ಧನಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ಧನಸ್ಸು ರಾಶಿಯವರು ಸಾಡೇಸಾತಿಯ ಮೊದಲನೇ ಹಂತವನ್ನು ಪ್ರವೇಶಿಸಿ ಅದರನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮೂರು ವರ್ಷಗಳವರೆಗೆ ಯಥೇಚ್ಛವಾಗಿ ಶನಿದೇವನು ನಿಮಗೆ ದಯಪಾಲಿಸಿದ್ದಾನೆ ಹಲವಾರು ವಿಷಯಗಳಲ್ಲಿ. ಈಗ ಕೊಟ್ಟಿದ್ದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೀರಿ ಎಂದು ಮಹಾತ್ಮನು ನೋಡುವ ಸಮಯ.
ಏಕೆಂದರೆ ಧನಸ್ಸು ರಾಶಿಯವರಿಗೆ ಈ ವರ್ಷ ಬರೀ ಖರ್ಚು ಮಾಡುವ ಸಮಯ. ಇದ್ದಬದ್ದದ್ದನ್ನೆಲ್ಲಾ ಕೂಡಿಸಿಕೊಂಡರೂ ತೀರದ ಖರ್ಚುಗಳು. ಆ ತರಹ ಪರಿಸ್ಥಿತಿ ಈಗ. ಆದ್ದರಿಂದ ಹಿಡಿತದಲ್ಲಿ ಖರ್ಚು ಮಾಡಬೇಕು. ಮನೆಯವರಿಗೂ ಹೇಳಬೇಕು. ನನ್ನ ಇದ್ದ ಸ್ಥಿತಿ ಹಿಂಗಿದೆ ಎಂದು.
ಇನ್ನು ಈ ರಾಶಿಯ ಮೂಲಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಎಷ್ಟೋ ಪಾಲು ಮೇಲು ಎನ್ನುವಂತಿರುತ್ತದೆ. ಆದರೆ, ನಂತರದ ದಿನಗಳಲ್ಲಿ ಕ್ರಮೇಣ ಇಳಿಕೆಯಾಗುತ್ತ ಬಂದು ಕೊನೆಯ ನಾಲ್ಕು ತಿಂಗಳು ಕೈ ಖಾಲಿಯಾಗಿಯೇ ಇರುತ್ತದೆ. ಪೂರ್ವಾಷಾಢಾ ನಕ್ಷತ್ರದವರಿಗೆ ಬೇಸರದಿಂದಲೇ ಯುಗಾದಿ ಆರಂಭವಾಗಿದೆ ಎನ್ನಬಹುದು. ವರ್ಷದ ಕೊನೆಯ ನಾಲ್ಕು ತಿಂಗಳು ಮಾತ್ರ ಸ್ವಲ್ಪ ಸಮಾಧಾನಕರವಾಗಿದೆ. ಅಲ್ಲಿಯವರೆಗೂ ಹಂಗೂ ಹಿಂಗೂ ಜೀವನ ಮಾಡಿಕೊಂಡು ಹೋಗಬೇಕು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೇ. [ಮಕರ ರಾಶಿಗೆ ತಿರುಗಿ ಬಿದ್ದ ಗುರು! ಧನಸ್ಸಿಗೆ ಹೆಂಗೆ ಗುರೂ?]

ಉತ್ತರಾಷಾಢಾ ನಕ್ಷತ್ರದವರು ಮಾತ್ರ ಆರಕ್ಕೇರಲ್ಲ ಮೂರಕ್ಕಿಳೀಯಂಗಿಲ್ಲ ಎಂಬಂತಾಗಿದ್ದಾರೆ. ಇದೇ ರೀತಿ ಈ ವರ್ಷವೂ ಮುಂದುವರೆದುಕೊಂಡು ಹೋಗಬೇಕು ಅನಿವಾರ್ಯವಾಗಿ. ವರ್ಷದ ಹನ್ನೆರಡೂ ತಿಂಗಳೂ ಕೂಡ ಈಗಿರುವ ಸಮಯದಂತೆಯೇ ಇರುತ್ತದೆ. ಹಣದ ವಿಷಯದಲ್ಲಿ ತೊಂದರೆಗಳು ಉಲ್ಬಣಿಸಿದರೆ ವಸ್ತ್ರ, ವಸ್ತು ವಗೈರೆಗಳನ್ನು ತೆಗೆದುಕೊಳ್ಳಲು ಏನೂ ತೊಂದರೆ ಇರಲ್ಲ. ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟಿರತ್ತೆ. ಸಾಕಲ್ವೇ ಇನ್ನೇನು ಬೇಕು ಜೀವನಕ್ಕೆ?
ಗುರುವು ಅಪಾರವಾಗಿ ಸಹಾಯಹಸ್ತ ನೀಡುತ್ತಿದ್ದಾರೆ. ಮುಂದೆಯೂ ನೀಡುತ್ತಾನೆ. ಕೌಟುಂಬಿಕ ಆನಂದ ತುತ್ತತುದಿಗೆ ಮುಟ್ಟುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದರೆ ಬಾಳಿಗೆ ಬಂಗಾರ ಸಿಕ್ಕಂತೆಯೇ. ಜನವರಿಯ ನಂತರ ಶನಿ ನಿಮ್ಮ ರಾಶಿಗೆ ಬರುವುದರಿಂದ ಶನಿಯು ಆಟ ಶುರು ಮಾಡುತ್ತಾನೆ. ಈಗಲೇ ಅದನ್ನು ತಡೆದುಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಈ ವರ್ಷ ಶೇ.50ರಷ್ಟು ಶುಭಫಲಗಳಿವೆ. [ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ]
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications