2020 ಹೇಗಿರಲಿದೆ: ನಾಸ್ಟ್ರಡಾಮಸ್ ಹೇಳಿದ್ದಾನೆ ಭೀಕರ ಭವಿಷ್ಯ
Recommended Video
ನಾಸ್ಟ್ರಡಾಮಸ್ ಯಾರಿಗೆ ಗೊತ್ತಿಲ್ಲ? ಜಗದ್ವಿಖ್ಯಾತ ಭವಿಷ್ಯಕಾರ ಆತ. ಇಡೀಯ ಭೂಮಂಡಲದ ಬಗ್ಗೆಯೇ ಆತ ಭವಿಷ್ಯ ನುಡಿದಿದ್ದಾನೆ. ಅದೂ ಸಾವಿರಾರು ವರ್ಷಗಳ ಹಿಂದೆ. ಆತ ನುಡಿದಿರುವ ಭವಿಷ್ಯ ಬಹುತೇಕ ಜರುಗಿದೆ ಎನ್ನಲಾಗುತ್ತದೆ. ಒಂದು ಸಮಯದಲ್ಲಂತೂ ಕನ್ನಡ ಸೇರಿದಂತೆ ಭಾರತದ ಬಹುತೇಕ ಟಿವಿ ಚಾನೆಲ್ ಗಳು ತಿಂಗಳುಗಟ್ಟಲೆ ನಾಸ್ಟ್ರಡಾಮಸ್ ಭವಿಷ್ಯದ ಬಗ್ಗೆ ಕಾರ್ಯಕ್ರಮಗಳನ್ನು ಭಿತ್ತರಿಸಿದ್ದವು.
ಇದೀಗ ನಾಸ್ಟ್ರಡಾಮಸ್ ಮತ್ತೆ ಮುನ್ನೆಲೆಗೆ ಬಂದಿದ್ದಾನೆ. 2020 ನೇ ವರ್ಷ ವಿಶ್ವದಾದ್ಯಂತ ನಡೆಯುವ ಪ್ರಮುಖ ಘಟನೆಗಳ ಬಗೆಗೆ ಆತ ನುಡಿದಿದ್ದ ಭವಿಷ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ನಾಸ್ಟ್ರಡಾಮಸ್ ಭವಿಷ್ಯದ ಪ್ರಕಾರ, 2020 ವರ್ಷ ಹಿಂಸಾಚಾರದಿಂದ ಕೂಡಿರುತ್ತದೆಯಂತೆ. ಯುದ್ಧಗಳು, ಆಂತರಿಕ ಯುದ್ಧಗಳು, ಹಿಂಸಾತ್ಮಕ ಪ್ರತಿಭಟನೆಗಳು ಸಾಕಷ್ಟು ನಡೆಯುತ್ತವೆಯಂತೆ. 2020 ಮನುಕುಲದ ಹಿಂಸಾತ್ಮಕ ವರ್ಷ ಆಗಿರಲಿದೆಯಂತೆ.

'ದೇವರ ದೇಶದಲ್ಲಿ ದೊಡ್ಡ ಬಿರುಗಾಳಿ'
'ದೇವರ ನಾಡಿನಲ್ಲಿ ದೊಡ್ಡ ಬಿರುಗಾಳಿ ಏಳಲಿದೆ, ಸಹೋದರರಿಬ್ಬರು ಕಿತ್ತಾಡಿಕೊಂಡು ದೂರಾಗಿ ವೈರಿಗಳಾಗುತ್ತಾರೆ, ದೊಡ್ಡ ನಗರವೊಂದು ಹೊತ್ತಿ ಉರಿದಾಗ ಮೂರನೇ ಮಹಾ ಯುದ್ಧ ಆರಂಭವಾಗುತ್ತದೆ' ಈ ರೀತಿಯ ಸೂಕ್ಷ್ಮ ವ್ಯಾಖ್ಯಾನಗಳೊಂದಿಗೆ ನಾಸ್ಟ್ರಡಾಮಸ್ ವಿಶ್ವದ ಭವಿಷ್ಯ ನುಡಿದಿದ್ದಾನೆ.

ವ್ಲಾಡಿಮಿರ್ ಪುಟಿನ್ ಹತ್ಯೆ ಯತ್ನ
ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ರ ಕೊಲೆ ಯತ್ನ ನಡೆಯುತ್ತದೆ. ಇಂಗ್ಲೆಂಡ್ ರಾಣಿ ಮರಣಹೊಂದುತ್ತಾರೆ, ಅಮೆರಿಕ ದೇಶವು ಏಷ್ಯಾ ರಾಷ್ಟ್ರಗಳಲ್ಲಿ ಬೃಹತ್ ಯುದ್ಧ ತಾಲೀಮು ನಡೆಸಿ ಮೂರನೇ ಮಹಾಯುದ್ಧಕ್ಕೆ ಇಂಬು ನೀಡಲಿದೆ ಎಂಬಿತ್ಯಾದಿಯಾಗಿ ನಾಸ್ಟ್ರಡಾಮಸ್ ನ ಭವಿಷ್ಯವನ್ನು ವಿಶ್ಲೇಶಿಸಲಾಗಿದೆ.

ವಿಶ್ವದೆಲ್ಲೆಡೆ ಮಹಾ ಆರ್ಥಿಕ ಕುಸಿತ
ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ಆರ್ಥಿಕ ಕುಸಿತ 2020 ರಲ್ಲಿ ಉಂಟಾಗಲಿದೆಯಂತೆ. ಷೇರು ಮಾರುಕಟ್ಟೆ ನೆಲಕಚ್ಚಲಿದೆ. ಸಾಲ ತೀರಿಸುವ ಶಕ್ತಿಯನ್ನು ಜನರು ಕಳೆದುಕೊಳ್ಳಲಿದ್ದಾರೆ. ಭಾರಿ ಆರ್ಥಿಕ ದಿವಾಳಿ 2020 ರಲ್ಲಿ ವಿಶ್ವದೆಲ್ಲೆಡೆ ಕಾಣಲಿದೆಯಂತೆ.

ಭಾರತದಲ್ಲಿ ತೀವ್ರ ಆಂತಕರಿಕ ಕಲಹ
ಭಾರತದಲ್ಲೂ ಬಹುವಾಗಿ ಆಂತರಿಕ ಜಗಳಗಳು ನಡೆಯುತ್ತವೆ. ಮತೀಯ ಗಲಭೆಗಳು ಹೆಚ್ಚಲಿವೆ. ಆರ್ಥಿಕ ಸಂಕಷ್ಟಕ್ಕೆ ಭಾರತ ತುತ್ತಾಗುತ್ತದೆ. ಪ್ರಾಕೃತಿಕ ಹಾನಿಗಳು ಬಹುಮಟ್ಟಿಗೆ 2020 ರಲ್ಲಿ ಸಂಭವಿಸುತ್ತವೆ ಎಂದು ನಾಸ್ಟ್ರಡಾಮಸ್ ಹೇಳಿದ್ದಾನೆ.

ಶಾಂತಿಯುತ ತಲೆಮಾರಿನ ಹುಟ್ಟು
ಕೇವಲ ಹಿಂಸಾಚಾರ ಮಾತ್ರವಲ್ಲದೆ 2020 ಕೆಲವು ಹೊಸ ಘಟನೆಗಳಿಗೂ ಸಾಕ್ಷಿ ಆಗಲಿದೆ. ಹೊಸ ತಲೆಮಾರಿನ, ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ತಲೆಮಾರಿನ ಉದಯವೂ ಇದೇ ವರ್ಷದಲ್ಲಿ ಆಗಲಿದೆಯಂತೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications