ಧನಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ
ಧನಸ್ಸು ರಾಶಿಯವರು ಸಾಡೇಸಾತಿಯ ಮೊದಲನೇ ಹಂತವನ್ನು ಪ್ರವೇಶಿಸಿ ಅದರನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮೂರು ವರ್ಷಗಳವರೆಗೆ ಯಥೇಚ್ಛವಾಗಿ ಶನಿದೇವನು ನಿಮಗೆ ದಯಪಾಲಿಸಿದ್ದಾನೆ ಹಲವಾರು ವಿಷಯಗಳಲ್ಲಿ. ಈಗ ಕೊಟ್ಟಿದ್ದನ್ನು ಹೇಗೆ ಉಪಯೋಗಿಸಿಕೊಳ್ಳುತ್ತಿದ್ದೀರಿ ಎಂದು ಮಹಾತ್ಮನು ನೋಡುವ ಸಮಯ.
ಏಕೆಂದರೆ ಧನಸ್ಸು ರಾಶಿಯವರಿಗೆ ಈ ವರ್ಷ ಬರೀ ಖರ್ಚು ಮಾಡುವ ಸಮಯ. ಇದ್ದಬದ್ದದ್ದನ್ನೆಲ್ಲಾ ಕೂಡಿಸಿಕೊಂಡರೂ ತೀರದ ಖರ್ಚುಗಳು. ಆ ತರಹ ಪರಿಸ್ಥಿತಿ ಈಗ. ಆದ್ದರಿಂದ ಹಿಡಿತದಲ್ಲಿ ಖರ್ಚು ಮಾಡಬೇಕು. ಮನೆಯವರಿಗೂ ಹೇಳಬೇಕು. ನನ್ನ ಇದ್ದ ಸ್ಥಿತಿ ಹಿಂಗಿದೆ ಎಂದು.
ಇನ್ನು ಈ ರಾಶಿಯ ಮೂಲಾ ನಕ್ಷತ್ರದವರಿಗೆ ವರ್ಷದ ಮೊದಲ ನಾಲ್ಕು ತಿಂಗಳು ಎಷ್ಟೋ ಪಾಲು ಮೇಲು ಎನ್ನುವಂತಿರುತ್ತದೆ. ಆದರೆ, ನಂತರದ ದಿನಗಳಲ್ಲಿ ಕ್ರಮೇಣ ಇಳಿಕೆಯಾಗುತ್ತ ಬಂದು ಕೊನೆಯ ನಾಲ್ಕು ತಿಂಗಳು ಕೈ ಖಾಲಿಯಾಗಿಯೇ ಇರುತ್ತದೆ. ಪೂರ್ವಾಷಾಢಾ ನಕ್ಷತ್ರದವರಿಗೆ ಬೇಸರದಿಂದಲೇ ಯುಗಾದಿ ಆರಂಭವಾಗಿದೆ ಎನ್ನಬಹುದು. ವರ್ಷದ ಕೊನೆಯ ನಾಲ್ಕು ತಿಂಗಳು ಮಾತ್ರ ಸ್ವಲ್ಪ ಸಮಾಧಾನಕರವಾಗಿದೆ. ಅಲ್ಲಿಯವರೆಗೂ ಹಂಗೂ ಹಿಂಗೂ ಜೀವನ ಮಾಡಿಕೊಂಡು ಹೋಗಬೇಕು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದೇ. [ಮಕರ ರಾಶಿಗೆ ತಿರುಗಿ ಬಿದ್ದ ಗುರು! ಧನಸ್ಸಿಗೆ ಹೆಂಗೆ ಗುರೂ?]

ಉತ್ತರಾಷಾಢಾ ನಕ್ಷತ್ರದವರು ಮಾತ್ರ ಆರಕ್ಕೇರಲ್ಲ ಮೂರಕ್ಕಿಳೀಯಂಗಿಲ್ಲ ಎಂಬಂತಾಗಿದ್ದಾರೆ. ಇದೇ ರೀತಿ ಈ ವರ್ಷವೂ ಮುಂದುವರೆದುಕೊಂಡು ಹೋಗಬೇಕು ಅನಿವಾರ್ಯವಾಗಿ. ವರ್ಷದ ಹನ್ನೆರಡೂ ತಿಂಗಳೂ ಕೂಡ ಈಗಿರುವ ಸಮಯದಂತೆಯೇ ಇರುತ್ತದೆ. ಹಣದ ವಿಷಯದಲ್ಲಿ ತೊಂದರೆಗಳು ಉಲ್ಬಣಿಸಿದರೆ ವಸ್ತ್ರ, ವಸ್ತು ವಗೈರೆಗಳನ್ನು ತೆಗೆದುಕೊಳ್ಳಲು ಏನೂ ತೊಂದರೆ ಇರಲ್ಲ. ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟಿರತ್ತೆ. ಸಾಕಲ್ವೇ ಇನ್ನೇನು ಬೇಕು ಜೀವನಕ್ಕೆ?
ಗುರುವು ಅಪಾರವಾಗಿ ಸಹಾಯಹಸ್ತ ನೀಡುತ್ತಿದ್ದಾರೆ. ಮುಂದೆಯೂ ನೀಡುತ್ತಾನೆ. ಕೌಟುಂಬಿಕ ಆನಂದ ತುತ್ತತುದಿಗೆ ಮುಟ್ಟುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದರೆ ಬಾಳಿಗೆ ಬಂಗಾರ ಸಿಕ್ಕಂತೆಯೇ. ಜನವರಿಯ ನಂತರ ಶನಿ ನಿಮ್ಮ ರಾಶಿಗೆ ಬರುವುದರಿಂದ ಶನಿಯು ಆಟ ಶುರು ಮಾಡುತ್ತಾನೆ. ಈಗಲೇ ಅದನ್ನು ತಡೆದುಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಈ ವರ್ಷ ಶೇ.50ರಷ್ಟು ಶುಭಫಲಗಳಿವೆ. [ಹೆಂಡತಿ ಮಾತು ಕೇಳೋದು ತಪ್ಪಲ್ಲ ಕಣ್ರೀ]
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications