ಶಂಖ ಮುತ್ತು ಎಂಬ ವಿಶಿಷ್ಟ ರತ್ನ, ಅದರ ಧಾರಣೆಯ ಅನುಕೂಲಗಳು
ಇಂದಿನ ಈ ಲೇಖನ ಸ್ವಲ್ಪ ಭಿನ್ನವಾದದ್ದು. ಮತ್ತು ನಿಮ್ಮ ನಂಬಿಕೆ ಹಾಗೂ ಆಸಕ್ತಿಯ ಮೇಲೆ ಕೂಡ ಜೀವನದ ಯಶಸ್ಸು ಅವಲಂಬನೆ ಆಗಿರುತ್ತದೆ ಎಂದು ತಿಳಿಸುವ ಪ್ರಯತ್ನ. ನೀವು ಶಂಖ ಮುತ್ತಿನ ಬಗ್ಗೆ ಕೇಳಿದ್ದೀರಾ?! ಈ ಮುತ್ತಿನ ಮೂಲವೇ ಶಂಖ.
ಇಂದಿನ ದಿನಮಾನದಲ್ಲಿ ಜಗತ್ತಿನ ನಾನಾ ಭಾಗದಲ್ಲಿ ಮುತ್ತನ್ನು ಮಾರುತ್ತಾರೆ. ಆದರೆ ಶಂಖ ಮುತ್ತು ಇತರ ಮುತ್ತುಗಳಂತೆ ಅಲ್ಲ. ಅದು ತುಂಬ ಸಹಜವಾಗಿ ದೊರೆಯುವಂಥದ್ದು. ಅದು ಸಮುದ್ರದ ಶಂಖದಲ್ಲಿ ಮಾತ್ರ ಸಿಗುತ್ತದೆ. ಅದನ್ನು ಶ್ರೀ ಮುತ್ತು ಅಂತಲೂ ಕರೆಯುತ್ತಾರೆ.
ಅದರರ್ಥ 'ಲಕ್ಷ್ಮಿ ಮುತ್ತು' ಎಂದಾಗುತ್ತದೆ. ಶಂಖವು ಲಕ್ಷ್ಮಿಯ ಆವಾಸ ಸ್ಥಾನ ಎಂದು ಪರಿಗಣಿಸುವುದರಿಂದ ಈ ಶ್ರೀ ಮುತ್ತಿಗೆ ವರ್ತಕರು ಹಾಗೂ ವ್ಯಾಪಾರಿಗಳು ಅತಿ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಾರೆ. ಆ ಪೈಕಿ ಗುಂಡಾದ ಆಕಾರದಲ್ಲಿರುವ ಶಂಖ ಮುತ್ತು ತೀರಾ ಅಪರೂಪ.

ಸಂಹಿತೆಗಳಲ್ಲಿ ಆಗಿರುವ ಉಲ್ಲೇಖದ ಪ್ರಕಾರ: ಬಿಳಿ ಬಣ್ಣದ ಗುಂಡಾದ ಶಂಖ ಮುತ್ತು ಬ್ರಾಹ್ಮಣರು ಧರಿಸಿ, ಸಿದ್ಧಿ ಪಡೆಯಬಹುದು. ಧರಿಸಿದವರು ಶ್ರೀಮಂತರಾಗುತ್ತಾರೆ. ಅದನ್ನು ಎಡಗೈ ಕಿರು ಬೆರಳಿನಲ್ಲಿ, ಬೆಳ್ಳಿ ಉಂಗುರದಲ್ಲಿ ಧರಿಸಬೇಕು.
ಇನ್ನು ಕೆಂಪು ಬಣ್ಣದ್ದನ್ನು ರಾಜರು ಹಾಗೂ ನಾಯಕರು ಧರಿಸಬೇಕು. ಇದರಿಂದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದನ್ನು ಧರಿಸುವುದರಿಂದ ಶ್ರೀಮಂತಿಕೆ, ಸೌಖ್ಯ ಸಿಗುತ್ತದೆ.
ವೈಶ್ಯರು ಹಳದಿ ಶಂಖ ಮುತ್ತು ಧರಿಸಬೇಕು. ಇದನ್ನು ಧರಿಸಿದರೆ ವ್ಯಾಪಾರದಲ್ಲಿ ಸ್ಥಿರತೆ ಹಾಗೂ ಅಭಿವೃದ್ಧಿ ಆಗುತ್ತದೆ. ಆಗರ್ಭ ಶ್ರೀಮಂತಿಕೆ ದೊರೆಯುತ್ತದೆ.
ಇನ್ನು ಸೇವಾ ವಲಯದಲ್ಲಿ ಇರುವವರು ಬೂದು ಬಣ್ಣದ ಶಂಖ ಮುತ್ತು ಧರಿಸಿದರೆ ಅವರ ಕರ್ತವ್ಯವನ್ನು ಇನ್ನೂ ಚೆನ್ನಾಗಿ ಮಾಡಬಹುದು ಮತ್ತು ಕೀರ್ತಿ, ಶ್ರೀಮಂತಿಕೆ ಲಭಿಸುತ್ತದೆ.
ಪೂಜಾ ವಿಧಾನ
ಶ್ರೀಲಕ್ಷ್ಮಿಯ ಪ್ರಾಣ ಪ್ರತಿಷ್ಠೆ ಮಾಡಬೇಕು
ಎಡಗೈನ ಕಿರು ಬೆರಳಿಗೆ ಬೆಳ್ಳಿಯಲ್ಲಿ ಧರಿಸಬೇಕು
ಪ್ರತಿ ಶುಕ್ರವಾರ ಸಂಜೆ ಧೂಪ ಸಹಿತ ಪೂಜೆ ಮಾಡಬೇಕು
ಮುಖ್ಯವಾದ ದಿನ-ಸಂದರ್ಭಗಳಲ್ಲಿ ಮಾತ್ರ ಧರಿಸಬೇಕು
ಉಂಗುರ ಬಳಸದಿದ್ದಾಗ ಬೆಳ್ಳಿಯ ಬಾಕ್ಸ್ ವೊಂದರಲ್ಲಿ ಇಟ್ಟು ಅದರ ಜತೆಗೆ ಕೇಸರ್ ಮತ್ತು ಲವಂಗ ಇಡಬೇಕು. ಆ ಬೆಳ್ಳಿ ಬಾಕ್ಸ್ ಅನ್ನು ಹಣದ ಪೆಟ್ಟಿಗೆಯಲ್ಲಿ ಇಡಬೇಕು
ಕೊನೆ ಮಾತು: ಈ ಲೇಖನದಲ್ಲಿ ಹೇಳಿರುವ ಶಂಖ ಮುತ್ತಿನ ಪೈಕಿ ಕೆಲವನ್ನು ಯಾರೂ ನೋಡಿಲ್ಲ. ಇನ್ನೂ ಕೆಲವು ತುಂಬಾ ದುಬಾರಿ. ಏಕೆಂದರೆ ಅದು ಸಿಗುವುದೇ ಅಪರೂಪದಲ್ಲಿ ಅಪರೂಪ. ಇಂಥವನ್ನು ಖರೀದಿ ಮಾಡಬೇಕು ಅಂದುಕೊಂಡರೆ ತೀರಾ ಎಚ್ಚರದಿಂದ ವ್ಯವಹರಿಸಬೇಕು. ತಜ್ಞರ ಮಾರ್ಗದರ್ಶನ ಪಡೆಯಿರಿ. ಯಾರನ್ನೋ ನಂಬಿ, ಮೋಸ ಹೋಗಬೇಡಿ.
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ












Click it and Unblock the Notifications