ಕರ್ನಾಟಕ ಚುನಾವಣೆ: ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ
Recommended Video

"ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಭಾರೀ ಗದ್ದಲ, ಗಲಾಟೆ ಹಾಗೂ ಹಿಂದೆಂದೂ ಕಂಡಿರದ ರಾಜಕೀಯ ಮೇಲಾಟವನ್ನು ಕಾಣಬೇಕಾಗುತ್ತದೆ" ಎಂದು ಭವಿಷ್ಯ ನುಡಿದಿದ್ದಾರೆ ದೇಶದ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞೆ ಹಾಗೂ ಟಾರೋಟ್ ರೀಡರ್ ಶೀಲಾ ಬಜಾಜ್. ಅಂದಹಾಗೆ ಈ ಶೀಲಾ ಬಜಾಜ್ ಯಾರು ಅಂತೀರಾ?
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಿಗ್ ಬಾಸ್ ಕನ್ನಡ ಸೀಸನ್ ನಾಲ್ಕರಲ್ಲಿ ಸ್ಪರ್ಧಾಳುಗಳಿಗೆ ಭವಿಷ್ಯ ಹೇಳಲು 'ಆ ಮನೆ'ಯೊಳಗೆ ಹೋಗಿದ್ದವರು ಇದೇ ಶೀಲಾ ಬಜಾಜ್. ಅಲ್ಲಿಂದ ಹೊರಗೆ ಬಂದ ಮೇಲೆ ಪ್ರಥಮ್ ಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಕೂಡ ಹಾಕಿದ್ದರು. ಹದಿನೆಂಟು ವರ್ಷಗಳ ಸುದೀರ್ಘ ಅನುಭವ, ಲಕ್ಷಾಂತರ ಮಂದಿಗೆ ಸಂಖ್ಯಾಶಾಸ್ತ್ರ ಹಾಗೂ ಟಾರೋಟ್ ರೀಡಿಂಗ್ ಮಾಡಿರುವ ಶೀಲಾ ಮೂಲತಃ ಬೆಂಗಳೂರಿನವರು.
ಕೋರಮಂಗಲದಲ್ಲಿ ಅವರ ಕಚೇರಿ ಇದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಆಸಕ್ತಿಕರವಾದ ವಿಚಾರಗಳನ್ನು 'ಒನ್ಇಂಡಿಯಾ ಕನ್ನಡಕ್ಕೆ' ತಿಳಿಸಿದ್ದಾರೆ ಶೀಲಾ ಬಜಾಜ್. ಏನು ಆ ವಿಶೇಷ? ಯಾವ ಪಕ್ಷ ಗೆಲ್ಲುವ ಅವಕಾಶ ಜಾಸ್ತಿ ಇದೆ ಇತ್ಯಾದಿ ಮಾಹಿತಿಗಾಗಿ ಮುಂದೆ ಓದಿ.

ಹಿಂದೆಂದಿಗಿಂತ ಹೆಚ್ಚಿನ ಗದ್ದಲ ಈ ಸಲದ ಚುನಾವಣೆಯಲ್ಲಿ
"ಈ ಟಾರೋಟ್ ರೀಡಿಂಗ್ ನಿಂದ ಇಂದಿನ ಸನ್ನಿವೇಶಕ್ಕೆ ಯಾವ ಶಕ್ತಿ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ನನಗೆ ಬಂದಿರುವ ಈ ಕಾರ್ಡ್ ಗಳನ್ನು ನೋಡಿದರೆ, ಈ ಬಾರಿ ಚುನಾವಣೆ ಬಹಳ ಗದ್ದಲದಿಂದ ಕೂಡಿರುತ್ತದೆ. ಆರೋಪ- ಪ್ರತ್ಯಾರೋಪ, ಹೊಡೆದಾಟ- ಬಡಿದಾಟ ಇಂಥದ್ದಕ್ಕೆಲ್ಲ ಇಲ್ಲಿನ ಜನರು ಸಾಕ್ಷಿ ಆಗಬೇಕಾಗುತ್ತದೆ. ಈ ಹಿಂದಿನ ಎಲ್ಲ ಚುನಾವಣೆಗಿಂತ ಹೆಚ್ಚಿನ ಗದ್ದಲ ಈ ಸಲ ಆಗುವುದು ನಿಶ್ಚಿತ" ಎನ್ನುತ್ತಾರೆ ಶೀಲಾ.

ಬಿಜೆಪಿಯಿಂದ ಹೊಸ ನಾಯಕತ್ವ ಬರುವ ಲಕ್ಷಣಗಳು
ಬಿಜೆಪಿಯ ಯಡಿಯೂರಪ್ಪ ಅವರ ಸ್ಥಿತಿ ಕೂಡ ತುಂಬ ಪ್ರಬಲವಾಗಿದೆ. ಇದು ಈ ಕಾರ್ಡ್ ನಿಂದ ಗೊತ್ತಾಗುತ್ತಿದೆ. ಹೆಚ್ಚಿನ ಸ್ಥಾನ ಪಡೆಯುವುದರಲ್ಲಿ ಅನುಮಾನ ಇಲ್ಲ. ಆದರೆ ಬಿಜೆಪಿಯಿಂದ ಹೊಸ ನಾಯಕತ್ವ ಬರಬಹುದಾದ ಲಕ್ಷಣಗಳು ಗೋಚರಿಸುತ್ತಿವೆ. ನಾಯಕತ್ವದ ವಿಚಾರದಲ್ಲಿ ಸ್ವಲ್ಪ ಮಟ್ಟದ ಗೊಂದಲ ಏರ್ಪಟ್ಟು, ಹೊರಗಿನ ಪಕ್ಷದ ಒಬ್ಬರಿಗೆ ಅನುಕೂಲ ಕಂಡುಬರುತ್ತಿದೆ.

ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಪರಸ್ಪರ ಸಮ ಸಮ ಹೋರಾಟ
ಇನ್ನು ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಸನ್ನಿವೇಶ ಕೂಡ ಬಹಳ ಪ್ರಬಲವಾಗಿದೆ. ಈ ವಿಷಯದಲ್ಲಿ ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ಎಂಬ ಜಿದ್ದಾಜಿದ್ದಿ ದೊಡ್ಡ ಮಟ್ಟದಲ್ಲಿ ಚುನಾವಣೆಯಲ್ಲಿ ಕಂಡುಬರುತ್ತದೆ. ಇದನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟ ಅತ ಬೇಕಾದರೂ ಅಂದುಕೊಳ್ಳಬಹುದು. ಇಬ್ಬರಿಗೂ ಗೆಲುವು ಸುಲಭಕ್ಕೆ ಸಿಗದಷ್ಟು ದೊಡ್ಡ ಹೋರಾಟ ಗಮನಿಸಬಹುದು.

ಇಬ್ಬರ ಜಗಳದಲ್ಲಿ ಕುಮಾರಸ್ವಾಮಿಗೆ ಲಾಭ ಆಗುತ್ತದೆ
ಕುಮಾರಸ್ವಾಮಿ ಅವರ ಪಾಲಿಗೆ ಉಳಿದಿಬ್ಬರಿಗಿಂತ ಶಕ್ತಿ ಕಡಿಮೆ ಇದೆ. ಆದರೆ ಇಬ್ಬರ ಮಧ್ಯದ ಜಿದ್ದಾಜಿದ್ದಿ ಹೋರಾಟದಲ್ಲಿ ಕುಮಾರಸ್ವಾಮಿ ಅವರಿಗೆ ಲಾಭ ಆಗುತ್ತದೆ. ಇಬ್ಬರಿಗೂ ಕುಮಾರಸ್ವಾಮಿ ಅವರ ಬೆಂಬಲದ ಅಗತ್ಯ ಕಂಡುಬರಬಹುದು. ಈ ವಿಚಾರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿಗೆ.
-
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications