ಕನ್ಯಾ ರಾಶಿ: ಎಲ್ಲ ದಿಕ್ಕಿನಿಂದಲೂ ಅನುಕೂಲ ಬಾಗಿಲು ಬಡಿಯುತ್ತಿದೆ
ಈ ತಿಂಗಳು ಸಕಾರಾತ್ಮಕವಾಗಿರುತ್ತದೆ. ಅಲ್ಲಲ್ಲಿ ಕೆಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ. ಮಹಿಳೆಯೊಬ್ಬರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಅದು ನಿಮ್ಮ ಹೆಂಡತಿ ಇರಬಹುದು, ತಂಗಿ ಅಥವಾ ಮಹಿಳಾ ಸಹೋದ್ಯೋಗಿ ಇರಬಹುದು. ಒಟ್ಟಿನಲ್ಲಿ ಎಲ್ಲ ದಿಕ್ಕುಗಳಿಂದಲೂ ಅನುಕೂಲಕರವಾದ ವಾತಾವರಣ ಇದೆ. ಹಣಕಾಸು, ವೃತ್ತಿ-ಕೌಟುಂಬಿಕ ಬದುಕು ಎಲ್ಲದರಲ್ಲೂ ಅನುಕೂಲಕರ ಸನ್ನಿವೇಶ ಕಾಣಿಸುತ್ತದೆ.
ಸಣ್ಣದೊಂದು ಪ್ರವಾಸ ಮಾಡುತ್ತೀರಿ. ನೀವು ತಯಾರಿ ನಡೆಸುತ್ತಿರುವ ಹಲವು ವಿಷಯಗಳಿಗೆ ಇದರಿಂದ ಅನುಕೂಲವಾಗುತ್ತದೆ. ಒಂದಿಷ್ಟು ಶ್ರಮ ಹಾಕಿದರೆ ವಿದೇಶಿ ಮೂಲದಿಂದಲೂ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಆದರೆ ಅದಕ್ಕಾಗಿ ನೀವು ಹೆಚ್ಚಿನ ಶ್ರಮ ಹಾಕಲೇಬೇಕು. ನಿಮ್ಮ ಪ್ರಾಮಾಣಿಕತೆ ಕಾರಣಕ್ಕೆ ನಾನಾ ವಲಯದಿಂದ ಶಹಭಾಷ್ ಗಿರಿ ಗಿಟ್ಟಿಸುತ್ತೀರಿ.[ಕನ್ಯಾ : ಒಂದಿಷ್ಟು ಕೂಡಿಡಿ, ಆಪತ್ಕಾಲದಲ್ಲಿ ನೆರವಿಗೆ ಬಂದೀತು!]

ವೃತ್ತಿ: ಸೆ.22ರ ನಂತರ ಬುಧನು ನಿಮಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತಾನೆ. ನಿಮ್ಮ ಮಾತು ತುಂಬ ಪರಿಣಾಮಕಾರಿಯಾಗಿರುತ್ತದೆ. ಅದರಿಂದ ಸಕಾರಾತ್ಮಕ ಫಲಿತಾಂಶವನ್ನೂ ನಿರೀಕ್ಷೆ ಮಾಡಬಹುದು. ಮಹಿಳಾ ಸಹೋದ್ಯೋಗಿಗಳು, ಬಾಸ್ ಇದ್ದರೆ ಅವರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಸೀನಿಯರ್ಸ್ ಗಳಿಂದ ಕೂಡ ಪೂರ್ಣ ಬೆಂಬಲ ದೊರೆಯುತ್ತದೆ. ಅದರೆ ನಿಮ್ಮ ಬೆನ್ನ ಹಿಂದೆ ನಡೆಯುತ್ತಿರುವ ಕೆಲಸಗಳ ಬಗ್ಗೆಯೂ ಸ್ವಲ್ಪ ಗಮನ ಹರಿಸಿ.
ಪ್ರೀತಿ, ಪ್ರೇಮ-ಮದುವೆ: ಪ್ರೀತಿ ಪ್ರೇಮದ ವಿಷಯಗಳು ಸರಳರೇಖೆಯಂತಿರುತ್ತಿದೆ. ಸೆ.18ರ ನಂತರ ಒಂದಿಷ್ಟು ಭರವಸೆ ಕಾಣಿಸಿಕೊಳ್ಳುತ್ತದೆ. ಪ್ರೀತಿ ಎಂಬ ಸಸಿಗೆ ನೀರೆರೆದು ಪೋಷಿಸುವ ಕಾಲ ಇದು. ಸಮಾನ ಆಸಕ್ತಿಗಳನ್ನು ಗುರುತಿಸಿ, ರಾಜಿ ಮಾಡಿಕೊಳ್ಳುವುದರಲ್ಲಿ ಸಂತೋಷ ಇದೆ ಎಂಬುದನ್ನು ತಿಳಿಯಿರಿ. ತುಂಬ ನಿರೀಕ್ಷೆ ಬೇಡ. ಅದರೆ ವಿವಾಹಿತರ ಸ್ಥಿತಿ ಉತ್ತಮವಾಗಿರುತ್ತದೆ. ಪರಸ್ಪರರಲ್ಲಿ ಪ್ರೀತಿ ತೋರ್ಪಡಿಸುತ್ತೀರಿ. ಸಂತಸ ಹಾಗೂ ಸಂಭ್ರಮದ ಕ್ಷಣಗಳು ನಿಮ್ಮ ಪಾಲಿಗಿವೆ.[ಕನ್ಯಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಇದು ತುಂಬ ಉತ್ತಮವಾದ ಸಮಯ. ಹಿಂದೆಂದಿಗಿಂತ ಚುರುಕು, ಚಟುವಟಿಕೆಯಿಮ್ದ ಇರುವ ಕಾಲವಿದು. ವ್ಯಾಸಂಗದಲ್ಲಿ ಪ್ರಗತಿ ಕಾಣಬೇಕು ಅಂದರೆ ಒಂದಿಷ್ಟು ಶ್ರಮ ಹಾಕಬೇಕು. ಪರೀಕ್ಷೆಯ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದರೆ ನಿಮಗೆ ಖುಷಿ ತರುವ ಫಲಿತಾಂಶವೇ ಬರುತ್ತದೆ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications