ಸಾಡೇಸಾತಿ ಹಿಡಿದಿರುವವರಿಗೆ ಶನಿ ಏನು ಮಾಡ್ತಾನೆ?

ಸಾಡೇಸಾತಿಯಲ್ಲಿ ಶನಿಯು ಅನಾರೋಗ್ಯಕ್ಕೀಡು ಮಾಡಿ ಆಸ್ಪತ್ರೆಯ ದಾರಿ ತೋರಿಸುತ್ತಾನೆ. ಸುಖಾಸುಮ್ಮನೇ ಹೊಟ್ಟೆನೋವು, ಕಾಲಿನ ನೋವು, ಮತ್ತು ಕಣ್ಣಿನ ಬೇನೆ ಬಂದಿರುತ್ತದೆ. ಅಲ್ಲದೇ ಯಾವುದೂ ಏನೂ ತಪ್ಪು ಮಾಡದೇ ಸುಮ್ ಸುಮ್ನೆ ಅಪವಾದ ಬರುತ್ತವೆ. ಇನ್ನು ಕೆಲವರಿಗಂತೂ ಕೃಷ್ಣನ ಜನ್ಮಸ್ಥಾನದಲ್ಲಿ ಕಾಲ ಕಳೆಯಬೇಕಾಗುತ್ತದೆ.
ಇನ್ನು ಉದ್ಯೋಗಿಗಳಿಗೆ ಕೆಲಸ ಹೋಗಬಹುದು, ಹಠಾತ್ತನೇ ವರ್ಗಾವಣೆ ಅಥವಾ ಬೇರೆ ಕೆಲಸಕ್ಕೆ ಹೋಗಬಹುದು. ಅಥವಾ ಇದ್ದ ಉದ್ಯೋಗದಲ್ಲಿ ಎಷ್ಟೇ ಕೆಲಸ ಮಾಡಿದರೂ ಏನೂ ಫಲ ಸಿಗುವುದಿಲ್ಲ. ಹೊಸ ಕೆಲಸ ಹುಡುಕುತ್ತ ಹೋದರೆ ಹೊಸ ಕೆಲಸ ಸಿಗದೇ, ಕೈಯಲ್ಲಿ ಹಣವೂ ಇಲ್ಲದಂತಾಗಿ ಚಿಂತೆಗೀಡಾಗುವಂತೆ ಮಾಡುತ್ತಾನೆ ಶನಿ ಮಹಾರಾಜ!
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅನಾಸಕ್ತಿ ಮೂಡಿಸಿ ವಿದ್ಯೆಯನ್ನು ತಲೆಗೆ ಹತ್ತಲು ಬಿಡದೇ ಕಾಡುತ್ತಾನೆ. ರಾತ್ರಿಯ ಸಮಯದಲ್ಲಿ ನಿದ್ದೆ ಬಾರದೆ, ಹಗಲಿನಲ್ಲಿ ಉತ್ಸಾಹವಿಲ್ಲದೆ ಯಾವಾಗಲೂ ಸಾಡೇಸಾತಿ ಪ್ರಭಾವಿತರು ಮಂದವಾಗಿಯೇ ಇರುತ್ತಾರೆ. ವಿದ್ಯೆಗಿಂತ ಬುದ್ದಿ ಮೇಲು ಎಂಬ ಮಾತಿನಂತೆ ನಾವೆಷ್ಟೇ ವಿದ್ಯಾವಂತರಾಗಿದ್ದರೂ ಬುದ್ಧಿವಂತಿಕೆಯಿಂದ ಶನಿ ಕಾಟವಿದು ಎಂದು ಅರಿತಲ್ಲಿ ಒಳಿತು. ಇಲ್ಲವಾದಲ್ಲಿ ಕಲಿತ ವಿದ್ಯೆಯು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂಬುದು ನೆನಪಿರಲಿ.
ಕಳೆದ ವರ್ಷದ ನವೆಂಬರ್ ಗೆ ತುಲಾ ರಾಶಿ ಪ್ರವೇಶಿಸಿರುವ ಶನಿಯು ಕೇವಲ ಕೆಲವೇ ಡಿಗ್ರಿಗಳಷ್ಟು ತಿರುಗಿದ್ದಾನೆ. ಇನ್ನೆರಡು ವರ್ಷದಲ್ಲಿ 30 ಡಿಗ್ರಿಗಳಷ್ಟು ತಿರುಗಬೇಕು. ಈಗಲೇ ಸಾಡೇಸಾತಿ ನಡೆಯುತ್ತಿರುವ ರಾಶಿಗಳವರಿಗೆ ಇಷ್ಟು ಕಷ್ಟ ಕೊಡಲಾರಂಭಿಸಿದ್ದಾನೆ. ಇನ್ನು ಮುಂದೆ ಎಷ್ಟು ಕಷ್ಟ ಕೊಡಬಹುದು ಎಂಬುದನ್ನು ಯೋಚಿಸಿದರೆ ಅವನ ಪ್ರಭಾವ ಮನವರಿಕೆಯಾಗುತ್ತದೆ. ಈ ಸಾಡೇಸಾತಿ ಸಮಯದಲ್ಲಿ ತಾಳ್ಮೆಯಿಂದ ಇರಲು ಮೊದಲು ಕಲಿಯಬೇಕು. ಯಾಕೆಂದರೆ ಜೀವನದ ಎಲ್ಲ ಪಾಠವನ್ನು ಕಲಿಸಲು ಶನಿಯು ಸಾಡೇಸಾತಿಯಾಗಿ ಬಂದಿರುತ್ತಾನೆ ಎಂಬುದು ಮೊದಲು ತಿಳಿದುಕೊಳ್ಳಬೇಕು.
ಶನಿ ಮಹಾರಾಜನು ಸದ್ಯ ಕರ್ಕ ರಾಶಿಯವರಿಗೆ ಅರ್ಧಾಷ್ಟಮ ಶನಿಯಾಗಿ ಕೊಂಚ ಕಿರುಕುಳ ನೀಡುತ್ತಿದ್ದಾನೆ. ಶನಿಯ ಪ್ರಭಾವದಿಂದ ಪಾರಾಗಲಂತೂ ಸಾಧ್ಯವಿಲ್ಲ. ಆದರೆ ಅವನ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಮುಂದಿನ ಲೇಖನದಲ್ಲಿ ವಿವರಿಸಲಾಗುವುದು. ದಯವಿಟ್ಟು ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡು ತಮ್ಮ ನೋವನ್ನು ಕೊಂಚ ಕಮ್ಮಿ ಮಾಡಿಕೊಳ್ಳಬಹುದು.
ಶನಿ ಕೃಪೆಗೆ : ಸಾಡೇಸಾತಿಯಲ್ಲಿ ನಡೆಯುತ್ತಿರುವವರು ಎಷ್ಟೇ ಕಷ್ಟ ಬಂದರೂ ಸತ್ಯ, ನ್ಯಾಯ, ನೀತಿ, ಧರ್ಮದಿಂದ ನಡೆದುಕೊಳ್ಳಲೇಬೇಕು.
ವಾಸ್ತು ಟಿಪ್ಸ್ : ಮನೆಯ ಈಶಾನ್ಯ ದಿಕ್ಕನ್ನು ಯಾವಾಗಲೂ ಖಾಲಿ ಬಿಡಬೇಕು. ಯಾವುದೇ ಭಾರದ ವಸ್ತು, ಮತ್ತಿತರ ಅನವಶ್ಯಕ ವಸ್ತುಗಳನ್ನು ಇಡಲೇಬೇಡಿ. ಈಶಾನ್ಯ ದಿಕ್ಕು ದೇವರಿರುವ ಸ್ಥಳ. ಅವನಿಗೆ ನಿಮ್ಮನೆಯಲ್ಲಿ ಜಾಗ ಕೊಡದಿದ್ದರೆ ಅವನೇನು ನಿಮಗೆ ಕೊಡಬಲ್ಲನು? [ಲೇಖಕರ ಮೊಬೈಲ್ : 9481522011]
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications