ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ದುಡಿದ ದುಡ್ಡು ಕರಗುವ ಸಮಯವಿದು. ಹೌದು, ಏಕೆಂದರೆ ಈ ವರ್ಷದ ಯುಗಾದಿಯಿಂದ ಗಳಿಸಿದ್ದ ದುಡ್ಡನ್ನು ಕಳೆದುಕೊಂಡಂತಾಗಿ ಚಡಪಡಿಸುವಂತಾಗಿದೆ ಈ ವೃಶ್ಚಿಕ ರಾಶಿಯವರಿಗೆ.
ಮೊದಲೇ ಸಾಡೇಸಾತಿಯ ತಿರುಗುಣಿಯಲ್ಲಿ ತಿರುಗುತ್ತ ಜೀವನವನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗುತ್ತಿರುವ ಈ ರಾಶಿಯವರು ಖರ್ಚಿನ ಲೆಕ್ಕ ಇಟ್ಟುಕೊಳ್ಳಬೇಕು. ಸಾಲ ಸಿಗುತ್ತದೆ ಎಂದುಕೊಂಡು ಸಿಕ್ಕಾಪಟ್ಟೆ ಸಾಲ ಮಾಡುವಂತಿಲ್ಲ. ಕೊಡುತ್ತೇನೆಂದರೂ ತೆಗೆದುಕೊಳ್ಳುವಂತಿಲ್ಲ. ತೆಗೆದುಕೊಂಡರೆ ನೀರಿನ ಹಾಕಿದಂಗೆನೇ ಎನ್ನಬಹುದು. ಆ ರೀತಿಯಲ್ಲಿ ಆ ಹಣ ಖರ್ಚಾಗಿ ಗುಳುಂ ಆಗುತ್ತದೆ.
ಈ ರಾಶಿಯ ವಿಶಾಖಾ ನಕ್ಷತ್ರದವರು ಮೊದಲ ನಾಲ್ಕು ತಿಂಗಳು ಅತ್ಯುತ್ತಮ ಸಮಯದನುಭವ ಪಡೆಯುತ್ತಾರೆ. ನಂತರ ಅಷ್ಟಕ್ಕಷ್ಟೇ ಜೀವನ ಎನ್ನುವಂತಾಗುತ್ತದೆ. ಕಡೆಯ ಎಂಟು ತಿಂಗಳು ಮಾತ್ರ ಜೋಪಾನವಾಗಿ ಜೀವನವನ್ನು ಸಾಗಿಸಿಕೊಂಡು ಹೋಗಬೇಕು. ಸ್ವಲ್ಪ ಸುಖಕರ ಸಮಯ ಬಂದರೂ ಹೆಚ್ಚು ಇರೋದಿಲ್ಲ. ಹೀಗಾಗಿ ಜಾಗೃತೆಯಿಂದಿರಿ. [ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]

ಇನ್ನು ಅನುರಾಧಾ ನಕ್ಷತ್ರದವರಿಗೆ ಯುಗಾದಿಯಿಂದ ಸೂಪರ್ ಆಗಿಯೇ ಜೀವನ ಸಾಗುತ್ತಿದ್ದು, ಇದೇ ರೀತಿ ನಾಲ್ಕು ತಿಂಗಳು ಸುಖದನುಭವ. ನಂತರದ ನಾಲ್ಕು ತಿಂಗಳು ಕೊಂಚ ಇಳಿಮುಖವೆನಿಸಿದರೆ ಕ್ರಮೇಣ ಮುಂದಿನ ನಾಲ್ಕು ತಿಂಗಳ ಮತ್ತೆ ಜೀವನ ಸರಿದಾರಿಗೆ ಸಾಗಲಾರಂಭಿಸುತ್ತದೆ.
ಆದರೆ ಜ್ಯೇಷ್ಠಾ ನಕ್ಷತ್ರದವರಿಗೆ ಮಾತ್ರ ಸಾಡೇಸಾತಿಯ ಹೊಡೆತಕ್ಕೆ ಸಿಲುಕಿ ವಿಲವಿಲನೆ ಒದ್ದಾಡುವ ದುಃಸ್ಥಿತಿ ಇದೆ ಎನ್ನಬಹುದು. ಏಕೆಂದರೆ ಅತ್ತ ಶನಿಕಾಟ ಇತ್ತ ಗುರುಬಲ ಕೈ ಹಿಡಿಯುತ್ತಿಲ್ಲ ಹೀಗಾಗಿ ವರ್ಷದ ಮೊದಲ ಎಂಟು ತಿಂಗಳು ಸುಖಾಸುಮ್ಮನೇ ಗೊಂದಲಗಳಲ್ಲೇ ಜೀವನ ಕಳೆಯುವಂತಾಗುತ್ತದೆ. ಆದರೆ ಆಗಸ್ಟ್ ನಂತರ ಗುರುಬಲ ಬಂದ ಕೂಡಲೇ ಜೀವನ ಮಹತ್ವದ ತಿರುವು ಪಡೆದುಕೊಳ್ಳುತ್ತದೆ.
ಇದೇ ರೀತಿ ಜನವರಿಯಿಂದ ಶನಿದೇವನು ಲಾಭ ಸ್ಥಾನಕ್ಕೆ ಬರುವುದರಿಂದ ಒಂದು ರೀತಿಯಲ್ಲಿ ಸುಖ ಮತ್ತೊಂದು ರೀತಿಯಲ್ಲಿ ದುಃಖ ಎರಡೂ ಉಂಟಾಗುತ್ತದೆ . ಏಕೆಂದರೆ ಗುರು ಕೊಡಲು ಬಂದರೆ ಶನಿ ಕೊಡಲು ಬಿಡಲ್ಲ. ಹೀಗಾಗಿ ಇದೊಂದು ವಿಷಯದಲ್ಲಿ ಮಾತ್ರ ಸ್ವಲ್ಪ ಜಾಗ್ರತೆ ಇರಲಿ. ಒಟ್ಟಿನಲ್ಲಿ ಈ ವರ್ಷ ವೃಶ್ಚಿಕ ರಾಶಿಯವರಿಗೆ ಶೇ.80ರಷ್ಟು ಶುಭಫಲವಿದೆ. [ವೃಶ್ಚಿಕ ರಾಶಿಗೆ ಕೈ ಕೊಟ್ಟ ಗುರುಬಲ, ಮುಂದೇನು?]
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications