ಶನಿ ಭಗವಾನ್ ಈಗ ಯಾರಿಗೆ ಒಳ್ಳೆಯವನಾಗಿದ್ದಾನೆ?

ಆದರೆ ಶನಿ ಮಹಾರಾಜನು ಈ ಸಮಯದಲ್ಲಿ ಕೆಲವರಿಗೆ ಒಳ್ಳೆಯದನ್ನೂ ಮಾಡುತ್ತಿದ್ದಾನೆ. ಅಂದರೆ ಈ ರಾಶಿಯವರಿಗೆ ಮಾತ್ರ ಸಾಡೇಸಾತಿಯಿಲ್ಲ. ಮೇಷ ರಾಶಿಯವರಿಗೆ ಲಗ್ನದಿಂದ 7ನೇ ಸ್ಥಾನ, ವೃಷಭದವರಿಗೆ 6ನೇ ಸ್ಥಾನ, ಸಾಡೇಸಾತಿಯಿಂದ ಪಾರಾಗಿರುವ ಸಿಂಹ ರಾಶಿಗೆ 3ನೇಯವನಾಗಿ, ಧನಸ್ಸು ರಾಶಿಯವರಿಗೆ 11ನೇ ಮನೆಯಲ್ಲಿ, ಕುಂಭ ರಾಶಿಯವರಿಗೆ 9ನೇಯವನಾದ ಶನಿ ಮಹಾರಾಜನು ಅದೃಷ್ಟ ತರುತ್ತಿದ್ದಾನೆ.
ನಿಮ್ಮ ಒಳ್ಳೆಯ ಸಮಯದಲ್ಲಿ ಒಳ್ಳೆಯದನ್ನು ಮಾಡಬೇಕೆಂಬುದು ಈ ಮೇಲಿನ ರಾಶಿಯವರಿಗೆ ಅನ್ವಯಿಸುತ್ತದೆ. ನಿಮಗೆ ಒಳ್ಳೆಯ ಸಮಯ ಇದು. ಆದ್ದರಿಂದ ಗ್ರಹಬಲ ಬಂದಿದೆ ಎಂದು ಗೊತ್ತಿದ್ದೂ ಗೊತ್ತಿದ್ದೂ ಯಾರಿಗೂ ಕೆಟ್ಟದ್ದನ್ನ ಬಯಸಬೇಡಿ. ಏಕೆಂದರೆ ಗುಪ್ತಚರ ಇಲಾಖೆಯ ತರಹ ನಿಮ್ಮೆಲ್ಲ ಕರ್ಮದ ಲೆಕ್ಕಾಚಾರವನ್ನು ಶನಿ ಮಹಾರಾಜನು ದಾಖಲಿಸಿಕೊಂಡಿರುತ್ತಾನೆ. ನಿಮಗೆ ಶನಿಯು ಸಾಡೇಸಾತಿಯಾಗಿ ಬಂದಾಗ ನೀವು ಮಾಡಿದ ಒಂದು ಚಿಕ್ಕದಾಗಿರುವ ಕೆಟ್ಟ ಕರ್ಮವು ನಿಮಗೇ ಮರಳಿ ಬಂದು, ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತಿನಂತೆ ಅನುಭವಿಸಬೇಕಾಗುತ್ತದೆ.
ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವವರು ಪಾರಾಗಲು ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದರ್ಶನಕ್ಕೆ ಹೋಗುವಂತೆ, ಇನ್ನು ಎಷ್ಟೋ ದಿನಗಳಿಂದ ದೊಡ್ಡ ದೊಡ್ಡ ನೋಟಿನ ಮುಖವನ್ನೇ ನೋಡದವರು ತಿರುಪತಿಗೆ ಹೋಗಿ ಕಾಯ್ದು ತಿಮ್ಮಪ್ಪನ ದರ್ಶನ ಮಾಡಿಕೊಂಡು ಬಂದ ನಂತರ ದೊಡ್ಡ ದೊಡ್ಡ ನೋಟಿನ ಕಂತೆಗಳನ್ನು ಎಣಿಸುವಂತೆ ಆಗಿರುವುದನ್ನು ನೀವು ನೋಡಿದ್ದೀರಿ. ಆದರೆ ನೆನಪಿರಲಿ ಶನಿಯ ಸಾಡೇಸಾತಿಯಲ್ಲಿ ನೀವು ಎಷ್ಟೇ ದೈವಭಕ್ತರಾಗಿದ್ದರೂ ಯಾವುದೇ ದೇವರನ್ನು ಪೂಜಿಸಿದರೂ ಶನಿಯು ನೀಡುವ ಕರ್ಮಫಲಗಳನ್ನು ಸ್ವೀಕರಿಸಲೇಬೇಕು ಎಂಬ ಮಾತನ್ನು ಮಾತ್ರ ವೇದವಾಕ್ಯವೆನ್ನಬೇಕಾಗುತ್ತದೆ.
ಶನಿಯ ಸಾಡೇಸಾತಿಯಲ್ಲೇ ಶ್ರೀರಾಮಚಂದ್ರನು ರಾಜ್ಯಭಾರ ಬಿಟ್ಟು ವನವಾಸ ಅನುಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ವೃಶ್ಚಿಕ ರಾಶಿಯವರು ಸಾಡೇಸಾತಿಯ ಸಮಯದಲ್ಲಿ ಅಪ್ಪಿತಪ್ಪಿಯೂ ನೀಲ ರತ್ನದ ಉಂಗುರ ಧರಿಸಬಾರದು. ಇನ್ನು ಹವಳದೊಂದಿಗೆ ನೀಲ ರತ್ನವನ್ನು ಧರಿಸಲೇಬೇಡಿ. ಸಾಧ್ಯವಾದರೆ ಮುತ್ತಿನ ಬೆಳ್ಳಿಯ ಉಂಗುರವನ್ನು ಬಲಗೈ ಕಿರುಬೆರಳಿಗೆ ಧರಿಸಿದರೆ ತುಂಬಾ ಒಳ್ಳೆಯದು.
ಕಷ್ಟಗಳಿಗೆ ಪರಿಹಾರ : ಈ ಹಿಂದಿನ ಲೇಖನದ ಅಭಿಪ್ರಾಯ ವಿಭಾಗದಲ್ಲಿ ಕಷ್ಟ ಹಂಚಿಕೊಂಡ ಸಾಡೇಸಾತಿಯಲ್ಲಿನ ರಾಶಿಗಳವರಿಗೆ ಮುಂದಿನ ಲೇಖನದಲ್ಲಿ ಪರಿಹಾರೋಪಾಯಗಳನ್ನು ವಿವರಿಸಲಾಗುವುದು. ಇನ್ನು ಸದ್ಯ ಶನಿಯಿಂದಾಗಿ ಒಳ್ಳೆಯದನ್ನು ಪಡೆಯುತ್ತಿರುವವರು ತಮ್ಮ ಅಭಿಪ್ರಾಯವನ್ನು ಈ ಲೇಖನದ ಕೆಳಗಿನ ಅಭಿಪ್ರಾಯ ವಿಭಾಗದಲ್ಲಿ ತಿಳಿಸಿ ಶನಿಯ ಪ್ರಭಾವಕ್ಕೆ ಸಾಕ್ಷಿಯಾಗಿ.
ಶನಿಕೃಪೆಗೆ ಹೀಗೆ ಮಾಡಿರಿ : ಬಂದಿರುವ ಸಂಕಷ್ಟಗಳಿಂದ ದೇವರನ್ನು ದೂಷಿಸದೇ ದೈವ ಪೂಜೆಯನ್ನು ಬಿಡಬಾರದು. ಇದು ಪರೀಕ್ಷೆ ಕಾಲ ಎಂದುಕೊಂಡು ಎಂದಿನ ದೈವಭಕ್ತಿಯಿಂದ ಪೂಜೆ, ಪುನಸ್ಕಾರ ಮಾಡುತ್ತಿರಬೇಕು. ನವಗ್ರಹ ಯಂತ್ರವನ್ನು ಯಾವಾಗಲೂ ಹತ್ತಿರದಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು.
ವಾಸ್ತು ಟಿಪ್ಸ್ : ಮನೆ ಮುಂದಿನ ಬಾಗಿಲು ಅಕ್ಕಪಕ್ಕ ತ್ರಿಶೂಲ, ಓಂ ಮತ್ತು ಸ್ವಸ್ತಿಕ್ ಚಿಹ್ನೆಯಿರುವ ಸ್ಟಿಕರ್ ಅಂಟಿಸಿ ಅಥವಾ ಚಿತ್ರ ಬಿಡಿಸಿ ಆದರೆ ಸಿಂಧೂರ ಬಣ್ಣದಿಂದ ಮಾತ್ರ. ಮುಂಬಾಗಿಲಿನ ಮನೆಯ ಒಳಗಡೆ ಮೇಲ್ಗಡೆ ಪಂಚಮುಖಿ ಹನುಮಾನ ಚಿತ್ರ ತೂಗು ಹಾಕಿ ಅಥವಾ ಅಂಟಿಸಿ. [ಲೇಖಕರ ಮೊಬೈಲ್ : 9481522011]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications