ಭವಿಷ್ಯ, ಫೆ 22ರ ನಂತರ: ಶನಿ,ರಾಹು,ಮಂಗಳ ಸಂಯೋಗ: 1965ರಲ್ಲಿ ಪಾಕ್ ಯುದ್ದ, 1984 ಇಂದಿರಾ ಗಾಂಧಿ ಹತ್ಯೆ, 2021?
ಶಾರ್ವರಿ ಮತ್ತು ಪ್ಲವ ನಾಮ ಸಂವತ್ಸರದಲ್ಲಿ ವಿಶ್ವ ಗಂಭೀರವಾದ ಪರಿಣಾಮವನ್ನು ಎದುರಿಸುವ ಸಾಧ್ಯತೆಯಿದೆಯೇ? ಕೊರೊನಾ ಹಾವಳಿಯಿಂದ ಇನ್ನೂ ಮುಕ್ತವಾದ ಜಗತ್ತು ಇನ್ನಷ್ಟು ತೊಂದರೆ ಅನುಭವಿಸಲು ಸಿದ್ದವಾಗಬೇಕೇ?
ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯ ನಂತರ ಸಂವತ್ಸರದಲ್ಲಿ ಬದಲಾವಣೆಯಾಗಲಿದೆ. ಈ ಬಾರಿ ಅಧಿಕ ಮಾಸ ಇರುವುದರಿಂದ, ಚಾಂದ್ರಮಾನ ಯುಗಾದಿ ಒಂದು ತಿಂಗಳ ನಂತರ, ಅಂದರೆ, ಏಪ್ರಿಲ್ ಹದಿಮೂರರಂದು ಆಚರಿಸಲಾಗುತ್ತದೆ.
ಇನ್ನು, ಕೊರೊನಾದ ತೀವ್ರತೆ ಕಮ್ಮಿಯಾಗುತ್ತಾ ಬರುತ್ತದೆ, ಯುಗಾದಿಯ ನಂತರ ಈ ಬಗ್ಗೆ ಹೇಳುವೆನು ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಈ ವರ್ಷದ ಭವಿಷ್ಯವನ್ನು ನುಡಿದಿದ್ದ ಉತ್ತರ ಭಾರತ ಮೂಲದವರು ದೇಶದಲ್ಲಿ ರಾಜಕೀಯ ವಿಪ್ಲವ ಸಂಭವಿಸುವ ಸಾಧ್ಯತೆಯಿದೆ ಮತ್ತು ಮೋದಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಸೂಕ್ತ ಎನ್ನುವ ಮಾತನ್ನು ಹೇಳಿದ್ದರು.
ರಥಸಪ್ತಮಿಯ ದಿನವಾದ ಫೆ.18/19 ನಂತರದ ಮೂರು ದಿನಗಳಲ್ಲಿ ರಾಶಿಪಥದಲ್ಲಿ ಹಲವು ಬದಲಾವಣೆಯಾಗಲಿದೆ. ಮುಂದಿನ ಫೆ.22ರಂದು ಶನಿ, ರಾಹು ಮತ್ತು ಮಂಗಳ ಸಂಯೋಗ ಆಗಲಿರುವುದರಿಂದ, ರಾಜಕೀಯವಾಗಿ ಮತ್ತು ಪ್ರಾಕೃತಿಕವಾಗಿ ಉತ್ತಮವಾದುದಲ್ಲ.

ಇಂದಿರಾ ಗಾಂಧಿ ಹತ್ಯೆ
ಫೆ.22ರಂದು ಮಂಗಳ, ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ, ಜೊತೆಗೆ ಶನಿ ಮತ್ತು ರಾಹು ರಾಶಿಯ ಸಂಯೋಗವಾಗಲಿದೆ. ಇದು ಇಡೀ ವಿಶ್ವಕ್ಕೆ ಕ್ಲಿಷ್ಕಕರವಾದ ಸಮಯ. ಭಾರತ ಮತ್ತು ಪಾಕಿಸ್ತಾನ ಪ್ರತ್ಯೇಕವಾಗಿದ್ದು, ಎರಡು ದೇಶಗಳ ನಡುವೆ ಯುದ್ದ ನಡೆದದ್ದು, ಅಮೆರಿಕಾ ಮತ್ತು ವಿಯಟ್ನಾಂ ನಡುವೆ ಸಮರ ಆರಂಭವಾಗಿದ್ದದ್ದು, ಇಂದಿರಾ ಗಾಂಧಿ ಹತ್ಯೆ ನಡೆದದ್ದು , ಇದೇ ರಾಶಿ ಸಂಯೋಗ ಪ್ರಭಾವದ ವೇಳೆ.

ಫೆಬ್ರವರಿ 22ರ ಮೂರು ಗ್ರಹಗಳ ಸಂಯೋಗ
ಫೆಬ್ರವರಿ 22ರ ಮೂರು ಗ್ರಹಗಳ ಸಂಯೋಗದ ನಂತರದ 100 ದಿನಗಳಲ್ಲಿ ರಾಜಕೀಯವಾಗಿ, ಪ್ರಾಕೃತಿಕವಾಗಿ ಮತ್ತು ಆರ್ಥಿಕವಾಗಿ ಸಾಕಷ್ಟು ಬದಲಾವಣೆಗಳು ನಡೆಯಲಿದೆ, ಇದಕ್ಕೆ ಜನರು ಸಾಕ್ಷಿಯಾಗಬೇಕಿದೆ. ರಾಜಕೀಯವಾಗಿ, ಈ ಕ್ಷೇತ್ರಕ್ಕೆ ಸಂಬಂಧಿಸಿದರು ಹಲವು ಏರಿಳಿತವನ್ನು ಎದುರಿಸಬೇಕಾಗುತ್ತದೆ.

ರಕ್ಕಸ ಗಾತ್ರದ ಅಲೆಗಳಿಂದ ಸುನಾಮಿ
ಪ್ರಾಕೃತಿಕವಾಗಿ ಹಲವು ದುರ್ಘಟನೆಗಳನ್ನು ವಿಶ್ವ ಎದುರಿಸಬೇಕಾಗಬಹುದು. ವಿಶ್ವದ ವಿವಿಧ ಭಾಗಗಳಲ್ಲಿ ಭೂಕಂಪಗಳು ಸಂಭವಿಸುತ್ತವೆ, ಕಾಡ್ಗಿಚ್ಚುಗಳು ಆವರಿಸಬಹುದು. ಭೂಕಂಪನದಿಂದ ಸಾಗರದಲ್ಲಿ ಅಲೆಗಳು ರಕ್ಕಸವಾಗಿ, ಸುನಾಮಿ ಎದ್ದೇಳಬಹುದು ಎನ್ನುವ ಸೂಚನೆಗಳು ಕಂಡು ಬರುತ್ತಿವೆ.

ಕೊರೊನಾ ಹಾವಳಿ
ಆದರೆ, ಆರ್ಥಿಕವಾಗಿ ಭಾರತ ಮತ್ತು ವಿಶ್ವ ಮಾರ್ಚ್ ನಂತರ ಬಲಾಢ್ಯವಾಗಲಿದೆ. ವಿವಿಧ ರಂಗಗಳು ಉತ್ತೇಜನವನ್ನು ಕಾಣಲಿವೆ. ಕೊರೊನಾ ಹಾವಳಿಯಿಂದ ಎಷ್ಟು ಆರ್ಥಿಕ ಜಗತ್ತು ತೊಂದರೆಯನ್ನು ಎದುರಿಸುತ್ತೋ, ಅದೆಲ್ಲಾ ನಿವಾರಣೆಯಾಗುವ ಸಾಧ್ಯತೆಯಿದೆ ಎಂದು ಜ್ಯೋತಿಷ್ಯರು ಹೇಳಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications