ತುಲಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ
ಹೊಸ ವರ್ಷಾಚರಣೆ ಮುಗಿಸಿಕೊಂಡಿರುವ ತುಲಾ ರಾಶಿಯವರು ಸಾಡೇಸಾತಿಯ ಏಟಿನೊಂದಿಗೆ ಈಗಾಗಲೇ ಜೀವನದ ಆಳ ಅಗಲ ತಿಳಿದುಕೊಂಡಿದ್ದಾರೆ. ಈ ವರ್ಷ ಖರ್ಚೇ ಹೆಚ್ಚಿರುವುದರಿಂದ ದುಡಿಮೆಯ ಸಮಯವನ್ನು ಹೆಚ್ಚಿಸಿಕೊಳ್ಳಬೇಕಿವರು.
ತುಲಾ ರಾಶಿಯ ಚಿತ್ತಾ ನಕ್ಷತ್ರದ ಕೊನೆಯ ಎರಡು ಚರಣದವರು ಮೊದಲ ನಾಲ್ಕು ತಿಂಗಳು ಸೂಪರ್ ಆಗಿಯೇ ಜೀವನ ಅನುಭವಿಸಿದರೆ ನಂತರ ಇಳಿಮುಖವಾಗಿ ಕ್ರಮೇಣ ಕಡೆಯ ನಾಲ್ಕು ತಿಂಗಳು ಶೂನ್ಯಕ್ಕೆ ಬಂದು ನಿಲ್ಲುತ್ತದೆ ಜೀವನ. ಆದರೂ ಹೆಚ್ಚಿನ ಸುಖವೂ ಕಂಡು ಬರುವುದರಿಂದ ಕಷ್ಟಗಳೇನೂ ದೊಡ್ಡದೆನಿಸುವುದಿಲ್ಲ ಇವರಿಗೆ.
ಸ್ವಾತಿ ನಕ್ಷತ್ರದವರು ಮಾತ್ರ ಪುಟಿದೇಳಲು ಪ್ರಯತ್ನ ಪಡುತ್ತಿದ್ದರೂ ಯಾವುದೇ ಫಲ ಬರದೇ ಬೇಸರಗೊಂಡಿರುವುದು ಕಣ್ಣಿಗೆ ಕಾಣುತ್ತದೆ. ಆದರೂ ಸ್ವಲ್ಪ ಮಟ್ಟಿಗೆ ಸಮಾಧಾನವನ್ನು ಹೆಚ್ಚಿಸಿಕೊಂಡರೆ ವರ್ಷದಲ್ಲಿ ಅರ್ಧ ದಿನಗಳಷ್ಟನ್ನಾದರೂ ಸಂತಸದಿಂದ ಕಳೆಯಬಹುದು. ಏಕೆಂದರೆ ಬೇಸರವಾಗಿಯೇ ಯುಗಾದಿ ವರ್ಷಾಚರಣೆಯನ್ನು ಆರಂಭಿಸಿರುವ ಸ್ವಾತಿ ನಕ್ಷತ್ರದವರು ಕ್ರಮೇಣ ಜೀವನದಲ್ಲಿ ಇಳಿಮುಖವನ್ನು ಕಾಣುವಂತಾಗುತ್ತದೆ. ಆದರೆ ಕೊನೆಯ ನಾಲ್ಕು ತಿಂಗಳು ಮಾತ್ರ ಮತ್ತೆ ಹಳಿಗೆ ಬರುತ್ತದೆ ಜೀವನ. [ಯಶಸ್ಸಿನ ಕುದುರೆಯ ಮೇಲೆ ಸ್ವಾತಿ ನಕ್ಷತ್ರದವರು]

ವಿಶಾಖಾ ನಕ್ಷತ್ರದ ಮೊದಲ ಮೂರು ಚರಣದವರು ಯುಗಾದಿಯಿಂದ ಸೂಪರ್ ಆಗಿ ಜೀವನವನ್ನಾರಂಭಿಸಿದ್ದಾರೆ. ಆದರೆ ಕಾಲಕ್ರಮೇಣ ಸ್ವಲ್ಪ ತೊಂದರೆಗಳು ಕಾಣಿಸುವುದರಿಂದ ಈಗಿನಿಂದಲೇ ಜಾಗ್ರತೆ ಅವಶ್ಯ. ಏಕೆಂದರೆ ಮೊದಲ ನಾಲ್ಕು ತಿಂಗಳು ಚೆನ್ನಾಗಿಯೇ ಇದ್ದರೆ ನಂತರದ ಎಂಟು ತಿಂಗಳು ಸ್ವಲ್ಪ ಕಷ್ಟಕಾರಕವಾಗಿವೆ. [ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]
ಇನ್ನು, ಆಗಸ್ಟ್ ವರೆಗೂ ಗುರುಬಲ ಇರುವುದರಿಂದ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಮುಂದಾಗಬಹುದು. ಕೈಗೂಡುತ್ತವೆ ಅಂದುಕೊಂಡದ್ದು ಈ ಸಮಯದೊಳಗೆ ಆಗಬಹುದು. ಜನವರಿ ತಿಂಗಳಲ್ಲಿ ಶನಿದೇವನು ಧನು ರಾಶಿಗೆ ಪ್ರವೇಶ ಮಾಡುವುದರಿಂದ ಒಮ್ಮಿಂದೊಮ್ಮೆಲೆ ಲಾಭ ಸ್ಥಾನಕ್ಕೆ ಬಂದ ಶನಿದೇವನು ಸಿಕ್ಕಾಪಟ್ಟೆ ಸಮೃದ್ಧಫಲವನ್ನು ನೀಡುತ್ತಾನೆ. ಆದರೆ ಆಗಸ್ಟ್ ನಿಂದ ಗುರುಬಲ ಹೊರಟು ಹೋಗುವುದರಿಂದ ಸ್ವಲ್ಪ ಜಾಗ್ರತೆ ವಹಿಸಿಕೊಳ್ಳಬೇಕು ಕೌಟುಂಬಿಕ ವಿಷಯದಲ್ಲಿ. ಒಟ್ಟಿನಲ್ಲಿ ಈ ವರ್ಷ ಫಿಫ್ಟಿಫಿಫ್ಟಿ ಫಲಗಳಿವೆ ತುಲಾ ರಾಶಿಯವರಿಗೆ. [ಗುರುಬಲ : ತುಲಾ ರಾಶಿಗೆ ಸೂಪರ್, ಆಲ್ ದಿ ಬೆಸ್ಟ್!]
(ತುಲಾ ರಾಶಿಯಿಂದ ಉಳಿದ ರಾಶಿಗಳ ದುರ್ಮುಖ ನಾಮ ಸಂವತ್ಸರದ ಫಲಾಫಲ ತಡವಾಗಿ ಪ್ರಕಟವಾಗುತ್ತಿರುವುದಕ್ಕೆ ವಿಷಾದಿಸುತ್ತೇವೆ.)
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ -
ಬೆಂಗಳೂರು ಏರ್ಪೋರ್ಟ್ಗೆ ಸತತ 4ನೇ ಬಾರಿಯೂ ವಿಶ್ವದ 'ಅತ್ಯುತ್ತಮ ಏರ್ಪೋರ್ಟ್'ಪ್ರಶಸ್ತಿ -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ












Click it and Unblock the Notifications