ತುಲಾ ರಾಶಿ ಯುಗಾದಿ ವರ್ಷ ಭವಿಷ್ಯ; ದುಡ್ಡೇನೋ ಬರುತ್ತೆ, ಬಂದದ್ದು ಉಳಿಯುತ್ತಾ ಅನ್ನೋದೇ ಪ್ರಶ್ನೆ
ತುಲಾ ರಾಶಿಯವರದು ಎಲ್ಲವನ್ನೂ ಮತ್ತು ಎಲ್ಲರನ್ನೂ ತಕ್ಕಡಿಯಂತೆ ಅಳೆದು ತೂಗಿ ನೋಡುವ ಸ್ವಭಾವ. ಸೌಂದರ್ಯಪ್ರಜ್ಞೆ ಹೆಚ್ಚು. ಮತ್ತೆಮತ್ತೆ ನೋಡಬೇಕು ಎನಿಸುವ ರೂಪ, ಆಕರ್ಷಕ ಮಾತುಗಾರಿಕೆ ಜನರನ್ನು ಇವರತ್ತ ಸೆಳೆಯುವ ಗುಣಗಳು. ಚಿತ್ತಾ (3, 4ನೇ ಪಾದ), ಸ್ವಾತಿ (4 ಪಾದ) ಮತ್ತು ವಿಶಾಖ (1, 2, 3ನೇ ಪಾದ) ನಕ್ಷತ್ರಗಳಲ್ಲಿ ಜನಿಸಿದವರು ತುಲಾ ರಾಶಿಗೆ ಸೇರುತ್ತಾರೆ. ಅದೃಷ್ಟ ಸಂಖ್ಯೆ 6, ಇವರಿಗೆ ಗುಲಾಬಿ ಶುಭ ಬಣ್ಣ, ಪಶ್ಚಿಮ ಶುಭ ದಿಕ್ಕು. ಲಕ್ಷ್ಮೀದೇವಿಯ ಆರಾಧನೆ ತುಲಾ ರಾಶಿಯವರಿಗೆ ಶ್ರೇಯಸ್ಕರ.
ಪರಾಭವ ನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ: ತುಲಾ ರಾಶಿ ರಾಶಿಯವರಿಗೆ ಈ ಸಂವತ್ಸವರ ಮಿಶ್ರಫಲಗಳನ್ನು ಹೊತ್ತು ತರಲಿದೆ. ಈ ಅವಧಿಯಲ್ಲಿ ಗ್ರಹಗಳ ಚಲನೆ, ಆದಾಯ-ವ್ಯಯ ಸ್ಥಿತಿ, ಆರೋಗ್ಯ, ಉದ್ಯೋಗ ಮತ್ತು ಕುಟುಂಬ ಜೀವನದ ಮೇಲೆ ವಿಶೇಷ ಪರಿಣಾಮಗಳನ್ನು ಕಾಣಬಹುದು. ಈ ಸಂವತ್ಸರದಲ್ಲಿ ಮೀನ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳು ಆಗಬಹುದು? ಯಾವ ವಿಷಯಗಳಲ್ಲಿ ಲಾಭ ಹಾಗೂ ಯಾವ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ ಎಂಬುದನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಪಂಡಿತ್ ವಿಠ್ಠಲ್ ಭಟ್.
ತುಲಾ ರಾಶಿ - ಪರಾಭವ ನಾಮ ಸಂವತ್ಸರ (19.03.2026 - 06.04.2027)
ಆದಾಯ: 13
ವ್ಯಯ: 12
ರಾಜಮರ್ಯಾದೆ: 7
ಅವಮಾನ: 3
ಪರಾಭವ ನಾಮ ಸಂವತ್ಸರವು ತುಲಾ ರಾಶಿಯವರಿಗೆ ಸಮತೋಲನದ ಮಧ್ಯೆ ಸಾಧನೆಗಳ ವರ್ಷವಾಗಿರುತ್ತದೆ. ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ಹೊಸ ವ್ಯವಹಾರ, ಪಾಲುದಾರಿಕೆ ಅಥವಾ ಹೆಚ್ಚುವರಿ ಕೆಲಸಗಳಿಂದ ಹಣಕಾಸು ಬಲವಾಗುತ್ತದೆ. ಆದರೆ ಖರ್ಚುಗಳೂ ಹೆಚ್ಚಾಗುವ ಸೂಚನೆ ಇದೆ, ವಿಶೇಷವಾಗಿ ಮನೆ ಸುಧಾರಣೆ, ವಾಹನ ಅಥವಾ ಕುಟುಂಬದ ಶುಭಕಾರ್ಯಗಳಿಗೆ ವೆಚ್ಚ ಸಾಧ್ಯ. ಸರಿಯಾದ ಹಣಕಾಸು ಯೋಜನೆ ಯಶಸ್ಸಿಗೆ ಮುಖ್ಯ.

ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆಗಳು ಬರಬಹುದು. ನಿಮ್ಮ ನಿರ್ಧಾರ ಸಾಮರ್ಥ್ಯ ಮತ್ತು ಸಮತೋಲನದ ಸ್ವಭಾವ ಮೇಲಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪದೋನ್ನತಿ ಅಥವಾ ವರ್ಗಾವಣೆ ಸಾಧ್ಯ. ವ್ಯಾಪಾರಸ್ಥರಿಗೆ ಹೊಸ ಗ್ರಾಹಕರು, ವಿಸ್ತರಣೆ ಮತ್ತು ಉತ್ತಮ ಲಾಭದ ಸೂಚನೆ ಇದೆ. ಕಾನೂನು ಅಥವಾ ಒಪ್ಪಂದ ಸಂಬಂಧಿತ ವಿಷಯಗಳಲ್ಲಿ ಜಾಗ್ರತೆ ಅಗತ್ಯ.
ಕುಟುಂಬ ಜೀವನದಲ್ಲಿ ಸಂತೋಷಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ದಾಂಪತ್ಯದಲ್ಲಿ ಹೊಂದಾಣಿಕೆ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹಾಗೂ ಉನ್ನತ ಶಿಕ್ಷಣದ ಅವಕಾಶ ಸಿಗುತ್ತದೆ.
ಆರೋಗ್ಯ ಸಾಮಾನ್ಯವಾಗಿ ಉತ್ತಮವಾಗಿರುತ್ತದೆ, ಆದರೆ ಕಿಡ್ನಿ, ಬೆನ್ನು ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳಿಗೆ ಗಮನ ಹರಿಸಬೇಕು. ನಿಯಮಿತ ವ್ಯಾಯಾಮ ಮತ್ತು ಯೋಗ ಉಪಕಾರಿ.
ಧಾರ್ಮಿಕ ಯಾತ್ರೆ, ದೇವಾಲಯ ದರ್ಶನ ಅಥವಾ ಶನಿವಾರ ಶನಿ ಆರಾಧನೆ ಶುಭಕರ. ಶತ್ರುಗಳಿಂದ ದೂರವಿದ್ದು ವಿವಾದಗಳನ್ನು ತಪ್ಪಿಸುವುದು ಒಳಿತು. ಒಟ್ಟಾರೆ ಈ ವರ್ಷ ತುಲಾ ರಾಶಿಯವರಿಗೆ ಗೌರವ, ಆರ್ಥಿಕ ಬೆಳವಣಿಗೆ ಮತ್ತು ಕುಟುಂಬ ಸಂತೋಷ ನೀಡುವ ಸಾಧನೆಯ ಸಂವತ್ಸರವಾಗಿರುತ್ತದೆ.
-
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications