ತುಲಾ : ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ
ಪುರುಷರು: ಈ ತಿಂಗಳಿನಲ್ಲಿ ನಿಮಗೆ ಅತ್ಯುತ್ತಮ ಸಮಯ ಇದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತೀರಿ. ಉದ್ಯೋಗದಲ್ಲಿಯೇ ವಿದೇಶ ಪ್ರಯಾಣ ಯೋಗ ಸಹ ಕೆಲವರಿಗೆ ಇದೆ. ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಎಂದು ಶ್ಲಾಘನೆ ಲಭಿಸಲಿದೆ.
ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾ ಇರುವವರಿಗೆ ಉದ್ಯೋಗ ಸಿಗುವ ಯೋಗ ಇದೆ. ಆರ್ಥಿಕವಾಗಿ ಸಹ ನಿಮಗೆ ಈ ತಿಂಗಳು ಉತ್ತಮವಾಗಿದೆ. ನಾಲ್ಕಾರು ಕಡೆ ಓಡಾಡಿ ಆದರೂ ಹಣ ಸಂಪಾದನೆ ಮಾಡಿಬಿಡುತ್ತೀರಿ. ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿ ಪ್ರಯತ್ನಿಸುತ್ತ ಇದ್ದಲ್ಲಿ ಈ ತಿಂಗಳು ಯಶಸ್ಸು ಇದೆ.

ನಿಮ್ಮ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ. ಕೌಟುಂಬಿಕವಾಗಿ ನಿಮಗೆ ಅತ್ಯುತ್ತಮ ಎನ್ನಬಹುದು. ಏಕೆಂದರೆ ಕುಟುಂಬದವರ ಎಲ್ಲರ ಸಹಕಾರ ಸಿಗಲಿದೆ.
ಸ್ತ್ರೀಯರು: ನಿಮ್ಮ ಪತಿಗೆ ಉದ್ಯೋಗ ಇಲ್ಲದೇ ಇದ್ದಲ್ಲಿ ಅವರಿಗೆ ಉದ್ಯೋಗ ಲಭಿಸಿ ನಿಮಗೆ ನೆಮ್ಮದಿ ಲಭಿಸುತ್ತದೆ. ಮಕ್ಕಳು ಸಹ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು, ಸಂತಸ ತರುತ್ತಾರೆ. ಅತೀ ಉಷ್ಣ ನಿಮ್ಮ ಆರೋಗ್ಯ ಹಾಳು ಮಾಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಸಹ ಹೆಚ್ಚಿನ ಸಮಸ್ಯೆಗಳು ಕಾಡಲಿದೆ.
ಹೊಲಿಗೆ, ಅಡುಗೆ ಹೀಗೆ ಚಿಕ್ಕ ಪುಟ್ಟ ಸ್ವಂತ ಉದ್ಯೋಗ ಮಾಡುತ್ತಾ ಇರುವವರಿಗೆ ಉತ್ತಮ ಲಾಭ ಇದೆ. ಆದರೆ ಬೇರೆಯವರ ಜೊತೆ ಸೇರಿ ಅಂದರೆ ಪಾರ್ಟ್ ನರ್ ಜೊತೆ ಸೇರಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಮಸ್ಯೆ ಆಗುತ್ತದೆ.
ಬಾಳಸಂಗಾತಿ ಜೊತೆ ದೂರ ಪ್ರಯಾಣ ಅಥವಾ ತವರು ಮನೆಗೆ ಹೋಗುವ ಸಾಧ್ಯತೆ ಇದೆ. ತಂದೆಯ ಸಹಕಾರ ಲಭಿಸಿ ಧೈರ್ಯ ಹೆಚ್ಚುತ್ತದೆ. ಆದರೆ ಸಹೋದರರ ಸಹಕಾರ ಸಿಗಲು ಇನ್ನೂ ಸಮಯ ಬೇಕು.
ವಿದ್ಯಾರ್ಥಿಗಳು: ವೃತ್ತಿಪರ ವಿಷಯಗಳ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ ಲಭಿಸಲಿದೆ.
ಪರಿಹಾರ: ಈ ತಿಂಗಳಿನಲ್ಲಿ ಆದಷ್ಟೂ ಪ್ರಯತ್ನ ಮಾಡಿ. ಮನೆಯಲ್ಲಿ ಮಹಾಲಕ್ಷ್ಮೀ ಸಹಿತ ಸತ್ಯನಾರಾಯಣ ವ್ರತ ಮಾಡಿಸಿ.
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications