ಸಿಂಹ ರಾಶಿ: ರಹಸ್ಯಗಳನ್ನ ಕಾಪಾಡಿಕೊಳ್ಳಿ, ಗಾಸಿಪ್ ಬೇಡ
ಈ ತಿಂಗಳಲ್ಲಿ ಉತ್ತಮವಾದ ಫಾರ್ಮ್ ನಲ್ಲಿದ್ದೀರಿ. ಖುಷಿಯಾಗಿ, ಸಂತುಷ್ಟರಾಗಿ ಹಿಂದೆಂದಿಗಿಂತ ಎನರ್ಜೆಟಿಕ್ ಆಗಿ ಕಾಣಿಸಿಕೊಳ್ಳುತ್ತೀರಿ. ಒಟ್ಟಾರೆ ನಿಮಗಿದು ಸಕಾರಾತ್ಮಕವಾದ ತಿಂಗಳು. ಆದರೆ ನಿಮ್ಮ ಮೇಲೆ ಕೆಲ ಆಪಾದನೆಗಳು ಬರಬಹುದು, ಹುಷಾರಾಗಿರಿ. ಅಥವಾ ನೀವಾಗಿಯೇ ಹಗರಣಗಳಲ್ಲಿ ಸಿಲುಕುವ ಸಾಧ್ಯತೆಗಳೂ ಇವೆ. ಅದ್ದರಿಂದ ನಿಮ್ಮ ರಹಸ್ಯಗಳು ಹಾಗೂ ಗಾಸಿಪ್ ಗಳ ಬಗ್ಗೆ ಎಚ್ಚರದಿಂದ ಇದ್ದರೆ ಒಳ್ಳೆಯದು.
ನಿಮಗೆ ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗೋದಿಲ್ಲ. ನಿಮ್ಮ ಏಕಾಗ್ರತೆಯೇ ಕೈ ಕೊಡುತ್ತದೆ. ಸೆ.16ರ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತದೆ. ಆ ನಂತರ ನಿಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ, ಬೇರೆಯವರಿಂದ ಶಹಭಾಷ್ ಗಿರಿ ಎಲ್ಲ ದೊರೆಯುತ್ತದೆ.[ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ!]

ವೃತ್ತಿ: ನಿಮ್ಮಿಂದ ಮಾಡಲು ಸಾಧ್ಯವಿಲ್ಲ ಎನಿಸಿದ ಕೆಲಸಕ್ಕೆ ಹೂಂ ಅನ್ನದಿರುವುದು ಒಳ್ಳೆಯದು. ನಿಮ್ಮ ನಿರ್ಧಾರಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಸೀನಿಯರ್ಸ್, ಬಾಸ್, ಸಹೋದ್ಯೋಗಿಗಳು ಯಾರೂ ನಿಮಗೆ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಜತೆಗೆ ನೀವು ಆಡುವ ಮಾತೇ ಬೇರೆ, ಅದು ಧ್ವನಿಸುವುದೇ ಬೇರೆ ಎಂಬಂತಾಗುತ್ತದೆ. ನಿಮಗೆ ಗೊಂದಲ ಇರುವ ವಿಚಾರಗಳ ಬಗ್ಗೆ ಮಾತನಾಡುವಾಗ ವಿನಯವಂತಿಕೆ ಇರಲಿ. 22ರ ನಂತರ ಪರಿಸ್ಥಿತಿ ಸುಧಾರಿಸುತ್ತದೆ.
ಪ್ರೀತಿ, ಪ್ರೇಮ-ಮದುವೆ: ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ತುಂಬ ಅನುಕೂಲಕರವಾದ ಸಮಯವಲ್ಲ. ಆದರೆ ಭರವಸೆ ಕಳೆದುಕೊಳ್ಳಬೇಡಿ. ನಿಮ್ಮ ಗೆಳೆಯ ಅಥವಾ ಗೆಳತಿಯಿಂದ ಯಾವುದೇ ವಿಷಯ ಮುಚ್ಚಿಡಬೇಡಿ. ವಿವಾಹಿತರಿಗೆ ಭಿನ್ನಾಭಿಪ್ರಾಯ, ಅದರ ಮುಂದುವರಿದ ಭಾಗವಾಗಿ ಜಗಳದ ಸಾಧ್ಯತೆ ಇದೆ. 18ರ ನಂತರ ದಂಪತಿಯ ಪೈಕಿ ಒಬ್ಬರಿಗೆ ಅನುಕೂಲ-ಲಾಭವಾಗುವ ಸಾಧ್ಯತೆ ಇದೆ.[ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳಿಗೆ: ಮಕ್ಕಳಿಗೆ ಇದು ತುಂಬ ಒಳ್ಳೆ ತಿಂಗಳು. ಈ ಹಿಂದಿಗಿಂತಲೂ ಕೀಟಲೆ ಜಾಸ್ತಿಯಾಗುತ್ತದೆ. ಸ್ವಲ್ಪ ಮಟ್ಟಿಗೆ ಸಂಯಮ, ಸಮಾಧಾನದಿಂದ ಇರುವುದು ಕೂಡ ಅಷ್ಟೇ ಮುಖ್ಯ. ಮಕ್ಕಳ ಜತೆಗೆ ಮಾತನಾಡುವಾಗ, ಬುದ್ಧಿ ಹೇಳುವಾಗ ಕೋಪ ಮಾಡಿಕೊಳ್ಳಬೇಡಿ. ಒಳ್ಳೆಯ ಫಲಿತಾಂಶ ನಿರೀಕ್ಷಿಸಬಹುದು.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications