ಜ್ಯೋತಿಷ್ಯ: ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯ ಪಕ್ಷದ ಭವಿಷ್ಯ ಏನು?
Recommended Video

ರಾಜಕೀಯವನ್ನೇ ಉಸಿರಾಡುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ. ಬಹುಭಾಷಾ ನಟ- ಚಲನಚಿತ್ರ ರಂಗದ ದೈತ್ಯ ಪ್ರತಿಭೆ ಕಮಲ್ ಹಾಸನ್ ರ ಹೊಸ ಪಕ್ಷವು ಬುಧವಾರ ಅಧಿಕೃತ ಘೋಷಣೆಯಾಯಿತು. ಆ ಪಕ್ಷದ ಭವಿಷ್ಯ ಹೇಗಿರಬಹುದು ಎಂಬುದನ್ನು ತಿಳಿಸುವ ಪ್ರಯತ್ನವಾಗಿಯೇ ಈ ಲೇಖನ.
ಅಂದಹಾಗೆ ಅವರು ಪಕ್ಷ ಘೋಷಣೆ ಮಾಡುವ ವೇಳೆಗೆ ಭರಣಿ ನಕ್ಷತ್ರ ಪ್ರಾರಂಭವಾಗಿತ್ತು. ಅದರ ಆಧಾರದ ಮೇಲೆ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ ಅನೇಕ ಅಡ್ಡಿ- ಆತಂಕಗಳನ್ನು ಎದುರಿಸಬೇಕು ಎಂಬುದನ್ನು ಸೂಚಿಸುತ್ತಿದೆ. ಇನ್ನು ಲಾಂಛನವು ಕೈಗೆ ಕೈ ಹಿಡಿದ ಮೂರು ಕೈಗಳು. ನಾಲ್ಕು ಕೈಗಳಾಗಿದ್ದರೆ ಬೇರೊಂದು ಕಲ್ಪನೆ ಮಾಡಬಹುದಿತ್ತು. ಮೂರು ಕೈಗಳು ಪರಸ್ಪರ ಬಂಧನದ ಸೂಚಕ.
ಇದರ ಅರ್ಥ ಏನೆಂದರೆ, ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡಾಗ ಅಲ್ಲಿ ಭಿನ್ನಮತ ಉಂಟಾಗಿ ಒಂದೋ ಹಿಡಿತ ಗಟ್ಟಿಯಾಗಿ, ಚಲನೆ ಇಲ್ಲದಂತಾಗುತ್ತದೆ. ಅಥವಾ ಹಿಡಿತ ಸಡಿಲವಾಗಿ ನಿಯಂತ್ರಣ ಕಳೆದುಕೊಳ್ಳಬಹುದು. ಇದನ್ನು ನಾಗ ಪಾಶ ಎನ್ನುತ್ತೇವೆ. ಜತೆಗೆ ಕೆಂಪು ವರ್ಣ ಬೇರೆ. ಇದು ಧ್ವಜಕ್ಕೆ ಉತ್ತಮ ವರ್ಣವಾಗಿ ಕಾಣುವುದಿಲ್ಲ.

ಹೊಸ ಪಕ್ಷಕ್ಕೆ ದೀರ್ಘಾಯುಷ್ಯ ಇದ್ದಂತೆ ಕಾಣುತ್ತಿಲ್ಲ
ಇಷ್ಟು ಅಶುಭ ಫಲಗಳು ಕಾಣುತ್ತಿವೆ. ಇದರ ಜತೆಗೆ ದುಃಖ ಸೂಚಕ ಕಪ್ಪು ಬಣ್ಣವೂ ಇದೆ. ಆದ್ದರಿಂದ ಈ ಹೊಸ ಪಕ್ಷವು ದೀರ್ಘಾಯುಷ್ಯ ಇಲ್ಲದ್ದು. ಒಂದೋ ಇತರ ಪಕ್ಷದ ಜತೆಗೆ ಸೇರಿಹೋಗಬಹುದು. ಇಲ್ಲದಿದ್ದರೆ ಬೇಗ ಕಣ್ಣು ಮುಚ್ಚಬಹುದು. ಒಂದು ರಾಜಕೀಯ ಪಕ್ಷದ ಸ್ಥಾಪನೆಗೆ ಬೇಕಾದ ಶುಭ ದಿನದಲ್ಲೂ ಕಮಲ್ ಹಾಸನ್ ರ ಪಕ್ಷ ಆರಂಭವಾಗಿಲ್ಲ. ಅದೇ ವೇಳೆ ಪಕ್ಷದ ಲಾಂಛನ, ಬಣ್ಣವೂ ಶಕ್ತಿ ತುಂಬುವಂತೆ ಕಾಣುತ್ತಿಲ್ಲ.

ತಮ್ಮ ಮನಸಿಗೆ ಬಂದದ್ದೇ ಇತರರು ಪಾಲಿಸಲಿ ಎಂಬ ಧೋರಣೆ
ಆದರೆ, ಕಮಲ್ ಹಾಸನ್ ರ ಜಾತಕದಲ್ಲಿ ಕೆಲವು ಉತ್ತಮ ಯೋಗಗಳಿವೆ. ತುಂಬ ವೇಗವಾಗಿ ತೀರ್ಮಾನ ತೆಗೆದುಕೊಳ್ಳುವ ಇವರಿಂದ ಹಲವು ಅನನುಕೂಲಗಳು ಆಗುವ ಸಾಧ್ಯತೆ ಇದೆ. ಜತೆಗೆ ತಮ್ಮ ಮನಸಿಗೆ ಬಂದಿದ್ದನ್ನೇ ಇತರರು ಪಾಲಿಸಬೇಕು ಎಂಬ ಧೋರಣೆ ಇರುವುದು ಸಮಸ್ಯೆಯಾಗಿ ಪರಿಣಮಿಸಲಿದೆ.

ಮದುರೈನಲ್ಲಿ ಪಕ್ಷ ಘೋಷಣೆ
ನಟ ಕಮಲ್ ಹಾಸನ್ ಬುಧವಾರ ಮಕ್ಕಳ್ ನೀದಿ ಮೈಯ್ಯಂ ಎಂಬ ಹೊಸ ರಾಜಕೀಯ ಪಕ್ಷವನ್ನು ತಮಿಳುನಾಡಿನಲ್ಲಿ ಆರಂಭಿಸಿದ್ದಾರೆ. ಮದುರೈನಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಸಂದರ್ಭದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸಹ ಸೇರಿದ್ದರು. ಇನ್ನೊಂದು ಮಾತು ಅರವಿಂದ್ ಕೇಜ್ರಿವಾಲ್ ಹಾಗೂ ಕಮಲ್ ಹಾಸನ್ ರ ಗುಣಸ್ವಭಾವದಲ್ಲಿ ಜ್ಯೋತಿಷ್ಯ ರೀತಿಯಲ್ಲಿ ಹಲವು ಸಾಮ್ಯತೆಗಳಿವೆ.

ರಜನೀಕಾಂತ್ ರಾಜಕೀಯ ಭವಿಷ್ಯ ಉತ್ತಮವಿದೆ
ಇನ್ನು ಮತ್ತೊಬ್ಬ ನಟ- ಸೂಪರ್ ಸ್ಟಾರ್ ರಜನೀಕಾಂತ್ ಸಹ ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರ ಜಾತಕ ಈಗಾಗಲೇ ಪರಾಮರ್ಶೆ ಮಾಡಿದ್ದು, ಕಮಲ್ ಹಾಸನ್ ಗೆ ಹೋಲಿಸಿದರೆ ರಜನೀಕಾಂತ್ ರ ರಾಜಕೀಯ ಭವಿಷ್ಯ ಉತ್ತಮವಾಗಿರುವಂತೆ ಕಾಣುತ್ತಿದೆ. ಆದರೆ ರಜನಿ ಅಧಿಕಾರ ಸ್ಥಾನದಲ್ಲಿ ಕೂರುವ ಪ್ರಯತ್ನ ಪಡಬಾರದು, ಅಷ್ಟೇ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications