ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ 2022 ತಿಂಗಳ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ...!

|
Google Oneindia Kannada News

ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ ಸಮಯದ ಬಗ್ಗೆ ಮಾಹಿತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಭವಿಷ್ಯದ ಯೋಜನೆಗಳನ್ನು ನಿರ್ಧರಿಸಲು ಬಯಸುತ್ತಾನೆ. ಆದರೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ. ಇದರೊಂದಿಗೆ, ನಿಮ್ಮ ರಾಶಿಚಕ್ರದ ಪ್ರಕಾರ ನಿಮ್ಮ ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಊಹಿಸಲು ಸಹ ಕಷ್ಟವಾಗುತ್ತದೆ. ಅಂತಹ ಯಾವುದೇ ಮಾಹಿತಿಗಾಗಿ ವ್ಯಕ್ತಿಯು ಜ್ಯೋತಿಷ್ಯದ ಸಹಾಯವನ್ನು ತೆಗೆದುಕೊಳ್ಳುತ್ತಾನೆ.

ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಬದಲಾವಣೆಯು ಮಾನವ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದಲ್ಲಿ ಹೇಳಲಾದ ಎಲ್ಲಾ 12 ರಾಶಿಚಕ್ರಗಳ ಮೇಲೆ ಇದರ ಪರಿಣಾಮ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳು ಶುಭ ಫಲಿತಾಂಶಗಳನ್ನು ತರುತ್ತದೆ ಮತ್ತು ಯಾರಿಗೆ ನಷ್ಟವಾಗಬಹುದು ಎನ್ನುವುದನ್ನು ತಿಳಿಯಬಹುದು.

ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ವರ್ಷಋತು ಭಾದ್ರಪದ ಮಾಸ/ಸೆಪ್ಟೆಂಬರ್ ತಿಂಗಳ ಭವಿಷ್ಯ.

ದಿನಾಂಕ: 01.09.2022 ರಿಂದ 30.09.2022

ಈ ತಿಂಗಳಲ್ಲಿ ರವಿಯ ಸಂಚಾರ ಕನ್ಯಾ ರಾಶಿಯಲ್ಲಿ, ಶುಕ್ರನ ಸಂಚಾರ ಸಿಂಹ/ಕನ್ಯಾರಾಶಿಯಲ್ಲಿ ನಡೆಯುತ್ತದೆ.

ಮೇಷರಾಶಿ

ಮೇಷರಾಶಿ

ಈ ತಿಂಗಳಲ್ಲಿ ಸೂರ್ಯನ ಆರನೇ ಮನೆ ಸಂಚಾರದಿಂದ ನಿಮ್ಮ ಜೀವನದಲ್ಲಿ ವಿಶೇಷಲಾಭ ಇದೆ. ಸರ್ಕಾರಿ ನೌಕರರಿಗೆ ಬಡ್ತಿ ಸಿಗುತ್ತದೆ. ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿ ಇದೆ. ಯಾವುದಾದರೂ ಕೆಲಸ ಅರ್ಧದಲ್ಲಿ ನಿಂತಿದ್ದರೆ ಅದು ಮತ್ತೆ ಚಾಲನೆ ಪಡೆದುಕೊಳ್ಳುತ್ತದೆ. ಜಾಗ ಬದಲಾವಣೆ ಸಾಧ್ಯತೆ ಇದೆ. ಬಡ್ತಿ ಸಿಗಬಹುದು ಅಥವಾ ವರ್ಗಾವಣೆ ಆಗಬಹುದು. ವರ್ಗಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಈಗ ಶುಭಕಾಲ. ಧರ್ಮಕಾರ್ಯ ಶುಭಕಾರ್ಯಗಳಿಗೆ ಹಣ ಖರ್ಚು ಮಾಡುತ್ತೀರಿ. ಸರ್ಕಾರದಿಂದ ಸಾಲಸೌಲಭ್ಯ ಸಿಗಲಿದೆ. ಭೂಮಿಯ ವ್ಯವಹಾರಗಳಲ್ಲಿ ಲಾಭ ಮಾಡುತ್ತಿರಿ. ವ್ಯವಸಾಯಗಾರರಿಗೂ ಲಾಭ ಇದೆ. ಕಟ್ಟಡದ ಕೆಲಸ ಮಾಡುವವರಿಗೆ ಲಾಭ ಇದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಸಾಫ್ಟ್‌ವೇರ್ ನೌಕರರಿಗೂ ಯಶಸ್ಸು ಇದೆ. ತಂದೆಯ ಆರೋಗ್ಯದಲ್ಲಿ ಸುಧಾರಣೆ ಇದೆ. ಈ ತಿಂಗಳು ನಿಮಗೆ 75% ಲಾಭವೇ ಇರುವುದರಿಂದ ಯೋಚನೆ ಮಾಡಬೇಕಾದ ಅಗತ್ಯ ಇಲ್ಲ. ಗುರುಹಿರಿಯರ ಮಾರ್ಗದರ್ಶನ ಸಿಗುತ್ತದೆ. ಸಜ್ಜನ ಮಿತ್ರರ ಬೆಂಬಲ ಸಿಗುತ್ತದೆ. ಹೆಣ್ಣುಮಕ್ಕಳಿರುವವರಿಗೆ ಮಕ್ಕಳಿಂದ ಸಂತೋಷ ಇದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಖುಷಿ ಇದೆ.

ವೃಷಭರಾಶಿ:

ವೃಷಭರಾಶಿ:

ರಾಶಿಯಲ್ಲೇ ಇರುವ ಕುಜ ಪರಾಕ್ರಮದಿಂದ ಕೆಲಸ ಕಾರ್ಯಗಳಲ್ಲಿ ಜಯ ಕೊಡಿಸುತ್ತಾನೆ. ನೀವು ಕೈಹಾಕಿದ ಕೆಲಸಗಳಲ್ಲಿ ಯಶಸ್ಸು ಇದೆ. ವಿದೇಶ ಪ್ರಯಾಣಯೋಗ ಇದೆ. ನೌಕರಿಯಲ್ಲಿ ಬಡ್ತಿ ಸಿಗುತ್ತದೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಇದೆ. ಆಸ್ತಿ ವಾಹನ ಖರೀದಿಸುವ ಯೋಗ ಇದೆ. ತೋಟಗಾರಿಕೆ ಮಾಡುವವರಿಗೆ ಈಗ ಒಳ್ಳೆಯ ಕಾಲ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಕಾಲ. ಮನೆಯಲ್ಲಿ ವಾತಾವರಣ ಅನುಕೂಲವಾಗಿರುತ್ತದೆ. ನಿಮ್ಮನ್ನು ದೂರ ಮಾಡಿದ ಬಂಧುಗಳು ಅವರ ತಪ್ಪನ್ನರಿತು ನಿಮ್ಮ ಬಳಿ ಬರುತ್ತಾರೆ. ನಿಮ್ಮ ಮಾತುಗಳಿಗೆ ಗೌರವ ಕೊಡುತ್ತಾರೆ. ಸಮಾಜದಲ್ಲಿ ನಿಮಗೆ ಈಗ ಸನ್ಮಾನ ಪಾರಿತೋಷಕಗಳು ಸಿಗುವ ಸಮಯ. ರಾಶ್ಯಾಧಿಪತಿ ಶುಕ್ರ 24 ರವರೆಗೂ ಸಿಂಹರಾಶಿಯಲ್ಲಿ ನಂತರ ಕನ್ಯಾದಲ್ಲಿ ಸಂಚಾರ ನಿಮಗೆ ಒಳ್ಳೆಯ ಲಾಭ ಕೀರ್ತಿ ತಂದುಕೊಡುತ್ತದೆ. 25ರ ನಂತರ ಐದನೇ ಮನೆಯಲ್ಲಿ ಒಂದು ರಾಜಯೋಗದಿಂದ ನಿಮಗೆ ನೀವು ಬಹುದಿಗಳಿಂದ ಸಾಧಿಸಬೇಕೆಂದುಕೊಂಡಿದ್ದ ಕೆಲಸಗಳು ಸುಲಭವಾಗಿ ನೆರವೇರುತ್ತದೆ. ಧನಲಾಭ ಇದೆ. ಮಕ್ಕಳಿಂದ ಮನಸ್ಸಿಗೆ ಸಂತೋಷ ಇದೆ.

ಮಿಥುನರಾಶಿ:

ಮಿಥುನರಾಶಿ:

ಮೂರರ ಶುಕ್ರ ಹಾಗೂ ಸೂರ್ಯ ನಿಮ್ಮ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕೊಡಿಸುತ್ತಾರೆ. ಶುಕ್ರ ಮತ್ತು ಬುಧನಿಮಗೆ ಕೇಂದ್ರ ತ್ರಿಕೋಣಾಧಿಪತಿಗಳು. ಹೀಗಾಗಿ 24 ರಂನತರ ಅವರ ಸಂಯೋಗ ನಿಮಗೆ ಅಪಾರ ಯಶಸ್ಸನ್ನು ಲಾಭವನ್ನು ತಂದುಕೊಡುತ್ತದೆ. ಹಣದ ಹರಿವು ಉತ್ತಮವಾಗಿ ಸಾಲಗಳನ್ನು ತೀರಿಸಿಕೊಳ್ಳಲು ಅನುಕೂಲವಾಗುತ್ತದೆ. 25ರ ನಂತರ ನಿಮಗೆ ನಾಲ್ಕನೇ ಮನೆಯಾದ ಕನ್ಯಾರಾಶಿಯಲ್ಲಿ ರಾಜಯೋಗ ಇದೆ. ಇದು ನಿಮಗೆ ಆಸ್ತಿ ಲಾಭ ವೃತ್ತಿಯಲ್ಲಿ ಯಶಸ್ಸು ತಂದುಕೊಡುತ್ತದೆ. ಸಂಗಾತಿಯೊಡನೆ ಇದ್ದ ವೈಮನಸ್ಸು ನಿವಾರಣೆಯಾಗಿ ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಮೂಡುತ್ತದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೂ ಈ ತಿಂಗಳು ಲಾಭ ಇದೆ. ನಿಮ್ಮದೇ ಸ್ವಂತ ಉದ್ಯಮ ಮಾಡಲು ಯೋಚಿಸಿರುವವರಿಗೆ ಇದು ಸಕಾಲ. ಮಕ್ಕಳನ್ನು ಅಪೇಕ್ಷೆ ಪಡುತ್ತಿರುವವರಿಗೂ ಈಗ ಶುಭ ಸುದ್ದಿ ಇದೆ. ಸಾಲಸೋಲಗಳಿಂದ ಕಂಗೆಟ್ಟಿರುವ ನಿಮಗೆ ಈಗ ಸಾಲ ತೀರಿಸಲು ಧನಸಹಾಯ ಒದಗಿ ಬರುತ್ತದೆ. ವೃತ್ತಿಯಲ್ಲಿ ಬಡ್ತಿಯ ಶುಭಸುದ್ದಿ ಇದೆ. ಷೇರು ವ್ಯವಹಾರ ಮಾಡುವವರಿಗೂ ಈ ತಿಂಗಳು ಲಾಭ ಇದೆ. ಚಿತ್ರರಂಗದವರಿಗೂ ಈ ತಿಂಗಳು ಉತ್ಸಾಹದ ವಾತಾವರಣ ಇರುತ್ತದೆ. ವಿನಾಯಕ ವ್ರತದ ದಿನ ಹೊಸ ಕಾಂಟ್ರಾಕ್ಟ್ ಗಳಿಗೆ ಸಹಿ ಹಾಕುತ್ತೀರಿ.

ಕಟಕರಾಶಿ:

ಕಟಕರಾಶಿ:

ಈ ತಿಂಗಳ 17ರ ನಂತರ ನಿಮ್ಮ ಎಲ್ಲ ಕೆಲಸಗಳಲ್ಲೂ ಉತ್ತಮ ಪ್ರಗತಿ ಇದೆ. ಸರ್ಕಾರಿ ಕೆಲಸಕಾರ್ಯಗಳು ಶೀಘ್ರವಾಗಿ ನೆರವೇರುತ್ತದೆ. ಸರ್ಕಾರಿ ನೌಕರಿಯ ಬೇಟೆಯಲ್ಲಿ ಇರುವವರಿಗೆ ಶುಭಫಲಗಳು ಇವೆ. ಧನಲಾಭ ಇದೆ. ಸಕಾರಿ ಟೆಂಡರ್ ಸಿಗುವುದು, ಸರ್ಕಾರದಿಂದ ಲೋನ್ ಸಿಗುವುದು ಎಲ್ಲವೂ ಈ ತಿಂಗಳಲ್ಲಿ ನಿಮಗೆ ಸುಲಭವಾಗುತ್ತದೆ. ಕೌಟುಂಬಿಕ ವಾತಾವರಣ ಕೊಂಚ ನೀರಸವಾಗಿರುತ್ತದೆ. ಮನೆಯಲ್ಲಿ ಅಶಾಂತಿ ನೆಮ್ಮದಿ ಇಲ್ಲದಂತೆ ಆಗುತ್ತದೆ. ಆದರೆ ಗುರುವಿನ ಅನುಗ್ರಹದಿಂದ ಎಲ್ಲಾವೂ ಮೊದಲಿನ ಸ್ಥಿತಿಗೆ ಬರಲಿದೆ. ನಿಮ್ಮನ್ನು ಬಿಟ್ಟುಹೋದ ರಕ್ತ ಸಂಬಂಧಿಗಳಿಗಾಗಿ ಚಿಂತಿಸಬೇಡಿ. ಬಿಟ್ಟು ಹೋದವರು ನಿಮ್ಮ ಬೆಲೆಯನ್ನು ತಿಳಿದು ಮರಳಿ ನಿಮ್ಮ ಬಳಿಗೆ ಬರುತ್ತಾರೆ. ಬಂಧು ಬಾಂಧವರ ಸಹಕಾರ ಇದೆ. ನಾಲ್ಕನೇ ಮನೆಯಲ್ಲಿ ಕೇತು ನಿಮ್ಮ ಸುಖಸಂತೋಷಕ್ಕೆ ಕೊಂಚ ಅಡ್ಡಿಯನ್ನು ಉಂಟುಮಾಡುತ್ತಾನೆ. ಹತ್ತರ ರಾಹು ವೃತ್ತಿಯಲ್ಲಿ ಒತ್ತಡವನ್ನು ಕೊಡುತ್ತಾನೆ. ಹನ್ನೊಂದರ ಕುಜನಿಂದ ಭುಮಿಯಲ್ಲಿ ಲಾಭ ಇದೆ. ವ್ಯವಸಾಯಗಾರರಿಗೆ ಶುಭಫಲಗಳು ಇವೆ. ಪರಾಕ್ರಮದಿಂದ ಮುನ್ನುಗ್ಗಿ ಯಾವ ಕೆಲಸ ಮಾಡಿದರೂ ನಿಮಗೆ ಜಯ ಸಿಗುತ್ತದೆ. ಹನುಮಂತನನ್ನು ಪ್ರಾರ್ಥನೆ ಮಾಡಿ.

ಸಿಂಹರಾಶಿ:

ಸಿಂಹರಾಶಿ:

ನಿಮ್ಮ ರಾಶಿಯಲ್ಲೇ ಇರುವ ಸೂರ್ಯ ಕೊಂಚ ಅನಾರೋಗ್ಯವನ್ನು ಸೂಚಿಸುತ್ತಾನೆ. ಎರಡನೇ ಮನೆಯ ಬುಧ ಧನಲಾಭ ಕೊಡಿಸುತ್ತಾನೆ. ವೃತ್ತಿಯಲ್ಲಿ ಯಶಸ್ಸು ಇದೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ ಇದೆ. ಸ್ವಂತ ವ್ಯಾಪಾರ ವ್ಯವಹಾರ ಮಾಡುವವರು, ಸರ್ಕಾರಿ ಕೆಲಸಗಾರರು ಇವರಿಗೆ ಒಳ್ಳೆಯ ಸುದ್ದಿ ಇದೆ. ಮೂರರ ಕೇತು ನಿಮಗೆ ಮುನ್ನುಗ್ಗಿ ಕೆಲಸ ಮಾಡುವ ಛಾತಿಯನ್ನು ಕೊಡುತ್ತಾನೆ. ಆರರ ಶನಿ ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಮುನ್ನೆಲೆಗೆ ತರುತ್ತಾನೆ. ಒಳ್ಳೆಯ ಬೆಲೆಗೆ ಆಸ್ತಿ ಮಾರುವ ಯೋಗ ಇದೆ. ಮನಸ್ಸಿಗೆ ಯಾವುದೋ ಚಿಂತೆ ಕಾಡಿಸುತ್ತಿದೆ. ಇದರಿಂದ ಹೊರಬರುವ ಮಾರ್ಗ ತಿಳಿಯದೆ ಒದ್ದಾಡುತ್ತಿದ್ದೀರಿ. ತಂದೆಯ ಅರೋಗ್ಯಕ್ಕೆ ಕೊಂಚ ಧಕ್ಕೆ ಇದೆ. ಪಿತ್ರಾರ್ಜಿತ ಆಸ್ತಿ ಬರುವುದಿದ್ದರೆ ಅದು ಕೊಂಚ ವಿಳಬವಾಗುತ್ತದೆ. ಬೆಂಕಿಗೆ ಸಂಬಂಧ ಪಟ್ಟ ವೃತ್ತಿಯಲ್ಲಿ ಇರುವವರಿಗೆ ಈ ಮಾಸದಲ್ಲಿ ಉತ್ತಮ ಫಲಗಳು ಇವೆ. ನಿಮ್ಮ ಪಾಲುದಾರರಿಂದ ನಿಮಗೆ ಕೊಂಚ ಕಿರಿಕಿರಿ ಆಗಬಹುದು. ಜಾಗ್ರತೆ ವಹಿಸಿ. ನಿಮ್ಮ ಅಧಿಕಾರವನ್ನು ಯಾರಿಗೂ ಹಸ್ತಾಂತರಿಸಬೇಡಿ. ಇದರಿಂದ ಮುಂದೆ ಅಪಾಯಗಳಾಗುವ ಮುನ್ಸೂಚನೆ ಇದೆ. ಈಶ್ವರನನ್ನು ಪೂಜೆ ಮಾಡಿ.

ಕನ್ಯಾರಾಶಿ:

ಕನ್ಯಾರಾಶಿ:

ರಾಶಿಯಲ್ಲೇ ಇರುವ ಬುಧ ನಿಮಗೆ ದೂರ ಪ್ರಯಾಣ ಮಾಡಿಸುತ್ತಾನೆ. ವಿದೇಶ ಪ್ರವಾಸ ಯೋಗ ಇದೆ. ವಿದೇಶ ವ್ಯವಹಾರಗಳಲ್ಲಿ ಲಾಭ ಇದೆ. ಏಳರ ಗುರು ನಿಮಗೆ ಎಲ್ಲ ಕೆಲಸ ಕಾರ್ಯಗಳಲ್ಲೂ ಜಯವನ್ನು ಕೊಡುತ್ತಾನೆ. ಹೊಸ ಮನೆ ಖರೀದಿ ಅಥವಾ ಕಟ್ಟುವ ಯೋಗ ಇದೆ. ಇದಕ್ಕೆ ಸಂಬಂಧಿಸಿದ ಕೆಲಸಗಳೆಲ್ಲ ಸಲೀಸಾಗಿ ನೆರವೇರುತ್ತದೆ. ಸರ್ಕಾರದ ಕೆಲಸಗಳಿಗೆ ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಮನಸ್ಸಿಗೆ ಹಿತವಾದ ವಾತಾವರಣ ಇದೆ. ಒಂಬತ್ತರ ಕುಜ ಭೂ ವ್ಯವಹಾರದಲ್ಲಿ ಲಾಭವನ್ನು ತಂದುಕೊಡುತ್ತಾನೆ. ತೋಟಗಾರಿಕೆ, ರಿಯಲ್ ಎಸ್ಟೇಟ್, ಪೊಲೀಸ್ ವೃತ್ತಿಯವರಿಗೆ ಶುಭಫಲಗಳು ಇವೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಅಲಂಕಾರ ವಸ್ತುಗಳಿಗೆ ಖರ್ಚು ಮಾಡುತ್ತೀರಿ. ಹೊಸವಾಹನ ಖರೀದಿ ಯೋಗ ಇದೆ. ಸಜ್ಜನರ ಸಹವಾಸ ಸಿಗುತ್ತದೆ. ಗುರುಗಳ ದರ್ಶನ ಭಾಗ್ಯ ಇದೆ. ಆತ್ಮೀಯರೊಡನೆ ಸ್ನೇಹಿತರೊಡನೆ ಹಿತವಾದ ಸಮಯ ಕಳೆಯುತ್ತಿರಿ. ಸುಖಭೋಜನ ಪ್ರಾಪ್ತಿ ಇದೆ. ಒಳ್ಳೆಯ ಸಮಾರಂಭಗಳಿಗೆ ಹೋಗಿ ನಿಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತೀರಿ. ಆನರಿಗೆ ನಿಮ್ಮ ಮಾತಿನಲ್ಲಿ ಗೌರವ ಮೂಡುತ್ತದೆ. ನೇರವಾಗಿ ಮಾತನಾಡಿ ನಿಮ್ಮ ಪ್ರಭಾವ ಬೀರುತ್ತೀರಿ. ಜನ ನಿಮ್ಮಿಂದ ಪ್ರಭಾವಿತರಾಗುತ್ತಾರೆ.

ತುಲಾರಾಶಿ:

ತುಲಾರಾಶಿ:

ಈ ತಿಂಗಳ 17 ರವರೆಗೂ ಸೂರ್ಯ ನಿಮ್ಮ ರಾಶಿಯಿಂದ 11 ನೇ ಮನೆಯಲ್ಲಿ ಇರುತ್ತಾನೆ. ಇದು ನಿಮಗೆ ಧನಲಾಭವನ್ನು, ಕಾರ್ಯಸಫಲತೆಯನ್ನೂ ಕೊಡುತ್ತದೆ. ಸರ್ಕಾರದ ಕೆಲಸಗಳಲ್ಲಿ ಜಯ ಸಿಗುತ್ತದೆ. ಬ್ಯಾಂಕ್ ಲೋನ್ ಗೆ ಪ್ರಯತ್ನ ಮಾಡುತ್ತಿರುವವರು ಈಗ ಯಶಸ್ಸು ಪಡೆಯುತ್ತಾರೆ. ಆರರ ಗುರು ಕೊಂಚ ಅನಾರೋಗ್ಯವನ್ನು ಸೂಚಿಸುತ್ತಾನೆ. ಎಚ್ಚರಿಕೆಯಿಂದ ಇರಿ. ಈಶ್ವರನ ಪೂಜೆ ಮಾಡಿ. ನಿಮ್ಮ ರಾಶಿಯಲ್ಲೇ ಇರುವ ಕೇತು ನಿಮಗೆ ಗಾಯಗಳಾಗುವಂತೆ ಮಾಡುತ್ತಾನೆ. ಚೂಪಾದ ಆಯುಧಗಳಿಂದ ದೂರವಿರಿ. 11ರ ಶುಕ್ರ ನಿಮಗೆ ಸುಖೋಜನ ಸಿಗುವಂತೆ ಮಾಡುತ್ತಾನೆ. ಔತಣಕೂಟಗಳಿಗೆ, ಸ್ನೇಹಿತರೊಡನೆ ಸಂತೋಷಕೂಟಗಳಿಗೆ ಹೋಗುತ್ತೀರಿ. ಶುಭ ಸಮಾರಂಭದಲ್ಲಿ ಭಾಗವಹಿಸುತ್ತೀರಿ. ಸಂಗಾತಿಯಿಂದ ಕೊಂಚ ಕಿರಿಕಿರಿ ಇದೆ. ದುರ್ಗಾಸ್ತೋತ್ರ ಮಾಡಿ. ನಾಲ್ಕರ ಶನಿ ನಿಮಗೆ ವಿರೋಧಿಗಳನ್ನು ಸೃಷ್ಟಿಸುತ್ತಾನೆ. ಯಾರೊಂದಿಗೂ ಜಗಳ ವಾದ ಮಾಡಲು ಹೋಗಬೇಡಿ. ನಿಮ್ಮದೇ ಸರಿಯೆಂಬ ಮೊಂಡುವಾದ ಬೇಡ. ಇದರಿಂದ ನಿಮ್ಮ ಬೆಳವಣಿಗೆಗೆ ತೊಂದರೆಯಾಗುತ್ತದೆ. ಹಣಕಾಸಿನ ಹರಿವು ಈ ಮಾಸದಲ್ಲಿ ಮಧ್ಯಮವಾಗಿದೆ. ವ್ಯವಸಾಯ ಮಾಡುವವರಿಗೆ ರೈತರಿಗೆ ಕೊಂಚ ನಷ್ಟದ ಸಾಧ್ಯತೆ ಇದೆ. ಜಾಗ್ರತೆ ಇರಲಿ.

ವೃಶ್ಚಿಕರಾಶಿ:

ವೃಶ್ಚಿಕರಾಶಿ:

ಮೂರರ ಶನಿ, ಐದರ ಗುರು, ಆರರ ರಾಹು ನಿಮಗೆ ಮನೋಬಲವನ್ನೂ, ಆರ್ಥಿಕ ಸಮೃದ್ಧಿಯನ್ನೂ ಕೊಡುತ್ತಾರೆ. ಎಲ್ಲಾ ಕೆಲಸಗಳಲ್ಲೂ ಜಯ ಸಿಗುವಂತೆ ಮಾಡುತ್ತಾರೆ. ಶತ್ರುಗಳ ಬಾಯಿ ಮುಚ್ಚಿಸುತ್ತಾರೆ. ಹಣದ ಹರಿವು ಈ ಮಾಸ ಬಹಳ ಉತ್ತಮವಾಗಿದೆ. ಮಕ್ಕಳಿಂದ ಸಂತೋಷವಿದೆ. ಮಕ್ಕಳು ತಮ್ಮ ಭವಿಷ್ಯತ್ತಿಗಾಗಿ ವಿದೇಶ ಪ್ರಯಾಣ ಮಾಡಬಹುದು. ವೃಶ್ಚಿಕ ರಾಶಿಯ ಹೆಣ್ಣುಮಕ್ಕಳಿಗೆ ಮನೋವ್ಯಥೆ ಇದೆ. ಮನೆಯಲ್ಲಿ ಕೊಂಚ ಇರಿಸುಮುರಿಸಿನ ವಾತಾವರಣ ಇರುತ್ತದೆ. ಹತ್ತನೇ ಮನೆಯ ಸೂರ್ಯ ವೃತ್ತಿಯಲ್ಲಿ ಯಶಸ್ಸನ್ನು, ಕೀರ್ತಿಯನ್ನೂ ತಂದುಕೊಡುತ್ತಾನೆ. 17 ರ ನಂತರ ಸೂರ್ಯ ಸಿಂಹದಿಂದ ಕನ್ಯಾಗೆ ಬಂದಾಗ ಶುಭಫಲಗಳು ಮತ್ತೂ ಜಾಸ್ತಿಯಾಗುತ್ತದೆ. ಸೂರ್ಯ ಮತ್ತು ಬುಧ 11ನೇ ಮನೆಯಲ್ಲಿ ಬುಧಾದಿತ್ಯಯೋಗದಲ್ಲಿ ಇರುತ್ತಾರೆ. ಇದು ನಿಮಗೆ ಮಾತಿನಿಂದ ಲಾಭವನ್ನೂ, ಮಾತಿನಿಂದ ಗೌರವವನ್ನೂ ತಂದುಕೊಡುತ್ತದೆ. ಮಾರ್ಕೆಟಿಂಗ್, ವಿಮಾ ಏಜೆಂಟರು, ವಕೀಲರು ಇವರುಗಳಿಗೆಲ್ಲಾ ಶುಭಫಲಗಳು ಇವೆ. ಎತ್ತರದ ಸ್ಥಳಗಳಿಗೆ ಹೋಗುವುದನ್ನೂ ಮುಂದಕ್ಕೆ ಹಾಕಿ. ಉದಾ ಟ್ರೆಕ್ಕಿಂಗ್, ಗಿರಿಧಾಮಗಳಿಗೆ ಹೋಗುವು ಮುಂತಾದ್ದು. ಎತ್ತರದ ಸ್ಥಳಗಳನ್ನು ಹತ್ತುವಾಗ ಅಪಾಯವಾಗುವ ಸಾಧ್ಯತೆ ಇದೆ. ಮುಂಜಾಗ್ರತೆ ವಹಿಸಿ.

ಧನಸ್ಸುರಾಶಿ:

ಧನಸ್ಸುರಾಶಿ:

ನಾಲ್ಕರ ಗುರು ಹಾಗೂ ಎರಡನೇ ಮನೆಯ ಶನಿ ನಿಮ್ಮ ಸಂಸಾರದಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟುಮಾಡುತ್ತಾರೆ. ಸಂಗಾತಿಯೊಡನೆ ಕಲಹ, ಕುಟುಂಬದವರೊಡನೆ ವೈಮನಸ್ಸು ಮುಂತಾದವು ಇರುತ್ತದೆ. ಈಶ್ವರನ ಜಪ ಮಾಡಬೇಕು ಹಾಗೂ ಹನುಮಾನ್ ಚಾಲೀಸಾ ಹೇಳಿಕೊಳ್ಳಬೇಕು. ಮನೆಯಿಂದ ದೂರ ಇರುವ ಸಂಭವ ಇದೆ. ವೃತ್ತಿಯಲ್ಲಿ ಆಶಾದಾಯಕ ಪರಿಸ್ಥಿತಿ ಇದೆ. ವೃತ್ತಿಯಲ್ಲಿ ಆದಾಯ ಚೆನ್ನಾಗಿದೆ. ವ್ಯಾಪಾರದಲ್ಲೂ ಲಾಭ ಇದೆ. ತಂದೆಯಿಂದ ಆಸ್ತಿ ಅಥವಾ ಹಣಸಹಾಯ ದೊರೆಯುವ ಸಾದ್ಯತೆ ಇದೆ. 17 ರಂತರ ವೃತ್ತಿಯಲ್ಲಿ ಬಹುದೊಡ್ಡ ತಿರುವು ಇರುತ್ತದೆ. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ತಂದುಕೊಡುತ್ತದೆ. ಮಕ್ಕಳಿಂದ ನಿಮ್ಮ ಕೆಲಸಗಳಿಗೆ ವಿರೋಧ ಇದೆ. ಮಕ್ಕಳಿಗೆ ದೂರದೇಶ ಪ್ರಯಾಣ ಇದೆ. ತಿಂಗಳ ಕೊನೆಯ ವಾರದಲ್ಲಿ ಅನಾವಶ್ಯಕ ಧನಹಾನಿ ಇದೆ. ಆರರ ಕುಜ ನಿಮಗೆ ಧೈರ್ಯವನ್ನು ಕೊಡುತ್ತಾನೆ. ಆದರೆ ಆ ಧೈರ್ಯ ನಿಮ್ಮಲ್ಲಿ ಕೆಟ್ಟ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು. ಧೈರ್ಯವಿದೆಯೆಂದು ಕಲ್ಲಿಗೆ ತಲೆ ಚೆಚ್ಚಬಾರದು. ಜನವರಿಯ ವರೆಗೂ ನಿಮ್ಮ ಸಮಯ ಚೆನ್ನಾಗಿಲ್ಲ ಹಾಗಾಗಿ ಎಚ್ಚರಿಕೆಯಲ್ಲಿ ಇರಿ. ದುರ್ಗಾ ಸ್ತೋತ್ರ ಪಠಿಸಿ.

ಮಕರರಾಶಿ:

ಮಕರರಾಶಿ:

ಹೊಸ ಕೆಲಸ ಸಿಗುವ ಸಮಯ. ನೌಕರಿಯಲ್ಲಿ ಒಳ್ಳೆಯ ಸ್ಥಾನಮಾನ ಸಿಗುವ ಸಮಯ. ನಿಮ್ಮ ಧೈರ್ಯ ಸಾತ್ವಿಕವಾಗಿರುತ್ತದೆ. ನಿಮ್ಮ ತಾಳ್ಮೆ ಮತ್ತು ಸಹನೆ ನಿಮ್ಮನ್ನು ಸಂಕಟಗಳಿಂದ ದೂರ ಮಾಡುತ್ತದೆ. ನೀವು ಏನೇ ಮಾಡಿದರೂ ಹತ್ತು ಬಾರಿ ಯೋಚಿಸಿ ಮಾಡುವುದರಿಂದ ತೊಂದರೆಗೆ ಸಿಕ್ಕಿಕೊಳ್ಳುವುದಿಲ್ಲ. ಮೂರರ ಗುರು ಸಹೋದರರಿಂದ ಸಹಾಯ ಕೊಡುಸುತ್ತಾನೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಮಕ್ಕಳಿಗೂ ಕೂಡ ವಿದೇಶ ಪ್ರಯಾಣ ಯೋಗ ಇದೆ. ನೀವು ಧನಿಷ್ಠಾ ನಕ್ಷತ್ರದವರಾದರೆ ನಿಮಗೆ ಐದರ ಕುಜನಿಂದ ನಾನಾವಿಧ ಲಾಭ ಇದೆ. ಭೂಮಿಯಿಂದ ಲಾಭ, ವ್ಯವಸಾಯಗಾರರಿಗೆ ಲಾಭ ಇದೆ. ಬೆಂಕಿಗೆ ಸಂಬಂಧ ಪಟ್ಟ ವಸ್ತುಗಳಿಂದ ಲಾಭ ಇದೆ. ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ವ್ಯಾಪಾರಸ್ಥರಿಗೆ ಲಾಭ ಇದೆ. ನಾಲ್ಕರ ರಾಹು ವಾಹನಗಳಿಂದ ನಷ್ಟ ಮಾಡಿಸುತ್ತಾನೆ. ತಾಯಿಯ ಆರೋಗ್ಯಕ್ಕೆ ತೊಂದರೆ ಇದೆ. ಮನೆ ಆಸ್ತಿ ಇಂಥವುಗಳ ಮೇಲೆ ಸಾಲ ಮಾಡುವ ಸಂದರ್ಭ ಬರುತ್ತದೆ. ದುರ್ಗಾ ಪೂಜೆ ಮಾಡಿ, ಗಣಪತಿಯನ್ನು ಆರಾಧಿಸಿ. ಉದ್ದು ಹಾಗೂ ಹುರುಳಿಯನ್ನು ದಕ್ಷಿಣೆ ಸಮೇತ ದಾನ ಕೊಡಿ.

ಕುಂಭರಾಶಿ:

ಕುಂಭರಾಶಿ:

ನಿಮಗೆ ಎರಡರ ಗುರು ಎಲ್ಲ ಕೆಲಸಗಳಲ್ಲೂ ಜಯ ಸಿಗುವಂತೆ ಮಾಡುತ್ತಾನೆ. ನಿಮ್ಮ ಮಾತಿಗೆ ಗೌರವ ಸಿಗುತ್ತದೆ. ನಿಮ್ಮ ಮಾತನ್ನೂ ಎದುರು ಇರುವವರು ಕೇಳುತ್ತಾರೆ. ನಿಮ್ಮ ತಾಳ್ಮೆ ಹಾಗೂ ಸಮಾಧಾನದ ಮಾತಿನಿಂದಾಗಿ ಎಷ್ಟೋ ನೊಂದ ಮನಸ್ಸುಗಳು ತಂಪಾಗುತ್ತದೆ. 12ರ ಶನಿಯಿಂದ ಖರ್ಚುವೆಚ್ಚಗಳು ಜೋರಾಗಿ ಇರುತ್ತದೆ. ಮೂರನೇ ಮನೆ ಧೈರ್ಯಸ್ಥಾನದಲ್ಲಿ ರಾಹು ಇರುವುದು ನೀವು ಮುನ್ನುಗ್ಗಿ ಯಾವ ಕೆಲಸ ಮಾಡಿದರೂ ಜಯ ಸಿಗುವಂತೆ ಮಾಡುತ್ತಾನೆ. ಸಹೋದರರಿಂದ ಲಾಭ ಇದೆ. ಷೇರು ವ್ಯವಹಾರದಲ್ಲಿ ಲಾಭ ಸಿಗುತ್ತದೆ. ಏಳರ ಸುರ್ಯ ಹಾಗೂ ಶುಕ್ರನಿಂದ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತದೆ. ಸಂಗಾತಿಯೊಡನೆ ವೃಥಾ ವಾದ ವಾಗ್ವಾದ ಆಗುವ ಸಂಭವ ಇದೆ. ಎಂಟರ ಬುಧ ಅಲ್ಲೇ ತನ್ನ ಸ್ವಂತ ಮನೆಯಲ್ಲಿ ಇರುವುದು ನಿಮಗೆ ಲಾಭ ತಂದುಕೊಡುತ್ತದೆ. ಕಾರ್ಯಾನುಕೂಲ ಆಗುತ್ತದೆ. ನೀವು ಕೈಹಾಕಿದ ಕೆಲಸಗಳಲ್ಲಿ ಜಯ ಸಿಗುತ್ತದೆ. ನಾಲ್ಕರ ಕುಜನಿಂದ ಭೂಮಿ ವ್ಯವಹಾರಗಳಲ್ಲಿ ಲಾಭ ಇದೆ. ರಿಯಲ್ ಎಸ್ಟೆಟ್, ವ್ಯವಸಾಯ, ತೋಟಗಾರಿಕೆ ಮಾಡುವವರಿಗೆ ಶುಭಫಲಗಳು ಇವೆ. ವಾಹನದಿಂದ ಲಾಭ ಇದೆ. ವಾಹನ ಕೊಳ್ಳುವ ಯೋಗ ಇದೆ.

ಮೀನರಾಶಿ:

ಮೀನರಾಶಿ:

11 ಶನಿಯಿಂದ ಕೆಲಸ ಕಾರ್ಯಗಳಲ್ಲಿ ಜಯ, ಧನಲಾಭ ಇದೆ. ನಿಮ್ಮ ರಾಶಿಯಲ್ಲಿ ಇರುವ ಗುರು ನಿಮಗೆ ದೇಹಾಲಸ್ಯವನ್ನು ಕೊಡುತ್ತಾನೆ. ಸೋಮಾರಿತನವನ್ನು ಕೊಡುತ್ತಾನೆ. ಎರಡರ ರಾಹುವಿನಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಧನಾಗಮನ ಉತ್ತಮವಾಗಿದ್ದರೂ ಖರ್ಚುಗಳು ಹಾಗೆಯೇ ಇರುತ್ತದೆ. ಮನೆಗೆ ಬೇಕಾದ ಅಲಂಕಾರ ವಸ್ತುಗಳನ್ನು, ವಸ್ತ್ರಗಳನ್ನೂ ಖರೀದಿ ಮಾಡುತ್ತೀರಿ. 17ರ ಒಳಗೆ ಸರ್ಕಾರದಿಂದ ಲಾಭ ಇರುತ್ತದೆ. ಸರ್ಕಾರದ ಕೆಲಸಗಳು ಸುಲಭವಾಗಿ ಆಗುತ್ತದೆ. ನಂತರ ನಿಮ್ಮ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಮನಸ್ಸಿಗೆ ಕೊಂಚ ಬೇಸರ ಇದೆ. ಗುರು ದತ್ತಾತ್ರೇಯ ಅಥವಾ ಗುರುರಾಯರನ್ನು ಪ್ರಾರ್ಥನೆ ಮಾಡಿ. ಗುರುವಾರದ ದಿನ ಈಶ್ವರನ ಗುಡಿಗೆ ಹೋಗಿಬನ್ನಿ. ನಿಮ್ಮ ಮಾತುಗಳನ್ನು ಜನ ಗಮನಿಸುತ್ತಾರೆ. ಹಾಗಾಗಿ ಮಾತುಗಳನ್ನು ಎಚ್ಚರಿಕೆಯಿಂದ ಆಡಿ. ಮಾತಿನಲ್ಲಿ ಸಿಕ್ಕಿಕೊಳ್ಳಬೇಡಿ. ಮೂರರ ಕುಜನಿಂದ ಧೈರ್ಯ ಸ್ಥೈರ್ಯ ಸ್ಥಾನಮಾನಗಳು ಹೆಚ್ಚಲಿವೆ. ವಿವಾಹ ಯೋಗ್ಯರು ವಿವಾಹವಾಗಲು ಈಗ ಸಕಾಲ ಅಲ್ಲ. ಇನ್ನೂ ಕಾಯಬೇಕಾಗಿದೆ. ಶತ್ರುಗಳು ನಿಮ್ಮನ್ನು ಕಂಡು ಹೆದರುತ್ತಾರೆ. ರಿಯಲ್ ಎಸ್ಟೇಟ್‌ನವರಿಗೆ ಉತ್ತಮ ಲಾಭ ಇದೆ.

English summary
September 2022 Monthly Horoscope In Kannada: September Masika Rashi Bhavishya: Check September Monthly Horoscope for all 12 Zodiac Signs in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X