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೋಗಬಹುದು. ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಹೆಚ್ಚಾಗುವುದು. ಅಂದುಕೊಂಡಂತೆ ಆದಾಯ ಸಿಗಲಿದೆ. ಈ ಅವಧಿಯಲ್ಲಿ ಮಿಥುನ ರಾಶಿಯ ಜನರು ತಮ್ಮ ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ ನೀವು ಸರ್ಕಾರಿ ಅಥವಾ ಆಡಳಿತ ಕ್ಷೇತ್ರಗಳಲ್ಲಿ ಕೆಲವು ವಿಶೇಷ ಅವಕಾಶಗಳನ್ನು ನೋಡುತ್ತೀರಿ.

ತುಲಾ ರಾಶಿ
ತುಲಾ ರಾಶಿಯವರಿಗೆ ಈ ಸಮಯ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಷಯೋಗದಿಂದ ತುಲಾ ರಾಶಿಯವರ ಸಂಕಷ್ಟಗಳು ದೂರವಾಗುತ್ತವೆ. ಶುತ್ರಗಳ ಕಾಟ ನಿಮ್ಮ ಹತ್ತಿರಕ್ಕೂ ಬಾರದು. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ, ಸಣ್ಣ ಪ್ರಯತ್ನ ಹೆಚ್ಚು ಲಾಭವನ್ನು ತಮದು ಕೊಡುತ್ತದೆ. ಜನರಿಗೆ ಆರ್ಥಿಕ ವಿಷಯಗಳಲ್ಲಿ ಸುಧಾರಣೆ ಕಂಡುಬರಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ.

ಮಕರ ರಾಶಿ
ಮಕರ ರಾಶಿಯವರಿಗೆ ವಿಷ ಯೋಗ ಅದೃಷ್ಟದ ಪರ್ವಕಾಲವಾಗಿದೆ. ಆರ್ಥಿಕವಾಗಿ ಸಾಕಷ್ಟು ಬದಲಾವಣೆಯನ್ನು ನೀವು ನೋಡುವಿರಿ. ಶನಿ ದೇವನ ಕೃಪೆಯಿಂದ ಸಮಸ್ಯೆಗಳೆಲ್ಲವೂ ನಿಮ್ಮಿಂದ ದೂರ ಉಳಿಯಲಿವೆ. ಹೂಡಿಕೆ ಅಥವಾ ಆಸ್ತಿಗೆ ಸಂಬಂಧಿಸಿದ ನಿರ್ಧಾರಗಳು ನಿಮಗೆ ಪ್ರಯೋಜನ ನೀಡಲಿವೆ.

ಕುಂಭ ರಾಶಿ
ಕುಂಭ ರಾಶಿಯವರಿಗೆ ಶನಿ ಮತ್ತು ಚಂದ್ರನ ಸಂಯೋಜನೆಯಿಂದ ಸೃಷ್ಟಿಯಾದ ವಿಷಯೋಗ ಅದೃಷ್ಟವನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಮಾನಸಿಕ ಸ್ಥಿರತೆಯನ್ನು ಅನುಭವಿಸುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ಹೊಸತನವನ್ನು ಕಾಣುವಿರಿ. ನಿಮ್ಮ ಅಪೂರ್ಣ ಕೆಲಸ ಪೂರ್ಣಗೊಳ್ಳುವ ಸಾಧ್ಯತೆಯಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications