ಮೀನ : ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯ ತಿಳಿಯುತ್ತದೆ
ಪುರುಷರು: ವ್ಯಾಪಾರಿಗಳಿಗೆ ಉತ್ತಮ ಕಾಲ. ಸ್ನೇಹಿತರಿಂದ ಸಾಲ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ನೀವು ಏನು, ಸಂಸ್ಥೆಗೆ ನಿಮ್ಮ ಅನಿವಾರ್ಯ ಎಷ್ಟಿದೆ ಎಂಬುದನ್ನು ತೋರಿಸುತ್ತೀರಿ. ಅಂಥ ಅವಕಾಶ ಲಭಿಸುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ ಯೋಗವಿದೆ. ಆದರೆ ಕೆಲ ದಿನಗಳು ಕಾಯಬೇಕಾಗಬಹುದು.
ಸರಕಾರಿ ಕೆಲಸ ಕಾರ್ಯಗಳು ಮಾಡಿಸಬೇಕಿದ್ದಲ್ಲಿ ಸಹ ಅದೇ ಸಮಯದಲ್ಲಿ ಪ್ರಯತ್ನ ಮಾಡಿದರೆ ಯಶಸ್ಸಾಗುವ ಸಾಧ್ಯತೆ ಹೆಚ್ಚು ಇದೆ. ಮರೆವು ಬಹಳ ಕಾಡುತ್ತದೆ. ಈ ಹಿಂದೆ ಎಂದೂ ಆಗದ ವಿಧದಲ್ಲಿ ನೀವು ಸಾಲ ರೂಪದಲ್ಲಿ ಹಣ ಕೊಟ್ಟು ಮರೆತು ಬಿಡುವ ಸಾಧ್ಯತೆಗಳಿವೆ, ಎಚ್ಚರ!

ನೆನಪಿಟ್ಟು ಸ್ತ್ರೀಯರಿಂದ ಆದಷ್ಟು ದೂರ ಇರಿ. ಏಕೆಂದರೆ, ಸ್ತ್ರೀ ಸಹವಾಸ ಅದರಲ್ಲಿಯೂ ಅದು ಅಕ್ರಮ ವಿಧಾನ ಆಗಿದ್ದಲ್ಲಿ ಭಾರೀ ಮೌಲ್ಯವನ್ನು ತೆರಬೇಕಾಗುತ್ತದೆ. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಮರಳಿ ಬಾರದು ಎಂಬ ಗಾದೆ ಸದಾ ನಿಮ್ಮ ತಲೆಯಲ್ಲಿ ಓಡುತ್ತಾ ಇರಲಿ.
ನೀವು ತೂಕ ಹಾಕಿ ಎಷ್ಟು ಬೇಕೋ ಅಷ್ಟೇ ಮಾತನಾಡುವವರು ಆದರೂ ಈಗ ಸ್ವಲ್ಪ ಕಡಿಮೆ ಮಾತನಾಡಿ ಹಾಗೂ ಯಾರಿಗೂ ಏನನ್ನೂ ಮಾಡಿಕೊಡುವುದಾಗಿ ಭರವಸೆಗಳನ್ನು ಕೊಡಬೇಡಿ.
ಸ್ತ್ರೀಯರು: ಪ್ರೀತಿ-ಪ್ರೇಮ-ಪ್ರಣಯ ಈ ವಿಚಾರಗಳಿಂದ ದೂರ ಇದ್ದರೆ ನಗು ನಗುತ್ತ ಇರುತ್ತೀರಿ. ಇಲ್ಲ ಆಗಲ್ಲ ಅವೆಲ್ಲ ಬೇಕೇ ಬೇಕು ಎಂದಾದಲ್ಲಿ ಈ ತಿಂಗಳಿನಲ್ಲಿ ನಿಮಗೆ ಕಣ್ಣಿರು ಕಟ್ಟಿಟ್ಟ ಬುತ್ತಿ. ಕೆಲ ಅನಿವಾರ್ಯದ ವಿಚಾರಗಳನ್ನು ನಿಮ್ಮ ತಂದೆಯವರಿಗೆ ತಿಳಿಸುವ ಪರಿಸ್ಥಿತಿಗಳಿದ್ದಲ್ಲಿ ಮಾಸಾಂತ್ಯದ ತನಕ ಕಾಯುವುದೇ ಲೇಸು.
ದುಡ್ಡಿಗಾಗಿ ಸ್ವಲ್ಪ ಅಲೆದಾಡುವ, ಪರದಾಡುವ ಸಂದರ್ಭಗಳು ಬರಬಹುದು. ಬೇಸರ ಬೇಡಿ, ಅದು ತಾತ್ಕಾಲಿಕ. ಟೀಕಿಸುವವರ ಪಾಲಿಗೆ ನಿಮ್ಮ ಯಶಸ್ಸೇ ಆಯುಧ ಆಗಬೇಕು. ಅದು ಈಗ ಸಾಧ್ಯವಿದೆ
ವಿದ್ಯಾರ್ಥಿಗಳು: ಅಧ್ಯಾಪಕರು ವಿಚಾರವನ್ನು ತಿಳಿಸುವ ಮೊದಲೇ ನಿಮಗೆ ಎಲ್ಲ ತಿಳಿದಿದೆ ಎನ್ನುವಂತೆ ಅವತಾರ ಇರಬಾರದು. ಸಾಧನೆಯಿಂದ ನಿಮ್ಮನ್ನು ಗುರುತಿಸುವಂತೆ ಆಗಬೇಕು. ನೀವು ಗಟ್ಟಿ ಮನಸ್ಸು ಮಾಡಿದರೆ ಅದಾಗುವ ಸಾಧ್ಯತೆಗಳಿವೆ.
ಪರಿಹಾರ: ಈ ತಿಂಗಳಿನಲ್ಲಿ ನಂಜುಂಡೇಶ್ವರನ ದರ್ಶನ ಮಾಡಿ ಬನ್ನಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications